Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಊಟಕ್ಕೆ ಕುಳಿತಿರುವಾಗ ಅನ್ನಪೂರ್ಣೆಗೆ ಅವಮಾನ ಮಾಡಬಾರದು ಅನ್ನೋದು ಇದೇ ಕಾರಣಕ್ಕೆ !
ನಾವು ಆರೋಗ್ಯವಾಗಿ ಇರಬೇಕೆಂದರೆ ಆಹಾರವನ್ನು ಸೇವಿಸೋದು ತುಂಬಾನೇ ಮುಖ್ಯ. ಇತ್ತೀಚಿಗೆ ಜಂಕ್ ಫುಡ್ಗಳನ್ನು ಸೇವಿಸಿ ಆರೋಗ್ಯವನ್ನು ಹಾಳು ಮಾಡುಕೊಳ್ಳುತ್ತಿರೋರು ಒಂದು ಕಡೆಯಾದರೆ. ಮತ್ತೊಂದು ಕಡೆಯಿಂದ ಮನೆಯಲ್ಲಿ ಆಹಾರವನ್ನು ಸೇವಿಸಿದರೂ ಕೂಡ ತರಾತುರಿಯಲ್ಲಿ ತಿಂದು ಹೋಗುವವರು ಇದ್ದಾರೆ. ಇದು ಸರಿಯಾದ ವಿಧಾನ ಅಲ್ಲ.
ನಮ್ಮ ಶಾಸ್ತ್ರ ಹಾಗೂ ಸಂಪ್ರದಾಯದಲ್ಲಿ ಅನ್ನಪೂರ್ಣೆಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ನಾವು ಊಟ ಮಾಡುವ ವಿಧಾನ ಸರಿಯಾಗದೇ ಇದ್ದರೆ ಅದು ಅನ್ನಪೂರ್ಣೆಗೆ ಅವಮಾನಿಸಿದಂತಾಗುತ್ತಂತೆ. ಊಟ ಮಾಡಲು ಕುಳಿತಿರಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸೋದು ತುಂಬಾನೇ ಮುಖ್ಯವಾಗುತ್ತದೆ. ಹಾಗಾದ್ರೆ ನಾವು ಊಟ ಮಾಡುವಾಗ ಯಾವ ವಿಧಾನಗಳನ್ನು ಪಾಲಿಸಬೇಕು ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.

1. ನೆಲದ ಮೇಲೆ ಕುಳಿತುಕೊಳ್ಳೋದಕ್ಕೆ ಅಭ್ಯಾಸ ಮಾಡಿ
ನಮ್ಮ ಪೂರ್ವಜರು ನೆಲದ ಮೇಲೆ ಕುಳಿತು ಮೂರು ಹೊತ್ತು ತಿನ್ನುತ್ತಿದ್ದರು ಆದರೆ ಈಗಿನವರಿಗೆ ನೆಲದಲ್ಲಿ ಕುಳಿತುಕೊಂಡು ಊಟ ಮಾಡುವಷ್ಟು ತಾಳ್ಮೆಯಂತೂ ಖಂಡಿತ ಇಲ್ಲ. ಆದರೆ ದಿನಕ್ಕೆ ಒಂದು ಬಾರಿಯಾದರೂ ನೆಲದ ಮೇಲೆ ಕುಳಿತು ಊಟ ಮಾಡುವ ಅಭ್ಯಾಸ ತುಂಬಾನೇ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ನೆಲದ ಮೇಲೆ ಕಾಲು ಮಡಿಚಿ ಕುಳಿತು ಊಟ ಮಾಡಬೇಕಂತೆ.
ಹೀಗೆ ನೆಲದ ಮೇಲೆ ಕಾಲು ಮಡಚಿ ಕುಳಿತು ಊಟ ಮಾಡೋದ್ರಿಂದ ಹೊಟ್ಟೆಯ ಭಾಗಕ್ಕೆ ನೇರವಾಗಿ ರಕ್ತ ಸಂಚಾರವಾಗುತ್ತಂತೆ. ಅಷ್ಟೇ ಅಲ್ಲ, ಜೀರ್ಣ ಕ್ರಿಯೆಗೂ ಇದು ತುಂಬಾನೇ ಒಳ್ಳೆಯದು. ಇನ್ನೂ ಸಾಧ್ಯವಾದರೆ ಬಾಳೆಯ ಎಲೆಯನ್ನೇ ಊಟಕ್ಕೆ ಬಳಸಿ. ವೈಜ್ಞಾನಿಕವಾಗಿಯೂ ಕೂಡ ಬಾಳೆಯ ಎಲೆಯಲ್ಲಿ ಊಟ ಮಾಡೋದ್ರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತಂತೆ.
