Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಚಿತ್ರದುರ್ಗದ ಕುಟುಂಬದ ಸಾವು ಬುರಾರಿ ಕುಟುಂಬದ 11 ಜನರ ಆತ್ಮಹತ್ಯೆಯನ್ನು ನೆನಪಿಸುತ್ತಿದೆ...
ಚಿತ್ರದುರ್ಗದ ಪಾಳುಬಿದ್ದ ಮನೆಯೊಂದರಲ್ಲಿ ಸಿಕ್ಕ 5 ಜನರ ಅಸ್ಥಿಪಂಜರ ರಾಜ್ಯ-ದೇಶದ ಗಮನ ಸೆಳೆದಿದೆ, ಒಂದೇ ಮನೆಯ 5 ಜನರು ಈ ರೀತಿ ನಿಗೂಢವಾಗಿ ಸಾವನ್ನಪ್ಪಿರುವುದು ಏಕೆ ಎಂಬ ಬಗ್ಗೆ ಅನೇಕ ಸಂಶಯಗಳು ಮೂಡುತ್ತಿವೆ, ಏನಾದರೂ ಮೂಢನಂಬಿಕೆಗೆ ಬಲಿಯಾದರೆ ಅಥವಾ ಹಣ, ಮತ್ತಿತರ ಕಾರಣಕ್ಕೆ ಬಲಿಯಾದರೆ ಹೀಗೆ ಅನೇಕ ರೀತಿಯಲ್ಲಿ ತನಿಖೆಯಾಗುತ್ತಿದೆ, ಈ ಸಾವು 2018ರಲ್ಲಿ ಬುರಾರಿ ಕುಟುಂದಲ್ಲಿ ನಡೆದ ಘಟನೆಯನ್ನು ನೆನಪಿಸುತ್ತದೆ, ಬುರಾರಿ ಕುಟುಂಬದ ಒಂದೇ ಮನೆಯ 11 ಜನ ಮೂಢನಂಬಿಕೆಗೆ ಬಲಿಯಾಗಿದ್ದರು.

ಚಿತ್ರದುರ್ಗದ ಸಾವಿಗೂ, ಬೊರಾಲಿಯ 11 ಜನರ ಆತ್ಮಹತ್ಯೆಗೂ ಕೆಲವೊಂದು ಹೋಲಿಕೆಗಳಿಗೆ, ಚಿತ್ರದುರ್ಗದ ಸರ್ಕಾರಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಗನ್ನಾಥ್ ರೆಡ್ಡಿ, ಅವರ ಪತ್ನಿ ಪ್ರೇಮ, ಮಗಳು ತ್ರಿವೇಣಿ, ಗಂಡು ಮಕ್ಕಳಾದ ಕೃಷ್ಣ, ನರೇಂದ್ರ ಆತ್ಮಹತ್ಯೆ ಮೂಲಕ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಜಗನ್ನಾಥ್ ರೆಡ್ಡಿ ದಂಪತಿಯ ಮಕ್ಕಳಿಗೆ ಮದುವೆಯಾಗಿರಲಿಲ್ಲ, ಈ ಕುರಿತು ಅವರಿಗೆ ತುಂಬಾನೇ ಬೇಸರವಿತ್ತು, ಅಲ್ಲದೆ ಯಾರ ಜೊತೆಯೂ ಸಂಪರ್ಕದಲ್ಲಿ ಇರಲಿಲ್ಲ, ಕುಟುಂಬದವರ ಜೊತೆಯೂ ಸಂಪರ್ಕ ಕಡಿದುಕೊಂಡು 9 ವರ್ಷಗಳೇ ಕಳೆದಿತ್ತು, ಈ ಕುಟುಂಬ 2019ರಿಂದ ಯಾರ ಕಣ್ಣಿಗೂ ಬಿದ್ದಿಲ್ಲ, ಹಾಗಾಗಿ ಇವರು ಸಾವನ್ನಪ್ಪಿ 5 ವರ್ಷಗಳೇ ಕಳೆದಿದೆ ಎಂದು ಅಂದಾಜಿಸಲಾಗಿದೆ.
ಬೊರಾರಿ ಕುಟುಂಬದಲ್ಲಿನ 11 ಜನ ಕೂಡ ಮೂಢನಂಬಿಕೆಗೆ ಬಲಿಯಾದರು ಎಂದು ಹೇಳಲಾಗುತ್ತಿದೆ, ಮೋಕ್ಷ ಸಿಗುವುದು, ಜಗತ್ತು ಅಂತ್ಯವಾಗುತ್ತಿದೆ, ಸ್ವರ್ಗದ ಬಾಗಿಲು ನಮಗಾಗಿ ತೆರೆದಿದೆ, ತಂದೆಯ ಮಾತುಗಳು ನನಗೆ ಕೇಳಿಸುತ್ತಿದೆ, ಅವರು ನನ್ನ ಜೊತೆ ಮಾತನಾಡುತ್ತಾರೆ, ಅವರು ಆಲದ ಮರದಂತೆ, ನಾವೆಲ್ಲಾ ಅದರ ಕೊಂಬೆಗಳು ಎಂದು ಬರೆದಿತ್ತು, ಆ ವ್ಯಕ್ತಿಗೆ ಒಂದು ಅಪಘಾತವಾಗಿ ಮಾತಿನ ಶಕ್ತಿ ಕಳೆದುಕೊಂಡಿದ್ದರು, ಅವರು ಬರವಣಿಗೆ ಮೂಲಕ ಬೇರೆಯವರ ಜೊತೆಗೆ ತಮ್ಮ ಮಾತುಗಳನ್ನು ಹೇಳುತ್ತಿದ್ದರು, ಹಾಗಾಗಿ ಅವರ ಬರಹದಿಂದಾಗಿ ಈ ವಿಷಯಗಳು ತಿಳಿದುಬಂದಿದೆ. ಆಶ್ಚರ್ಯ ಎಂದರೆ ಎಲ್ಲರಿಗೂ ಒಳ್ಳೆಯ ವಿದ್ಯಾಭ್ಯಾಸ ಇತ್ತು, ಅವರಲ್ಲಿ ಒಬ್ಬ ಮಹಿಳೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಅವರ ಮದುವೆ ಕೂಡ ನಿಶ್ಚಯವಾಗಿತ್ತು, ಅವರೆಲ್ಲಾ ಸಾಯುವ ಒಂದು ದಿನ ಮುಂಚೆ ಕಸಿನ್ಗೆ ಫೋನ್ ಮಾಡಿ ತನ್ನ ಮದುವೆ ಬಗ್ಗೆ ಹೇಳಿಕೊಂಡಿದ್ದಳು.
