Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರಾವಣ ಮಾಸದಲ್ಲಿ ಉಪವಾಸ ಮಾಡುವಾಗ ಈ ತಪ್ಪುಗಳು ಆಗದಿರಲಿ!
ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರಲ್ಲೂ ಒಂದು ರೀತಿಯ ಖುಷಿ ಮನೆ ಮಾಡಿರುತ್ತದೆ. ಈ ತಿಂಗಳನ್ನು ಸಂಪೂರ್ಣವಾಗಿ ಶಿವನಿಗಾಗಿ ಅರ್ಪಣೆ ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ಶಿವನನ್ನು ಕುರಿತು ವಿಶೇಷ ಪೂಜೆ ಹಾಗೂ ಉಪವಾಸವನ್ನು ನೆರವೇರಿಸಲಾಗುತ್ತದೆ. ಈ ತಿಂಗಳು ಬಹಳ ವಿಶೇಷ ಏಕೆಂದರೆ ಈ ಸಂದರ್ಭದಲ್ಲಿ ಶಿವನು ಭೂ ಲೋಕಕ್ಕೆ ಇಳಿದು ಬಂದು ಭಕ್ತರನ್ನು ಪೊರೆಯುತ್ತಾನೆ ಎಂದು ನಂಬಲಾಗಿದೆ.

ಸಾಮಾನ್ಯವಾಗಿ ಈ ಮಾಸದಲ್ಲಿ ಧಾರಾಕಾರ ಮಳೆಯಾಗುತ್ತದೆ. ಹಾಗೂ ಬಿಸಿಲಿನ ತಾಪದಿಂದ ಜನರಿಗೆ ನಿರಾಳವಾಗಲಿದೆ. ಈ ತಿಂಗಳು ಪೂರ್ತಿ ಮಹಾದೇವನ ಪೂಜೆಯಲ್ಲೇ ಭಕ್ತಾದಿಗಳು ಮಗ್ನರಾಗಲಿದ್ದಾರೆ. ಅನೇಕ ಜನರು ಈ ದಿನ ಉಪವಾಸವನ್ನು ಆಚರಿಸುತ್ತಾರೆ. ಶಿವನ ಆರಾಧನೆಯಿಂದ ವ್ಯಕ್ತಿಯ ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆ.
ಅವನು ಎಲ್ಲಾ ರೀತಿಯಲ್ಲಿ ಸಂತೋಷವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಅದ್ರಲ್ಲೂ ಶ್ರಾವಣ ಸೋಮವಾರದಂದು ಉಪವಾಸ ಮಾಡುವವರು ಈ ವಿಚಾರದ ಬಗ್ಗೆ ಕಾಳಜಿ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕೂ ಏನೆಲ್ಲಾ ನಿಯಮ ಪಾಲಿಸಬೇಕು ಅನ್ನೋದನ್ನು ತಿಳಿಯೋಣ.
ಶ್ರಾವಣ ಮಾಸದ ಉಪವಾಸ ಹೇಗಿರಬೇಕು?
* ಪೂರ್ಣ ನಂಬಿಕೆಯೊಂದಿಗೆ ಉಪವಾಸ ಮಾಡಿ. ಮನಸ್ಸಿನಲ್ಲಿ ಯಾವುದೇ ರೀತಿ ಗೊಂದಲ ಇಟ್ಟುಕೊಳ್ಳಬೇಡಿ
* ತೆಗೆದುಕೊಂಡ ಪ್ರತಿಜ್ಞೆಯನ್ನು ಪ್ರಾಮಾಣಿಕತೆಯಿಂದ ಅನುಸರಿಸಿ
* ನೀರನ್ನೂ ಮುಟ್ಟದೇ ಉಪವಾಸ ಮಾಡಬೇಕು ಎನ್ನುವ ನಿಯಮವಿಲ್ಲ
* ಆರೋಗ್ಯಕರವಾಗಿರುವಾಗ ಉಪವಾಸವನ್ನು ಮಾಡಬೇಕು
* ಉಪವಾಸದ ಸಮಯದಲ್ಲಿ ನೀವು ಒಣ ಹಣ್ಣುಗಳು ಮತ್ತು ಹಣ್ಣುಗಳನ್ನು ತಿನ್ನಬೇಕು
* ಉಪವಾಸದ ಸಮಯದಲ್ಲಿ ದೇಹದ ಶಕ್ತಿ ಕಡಿಮೆಯಾಗುತ್ತದೆ
* ಆದ್ದರಿಂದ ಜ್ಯೂಸ್, ಮಜ್ಜಿಗೆ ಮತ್ತು ನೀರನ್ನು ಸೇವಿಸಿ ಮತ್ತು ನಿಮ್ಮನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ
ಶ್ರಾವಣ ಉಪವಾಸದಲ್ಲಿ ಈ ತಪ್ಪುಗಳನ್ನು ಮಾಡಬೇಡಿ!
* ಉಪವಾಸದ ಸಮಯದಲ್ಲಿ ತಯಾರಿಸಿದ ಆಹಾರದಲ್ಲಿ ಸಾಮಾನ್ಯ ಉಪ್ಪಿನ ಬದಲು ಕಲ್ಲು ಉಪ್ಪನ್ನು ಬಳಸಿ
* ಉಪ್ಪು ಸೇವನೆಯಿಂದ ನೀವು ದುರ್ಬಲರಾಗುವುದಿಲ್ಲ
* ಬ್ರಹ್ಮಚರ್ಯವನ್ನು ಅನುಸರಿಸಿ
* ಸಂತೋಷವಾಗಿರಿ ಮತ್ತು ಶಿವನನ್ನು ಆರಾಧಿಸಿ
ಈ ಆಹಾರಗಳನ್ನು ಸೇವಿಸಬೇಡಿ!
* ಶ್ರಾವಣ ಮಾಸದಲ್ಲಿ ಈರುಳ್ಳಿ-ಬೆಳ್ಳುಳ್ಳಿ, ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಉದ್ದಿನಬೇಳೆ ಮತ್ತು ಬದನೆಕಾಯಿಯಂತಹ ಆಹಾರಗಳಿಂದ ದೂರವಿರಿ
* ಶ್ರಾವಣ ಮಾಸದಲ್ಲಿ ಮಾಂಸ, ಮೊಟ್ಟೆ ಮತ್ತು ಮದ್ಯ ಸೇವಿಸಬೇಡಿ
* ಪ್ಯಾಕೆಟ್ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಡಿ
* ಈ ತಿಂಗಳಲ್ಲಿ ಮನೆಯಲ್ಲಿ ಕಲಹ ಸೃಷ್ಟಿಸಬೇಡಿ
* ಯಾರನ್ನೂ ಟೀಕಿಸಬೇಡಿ
* ದುಷ್ಟರಿಂದ ದೂರವಿರಿ
ಶ್ರಾವಣ ಮಾಸದಲ್ಲಿ ಉಪವಾಸ ಮಾಡುವವರು ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಉಪವಾಸದ ಫಲವನ್ನು ಖಂಡಿತ ಪಡೆಯುತ್ತೀರಿ.



Click it and Unblock the Notifications