Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಶ್ರಾವಣ ಪುತ್ರದಾ ಏಕಾದಶಿ 2023: ಈ ದಿನ ಏನು ಮಾಡಿದರೆ ತುಂಬಾ ಒಳ್ಳೆಯದು?
ಶ್ರಾವಣ ಮಾಸದ ಏಕಾದಶಿಯನ್ನು ಪುತ್ರದಾ ಏಕಾದಶಿಯಂದು ಆಚರಿಸಲಾಗುವುದು, ಇದು ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯಾಗಿದೆ. ಈ ಏಕಾದಶಿಯಂದು ಶ್ರೀ ವಿಷ್ಣುವನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮ ಇಷ್ಟಾರ್ಥಗಳು ನೆರವೇರುವುದು. ವಿವಾಹಿತ ಮಹಿಳೆಯರು ಸಂತಾನ ಭಾಗ್ಯಕ್ಕಾಗಿ ಈ ಏಕಾದಶಿಯನ್ನು ಆಚರಿಸಿದರೆ ಒಳ್ಳೆಯದು. ಈ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಶ್ರಾವಣ ಪುತ್ರದಾ ಏಕಾದಶಿ ದಿನಾಂಕ ಮತ್ತು ಪೂಜಾ ಮುಹೂರ್ತ
ದಿನಾಂಕ : ಆಗಸ್ಟ್ 27
ಏಕಾದಶಿ ತಿಥಿ ಪ್ರಾರಂಭ: ಆಗಸ್ಟ್ 26 ಮಧ್ಯರಾತ್ರಿ 12:08ಕ್ಕೆ
ಏಕಾದಶಿ ತಿಥಿ ಮುಕ್ತಾಯ: ರಾತ್ರಿ 09:23ರವರೆಗೆ
ಪಾರಣ ಸಮಯ: ಆಗಸ್ಟ್ 28 ಬೆಳಗ್ಗೆ 06:06ರಿಂದ 08:37ರವರೆಗೆ
ಪುತ್ರದಾ ಏಕಾದಶಿ ಏನು ಮಾಡಬೇಕು?
* ಬೆಳಗ್ಗೆ ಎದ್ದು ಸ್ನಾನ ಮಾಡಿ ನಂತರ ಉಪವಾಸ ವ್ರತ ಕೈಗೊಳ್ಳಬೇಕು.
* ಈ ದಿನ ವಿಷ್ಣುವಿಗೆ ನೈವೇದ್ಯ, ಹೂಗಳನ್ನು ಅರ್ಪಿಸಿ. ದೇವರಿಗೆ ತುಪ್ಪದ ದೀಪ ಹಚ್ಚಿ.
* ಶ್ರೀ ವಿಷ್ಣು ಅಥವಾ ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗಿ ಬನ್ನಿ.
* ಈ ದಿನ ಪುತ್ರದಾ ಏಕಾದಶಿ ವ್ರತ ಕತೆ ಓದಿ.
* ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.
* ರಾತ್ರಿ ಪೂರ್ತಿ ಎಚ್ಚರವಿದ್ದು ಶ್ರೀವಿಷ್ಣುವಿನ ಜಪ ಮಾಡಿದರೆ ಇನ್ನೂ ಒಳ್ಳೆಯದು. ಜಾಗರಣೆ ಇದ್ದು ಬೆಳಗ್ಗೆ ಪಾರಣೆ ಸಮಯದಲ್ಲಿ ಉಪವಾಸ ಮುರಿಯಿರಿ.
* ಏಕಾದಶಿಯ ದಿನದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈ ದಿನ ಸಾಧ್ಯವಾದರೆ ನೀರು ಕೂಡ ಕುಡಿಯದೆ ಉಪವಾಸ ಮಾಡಿದರೆ ಒಳ್ಳೆಯದು.
ಏಕಾದಶಿಯ ದಿನ ಏನು ಮಾಡಬಾರದು?
* ಈ ದಿನ ಸುಳ್ಳು ಹೇಳಬಾರದು, ಕೋಪಗೊಳ್ಳುವುದು, ಇತರರನ್ನು ಬೈಯ್ಯುವುದು ಮಾಡಬಾರದು.
* ಏಕಾದಶಿಯ ದಿನದಂದು ಪತಿ-ಪತ್ನಿ ಸಂಯಮದಿಂದ ಬ್ರಹ್ಮಚರ್ಯವನ್ನು ಅನುಸರಿಸಬೇಕು, ಆದ್ದರಿಂದ ಈ ದಿನ ದೈಹಿಕ ಸಂಬಂಧವನ್ನು ಮಾಡಬಾರದು.
* ಮನೆಯ ವಾತಾವರಣ ಖುಷಿಯಿಂದ ಕೂಡಿರಬೇಕು.
* ಈ ದಿನ ದೇವರ ಪೂಜೆಗೆ ಮೀಸಲಾಗಿರುವುದರಿಂದ ಸಂಜೆ ಹೊತ್ತಿನಲ್ಲಿ ಮಲಗಬಾರದು.
* ಈ ದಿನ ಯಾರಿಗೂ ಅವಮಾನ ಮಾಡಬೇಡಿ.
ಈ ಕೆಲಸವನ್ನು ಏಕಾದಶಿಯಂದು ಮಾಡಬೇಕು?
* ಈ ದಿನ ಸಾಧ್ಯವಾದರೆ ಪುಣ್ಯ ನದಿಯಲ್ಲಿ ಸ್ನಾನ ಮಾಡಿ.
* ಮದುವೆಗಾಗಿ ಏಕಾದಶಿಯ ದಿನದಂದು ಕುಂಕುಮ, ಬಾಳೆಹಣ್ಣು ಅಥವಾ ಅರಿಶಿನವನ್ನು ದಾನ ಮಾಡಿ.
* ಏಕಾದಶಿಯಂದು ಉಪವಾಸ ಮಾಡುವುದರಿಂದ, ಇಷ್ಟಾರ್ಥಗಳು ನೆರವೇರುತ್ತವೆ , ಈ ದಿನ ಲಕ್ಷ್ಮಿ, ವಿಷ್ಣುವನ್ನು ಆರಾಧಿಸಿ
ಪ್ರತಿ ಏಕಾದಶಿಯಂದು ಉಪವಾಸವನ್ನು ಆಚರಿಸುವುದರಿಂದ ಸಂಪತ್ತು, ಗೌರವ, ಉತ್ತಮ ಆರೋಗ್ಯ, ಜ್ಞಾನ, ಮಕ್ಕಳ ಸಂತೋಷ, ಕುಟುಂಬ ಸಂತೋಷ ಮತ್ತು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾನೆ.
* ಈ ದಿನ ಅನ್ನದಾನ ಮಾಡಿದರೆ ಒಳ್ಳೆಯದು
* ಈ ದಿನ ಸಂಜೆ ದೀಪಗಳನ್ನು ದಾನ ಮಾಡಿದರೆ ಒಳ್ಳೆಯದು



Click it and Unblock the Notifications