Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಶ್ರಾವಣ ಸೋಮವಾರ ಜಲಾಭಿಷೇಕ ಮಹತ್ವ: ಜಲಾಭಿಷೇಕದ ಬಳಿಕ ಈ ನಿಯಮ ಮರೆಯದಿರಿ
ಶ್ರಾವಣ ಮಾಸದಲ್ಲಿ ಶಿವ ಪೂಜೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಹೇಳಲಾಗುವುದು. ಅದರಲ್ಲೂ ಶ್ರಾವಣ ಸೋಮವಾರ ಶಿವ ಪೂಜೆಗೆ ವಿಶೇಷವಾದ ದಿನವಾಗಿದೆ. ಅದರಲ್ಲೂಈ ದಿನ ಜಲಾಭಿಷೇಕ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಜಲಾಭಿಷೇಕ ಮಾಡಿಸಿದರೆ ಶಿವಕೃಪೆಗೆ ಬೇಗನೆ ಪಾತ್ರರಾಗುತ್ತೇವೆ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಜಲಾಭಿಷೇಕದ ಮಹತ್ವವೇನು ಎಂದು ತಿಳಿಯೋಣ ಬನ್ನಿ:
ಜಲಾಭಿಷೇಕದಿಂದ ನಮಗಷ್ಟೇ ಅಲ್ಲ ನಮ್ಮ ಕುಟುಂಬಕ್ಕೂ ಪುಣ್ಯ ಫಲ ಸಿಗಲಿದೆ
ಶಿವನಿಗೆ ಜಲಾಭಿಷೇಕ ಮಾಡಿದರೆ ತುಂಬಾನೇ ಪುಣ್ಯ ಫಲ ಸಿಗಲಿದೆ, ಅದರಲ್ಲೂ ಶ್ರಾವಣ ಸೋಮವಾರ ಮಾಡಿದರೆ ಇನ್ನೂ ಒಳ್ಳೆಯದು. ಜಲಾಭಿಷೇಕ ಮಾಡುವುದರಿಂದ
ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುವುದು, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ.

ಶಿವನಿಗೆ ಜಲಾಭಿಷೇಕ ಮಹತ್ವದ ಪೌರಾಣಿಕ ಹಿನ್ನೆಲೆ
ಅಮೃತಕ್ಕಾಗಿ ದೇವತೆಗಳು ಹಾಗೂ ದಾನವರು ಸಾಗರ ಮಂಥನ ಮಾಡುವಾಗ ಮೊದಲಿಗೆ ಹಾಲಾಹಲ ಉಕ್ಕುತ್ತೆ, ಆವಾಗ ಅಂಥ ಪರಿಸ್ಥಿತಿಯಲ್ಲಿ ಜಗತ್ತಿನ ರಕ್ಷಣೆಗಾಗಿ ಶಿವ ಆ ವಿಷವನ್ನು ಕುಡಿದು ವಿಷಕಂಠನಾಗುತ್ತಾನೆ. ಆದರೆ ವಿಷ ಕುಡಿದ ಕಾರಣ ಶಿವನಿಗೆ ಉರಿ ತಾಳಲಾಗುವುದಿಲ್ಲ, ಆವಾಗ ಶಿವನ ತಲೆಯ ಮೇಲೆ ಗಂಗೆ ಧುಮ್ಮುಕ್ಕಿ ಶಿವನ ಉರಿ ಶಮನ ಮಾಡಿದಳು. ಹೀಗಾಗಿ ಶಿವಪೂಜೆಯಲ್ಲಿ ಜಲಾಭಿಷೇಕಕ್ಕೆ ತುಂಬಾನೇ ಮಹತ್ವವಿದೆ.
ಶಿವನಿಗೆ ಜಲಾಭಿಷೇಕ ಮಾಡುವಾಗ ಈ ನಿಯಮ ಮರೆಯದಿರಿ
- ನೀವು ಶಿವಲಿಂಗಕ್ಕೆ ಶುದ್ಧವಾದ ನೀರನ್ನು ಬಳಸಿ ಜಲಾಭಿಷೇಕಕ್ಕೆ ಬಳಸಬೇಕು, ಅಲ್ಲಿರುವ ಇತರ ದೇವತೆಗಳಿಗೆ ಜಲಾಭಿಷೇಕ ಮಾಡಬಾರದು. ನೀರು ಶಿವಲಿಂಗಕ್ಕೆ ಹನಿ-ಹನಿಯಾಗಿ ಬೀಳುವಂತೆ ಮೇಲಿನಿಂದ ಸುರಿಯಬೇಕು.
- ಜಲಾಭಿಷೇಕದ ಸಮಯದಲ್ಲಿ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಬೇಡಿ, ಏಕೆಂದರೆ ಶಾಸ್ತ್ರಗಳ ಪ್ರಕಾರ ಶಿವನಿಗೆ ತುಳಸಿಯನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. * ಜಲಾಭಿಷೇಕ ಮಾಡಿದ ನಂತರ ಶಿವಲಿಂಗವನ್ನು ಸಂಪೂರ್ಣವಾಗಿ ಪ್ರದಕ್ಷಿಣೆ ಮಾಡಬಾರದು. ಏಕೆಂದರೆ ಶಿವಲಿಂಗದ ಮೇಲೆ ಅರ್ಪಿಸಿದ ನೀರನ್ನು ಗಂಗೆ ಎಂದು ಪರಿಗಣಿಸಲಾಗುತ್ತದೆ, ನಂಬಿಕೆಯ ಪ್ರಕಾರ, ತಾಯಿ ಗಂಗಾ ದಾಟಲು ಸಾಧ್ಯವಿಲ್ಲ. ಆದ್ದರಿಂದ ಪ್ರದಕ್ಷಣೆ ಹಾಕಬಾರದು.
ಶಿವನ ಈ ಮಂತ್ರಗಳನ್ನು ಪಠಿಸುತ್ತಾ ಜಲಾಭಿಷೇಕ ಮಾಡಿ
ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
ಶಿವ ಗಾಯತ್ರಿ ಮಂತ್ರ
ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್



Click it and Unblock the Notifications