Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಶ್ರಾವಣ ಶಿವರಾತ್ರಿ 2023 : ಶುಭ ಮುಹೂರ್ತ, ಆಚರಣಾ ವಿಧಿ ಹೇಗಿರಬೇಕು?
ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಶ್ರಾವಣ ಶಿವರಾತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ, ಮಹಾದೇವನು ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತದೆ.
ಈ ವರ್ಷದ ಶ್ರಾವಣ ಶಿವರಾತ್ರಿ ಉಪವಾಸವನ್ನು ಜುಲೈ 15, ಶನಿವಾರ ದಂದು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಈ ವಿಶೇಷ ದಿನದಂದು ಮೂರು ಅತ್ಯಂತ ಮಂಗಳಕರ ಯೋಗಗಳು ರೂಪುಗೊಳ್ಳಲಿದೆ. ಹೀಗಾಗಿ ಶ್ರಾವಣ ಶಿವರಾತ್ರಿಯಂದು ಶಿವನ ಪೂಜೆ ಮಾಡೋದ್ರಿಂದ ಶಿವನ ಆರಾಧಕರು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಅಷ್ಟಕ್ಕು ಶ್ರಾವಣ ಶಿವರಾತ್ರಿ ಯಾವಾಗ? ಶುಭ ಮುಹೂರ್ತ ಹಾಗೂ ಪೂಜಾ ವಿಧಿ- ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

ಶ್ರಾವಣ ಶಿವರಾತ್ರಿ 2023 ರ ಶುಭ ಮುಹೂರ್ತ :
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಜುಲೈ 15 ರಂದು ರಾತ್ರಿ 08:32 ಕ್ಕೆ ಪ್ರಾರಂಭವಾಗಿ ಜುಲೈ 16 ರಂದು ರಾತ್ರಿ 10:08 ಕ್ಕೆ ಕೊನೆಗೊಳ್ಳುತ್ತದೆ. ಶ್ರಾವಣ ಶಿವರಾತ್ರಿಯ ದಿನ ರಾತ್ರಿಯಲ್ಲಿ ಪೂಜೆ ಮಾಡುವ ವಿಧಿ-ವಿಧಾನಗಳು ಇರೋದ್ರಿಂದ ಉಪವಾಸವನ್ನು ಜುಲೈ 15, 2023 ರಂದು ಶನಿವಾರ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯನ್ನು ನಾಲ್ಕು ಪ್ರಹಾರಗಳಲ್ಲಿ ಪೂಜಿಸಲಾಗುತ್ತದೆ.
ಮೊದಲ ಪೂಜೆ - ಸಂಜೆ 07:21 ರಿಂದ ರಾತ್ರಿ 09:54 ರವರೆಗೆ
ಎರಡನೇ ಪ್ರಹಾರ ಪೂಜೆ - ಮಧ್ಯರಾತ್ರಿ 09:54 ರಿಂದ ಮಧ್ಯರಾತ್ರಿ 12:37 ರವರೆಗೆ
ಮೂರನೇ ಪ್ರಹಾರ ಪೂಜೆ - ರಾತ್ರಿ 12:37 ರಿಂದ ಬೆಳಗಿನ ಜಾವ 03:00 ರವರೆಗೆ
ನಾಲ್ಕನೇ ಮತ್ತು ಕೊನೆಯ ಪ್ರಹಾರ ಪೂಜೆ - ಬೆಳಿಗ್ಗೆ 03:00 ರಿಂದ 05:33 ರವರೆಗೆ
ಶ್ರಾವಣ ಶಿವರಾತ್ರಿ 2023 ರ ಶುಭ ಯೋಗ :
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಮೂರು ಅತ್ಯಂತ ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ವಿಶೇಷ ದಿನದಂದು ವೃದ್ಧಿ ಯೋಗ, ಧ್ರುವ ಯೋಗ ಮತ್ತು ಮೃಗಶಿರ ನಕ್ಷತ್ರ ರಚನೆಯಾಗುತ್ತಿದೆ. ವೃದ್ಧಿ ಯೋಗವು ಬೆಳಿಗ್ಗೆ 08:22 ರವರೆಗೆ ಇರುತ್ತದೆ. ಮತ್ತು ನಂತರ ಧ್ರುವ ಯೋಗವು ಪ್ರಾರಂಭವಾಗಲಿದೆ. ಇನ್ನೂ ಮೃಗಶಿರಾ ನಕ್ಷತ್ರವು ಜುಲೈ 16 ರಂದು 12:23 ರವರೆಗೆ ಇರುತ್ತದೆ. ಈ ಶುಭ ಸಮಯದಲ್ಲಿ ಶಿವನನ್ನು ಕುರಿತು ಪ್ರಾರ್ಥನೆಗಳನ್ನು ಪಠಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಶ್ರಾವಣ ಶಿವರಾತ್ರಿಯ ಪ್ರಾಮುಖ್ಯತೆಯೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರಾವನ ಶಿವರಾತ್ರಿಯ ದಿನದಂದು ಮಹಾದೇವನಿಗೆ ಜಲಾಭಿಷೇಕವನ್ನು ಮಾಡುವುದರಿಂದ ಹಾಗೂ ಆತನನ್ನು ಭಕ್ತಿಯಿಂದ ಪೂಜಿಸುವುದರಿಂದ ಸಾಧಕನು ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಹೀಗಾಗಿ ಶ್ರಾವಣ ಶಿವರಾತ್ರಿ ಈ ವಿಶೇಷ ದಿನದಂದು ಎಲ್ಲಾ ನಾಲ್ಕು ಗಂಟೆಗಳಲ್ಲಿಯೂ ಶಿವನನ್ನು ಪೂಜಿಸುವುದರಿಂದ ಸಾಧಕನು ಧರ್ಮ, ಅರ್ಥ, ಕಾಮ, ಮೋಕ್ಷದ ಅನುಗ್ರಹವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
ಶ್ರಾವಣ ಶಿವರಾತ್ರಿಯ ದಿನ ನಿಮ್ಮೆಲ್ಲಾ ಕಷ್ಟಗಳು ಬಗೆಹರಿದು ಇಷ್ಟಾರ್ಥ ಸಿದ್ಧಿಯಾಗಬೇಕೆಂದರೆ ಶಿವನನ್ನು ಈ ರೀತಿ ಪೂಜಿಸೋದು ತುಂಬಾನೇ ಒಳ್ಳೆಯದು.



Click it and Unblock the Notifications











