Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಶನಿಸಾಡೇಸಾತಿ 3 ಹಂತಗಳೇನು, ಇದರ ಪ್ರಭಾವ ಹೇಗಿರಲಿದೆ?
ಶನಿ ಸಾಡೇಸಾತಿ ಎಂದರೆ ಸಾಕು ಜನ ಬೆಚ್ಚಿ ಬೀಳುತ್ತಾರೆ, ಕಾರಣ ಅದರ ಪ್ರಭಾವ ಅಷ್ಟೊಂದು ತೀಕ್ಷ್ಣವಾಗಿರುತ್ತದೆ. ಯಾರಿಗೇ ಆಗಲಿ ಶನಿ ಸಾಡೇಸಾತಿ ಶುರುವಾಯಿತು ಅಂದರೆ ಕಷ್ಟಗಳು ಶುರುವಾಯಿತು ಎಂದರ್ಥ. ಏಳೂವರೆ ವರ್ಷ ಶನಿಸಾಡೇಸಾತಿಯ ಪ್ರಭಾವ ಇರುತ್ತದೆ. ಆದರೆ ಏಳೂವರೆ ವರ್ಷ ಅದರ ಪ್ರಭಾವ ಒಂದೇ ರೀತಿ ಇರುವುದಿಲ್ಲ. ಶನಿ ಸಾಡೇಸಾತಿ ಮೂರು ಹಂತದಲ್ಲಿರುತ್ತದೆ ಅವುಗಳ ಬಗ್ಗೆ ವಿವರವಾಗಿ ನೋಡುವುದಾದರೆ...
ಮೊದಲ ಹಂತ
ಶನಿ ಸಾಡೇಸಾತಿಯ ಮೊದಲನೇ ಹಂತದಲ್ಲಿ ಮಾನಸಿಕ ಒತ್ತಡ, ದುಗುಡ ಅಧಿಕವಿರುತ್ತದೆ. ಈ ಸಮಯದಲ್ಲಿ ದುಃಖ, ಖಿನ್ನತೆ, ಮಾನಸಿಕ ಒತ್ತಡ ಎಲ್ಲಾ ಅಧಿಕವಿರಲಿದೆ. ಅಲ್ಲದೆ ಈ ಹಂತದಲ್ಲಿ ಜೀವನದಲ್ಲಿ ಅನೇಕ ಸಮಸ್ಯೆಗಳು ಒಟ್ಟೊಟ್ಟಿಗೆ ಬರುವುದು. ಗಾಯದ ಮೇಲೆ ಉಪ್ಪು ಸೇರಿದಂತೆ ಅಂತ ಹೇಳ್ತಾರಲ್ಲ, ಅದೇ ರೀತಿ ಈ ಹಂತದಲ್ಲಿ ಸವಾಲುಗಳು ಒಂದರ ಮೇಲೆ ಒಂದಂತೆ ಬರುತ್ತಲೇ ಇರುತ್ತದೆ.

ಎರಡನೇ ಹಂತ
ಈ ಹಂತದಲ್ಲಿ ವೃತ್ತಿ ಜೀವನ, ಆರ್ಥಿಕತೆ ಅಥವಾ ಸಂಬಂಧ ಇವುಗಳ ಮೇಲೆ ಪ್ರಭಾವ ಬೀರುವುದು, ಈ ಸಮಯದಲ್ಲಿ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲಾಗುವುದು. ಆದರೆ ಈ ಹಂತದಲ್ಲಿ ನೀವು ನಿಮ್ಮ ಗುರಿ ಹಾಗೂ ಕೆಲಸ ಹಾಕಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
ಮೂರನೇ ಹಂತ
ಈ ಹಂತದಲ್ಲಿ ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ಈ ಅವಧಿಯಲ್ಲಿ ಹೊಸ ಅವಕಾಶಗಳೂ ದೊರೆಯಲಿದೆ, ಹೊಸತನ ಶುರುವಾಗುವುದು. ಮೂರನೇ ಹಂತದಲ್ಲಿ ಸವಾಲುಗಳು ಸ್ವಲ್ಪ ಕಡಿಮೆಯಾಗುತ್ತಾ ಬರುತ್ತದೆ. ಈ ಹಂತದ ಕೊನೆ-ಕೊನೆಗೆ ನಿಮ್ಮ ಎಲ್ಲಾ ಸಮಸ್ಯೆಗಳು ಮುಕ್ತಾಯವಾಗುವುದು.
ಶನಿ ಸಾಡೇಸಾತಿ ಸಮಯದಲ್ಲಿ ಯಾವ ಪರಿಹಾರ ಮಾಡಿದರೆ ಒಳ್ಳೆಯದು:
* ಶನಿ ಪೂಜೆ ಮಾಡಿಸಿ: ಈ ಅವಧಿಯಲ್ಲಿ ಶನಿ ಪೂಜೆ ಮಾಡಿಸುವುದರಿಂದ ಶನಿ ಕೃಪೆಗೆ ಪಾತ್ರರಾಗಬಹುದು, ಇದರಿಂದ ಶನಿದೋಷ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು. ಪ್ರತಿ ಶನಿವಾರ ಶನಿದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಅರ್ಪಿಸಿ.
* ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ರುದ್ರಾಕ್ಷಿ ಧರಿಸುವುದು ಕೂಡ ಒಳ್ಳೆಯದು, ಇದರಿಂದ ಶನಿಯ ಕೆಟ್ಟ ಪರಿಣಾಮ ಸ್ವಲ್ಪ ಕಡಿಮೆಯಾಗುವುದು.
* ನಿರ್ಗತಿಕರಿಗೆ ದಾನ ಮಾಡಿ: ಶನಿವಾರ ನೀವು ಬಡವರಿಗೆ ದಾನ ಮಾಡಿ, ದಾನ ಕಾರ್ಯದಿಂದ ನಿಮ್ಮ ಪುಣ್ಯಫಲ ಹೆಚ್ಚುವುದು, ಇದರಿಂದ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು.
* ಧ್ಯಾನ-ಯೋಗ ಮಾಡಿ
ಈ ಅವಧಿಯಲ್ಲಿ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದರಿಂದ ಧ್ಯಾನ, ಯೋಗ ಮಾಡುವುದರಿಂದ ಮಾನಸಿಕ ಒತ್ತಡ ನಿಯಂತ್ರಿಸಲು ಸಹಕಾರಿಯಾಗಲಿದೆ.
* ಹನುಮಂತನನ್ನು ಪೂಜಿಸಿ: ಮಂಗಳವಾರ ಹಾಗೂ ಶನಿವಾರ ಹನುಮಂತನನ್ನು ಪೂಜಿಸಿ.
* ಹನುಮಾನ್ ಚಾಲೀಸ ಪಠಿಸಿ.
ಶನಿಮಂತ್ರ
ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್



Click it and Unblock the Notifications