Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಕುರಿ ಮೇಲೆ 'ರಾಮ್' ಎಂದು ಬರೆದು ಮಾರಾಟ..! ಈ ಫೋಟೋ ಹಿಂದಿದೆ ಅಚ್ಚರಿ ಕಥೆ..!
ಇಂದು ವಿಶ್ವದಾದ್ಯಂತ ಬಕ್ರೀದ್ ಆಚರಣೆ ನಡೆಯುತ್ತಿದೆ. ತ್ಯಾಗ ಹಾಗೂ ಬಲಿದಾನದ ಸಂಕೇತವಾಗಿ ಮುಸ್ಲಿಂ ಸಮುದಾಯ ಈ ಹಬ್ಬವನ್ನು ಆಚರಿಸುತ್ತದೆ. ಈ ಹಬ್ಬದಲ್ಲಿ ಪ್ರಾಣಿ ಬಲಿ ಹಾಗೂ ದಾನ, ಧರ್ಮ ಮಾಡುವುದು ಅವರ ಆಚರಣೆ, ಸಂಪ್ರದಾಯದಲ್ಲಿ ಒಂದಾಗಿದೆ.
ಆದರೆ ಇಲ್ಲೊಂದು ಕಡೆ ಬಕ್ರೀದ್ಗಾಗಿ ಬಲಿ ನೀಡಲು ಕುರಿಯ ಮೈಮೇಲೆ ರಾಮ್ ಎಂದು ಬರೆದಿದ್ದ ಕುರಿಯ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂಬೈನ ಮುಂಸ್ಲಿಂ ವ್ಯಾಪಾರಿಯೊಬ್ಬರು ಕುರಿ ಮೇಲೆ ರಾಮ್ ಎಂದು ಬರೆದು ಬಕ್ರೀದ್ ಸಂದರ್ಭದಲ್ಲಿ ಮಾರಾಟ ಮಾಡಿರುವ ಫೋಟೋ ಇದಾಗಿದೆ. ಈ ಫೋಟೋ ವೈರಲ್ ಆದ ಬಳಿಕ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಹಿಂದೂ ಸಂಘಟನೆಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದವು. ಇನ್ನು ಕೆಲವರು ವ್ಯಾಪಾರಿ ವಿರುದ್ಧ ಸಿಬಿಡಿ ಬೇಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆದರೆ ಈಗ ಆತನ ಬಂಧಿಸಲಾಗಿದೆ. ಆದರೆ ಈ ಫೋಟೋ ಹಿಂದಿರುವ ಒಂದಿಷ್ಟು ನಿಜಾಂಶ ನಾವೀಗ ಪತ್ತೆ ಮಾಡೋಣ.
ರಾಮ್ ಎಂದರೆ ಅಯೋಧ್ಯೆ ರಾಮನ ಹೆಸರಲ್ಲ ಬದಲಿಗೆ ರಾಮ್ ಎಂದರೆ ಕುರಿ ಜಾತಿಗೆ ಸೇರಿದ ಪ್ರಾಣಿಯ ಹೆಸರಾಗಿದೆ. ರಾಮ್ ಗಂಡು ಕುರಿಗಳ ಜಾತಿಯ ಪ್ರಾಣಿ. ಕುರಿಯಂತೆ ಕಂಡು ಬಂದರು ಇದು ಭಿನ್ನ ಪ್ರಾಣಿ. ಗುಂಪಿನಲ್ಲಿ ಬದುಕುವ ಈ ರಾಮ್ ಎಂಬ ಪ್ರಾಣಿಯನ್ನ ಬಕ್ರೀದ್ನಲ್ಲಿ ಬಲಿಗಾಗಿ ಬಳಸಲಾಗುತ್ತದೆ.
ಆದರೆ ಈ ಕುರಿತು ಅರ್ಥ ಮಾಡಿಕೊಳ್ಳಬೇಕಾದ್ರೆ ನಾವು ಹಿಂದಿನ ಕಥೆಯನ್ನ ನೋಡಬೇಕಾಗುತ್ತದೆ. ಈ ರಾಮ್ ಎಂಬ ಪ್ರಾಣಿಯನ್ನೇ ಏಕೆ ಬಲಿಗಾಗಿ ಆಯ್ಕೆ ಮಾಡಿಕೊಳ್ಳಲಾಯ್ತು ಎಂಬ ಕುರಿತು ನಾವು ತಿಳಿದುಕೊಳ್ಳಬೇಕು.
ಈದ್ ಅಲ್-ಅಧಾ (ಈದ್ ಉಲ್ ಅಧಾ) ಅಥವಾ "ತ್ಯಾಗದ ಹಬ್ಬ", ಇಸ್ಲಾಂನಲ್ಲಿ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಪರ್ಯಾಯವಾಗಿ ಬಕ್ರೀದ್, ಬಕ್ರ ಈದ್ ಅಥವಾ ಬಕ್ರಿ ಈದ್ ಎಂದು ಕರೆಯಲಾಗುತ್ತದೆ, ಇಸ್ಲಾಮಿಕ್ ಕ್ಯಾಲೆಂಡರ್ನ ಕೊನೆಯ ತಿಂಗಳಾದ ಧು ಅಲ್-ಹಿಜ್ಜಾದ ಹತ್ತನೇ ದಿನದಂದು ಮುಸ್ಲಿಂ ಸಮುದಾಯದ ನಮ್ಮ ಸಹೋದರರು ಮತ್ತು ಸಹೋದರಿಯರು ಈ ದಿನವನ್ನು ಆಚರಿಸುತ್ತಾರೆ.
