Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
Skandamata Mantra In Kannada: ಸ್ಕಂದಮಾತಾ ದೇವಿ ಮಂತ್ರ, ಪೂಜಾ ಮಹತ್ವ, ಕಥೆ ಇಲ್ಲಿದೆ..!
ನವರಾತ್ರಿಯ 5ನೇ ದಿನನಂದು ಶಕ್ತಿ ದೇವತೆಯಾದ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ದೇವತೆಗಳ ಸೇನಾಧಿಪತಿ ಕಾರ್ತಿಕೇಯ. ಈ ದಿನದಂದು ಕಾರ್ತಿಕೇಯನ ತಾಯಿಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತೆ ಸಿಂಹದ ಮೇಲೆ ಪುತ್ರನೊಂದಿಗೆ ಕುಳಿತು ವಿರಾಜಮಾನವಾಗುವುದು ನೋಡಬಹುದು. ಆಕೆಯ ಪೂಜಿಸುವುದರಿಂದ ಭಕ್ತರ ಹಲವು ಕಷ್ಟಗಳು ನಿವಾರಣೆಯಾಗಲಿದೆ.
ಸ್ಕಂದ ಮಾತೆಯ ಪೂಜೆ ಏಕೆ ಮುಖ್ಯ
ಸ್ಕಂದಮಾತೆ ದೇವ ಕಾರ್ತಿಕೇಯನ ತಾಯಿಯಾಗಿದ್ದಾಳೆ. ವಿಜಯದ ಸಂಕೇತವಾಗಿ ಸ್ಕಂದಮಾತೆಯ ಪೂಜಿಸಲಾಗುತ್ತದೆ. ಸ್ಕಂದಮಾತೆ ಶಾಂತ ಸ್ವಭಾವದ ಪ್ರೀತಿಯಿಂದ ಎಲ್ಲರನ್ನು ಹರಸುವಂತಹ ದೇವಿಯ ಸ್ವರೂಪ ಎಂದು ಪೂಜಿಸಲಾಗಿದೆ. ಸ್ಕಂದಮಾತೆಯನ್ನು ಪೂಜಿಸುವುದರಿಂದ ಭಕ್ತರು ಸುಖ, ಸಮೃದ್ಧಿ ಮತ್ತು ಶಾಂತಿಯನ್ನು ಪಡೆಯುತ್ತಾರೆ. ಸ್ಕಂದಮಾತೆಯ ಆರಾಧನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ ಜೀವನದಲ್ಲಿ ಸಕಾರಾತ್ಮಕತೆ ಇರಲಿದೆ ಎಂದು ಹೇಳಲಾಗಿದೆ.

ಸ್ಕಂದಮಾತಾ ದೇವಿ ಮಂತ್ರ ಶ್ಲೋಕಗಳು
ॐ ದೇವೀ ಸ್ಕಂದ ಮಾತಾಯೈ ನಮಃ ।
ಸ್ಕಂದಮಾತೆ ಮಂತ್ರ
ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ
ಸ್ಕಂದಮಾತೆಯ ಧ್ಯಾನ ಮಂತ್ರ
ಓಂ ಜಯಂತಿ ಮಂಗಲಾ ಕಾಲೀ ಭದ್ರಕಾಲೀ ಕಪಾಲಿನೀ ।
ದುರ್ಗಾ ಕ್ಷಮಾ ಮಹಾಕ್ರಾಂತಿ, ಚಂದ್ರಕಾಂತ ಮಹಾಕ್ರಾಂತಿ.
ಸ್ಕಂದಮಾತೆಯ ಆರಾಧನೆಯ ಮಂತ್ರ
ಓಂ ಐಂ ಹ್ರೀಂ ಕ್ಲೀಂ ಸ್ಕಂದಮಾತಾಯ ನಮಃ
ಸ್ಕಂದಮಾತೆಯ ಸ್ತುತಿ ಮಂತ್ರ
ದೇವೀ ಸರ್ವಭೂತೇಷು ಮಾಂ ಸ್ಕಂದಮಾತಾ ಸಂಸ್ಥೆಯಾಗಿ ।
ನಮಸ್ತೇಸ್ಯಾಯೇ ನಮಸ್ತೇಸ್ಯಾಯೇ ನಮಸ್ತೇಸ್ಯಾಯೇ ನಮೋ ನಮಃ॥
ಸ್ಕಂದಮಾತೆಯ ಪ್ರಾರ್ಥನೆ ಮಂತ್ರ
ಸಿಂಹಾಸನಾಗತಾ ನಿತ್ಯಂ ಪದ್ಮಂಚಿತ್ ಕರ್ದ್ವಯಾ ।
ಸ್ಕಂದಮಾತಾ ಯಶಸ್ವಿನಿ ದೇವಿಯೇ ಸದಾ ಶುಭ ಹಾರೈಕೆಗಳು
ಸ್ಕಂದಮಾತೆಯ ಕಥೆ ಏನು?
