Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಶ್ರಾವಣ ಪುತ್ರದಾ ಏಕಾದಶಿ 2023: ಈ ದಿನ ಏನು ಮಾಡಿದರೆ ತುಂಬಾ ಒಳ್ಳೆಯದು?
ಶ್ರಾವಣ ಮಾಸದ ಏಕಾದಶಿಯನ್ನು ಪುತ್ರದಾ ಏಕಾದಶಿಯಂದು ಆಚರಿಸಲಾಗುವುದು, ಇದು ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯಾಗಿದೆ. ಈ ಏಕಾದಶಿಯಂದು ಶ್ರೀ ವಿಷ್ಣುವನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮ ಇಷ್ಟಾರ್ಥಗಳು ನೆರವೇರುವುದು. ವಿವಾಹಿತ ಮಹಿಳೆಯರು ಸಂತಾನ ಭಾಗ್ಯಕ್ಕಾಗಿ ಈ ಏಕಾದಶಿಯನ್ನು ಆಚರಿಸಿದರೆ ಒಳ್ಳೆಯದು. ಈ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಶ್ರಾವಣ ಪುತ್ರದಾ ಏಕಾದಶಿ ದಿನಾಂಕ ಮತ್ತು ಪೂಜಾ ಮುಹೂರ್ತ
ದಿನಾಂಕ : ಆಗಸ್ಟ್ 27
ಏಕಾದಶಿ ತಿಥಿ ಪ್ರಾರಂಭ: ಆಗಸ್ಟ್ 26 ಮಧ್ಯರಾತ್ರಿ 12:08ಕ್ಕೆ
ಏಕಾದಶಿ ತಿಥಿ ಮುಕ್ತಾಯ: ರಾತ್ರಿ 09:23ರವರೆಗೆ
ಪಾರಣ ಸಮಯ: ಆಗಸ್ಟ್ 28 ಬೆಳಗ್ಗೆ 06:06ರಿಂದ 08:37ರವರೆಗೆ
ಪುತ್ರದಾ ಏಕಾದಶಿ ಏನು ಮಾಡಬೇಕು?
* ಬೆಳಗ್ಗೆ ಎದ್ದು ಸ್ನಾನ ಮಾಡಿ ನಂತರ ಉಪವಾಸ ವ್ರತ ಕೈಗೊಳ್ಳಬೇಕು.
* ಈ ದಿನ ವಿಷ್ಣುವಿಗೆ ನೈವೇದ್ಯ, ಹೂಗಳನ್ನು ಅರ್ಪಿಸಿ. ದೇವರಿಗೆ ತುಪ್ಪದ ದೀಪ ಹಚ್ಚಿ.
* ಶ್ರೀ ವಿಷ್ಣು ಅಥವಾ ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗಿ ಬನ್ನಿ.
* ಈ ದಿನ ಪುತ್ರದಾ ಏಕಾದಶಿ ವ್ರತ ಕತೆ ಓದಿ.
* ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.
* ರಾತ್ರಿ ಪೂರ್ತಿ ಎಚ್ಚರವಿದ್ದು ಶ್ರೀವಿಷ್ಣುವಿನ ಜಪ ಮಾಡಿದರೆ ಇನ್ನೂ ಒಳ್ಳೆಯದು. ಜಾಗರಣೆ ಇದ್ದು ಬೆಳಗ್ಗೆ ಪಾರಣೆ ಸಮಯದಲ್ಲಿ ಉಪವಾಸ ಮುರಿಯಿರಿ.
* ಏಕಾದಶಿಯ ದಿನದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈ ದಿನ ಸಾಧ್ಯವಾದರೆ ನೀರು ಕೂಡ ಕುಡಿಯದೆ ಉಪವಾಸ ಮಾಡಿದರೆ ಒಳ್ಳೆಯದು.
ಏಕಾದಶಿಯ ದಿನ ಏನು ಮಾಡಬಾರದು?
* ಈ ದಿನ ಸುಳ್ಳು ಹೇಳಬಾರದು, ಕೋಪಗೊಳ್ಳುವುದು, ಇತರರನ್ನು ಬೈಯ್ಯುವುದು ಮಾಡಬಾರದು.
* ಏಕಾದಶಿಯ ದಿನದಂದು ಪತಿ-ಪತ್ನಿ ಸಂಯಮದಿಂದ ಬ್ರಹ್ಮಚರ್ಯವನ್ನು ಅನುಸರಿಸಬೇಕು, ಆದ್ದರಿಂದ ಈ ದಿನ ದೈಹಿಕ ಸಂಬಂಧವನ್ನು ಮಾಡಬಾರದು.
* ಮನೆಯ ವಾತಾವರಣ ಖುಷಿಯಿಂದ ಕೂಡಿರಬೇಕು.
* ಈ ದಿನ ದೇವರ ಪೂಜೆಗೆ ಮೀಸಲಾಗಿರುವುದರಿಂದ ಸಂಜೆ ಹೊತ್ತಿನಲ್ಲಿ ಮಲಗಬಾರದು.
* ಈ ದಿನ ಯಾರಿಗೂ ಅವಮಾನ ಮಾಡಬೇಡಿ.
ಈ ಕೆಲಸವನ್ನು ಏಕಾದಶಿಯಂದು ಮಾಡಬೇಕು?
* ಈ ದಿನ ಸಾಧ್ಯವಾದರೆ ಪುಣ್ಯ ನದಿಯಲ್ಲಿ ಸ್ನಾನ ಮಾಡಿ.
* ಮದುವೆಗಾಗಿ ಏಕಾದಶಿಯ ದಿನದಂದು ಕುಂಕುಮ, ಬಾಳೆಹಣ್ಣು ಅಥವಾ ಅರಿಶಿನವನ್ನು ದಾನ ಮಾಡಿ.
* ಏಕಾದಶಿಯಂದು ಉಪವಾಸ ಮಾಡುವುದರಿಂದ, ಇಷ್ಟಾರ್ಥಗಳು ನೆರವೇರುತ್ತವೆ , ಈ ದಿನ ಲಕ್ಷ್ಮಿ, ವಿಷ್ಣುವನ್ನು ಆರಾಧಿಸಿ
ಪ್ರತಿ ಏಕಾದಶಿಯಂದು ಉಪವಾಸವನ್ನು ಆಚರಿಸುವುದರಿಂದ ಸಂಪತ್ತು, ಗೌರವ, ಉತ್ತಮ ಆರೋಗ್ಯ, ಜ್ಞಾನ, ಮಕ್ಕಳ ಸಂತೋಷ, ಕುಟುಂಬ ಸಂತೋಷ ಮತ್ತು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾನೆ.
* ಈ ದಿನ ಅನ್ನದಾನ ಮಾಡಿದರೆ ಒಳ್ಳೆಯದು
* ಈ ದಿನ ಸಂಜೆ ದೀಪಗಳನ್ನು ದಾನ ಮಾಡಿದರೆ ಒಳ್ಳೆಯದು



Click it and Unblock the Notifications