ಪ್ರವಾದಿ ಇಬ್ರಾಹಿಂ ಅವರು ತನಗೆ ಪ್ರಿಯವಾದ ವಿಷಯವನ್ನು ಕೇಳಿದಾಗ ತನ್ನ ನೆಚ್ಚಿನ ಮಗ ಇಸ್ಮಾಯಿಲ್ ಅನ್ನು ದೇವರಿಗೆ ಬಲಿಕೊಡುವ ದಿನವನ್ನಾಗಿ ಇದು ಆಚರಣೆಗೆ ಬಂದಿದೆ. ದೇವರು ಅಲ್ಲಾಹನ ಮೇಲಿನ ಭಕ್ತಿ ಮತ್ತು ಪ್ರೀತಿಯನ್ನು ಸಾಬೀತುಪಡಿಸಲು ತನಗೆ ಪ್ರಿಯವಾದ ವಸ್ತುವನ್ನು ತ್ಯಾಗ ಮಾಡುವಂತೆ ಕೇಳಿಕೊಂಡನು. ಅವನ ಆಜ್ಞೆಯನ್ನು ತೆಗೆದುಕೊಂಡ ಪ್ರವಾದಿ ಇಬ್ರಾಹಿಂ ತನ್ನ ಮಗನನ್ನು ಅಲ್ಲಾಗೆ ವಿಧೇಯತೆಯ ಕ್ರಿಯೆಯಾಗಿ ಬಲಿಕೊಡಲು ನಿರ್ಧರಿಸಿದನು.
ಸರ್ವಶಕ್ತನಿಗೆ ಅವನ ನಿಷ್ಠೆ ಮತ್ತು ಬದ್ಧತೆಯಿಂದ ಸಂತೋಷಗೊಂಡ ಅಲ್ಲಾ ತನ್ನ ಮಗನನ್ನು ತ್ಯಾಗ ಮಾಡಿ ಬಲಿ ಕೊಡುವಾಗ ಪುತ್ರನ ಜಾಗದಲ್ಲಿ ಕುರಿಯೊಂದು ಪ್ರತ್ಯಕ್ಷವಾಯಿತು. ಇದು ರಾಮ್ ಎಂದು ಕರೆಯಲಾಗುವ ಪ್ರಾಣಿಯಾಗಿತ್ತು. ಬಲಿಕ ಇದೇ ರಾಮ್ ಅನ್ನು ಬಲಿ ಕೊಡಲಾಯಿತು. ಇಲ್ಲಿಂದಲೇ ಬಕ್ರೀದ್ ದಿನದಂದು ಪ್ರಾಣಿ ಬಲಿ ನಡೆದುಕೊಂಡು ಬಂದಿದೆ.
ಆದರೆ ಬರು ಬರುತ್ತಾ ಈ ರಾಮ್ ಪ್ರಾಣಿಯ ದರ ಗಗನಕ್ಕೇರಿತ್ತು. ಇವುಗಳ ಸಂಖ್ಯೆಯೂ ಕಡಿಮೆಯಾಯಿತು, ಬಡ ಮುಸ್ಲಿಮರು ಬಕ್ರೀದ್ ಆಚರಿಸಲಾಗದ ಪರಿಸ್ಥಿತಿಗೆ ತಲುಪಿದರು. ರಾಮ್ ಖರೀದಿಸಲು ಹಲವು ಮುಸ್ಲಿಮರು ಆಸ್ತಿ ಮಾರಬೇಕಾದ ಸ್ಥಿತಿ ಎದುರಾದಾಗ ಅವರು ರಾಮ್ ಬದಲು ಕುರಿ, ಮೇಲೆ, ಒಂಟೆ, ಹಸುಗಳ ಬಲಿಗೆ ಮುಂದಾದರು. ಮುಂದೆ ಇದೇ ರೀತಿ ಕುರಿ ಅಥವಾ ಮೇಕೆ ಬಲಿ ನೀಡುವುದು ನಡೆದುಕೊಂಡು ಬಂದಿದೆ.
ಹೀಗಾಗಿ ನಾವು ಈ ಪ್ರಕರಣದಲ್ಲೂ ಸಹ ಇದೇ ರೀತಿ ಅರ್ಥೈಸ ಬಹುದಾಗಿದೆ. ಸಾಮಾನ್ಯವಾಗಿ ಈಗ ಗಂಡು ಕುರಿ ಅಥವಾ ಟಗರಿಗೆ ರಾಮ್ ಎಂದು ಅವರು ಬರೆದಿರಲೂಬಹುದು. ಅಥವಾ ಈ ಪ್ರಕರಣದಲ್ಲಿ ತನಿಖೆ ಬಳಿಕ ಸತ್ಯಾಂಶ ಹೊರಬರಬೇಕಿದೆ.



Click it and Unblock the Notifications