Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಶ್ರಾವಣ ಮಾಸ: ಶಿವನಿಗೆ ಯಾವ ವಸ್ತುಗಳಿಂದ ಅಭಿಷೇಕ ಮಾಡಿದರೆ ಏನು ಫಲ ಸಿಗುವುದು?
ಶ್ರಾವಣ ಮಾಸವೆಂದರೆ ಶಿವನ ಪೂಜೆಗೆ ಮೀಸಲಾದ ಮಾಸ. ಈ ಮಾಸದಲ್ಲಿ ಮಾಡುವ ಶಿವ ಪೂಜೆಯಿಂದ ಹೆಚ್ಚಿನ ಫಲ ಸಿಗುವುದು ಎಂಬ ಧಾರ್ಮಿಕ ನಂಬಿಕೆ ಇದೆ. ಅದರಲ್ಲೂ ಶ್ರಾವಣ ಸೋಮವಾರಂತೂ ಶಿವ ಪೂಜೆಗೆ ಶ್ರೇಷ್ಠವಾದ ದಿನವಾಗಿದೆ.
ಶಿವ ಪೂಜೆ ಮಾಡುವಾಗ ಶಿವನಿಗೆ ಅಭಿಷೇಕ ಮಾಡಲಾಗುವುದು. ಶಿವನಿಗೆ ಅಭಿಷೇಕ ಮಾಡಲು ನೀರು, ಹಾಲು, ತುಪ್ಪ ಸೇರಿದಂತೆ ಹಲವು ವಸ್ತುಗಳನ್ನು ಬಳಸಲಾಗುವುದು. ನಾವು ನಮ್ಮ ಇಷ್ಟಾರ್ಥ ನೆರವೇರಲು ಅದಕ್ಕೆ ತಕ್ಕ ವಸ್ತುವಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ನಮ್ಮ ಆಸೆ ಬೇಗನೆ ನೆರವೇರುವುದು. ಯಾವ ವಸ್ತುವಿನಿಂದ ಅಭಿಷೇಕ ಮಾಡಿದರೆ ಏನು ಪ್ರಯೋಜನ ಎಂದು ನೋಡೋಣ ಬನ್ನಿ:

ಜಲಾಭಿಷೇಕ
ನಮ್ಮ ಇಷ್ಟಾರ್ಥ ನೆರವೇರಲು ಜಲಾಭಿಷೇಕ ಮಾಡಿದರೆ ಒಳ್ಳೆಯದು.
ಪಂಚಗವ್ಯಂ: ಹಾಲು, ಮೊಸರು, ತುಪ್ಪ, ಗೋಮೂತ್ರ, ಸೆಗಣಿಯಿಂದ ಮಾಡುವ ಅಭಿಷೇಕ.
ಈ ಅಭಿಷೇಕ ಮಾಡುವುದರಿಂದ ಎಲ್ಲಾ ಪಾಪಗಳಿಂದ ಮುಕ್ತರಾಗಬಹುದು.
ಪಂಚಾಮೃತ ಅಭಿಷೇಕ ( ಬಾಳೆಹಣ್ಣು, ಬೆಲ್ಲ, ಸಕ್ಕರೆ, ಬೀಜವಿಲ್ಲದ ಖರ್ಜೂರ, ಜೇನು, ಡ್ರೈ ಫ್ರೂಟ್ಸ್) ಇವುಗಳಿಂದ ಅಭಿಷೇಕ ಮಾಡಲಾಗುವುದು. ಇದರಿಂದ ಆರೋಗ್ಯ ವೃದ್ಧಿಸುವುದು.
ತುಪ್ಪದ ಅಭಿಷೇಕ: ಶಿವಲಿಂಗಕ್ಕೆ ತುಪ್ಪದ ಅಭಿಷೇಕ ಮಾಡುವುದರಿಂದ ಮೋಕ್ಷ ಸಿಗಲಿದೆ.
ಹಾಲಿನ ಅಭಿಷೇಕ: ಶಿವ ಲಿಂಗಕ್ಕೆ ಅಭಿಷೇಕ ಮಾಡುವುದರಿಂದ ದೀರ್ಘಾಯುಷ್ಯ ದೊರೆಯಲಿದೆ.
ಮೊಸರಿನ ಅಭಿಷೇಕ: ಸಂತಾನ ಭಾಗ್ಯ, ಮಕ್ಕಳ ಆರೋಗ್ಯಕ್ಕಾಗಿ ಮೊಸರಿನ ಅಭಿಷೇಕ ಮಾಡಲಾಗುವುದು.
