Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶ್ರಾವಣ ಸೋಮವಾರ ಜಲಾಭಿಷೇಕ ಮಹತ್ವ: ಜಲಾಭಿಷೇಕದ ಬಳಿಕ ಈ ನಿಯಮ ಮರೆಯದಿರಿ
ಶ್ರಾವಣ ಮಾಸದಲ್ಲಿ ಶಿವ ಪೂಜೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಹೇಳಲಾಗುವುದು. ಅದರಲ್ಲೂ ಶ್ರಾವಣ ಸೋಮವಾರ ಶಿವ ಪೂಜೆಗೆ ವಿಶೇಷವಾದ ದಿನವಾಗಿದೆ. ಅದರಲ್ಲೂಈ ದಿನ ಜಲಾಭಿಷೇಕ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಜಲಾಭಿಷೇಕ ಮಾಡಿಸಿದರೆ ಶಿವಕೃಪೆಗೆ ಬೇಗನೆ ಪಾತ್ರರಾಗುತ್ತೇವೆ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಜಲಾಭಿಷೇಕದ ಮಹತ್ವವೇನು ಎಂದು ತಿಳಿಯೋಣ ಬನ್ನಿ:
ಜಲಾಭಿಷೇಕದಿಂದ ನಮಗಷ್ಟೇ ಅಲ್ಲ ನಮ್ಮ ಕುಟುಂಬಕ್ಕೂ ಪುಣ್ಯ ಫಲ ಸಿಗಲಿದೆ
ಶಿವನಿಗೆ ಜಲಾಭಿಷೇಕ ಮಾಡಿದರೆ ತುಂಬಾನೇ ಪುಣ್ಯ ಫಲ ಸಿಗಲಿದೆ, ಅದರಲ್ಲೂ ಶ್ರಾವಣ ಸೋಮವಾರ ಮಾಡಿದರೆ ಇನ್ನೂ ಒಳ್ಳೆಯದು. ಜಲಾಭಿಷೇಕ ಮಾಡುವುದರಿಂದ
ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುವುದು, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ.

ಶಿವನಿಗೆ ಜಲಾಭಿಷೇಕ ಮಹತ್ವದ ಪೌರಾಣಿಕ ಹಿನ್ನೆಲೆ
ಅಮೃತಕ್ಕಾಗಿ ದೇವತೆಗಳು ಹಾಗೂ ದಾನವರು ಸಾಗರ ಮಂಥನ ಮಾಡುವಾಗ ಮೊದಲಿಗೆ ಹಾಲಾಹಲ ಉಕ್ಕುತ್ತೆ, ಆವಾಗ ಅಂಥ ಪರಿಸ್ಥಿತಿಯಲ್ಲಿ ಜಗತ್ತಿನ ರಕ್ಷಣೆಗಾಗಿ ಶಿವ ಆ ವಿಷವನ್ನು ಕುಡಿದು ವಿಷಕಂಠನಾಗುತ್ತಾನೆ. ಆದರೆ ವಿಷ ಕುಡಿದ ಕಾರಣ ಶಿವನಿಗೆ ಉರಿ ತಾಳಲಾಗುವುದಿಲ್ಲ, ಆವಾಗ ಶಿವನ ತಲೆಯ ಮೇಲೆ ಗಂಗೆ ಧುಮ್ಮುಕ್ಕಿ ಶಿವನ ಉರಿ ಶಮನ ಮಾಡಿದಳು. ಹೀಗಾಗಿ ಶಿವಪೂಜೆಯಲ್ಲಿ ಜಲಾಭಿಷೇಕಕ್ಕೆ ತುಂಬಾನೇ ಮಹತ್ವವಿದೆ.
ಶಿವನಿಗೆ ಜಲಾಭಿಷೇಕ ಮಾಡುವಾಗ ಈ ನಿಯಮ ಮರೆಯದಿರಿ
- ನೀವು ಶಿವಲಿಂಗಕ್ಕೆ ಶುದ್ಧವಾದ ನೀರನ್ನು ಬಳಸಿ ಜಲಾಭಿಷೇಕಕ್ಕೆ ಬಳಸಬೇಕು, ಅಲ್ಲಿರುವ ಇತರ ದೇವತೆಗಳಿಗೆ ಜಲಾಭಿಷೇಕ ಮಾಡಬಾರದು. ನೀರು ಶಿವಲಿಂಗಕ್ಕೆ ಹನಿ-ಹನಿಯಾಗಿ ಬೀಳುವಂತೆ ಮೇಲಿನಿಂದ ಸುರಿಯಬೇಕು.
- ಜಲಾಭಿಷೇಕದ ಸಮಯದಲ್ಲಿ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಬೇಡಿ, ಏಕೆಂದರೆ ಶಾಸ್ತ್ರಗಳ ಪ್ರಕಾರ ಶಿವನಿಗೆ ತುಳಸಿಯನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. * ಜಲಾಭಿಷೇಕ ಮಾಡಿದ ನಂತರ ಶಿವಲಿಂಗವನ್ನು ಸಂಪೂರ್ಣವಾಗಿ ಪ್ರದಕ್ಷಿಣೆ ಮಾಡಬಾರದು. ಏಕೆಂದರೆ ಶಿವಲಿಂಗದ ಮೇಲೆ ಅರ್ಪಿಸಿದ ನೀರನ್ನು ಗಂಗೆ ಎಂದು ಪರಿಗಣಿಸಲಾಗುತ್ತದೆ, ನಂಬಿಕೆಯ ಪ್ರಕಾರ, ತಾಯಿ ಗಂಗಾ ದಾಟಲು ಸಾಧ್ಯವಿಲ್ಲ. ಆದ್ದರಿಂದ ಪ್ರದಕ್ಷಣೆ ಹಾಕಬಾರದು.
ಶಿವನ ಈ ಮಂತ್ರಗಳನ್ನು ಪಠಿಸುತ್ತಾ ಜಲಾಭಿಷೇಕ ಮಾಡಿ
ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
ಶಿವ ಗಾಯತ್ರಿ ಮಂತ್ರ
ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್



Click it and Unblock the Notifications
