Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಶ್ರಾವಣ ಮಾಸ 2023 : ಈ ನಾಲ್ಕು ರಾಶಿಯವರಿಗೆ 2 ತಿಂಗಳು ಆಪತ್ತು ತಪ್ಪಿದ್ದಲ್ಲ!
ಶ್ರಾವಣ ಮಾಸವನ್ನು ಹಿಂದೂಗಳ ಪವಿತ್ರ ಮಾಸ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಶಿವಲಿಂಗಕ್ಕೆ ಪವಿತ್ರ ನೀರಿನ ಅಭಿಷೇಕವನ್ನು ಮಾಡೋದ್ರ ಮೂಲಕ ಶಿವನು ಸಂತುಷ್ಟಗೊಳ್ಳುತ್ತಾನಂತೆ. ಅಷ್ಟೇ ಅಲ್ಲದೇ, ನಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ.
ಬರೋಬ್ಬರಿ 19 ವರ್ಷಗಳ ನಂತರ ಎರಡು ತಿಂಗಳುಗಳ ಕಾಲ ಶ್ರಾವಣ ಮಾಸ ಬರುತ್ತಿದ್ದು, ಇದನ್ನು ತುಂಬಾನೇ ವಿಶೇಷ ಅಂತಾನೂ ಪರಿಗಣಿಸಲಾಗುತ್ತದೆ. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶ್ರಾವಣ ಮಾಸ ಕೆಲವು ರಾಶಿಯವರಿಗೆ ತುಂಬಾನೇ ಒಳ್ಳೆಯದಾಗಲಿದೆ. ಆದರೆ ಇನ್ನೂ ಕೆಲವು ರಾಶಿಯವರಿಗೆ ಈ ಶ್ರಾವಣ ಮಾಸದಲ್ಲಿ ಸಂಕಷ್ಟಗಳನ್ನು ಎದುರಿಸಲಿದ್ದಾರೆ. ಅಷ್ಟಕ್ಕು ಯಾವೆಲ್ಲಾ ರಾಶಿಯವರಿಗೆ ಈ ಶ್ರಾವಣ ಮಾಸದಲ್ಲಿ ಸಮಸ್ಯೆಗಳು ಎದುರಾಗುತ್ತೆ ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಜನಿಸಿದವರು ಈ ತಿಂಗಳು ಸಾಕಷ್ಟು ಸವಾಲುಗಳನ್ನು ಅನುಭವಿಸಬೇಕಾಗುತ್ತದೆ. ಈ ಶ್ರಾವಣವು ಕರ್ಕಾಟಕ ರಾಶಿವರಿಗೆ ಅಷ್ಟೇನು ಚೆನ್ನಾಗಿ ಇರೋದಿಲ್ಲ. ನೀವು ಅಂದುಕೊಂಡ ಕೆಲವುಗಳು ಈ ಸಮಯದಲ್ಲಿ ನೆರವೇರೋದಿಲ್ಲ. ಶುಭ ಕೆಲಸಕ್ಕೆ ಅಡ್ಡಿ-ಆತಂಕಗಳು ಎದುರಾಗುತ್ತದೆ. ಹೀಗಾಗಿ ಯಾವುದೇ ಕೆಲಸವನ್ನು ಮಾಡಬೇಕಾದರೆ ಈ ತಿಂಗಳು ತುಂಬಾನೇ ಜಾಗರೂಕತೆ ವಹಿಸಿದ್ರೆ ಉತ್ತಮ.