ಭೂಮಿ ಅಂತ್ಯವಾಗಲಿದೆ, ನಾವೆಲ್ಲಾ ಪಾರಾಗಲಿದ್ದೇವೆ ಎಂದು ನಂಬಿಸಿದ್ದ
ಆ ಕುಟುಂಬ ಮೂಢ ನಂಬಿಕೆಯನ್ನು ತುಂನಬಾನೇ ನಂಬುತ್ತಿತ್ತು, ಆ ಮನೆಯ 45 ವರ್ಷದ ನಾರಾಯಣ್ ಈ ಜಗತ್ತು ಅಂತ್ಯವಾಗುತ್ತಿದೆ ಎಂದು ತಂದೆ ನನಗೆ ಹೇಳಿದ್ದಾರೆ, ನಾವೆಲ್ಲಾ ಮೋಕ್ಷ ಪಡೆಯಲಿದ್ದೇವೆ ಎಂದು ನಂಬಿಸಿದ್ದ. ಸಾಯುವ ಮೊದಲು ಎಲ್ಲರೂ ತಾಯಿ ಕೈಯಿಂದ ರೋಟಿ ಸೇವಿಸಿದ್ದರು, ಆ ರೋಟಿಗಳನ್ನು ಸಮೀಪದ ಹೋಟೆಲ್ನಿಂದ ತರಲಾಗಿತ್ತು.
ಮನೆಯವರು ಎಲ್ಲರೂ ಆತ್ಮಹತ್ಯೆ ಮಾಡುವುದರ ಬಗ್ಗೆ ಮಾನಸಿಕ ತಜ್ಞರ ಅಭಿಪ್ರಾಯವೇನು?
ಆ ಕುಟುಂಬ ನಮ್ಮ ಬದುಕು ಮುಗಿಯಿತು, ನಮ್ಮಿಂದ ಇನ್ಮುಂದೆ ಇಂಥ ಪರಿಸ್ಥಿತಿ ಎದುರಿಸಲು ಸಾಧ್ಯವಿಲ್ಲ ಎಂದಾದಾಗ ಎಲ್ಲರೂ ಜೊತೆಯಾಗಿ ಸಾಯುವುದರ ಬಗ್ಗೆ ಯೋಚಿಸುತ್ತದೆ. ಸಾವು ಒಂದೇ ದಾರಿ ಎಂದು ಭಾವಿಸಿ ಜೊತೆಯಾಗಿ ಸಾಯಲು ತೀರ್ಮಾನಿಸುತ್ತಾರೆ.
ಚಿತ್ರದುರ್ಗದಲ್ಲಿ ನಡೆದಿರುವ ಘಟನೆಯಲ್ಲಿ ಮಕ್ಕಳಿಗೆ ಮದುವೆಯಾಗದೇ ಇರುವ ಕೊರಗು ಆ ಕುಟುಂಬದಲ್ಲಿತ್ತು ಇತ್ತು ಎಂಬುವುದು ಅವರ ಕುಟುಂಬಸ್ಥರು ಹೇಳುತ್ತಿರುವ ಮಾತುಗಳಿಂದ ತಿಳಿದು ಬರುತ್ತಿದೆ, ಒಂದು ಇಡೀ ಕುಟುಂಬ ಸಾವನ್ನಪ್ಪಿದರೂ ಹೊರಜಗತ್ತಿಗೂ ತಿಳಿಯಲು ಇಷ್ಟು ಸಮಯ ಬೇಕಾಯಿತು, ಅವರು ಸಾಯುವ ಮೊದಲೇ ಇಡೀ ಕುಟುಂಬಸ್ಥರು, ನೆರೆಹೊರೆಯವರಿಂದ ಸಂಪರ್ಕ ಕಡಿದುಕೊಂಡಿರುವುದರಿಂದ ಯಾರೂ ಇವರ ಬಗ್ಗೆ ವಿಚಾರಿಸುವವರೂ ಇರಲಿಲ್ಲ, ಎಷ್ಟೊಂದು ವಿಚಿತ್ರವಲ್ಲ...



Click it and Unblock the Notifications











