Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಶ್ರಾವಣ ಪುತ್ರದಾ ಏಕಾದಶಿ 2023: ಈ ದಿನ ಏನು ಮಾಡಿದರೆ ತುಂಬಾ ಒಳ್ಳೆಯದು?
ಶ್ರಾವಣ ಮಾಸದ ಏಕಾದಶಿಯನ್ನು ಪುತ್ರದಾ ಏಕಾದಶಿಯಂದು ಆಚರಿಸಲಾಗುವುದು, ಇದು ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯಾಗಿದೆ. ಈ ಏಕಾದಶಿಯಂದು ಶ್ರೀ ವಿಷ್ಣುವನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮ ಇಷ್ಟಾರ್ಥಗಳು ನೆರವೇರುವುದು. ವಿವಾಹಿತ ಮಹಿಳೆಯರು ಸಂತಾನ ಭಾಗ್ಯಕ್ಕಾಗಿ ಈ ಏಕಾದಶಿಯನ್ನು ಆಚರಿಸಿದರೆ ಒಳ್ಳೆಯದು. ಈ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಶ್ರಾವಣ ಪುತ್ರದಾ ಏಕಾದಶಿ ದಿನಾಂಕ ಮತ್ತು ಪೂಜಾ ಮುಹೂರ್ತ
ದಿನಾಂಕ : ಆಗಸ್ಟ್ 27
ಏಕಾದಶಿ ತಿಥಿ ಪ್ರಾರಂಭ: ಆಗಸ್ಟ್ 26 ಮಧ್ಯರಾತ್ರಿ 12:08ಕ್ಕೆ
ಏಕಾದಶಿ ತಿಥಿ ಮುಕ್ತಾಯ: ರಾತ್ರಿ 09:23ರವರೆಗೆ
ಪಾರಣ ಸಮಯ: ಆಗಸ್ಟ್ 28 ಬೆಳಗ್ಗೆ 06:06ರಿಂದ 08:37ರವರೆಗೆ
ಪುತ್ರದಾ ಏಕಾದಶಿ ಏನು ಮಾಡಬೇಕು?
* ಬೆಳಗ್ಗೆ ಎದ್ದು ಸ್ನಾನ ಮಾಡಿ ನಂತರ ಉಪವಾಸ ವ್ರತ ಕೈಗೊಳ್ಳಬೇಕು.
* ಈ ದಿನ ವಿಷ್ಣುವಿಗೆ ನೈವೇದ್ಯ, ಹೂಗಳನ್ನು ಅರ್ಪಿಸಿ. ದೇವರಿಗೆ ತುಪ್ಪದ ದೀಪ ಹಚ್ಚಿ.
* ಶ್ರೀ ವಿಷ್ಣು ಅಥವಾ ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗಿ ಬನ್ನಿ.
* ಈ ದಿನ ಪುತ್ರದಾ ಏಕಾದಶಿ ವ್ರತ ಕತೆ ಓದಿ.
* ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.
* ರಾತ್ರಿ ಪೂರ್ತಿ ಎಚ್ಚರವಿದ್ದು ಶ್ರೀವಿಷ್ಣುವಿನ ಜಪ ಮಾಡಿದರೆ ಇನ್ನೂ ಒಳ್ಳೆಯದು. ಜಾಗರಣೆ ಇದ್ದು ಬೆಳಗ್ಗೆ ಪಾರಣೆ ಸಮಯದಲ್ಲಿ ಉಪವಾಸ ಮುರಿಯಿರಿ.
* ಏಕಾದಶಿಯ ದಿನದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈ ದಿನ ಸಾಧ್ಯವಾದರೆ ನೀರು ಕೂಡ ಕುಡಿಯದೆ ಉಪವಾಸ ಮಾಡಿದರೆ ಒಳ್ಳೆಯದು.
ಏಕಾದಶಿಯ ದಿನ ಏನು ಮಾಡಬಾರದು?
* ಈ ದಿನ ಸುಳ್ಳು ಹೇಳಬಾರದು, ಕೋಪಗೊಳ್ಳುವುದು, ಇತರರನ್ನು ಬೈಯ್ಯುವುದು ಮಾಡಬಾರದು.
* ಏಕಾದಶಿಯ ದಿನದಂದು ಪತಿ-ಪತ್ನಿ ಸಂಯಮದಿಂದ ಬ್ರಹ್ಮಚರ್ಯವನ್ನು ಅನುಸರಿಸಬೇಕು, ಆದ್ದರಿಂದ ಈ ದಿನ ದೈಹಿಕ ಸಂಬಂಧವನ್ನು ಮಾಡಬಾರದು.
* ಮನೆಯ ವಾತಾವರಣ ಖುಷಿಯಿಂದ ಕೂಡಿರಬೇಕು.
* ಈ ದಿನ ದೇವರ ಪೂಜೆಗೆ ಮೀಸಲಾಗಿರುವುದರಿಂದ ಸಂಜೆ ಹೊತ್ತಿನಲ್ಲಿ ಮಲಗಬಾರದು.
* ಈ ದಿನ ಯಾರಿಗೂ ಅವಮಾನ ಮಾಡಬೇಡಿ.
ಈ ಕೆಲಸವನ್ನು ಏಕಾದಶಿಯಂದು ಮಾಡಬೇಕು?
* ಈ ದಿನ ಸಾಧ್ಯವಾದರೆ ಪುಣ್ಯ ನದಿಯಲ್ಲಿ ಸ್ನಾನ ಮಾಡಿ.
* ಮದುವೆಗಾಗಿ ಏಕಾದಶಿಯ ದಿನದಂದು ಕುಂಕುಮ, ಬಾಳೆಹಣ್ಣು ಅಥವಾ ಅರಿಶಿನವನ್ನು ದಾನ ಮಾಡಿ.
* ಏಕಾದಶಿಯಂದು ಉಪವಾಸ ಮಾಡುವುದರಿಂದ, ಇಷ್ಟಾರ್ಥಗಳು ನೆರವೇರುತ್ತವೆ , ಈ ದಿನ ಲಕ್ಷ್ಮಿ, ವಿಷ್ಣುವನ್ನು ಆರಾಧಿಸಿ
ಪ್ರತಿ ಏಕಾದಶಿಯಂದು ಉಪವಾಸವನ್ನು ಆಚರಿಸುವುದರಿಂದ ಸಂಪತ್ತು, ಗೌರವ, ಉತ್ತಮ ಆರೋಗ್ಯ, ಜ್ಞಾನ, ಮಕ್ಕಳ ಸಂತೋಷ, ಕುಟುಂಬ ಸಂತೋಷ ಮತ್ತು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾನೆ.
* ಈ ದಿನ ಅನ್ನದಾನ ಮಾಡಿದರೆ ಒಳ್ಳೆಯದು
* ಈ ದಿನ ಸಂಜೆ ದೀಪಗಳನ್ನು ದಾನ ಮಾಡಿದರೆ ಒಳ್ಳೆಯದು



Click it and Unblock the Notifications