ತುಲಾ ರಾಶಿ
ತುಲಾ ರಾಶಿಯವರು ಈ ಶ್ರಾವಣ ತಿಂಗಳಿನಲ್ಲಿ ಆದಷ್ಟು ಜಾಗರೂಕರಾಗಿ ಇರಬೇಕು. ಪ್ರತಿಯೊಂದು ಹೆಜ್ಜೆ-ಹೆಜ್ಜೆಗೂ ನಿಮಗೆ ಅಡ್ಡಿ-ಆತಂಕಗಳು ಎದುರಾಗುತ್ತಲೇ ಇರುತ್ತದೆ. ನಿಮ್ಮ ವೃತ್ತಿ ಜೀವನ, ಕೌಟುಂಬಿಕ, ಆರ್ಥಿಕ ಹಾಗೂ ಆರೋಗ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮಸ್ಯೆ ಇದ್ದೇ ಇರುತ್ತದೆ. ಅದನ್ನು ಬಿಟ್ಟರೆ ನಿಮ್ಮ ಜೀವನ ಸ್ಥಿರವಾಗಿ ಸಾಗುತ್ತದೆ. ಆದರೆ ಕೆಲವೊಂದು ವಿಚಾರಗಳಲ್ಲಿ ಜಾಗರೂಕತೆ ವಹಿಸಿದರೆ ಒಳ್ಳೆಯದು. ಇನ್ನೂ ನಿಮ್ಮ ಕೌಟುಂಬಿಕ ಸಮಸ್ಯೆಗಳಿಂದಾಗಿ ನೀವು ಈ ತಿಂಗಳಿನಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯವರು ಈ ಶ್ರಾವಣ ತಿಂಗಳಿನಲ್ಲಿ ಕೆಲವೊಂದು ಅಡೆ-ತಡೆಗಳನ್ನು ಎದುರಿಸಲಿದ್ದಾರೆ. ಕೈಗೆತ್ತಿಕೊಂಡ ಯಾವುದೇ ಕೆಲಸಗಳು ಪೂರ್ಣಗೊಳ್ಳೋದಿಲ್ಲ. ನೀವು ಎಷ್ಟೇ ಶ್ರಮ ಪಟ್ಟರೂ ಕೂಡ ನೀವು ಮಾಡಿದ ಯಾವುದೇ ಕೆಲಸಗಳಿಗೂ ಫಲ ಸಿಗೋದಿಲ್ಲ. ಇದರಿಂದಾಗಿ ನಿಮ್ಮಲ್ಲಿ ಒತ್ತಡ ಹೆಚ್ಚಾಗುವುದು ಮಾತ್ರವಲ್ಲದೇ, ಇದರ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಲಿದೆ. ಶ್ರಾವಣ ಕಳೆದ ನಂತರ ನಿಮ್ಮೆಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ. ಅಲ್ಲಿಯವರೆಗೂ ಸಮಾಧಾನದಿಂದರಬೇಕು.
ಕುಂಭ ರಾಶಿ
ಕುಂಭ ರಾಶಿಯವರು ಆರೋಗ್ಯಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಈ ತಿಂಗಳಿನಲ್ಲಿ ಎದುರಿಸಲಿದ್ದೀರಿ. ಇನ್ನೂ ಈ ಶ್ರಾವಣ ತಿಂಗಳಿನಲ್ಲಿ ನಿಮ್ಮ ವೃತ್ತಿ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಅನೇಕ ಸಮಸ್ಯೆಗಳು ಎದುರಾಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿ ಕಿರಿ, ನೀವೇನಾದರೂ ಹೊಸ ಕೆಲಸಕ್ಕೆ ಸೇರ್ಪಡೆಗೊಳ್ಳೋದಕ್ಕೆ ಆಲೋಚಿಸಿದ್ದರೆ ಅದು ಸಾಧ್ಯವಾಗೋದಿಲ್ಲ. ಉತ್ತಮ ಉದ್ಯೊಗ ಅವಕಾಶ ನಿಮ್ಮ ಕೈ ತಪ್ಪಿ ಹೋಗುವ ಸಾಧ್ಯತೆಗಳಿದೆ. ನಿಮ್ಮ ಗ್ರಹ ಗತಿಗಳು ಚೆನ್ನಾಗಿ ಇಲ್ಲದ ಕಾರಣ ಈ ಎಲ್ಲಾ ಸಮಸ್ಯೆ ಎದುರಾಗುತ್ತದೆ.
ಯಾವೆಲ್ಲಾ ರಾಶಿಯವರಿಗೆ ಶುಭ?
ಈ ಶ್ರಾವಣ ಮಾಸದಲ್ಲಿ ಈ ಮೇಲಿನ ನಾಲ್ಕು ರಾಶಿಯವರಿಗೆ ಅಶುಭವಾದರೆ ಸಿಂಹ, ಕರ್ಕಾಟಕ, ಧನುರಾಶಿಯವರಿಗೆ ಈ ತಿಂಗಳು ತುಂಬಾನೇ ಒಳ್ಳೆಯದಾಗಲಿದೆ. ಸ್ವಯಂ ಅನ್ವೇಷಣೆ, ಆಧ್ಯಾತ್ಮಿಕ ಬೆಳವಣಿಗೆ, ಭಾವನಾತ್ಮಕವಾಗಿ ನಿಮ್ಮ ಮನಸ್ಸು ಖುಷಿಯಾಗಿರುತ್ತದೆ ಹಾಗೂ ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ಶ್ರಾವಣ ತಿಂಗಳು ಈ ನಾಲ್ಕು ರಾಶಿಯವರಿಗೆ ಅಷ್ಟೇನು ಶುಭ ಫಲಿತಾಂಶಗಳನ್ನು ಕೊಡೋದಿಲ್ಲ. ಹೀಗಾಗಿ ಜಾಗರೂಕರಾಗಿದ್ದರೆ ತುಂಬಾನೇ ಒಳ್ಳೆಯದು.



Click it and Unblock the Notifications













