Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಶನಿಸಾಡೇಸಾತಿ 3 ಹಂತಗಳೇನು, ಇದರ ಪ್ರಭಾವ ಹೇಗಿರಲಿದೆ?
ಶನಿ ಸಾಡೇಸಾತಿ ಎಂದರೆ ಸಾಕು ಜನ ಬೆಚ್ಚಿ ಬೀಳುತ್ತಾರೆ, ಕಾರಣ ಅದರ ಪ್ರಭಾವ ಅಷ್ಟೊಂದು ತೀಕ್ಷ್ಣವಾಗಿರುತ್ತದೆ. ಯಾರಿಗೇ ಆಗಲಿ ಶನಿ ಸಾಡೇಸಾತಿ ಶುರುವಾಯಿತು ಅಂದರೆ ಕಷ್ಟಗಳು ಶುರುವಾಯಿತು ಎಂದರ್ಥ. ಏಳೂವರೆ ವರ್ಷ ಶನಿಸಾಡೇಸಾತಿಯ ಪ್ರಭಾವ ಇರುತ್ತದೆ. ಆದರೆ ಏಳೂವರೆ ವರ್ಷ ಅದರ ಪ್ರಭಾವ ಒಂದೇ ರೀತಿ ಇರುವುದಿಲ್ಲ. ಶನಿ ಸಾಡೇಸಾತಿ ಮೂರು ಹಂತದಲ್ಲಿರುತ್ತದೆ ಅವುಗಳ ಬಗ್ಗೆ ವಿವರವಾಗಿ ನೋಡುವುದಾದರೆ...
ಮೊದಲ ಹಂತ
ಶನಿ ಸಾಡೇಸಾತಿಯ ಮೊದಲನೇ ಹಂತದಲ್ಲಿ ಮಾನಸಿಕ ಒತ್ತಡ, ದುಗುಡ ಅಧಿಕವಿರುತ್ತದೆ. ಈ ಸಮಯದಲ್ಲಿ ದುಃಖ, ಖಿನ್ನತೆ, ಮಾನಸಿಕ ಒತ್ತಡ ಎಲ್ಲಾ ಅಧಿಕವಿರಲಿದೆ. ಅಲ್ಲದೆ ಈ ಹಂತದಲ್ಲಿ ಜೀವನದಲ್ಲಿ ಅನೇಕ ಸಮಸ್ಯೆಗಳು ಒಟ್ಟೊಟ್ಟಿಗೆ ಬರುವುದು. ಗಾಯದ ಮೇಲೆ ಉಪ್ಪು ಸೇರಿದಂತೆ ಅಂತ ಹೇಳ್ತಾರಲ್ಲ, ಅದೇ ರೀತಿ ಈ ಹಂತದಲ್ಲಿ ಸವಾಲುಗಳು ಒಂದರ ಮೇಲೆ ಒಂದಂತೆ ಬರುತ್ತಲೇ ಇರುತ್ತದೆ.

ಎರಡನೇ ಹಂತ
ಈ ಹಂತದಲ್ಲಿ ವೃತ್ತಿ ಜೀವನ, ಆರ್ಥಿಕತೆ ಅಥವಾ ಸಂಬಂಧ ಇವುಗಳ ಮೇಲೆ ಪ್ರಭಾವ ಬೀರುವುದು, ಈ ಸಮಯದಲ್ಲಿ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲಾಗುವುದು. ಆದರೆ ಈ ಹಂತದಲ್ಲಿ ನೀವು ನಿಮ್ಮ ಗುರಿ ಹಾಗೂ ಕೆಲಸ ಹಾಕಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
ಮೂರನೇ ಹಂತ
ಈ ಹಂತದಲ್ಲಿ ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ಈ ಅವಧಿಯಲ್ಲಿ ಹೊಸ ಅವಕಾಶಗಳೂ ದೊರೆಯಲಿದೆ, ಹೊಸತನ ಶುರುವಾಗುವುದು. ಮೂರನೇ ಹಂತದಲ್ಲಿ ಸವಾಲುಗಳು ಸ್ವಲ್ಪ ಕಡಿಮೆಯಾಗುತ್ತಾ ಬರುತ್ತದೆ. ಈ ಹಂತದ ಕೊನೆ-ಕೊನೆಗೆ ನಿಮ್ಮ ಎಲ್ಲಾ ಸಮಸ್ಯೆಗಳು ಮುಕ್ತಾಯವಾಗುವುದು.
ಶನಿ ಸಾಡೇಸಾತಿ ಸಮಯದಲ್ಲಿ ಯಾವ ಪರಿಹಾರ ಮಾಡಿದರೆ ಒಳ್ಳೆಯದು:
* ಶನಿ ಪೂಜೆ ಮಾಡಿಸಿ: ಈ ಅವಧಿಯಲ್ಲಿ ಶನಿ ಪೂಜೆ ಮಾಡಿಸುವುದರಿಂದ ಶನಿ ಕೃಪೆಗೆ ಪಾತ್ರರಾಗಬಹುದು, ಇದರಿಂದ ಶನಿದೋಷ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು. ಪ್ರತಿ ಶನಿವಾರ ಶನಿದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಅರ್ಪಿಸಿ.
* ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ರುದ್ರಾಕ್ಷಿ ಧರಿಸುವುದು ಕೂಡ ಒಳ್ಳೆಯದು, ಇದರಿಂದ ಶನಿಯ ಕೆಟ್ಟ ಪರಿಣಾಮ ಸ್ವಲ್ಪ ಕಡಿಮೆಯಾಗುವುದು.
* ನಿರ್ಗತಿಕರಿಗೆ ದಾನ ಮಾಡಿ: ಶನಿವಾರ ನೀವು ಬಡವರಿಗೆ ದಾನ ಮಾಡಿ, ದಾನ ಕಾರ್ಯದಿಂದ ನಿಮ್ಮ ಪುಣ್ಯಫಲ ಹೆಚ್ಚುವುದು, ಇದರಿಂದ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು.
* ಧ್ಯಾನ-ಯೋಗ ಮಾಡಿ
ಈ ಅವಧಿಯಲ್ಲಿ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದರಿಂದ ಧ್ಯಾನ, ಯೋಗ ಮಾಡುವುದರಿಂದ ಮಾನಸಿಕ ಒತ್ತಡ ನಿಯಂತ್ರಿಸಲು ಸಹಕಾರಿಯಾಗಲಿದೆ.
* ಹನುಮಂತನನ್ನು ಪೂಜಿಸಿ: ಮಂಗಳವಾರ ಹಾಗೂ ಶನಿವಾರ ಹನುಮಂತನನ್ನು ಪೂಜಿಸಿ.
* ಹನುಮಾನ್ ಚಾಲೀಸ ಪಠಿಸಿ.
ಶನಿಮಂತ್ರ
ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್



Click it and Unblock the Notifications