ಜೇನಿನಿಂದ ಅಭಿಷೇಕ: ಸಂಗೀತ ಜ್ಞಾನ, ಜ್ಞಾನ ವೃದ್ಧಿಗಾಗಿ ಈ ಅಭಿಷೇಕ ಮಾಡಲಾಗುವುದು.
ಅಕ್ಕಿ ಹಿಟ್ಟಿನಿಂದ ಅಭಿಷೇಕ: ಅಕ್ಕಿ ಹಿಟ್ಟಿನಿಂದ ಅಭಿಷೇಕ ಮಾಡುವುದರಿಂದ ಸಾಲದಿಂದ ಮುಕ್ತರಾಗಬಹುದು.
ಕಬ್ಬಿನರಸದ ಹಾಲು: ಶತ್ರುನಾಶಕ್ಕೆ, ಉತ್ತಮ ಆರೋಗ್ಯಕ್ಕಾಗಿ ಅಭಿಷೇಕ ಮಾಡಲಾಗುವುದು.
ನಿಂಬೆರಸ: ಸಾವಿನ ಭಯ ಹೋಗಲಾಡಿಸಲು, ಕಾಯಿಲೆಯಿಂದ ಗುಣಮುಖರಾಗಲು ನಿಂಬೆರಸದಿಂದ ಅಭಿಷೇಕ ಮಾಡಲಾಗುವುದು.
ಎಳನೀರಿನ ಅಭಿಷೇಕ: ಜೀವನದಲ್ಲಿ ಸುಖ, ನೆಮ್ಮದಿಗಾಗಿ ಈ ಅಭಿಷೇಕ ಮಾಡಲಾಗುವುದು.
ಅನ್ನಾಭಿಷೇಕ: ಸಂಪತ್ತು ವೃದ್ಧಿಗಾಗಿ ಈ ಅಭಿಷೇಕ ಮಾಡಲಾಗುವುದು.
ಲಕ್ಷ್ಮಿ ಕೃಪೆಗಾಗಿ: ಶ್ರೀ ಚಂದನದ ಪೇಸ್ಟ್ ಹಚ್ಚಿ ಅಭಿಷೇಕ ಮಾಡುವುದರಿಂದ ಲಕ್ಷ್ಮಿ ಕೃಪೆ ದೊರೆಯಲಿದೆ.
ಲಿಂಗಕ್ಕೆ ಸಕ್ಕರೆ ಅಭಿಷೇಕ: ಶತ್ರುನಾಶಕ್ಕೆ ಸಕ್ಕರೆಯಿಂದ ಅಭಿಷೇಕ ಮಾಡಿದರೆ ಒಳ್ಳೆಯದು.
ಗಂಗಾಜಲದ ಅಭಿಷೇಕ: ಜಲಾಭಿಷೇ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ.
ಶಿವ ಮಂತ್ರಗಳು
ಪಂಚಾಕ್ಷರಿ ಶಿವ ಮಂತ್ರ
ಓಂ ನಮಃ ಶಿವಾಯ
ಓಂ ನಮಃ ಶಿವಾಯವನ್ನು ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಹೇಳಬಹುದು.
ಮಹಾಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
ಈ ಮಂತ್ರವನ್ನು ಪಠಿಸಲು ಕೆಲವು ನಿಯಮಗಳಿವೆ. ಈ ಮಂತ್ರವನ್ನು ಯಾವಾಗ ಮತ್ತು ಹೇಗೆ ಹೇಳಬೇಕು ಎಂಬುದು ಗೊತ್ತಿರಬೇಕು, ಸ್ಪಷ್ಠವಾಗಿ ಪಠಿಸಬೇಕು. ಈ ಮಂತ್ರವನ್ನು ಹೇಳುವುದರಿಂದಾಗಿ ಸಾವನ್ನು ಗೆಲ್ಲುವ ಶಕ್ತಿ ದೊರೆಯುತ್ತದೆ. ಸಾವಿನ ಭಯ ದೂರಾಗುವುದು.
ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್
ಗಾಯತ್ರೀ ಮಂತ್ರ ತುಂಬಾನೇ ಶಕ್ತಿಶಾಲಿಯಾಗಿರುವ ಮಂತ್ರ . ಅದರಲ್ಲಿ ಇದು ಶಿವ ಗಾಯತ್ರೀ ಮಂತ್ರ ಪಠಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ.



Click it and Unblock the Notifications
