Latest Updates
-
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ
ಕುಂಭಮೇಳದಲ್ಲಿ ಸಾವಿರ ಕೋಟಿ ಒಡೆಯ..! ಬಾಬಾ ಆಗಿ ಬದಲಾದ ಉದ್ಯಮಿ..!!
ಈ ಬಾರಿ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಹಲವಾರು ವಿಚಾರಗಳಿಂದ ಸುದ್ದಿಯಾಗುತ್ತಲೇ ಇದೆ. ಈ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಾಗಿಯಾಗಿದ್ದರು. ಹಾಗೆ ಉದ್ಯಮಿಗಳು, ವಿದೇಶಿಗರು ಸೇರಿದಂತೆ ಈಗ ಅಂಬಾನಿ ಕುಟುಂಬ ಕೂಡ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಹಾಗೆ ಈ ಕುಂಭ ಮೇಳದಲ್ಲಿ ಐಐಟಿ ಬಾಬಾ, ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲೀನಾ, ಹಾಗೆ ಇಂಜಿನಿಯರ್ ಬಾಬಾ, ವಿದೇಶಿ ಬಾಬಾ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈಗ ಮತ್ತೊಂದು ಅಚ್ಚರಿಯ ವಿಚಾರಕ್ಕೆ ಸುದ್ದಿಯಾಗುತ್ತಿದೆ. ಅದರಲ್ಲೂ ಒಬ್ಬ ವ್ಯಕ್ತಿ ಕೋಟಿ ಕೋಟಿ ಆಸ್ತಿ ತೊರೆದು ಬಾಬಾ ಆಗಿರುವ ಕಥೆ ಇದು.

ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡ ವ್ಯಕ್ತಿಯೊಬ್ಬ ಆತನಿಗೆ 1 ಸಾವಿರ ಕೋಟಿ ವ್ಯವಹಾರ ಹೊಂದಿದ್ದ ಎಂದು ಹೇಳಿಕೊಂಡಿದ್ದಾನೆ. ಆತ ಸಾಮಾನ್ಯ ಬಾಬಾರಂತೆ ಅಲ್ಲಿದ್ದರಿಗೆ ಕಾಣಿಸಿಕೊಂಡಿದ್ದಾನೆ. ಇಷ್ಟು ಕೋಟಿ ಕೋಟಿ ಆಸ್ತಿ ಇದ್ದರೂ ಆತ ವೈರಾಗ್ಯದಿಂದ ಆಧ್ಯಾತ್ಮ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದು ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ.
ಕುಂಭಮೇಳದಲ್ಲಿ ಉದ್ಯಮಿ ಬಾಬಾ ಎಂಬ ಬರಹದಡಿಯಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ಬಾಬಾನ ಆಸ್ತಿ ವಿಚಾರ ತಿಳಿದು ಮಂದಿ ಶಾಕ್ಗೆ ಒಳಗಾಗಿದ್ದಾರೆ. ಅಲ್ಲಿ ವ್ಯಕ್ತಿಯೊಬ್ಬ ಬಡವರಿಗೆ ಹೊದಿಕೆ ನೀಡುವುದು. ಶಾಲ್ ನೀಡುವುದು ನೋಡಬಹುದು, ಎಲ್ಲರಿಗೂ ಈ ಶ್ರೀಮಂತ ಯಾರು ಎಂಬ ಪ್ರಶ್ನೆ ಮೂಡಿದೆ.
ಈ ವಿಡಿಯೋ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದ್ಯಮಿ ಬಾಬಾ ಕುರಿತು ಹುಡುಕಾಟ ಆರಂಭಗೊಂಡಿತ್ತು, ಯಾರು ಈ ಶ್ರೀಮಂತ ಬಾಬಾ ಎಂಬ ಕುತೂಹಲ ಮೂಡಿತ್ತು. ವಿಡಿಯೋದಲ್ಲಿ ಹೇಳಿರುವಂತೆ ಆತ ಸಾವಿರ ಕೋಟಿ ಒಡೆಯನಂತೆ. ಆದ್ರೆ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದು, ಆದ್ರೆ ಆತನ ಕುರಿತು ಯಾವುದೇ ಮಾಹಿತಿ ಆತ ಹಂಚಿಕೊಂಡಿಲ್ಲ. ಎಲ್ಲರಿಗೂ ಆತ ಯಾರು? ಸಾವಿರ ಕೋಟಿ ಒಡೆಯ ಆಗಿದ್ದು ಹೇಗೆ? ಆತ ಯಾವ ಉದ್ಯಮ ಕಟ್ಟಿದ್ದ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಹಾಗೆ ಆತ ತನ್ನ ಆಸ್ತಿಯನ್ನೆಲ್ಲಾ ಬಿಟ್ಟು ಏಕೆ ಬಾಬಾ ಆದ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿದೆ.
ಆತ ಯಾರೇ ಆಗಿದ್ದರು ಕುಂಭ ಮೇಳದಲ್ಲಿ ಭಾಗಿಯಾದ ಬಡವರಿಗೆ ಒಂದಿಷ್ಟು ಸಹಾಯ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಹಾಗೆ ಆತನ ಈ ಕಾರ್ಯ ಮೆಚ್ಚಿ ಹಲವರು ಅವರನ್ನು ಅಭಿನಂದಿಸಿದ್ದಾರೆ. ಹಾಗೆ ಅವರಿಗೆ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಕ್ಕಿಂತ ಹೆಚ್ಚಿನ ಪುಣ್ಯ ಲಭಿಸಲಿ ಎಂದು ಹರಸಿದ್ದಾರೆ.
ಫೆಬ್ರವರಿ 12ರ ಮಾಘಿ ಪೂರ್ಣಿಮೆಯ ದಿನದಂದು ಸುಮಾರು 1.6 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ತಮ್ಮ ತಾಯಿ ಕೋಕಿಲಾಬೆನ್ ಅಂಬಾನಿ, ಪುತ್ರರಾದ ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ, ಸೊಸೆಯಂದಿರು ಶ್ಲೋಕ ಮತ್ತು ರಾಧಿಕಾ, ಮೊಮ್ಮಕ್ಕಳು ಪೃಥ್ವಿ ಮತ್ತು ವೇದಾ ಮತ್ತು ಸಹೋದರಿಯರಾದ ದೀಪ್ತಿ ಸಲ್ಗಾಂವ್ಕರ್ ಮತ್ತು ನೀನಾ ಕೊಠಾರಿ ಜೊತೆಗೆ ಆಗಮಿಸಿದ್ದರು.



Click it and Unblock the Notifications