2. ಮೌನವಾಗಿ ಊಟ ಮಾಡಿ
ನಿಮ್ಮ ಮನೆಯಲ್ಲಿ ಅಜ್ಜ- ಅಜ್ಜಿ ಇದ್ರೆ ಖಂಡಿತ ನಿಮಗೆ ಗೊತ್ತಿರುತ್ತದೆ. ನಾವು ಊಟ ಮಾಡಬೇಕಾದರೆ ಮಾತನಾಡಿದರೆ ಅಜ್ಜ- ಅಜ್ಜಿ ಬೈಯುತ್ತಿದ್ದರು. ಮಾತನಾಡದೇ ಮೌನವಾಗಿ ತಿಂದು ಎದ್ದೇಳಿ ಎಂದು ಹೇಳುತ್ತಿದ್ದರು. ಇತ್ತೀಚಿಗೆ ಹೆಚ್ಚಿನವರು ಯಾರು ಕೂಡ ಮೌನವಾಗಿ ತಿನ್ನೋದೇ ಇಲ್ಲ. ಯಾರ ಜೊತೆಗಾದರೂ ಮಾತನಾಡುತ್ತಿರುತ್ತಾರೆ. ಇಲ್ಲವಾದರೆ ಟಿವಿ, ಮೊಬೈಲ್, ಟ್ಯಾಪ್ಟಾಪ್, ಪುಸ್ತಕ ಯಾವುದಾರೂ ಒಂದು ಹತ್ತಿರ ಇರಲೇಬೇಕು. ಇಲ್ಲದಿದ್ದರೆ ಗಂಟಲಿನಿಂದ ಅನ್ನ ಇಳಿಯೋದೇ ಇಲ್ಲ.
ಆದರೆ ಈ ರೀತಿ ಮಾಡೋದು ತಪ್ಪು. ಒಂದು ಸಾರಿ ಊಟಕ್ಕೆ ಕುಳಿತರೆ ನಾವು ಊಟವನ್ನು ಪೂರ್ತಿಯಾಗಿ ಮುಗಿಸೋವರೆಗೂ ಯಾರೊಂದಿಗೆ ಮಾತನಾಡಬಾರದು. ಅಥವಾ ನಮ್ಮ ಗಮನ ಬೇರೆಡೆಗೆ ಹೋಗಲೇ ಬಾರದು. ನಿಮ್ಮ ಸಂಪೂರ್ಣ ಗಮನ ಊಟದ ಮೇಲಿದ್ದರೆ ನಿಮಗೆ ಹಸಿವಿನ ಮಹತ್ವ ಏನು ಅನ್ನೋದು ಗೊತ್ತಾಗುತ್ತದೆ. ಹಾಗೂ ತಿಂದ ಊಟ ತೃಪ್ತಿ ಅನ್ನಿಸುತ್ತಂತೆ.
3. ನಿಧಾನವಾಗಿ ತಿನ್ನಿ
ನಾವು ಅನೇಕರನ್ನು ಗಮನಿಸಿರುತ್ತೇವೆ ಅವರು ಗಬಗಬನೇ ಊಟವನ್ನು ತಿನ್ನುತ್ತಾರೆ. ಇನ್ನೂ ಹೊರಗಡೆ ಹೋಗೋದಕ್ಕೆ ತಡವಾಗುತ್ತೆ ಅನ್ನೋ ತರಾತುರಿಯಲ್ಲಿ ಒಂದೇ ಸಾರಿಗೆ ಆಹಾರವನ್ನು ಬಾಯಿಯೊಳಗಡೆ ತುರುಕಿಸುವವರು ಇದ್ದಾರೆ. ಇದು ಸರಿಯಾದ ವಿಧಾನವಲ್ಲ. ಈ ರೀತಿ ತಿಂದರೆ ಆಹಾರ ದೇಹದಲ್ಲಿ ಜೀರ್ಣವಾಗೋದಿಲ್ಲ. ಆರೋಗ್ಯಕ್ಕೂ ಒಳ್ಳೆಯದಲ್ಲ.
ಆಹಾರವನ್ನು ನಿಧಾನವಾಗಿ ಜಗಿದು ತಿನ್ನಬೇಕು. ಜೀರ್ಣ ಕ್ರಿಯೆಯ ಮೊದಲ ಹಂತ ಶುರುವಾಗೋದೇ ನಮ್ಮ ಬಾಯಿಯಿಂದ. ಹೀಗಾಗಿ ಊಟವನ್ನು ಜಗಿದು ತಿಂದರೆ ದೇಹದಲ್ಲಿ ಸರಿಯಾಗಿ ಜೀರ್ಣವಾಗೋದು ಮಾತ್ರವಲ್ಲದೇ, ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ದೊರೆಯುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಅಂದರೆ ನಿಮ್ಮ ಬಾಯಿಯಲ್ಲಿರುವ ಆಹಾರವನ್ನು ಜಗಿದು ನುಂಗದ ಹೊರತು ಮತ್ತೊಂದು ತುತ್ತಿಗೆ ಕೈ ಹಾಕಲೇಬೇಡಿ.
ನಮ್ಮ ಪುರಾಣ ಹಾಗೂ ಧರ್ಮಗ್ರಂಥಗಳಲ್ಲಿ ಇಂತಹ ಅನೇಕ ವಿಚಾರಗಳು ಉಲ್ಲೇಖವಾಗಿದೆ. ಆದರೆ ನಾವು ಇದ್ಯಾವುದನ್ನು ಕಿವಿಯ ಮೇಲೆ ಹಾಕಿಕೊಳ್ಳೋದೇ ಇಲ್ಲ. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಈ ವಿಧಾನಗಳನ್ನು ಪಾಲಿಸೋದು ತುಂಬಾನೇ ಒಳ್ಳೆಯದು.



Click it and Unblock the Notifications