ಪಾರ್ವತಿ ದೇವಿಯು ದುರ್ಗಾ ದೇವಿಯ ಅವತಾರವಾಗಿದ್ದರಿಂದ ಸ್ಕಂದಮಾತೆಯನ್ನು ಭಗವಾನ್ ಸ್ಕಂದ ಅಥವಾ ಕಾರ್ತಿಕೇಯನ ತಾಯಿ ಎಂದು ಕರೆಯಲಾಗುತ್ತದೆ. ಪಾರ್ವತಿ ದೇವಿ ಶಿವನ ಪತ್ನಿ ಮತ್ತು ಭಗವಾನ್ ಕಾರ್ತಿಕೇಯ ಶಿವ ಮತ್ತು ಪಾರ್ವತಿಯ ಪುತ್ರ. ಅಲ್ಲದೆ ದುರ್ಗಾ ದೇವಿಯನ್ನು ಶಿವ, ವಿಷ್ಣು ಮತ್ತು ಬ್ರಹ್ಮ ದೇವರು ಶಕ್ತಿ ಸ್ವರೂಪಿಯಾಗಿ ಸೃಷ್ಟಿಸಿದರು.
ದುರ್ಗಾ ದೇವಿಯ ಸ್ಕಂದಮಾತೆಯ ಅವತಾರದಿಂದ ಯುದ್ಧ ಕಲೆಯನ್ನು ಕಲಿತಳು. ಬಳಿಕ ಭಗವಾನ್ ಕಾರ್ತಿಕೇಯನಿಗೆ ಜನ್ಮ ನೀಡಿದಳು ಆತ ಕೂಡ ಇದರಲ್ಲಿ ಪ್ರವೀಣನಾಗಿದ್ದನು. ಸ್ಕಂದಮಾತೆಯು ಒಂದು ಕೈನಲ್ಲಿ ತನ್ನ ಪುತ್ರನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಕಮಲ ಹಿಡಿದು ಸಿಂಹದ ಮೇಲೆ ಸವಾರಿ ಮಾಡುವುದು ನೋಡಬಹುದು. ಹಾಗೆ ಮೂರನೇ ಕೈ ಎಲ್ಲಾ ಆಸೆಗಳನ್ನು ಈಡೇರಿಸಲು ವರದ ಸ್ಥಾನದಲ್ಲಿ ಹಿಡಿದಿರುತ್ತದೆ ಮತ್ತು ನಾಲ್ಕನೇ ಕೈ ಶಂಖವನ್ನು ಹಿಡಿದಿರುವುದು ನೋಡಬಹುದು.
ಸ್ಕಂದಮಾತೆಯನ್ನು ಪೂಜಿಸುವುದರಿಂದ ಆಗುವ ಲಾಭ ಏನು?
ಸ್ಕಂದಮಾತೆಯನ್ನು ಆರಾಧಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಸ್ಕಂದ ಮಾತೆಯ ಪೂಜಿಸುವುದು ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡಲಿದೆ. ಹಾಗೆ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರಾಗಲಿದೆ. ನಿಮ್ಮ ಹೊಸ ವ್ಯವಹಾರಗಳಲ್ಲಿ ಲಾಭವಾಗಲಿದೆ. ಹಾಗೆ ಕುಟುಂಬದಲ್ಲಿನ ಸಮಸ್ಯೆಗಳು ದೂರಾಗಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗಲಿದೆ.
ನವರಾತ್ರಿಯ ಈ ಪವಿತ್ರ ಹಬ್ಬದಲ್ಲಿ ಸ್ಕಂದಮಾತೆಯ ಆರಾಧನೆಯು ವೈಯಕ್ತಿಕ ಸಂತೋಷ ಮತ್ತು ಶಾಂತಿಯನ್ನು ತರಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳ ನಿವಾರಣೆಗಾಗಿಯೂ ದೇವಿಯನ್ನು ಪೂಜಿಸುವುದು ಬಹಳ ಮುಖ್ಯ. ಆಕೆಯ ಅನುಗ್ರಹ ನಿಮ್ಮ ಮೇಲೆ ಬಿದ್ದರೆ ಸಂತೋಷ, ಸಮೃದ್ಧ ತುಂಬಿರಲಿದೆ ಎಂದು ನಂಬಲಾಗಿದೆ.
ನವರಾತ್ರಿಯ 5ನೇ ದಿನ ಸ್ಕಂದ ಮಾತೆಯನ್ನು ಪೂಜಿಸಿ ಆಕೆಯ ಆಶೀರ್ವಾದ ಪಡೆಯುತ್ತಾರೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ 2 ಬಾರಿ ಪೂಜಿಸಲಾಗುತ್ತದೆ.



Click it and Unblock the Notifications