ಸೆ. 2ಕ್ಕೆ ಶ್ರಾವಣ ಅಮವಾಸ್ಯೆ,ಸೋಮಾವತಿ ಅಮವಾಸ್ಯೆ: ಕಷ್ಟಗಳಿಂದ ಮುಕ್ತಿಗೆ ಈ ಪರಿಹಾರ ಒಳ್ಳೆಯದು

ಸೆಪ್ಟೆಂಬರ್‌ 2ಕ್ಕೆ ಶ್ರಾವಣ ಅಮವಾಸ್ಯೆ, ಅಲ್ಲದೆ ಅಮವಾಸ್ಯೆ ಸೋಮವಾರ ಬಂದಿರುವುದರಿಂದ ಸೋಮಾವತಿ ಅಮವಾಸ್ಯೆಯೆಂದು ಆಚರಿಸಲಾಗುವುದು. ಶ್ರಾವಣ ಅಮವಾಸ್ಯೆ, ಸೋಮಾವತಿ ಅಮವಾಸ್ಯೆ ತುಂಬಾನೇ ವಿಶೇಷವಾಗಿದೆ

ಶ್ರಾವಣ ಅಮವಾಸ್ಯೆಯಂದು ಪಿತೃತರ್ಪಣ ನೀಡಲಾಗುವುದು, ಇನ್ನು ಸೋಮಾವತಿ ಅಮವಾಸ್ಯೆಯಂದು ಕೆಲ ಪ್ರತ್ಯೇಕ ಪರಿಹಾರವನ್ನು ಕೂಡ ಮಾಡುತ್ತಾರೆ. ಈ ಅಮವಾಸ್ಯೆಯ ಮಹತ್ವವೇನು ಎಂದು ನೋಡೋಣ ಬನ್ನಿ:

Shravan Amavasya

ಪಿತೃತರ್ಪಣ ನೀಡಲಾಗುವುದು

ಈ ದಿನ ಪಿತೃತರ್ಪಣಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಪಿತೃತರ್ಪಣ ಮಾಡಿದರೆ ಗತಿಸಿದ ಹಿರಿಯರಿಗೆ ಮೋಕ್ಷ ಸಿಗುವುದು. ಮರಣವೊಂದಿದ ಹಿರಿಯರಿಗೆ ಮೋಕ್ಷ ಸಿಗದಿದ್ದರೆ ಮನೆಗೆ ಒಳಿತಾಗುವುದಿಲ್ಲ, ಇದರಿಂದ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಏಳಿಗೆಯಾಗುವುದಿಲ್ಲ, ವೃತ್ತಿ ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗುವುದು. ಪಿತೃದೋಷವಿದ್ದರೆ ಸಂತಾನ ಭಾಗ್ಯ ಆಗಲ್ಲ, ಮನೆಯ ಸದಸ್ಯರಿಗೆ ಆರೋಗ್ಯ ಸಮಸ್ಯೆ ಹೀಗೆ ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಪಿತೃತರ್ಪಣ ನೀಡಿದರೆ ಮರಣವೊಂದಿದ ಅವರಿಗೆ ಮೋಕ್ಷ ಸಿಗುತ್ತೆ, ಇದರಿಂದ ನಮಗೂ ಒಳಿತಾಗುತ್ತದೆ ಎಂದು ನಂಬಲಾಗುವುದು.

ಗತಿಸಿದ ಸಂತೃಪ್ತಿಗೊಳಿಸಲು ಏನು ಮಾಡಬೇಕು?

ಈ ದಿನ ನದಿಯಲ್ಲಿ ಸ್ನಾನ ಮಾಡಿ ಅಥವಾ ಮನೆಯಲ್ಲಿ ಸ್ನಾನದ ಬಕೆಟ್ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಿ ನಂತರ ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಉಪವಾಸವಿದ್ದು ವಿವಿಧ ಭೋಜನಗಳನ್ನು ಮಾಡಿ ಆರ್ಘ್ಯ ಅರ್ಪಿಸಲಾಗುವುದು. ಇದರಿಂದ ಅವರು ಸಂತೃಪ್ತಿಯಿಂದ ನಮ್ಮನ್ನು ಹರಿಸುತ್ತಾರೆ ಎಂದು ನಂಬಲಾಗಿದೆ.

ಶ್ರಾವಣ ಅಮವಾಸ್ಯೆಯಂದು ಪಿತೃದೋಷಕ್ಕೆ ಪರಿಹಾರ ಮಾತ್ರವಲ್ಲ ಸರ್ಪದೋಷಕ್ಕೂ ಪರಿಹಾರವಿದೆ

ಶ್ರಾವಣ ಅಮವಾಸ್ಯೆಯಂದು ಪಿತೃದೋಷಕ್ಕೆ ಮಾತ್ರವಲ್ಲ ಸರ್ಪದೋಷಕ್ಕೂ ಪರಿಹಾರವಿದೆ. ಈ ದಿನ ಶಿವನಿಗೆ ಬಿಲ್ವೆಪತ್ರೆ ಎಲೆಯ ಜೊತೆಗೆ ಬೆಳ್ಳಿಯ ನಾಗರವನ್ನು ಶಿವನಿಗೆ ಅರ್ಪಿಸಿ ಪೂಜೆ ಸಲ್ಲಿಸುವುದರಿಂದ ಸರ್ಪದೋಷ ನಿವಾರಣೆಯಾಗುವುದು.

ಶಿವನಿಗೆ ಆರಾಧನೆ ಮಾಡುವುದರಿಂದ ಕಷ್ಟಗಳು ದೂರಾಗುವುದು, ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುವುದು

ಶ್ರಾವಣ ಅಮವಾಸ್ಯೆಯಂದು ಶಿವನಿಗೆ ಪೂಜೆ ಸಲ್ಲಿಸುವುದರಿಂದ ಶಿವನ ಕೃಪೆಯಿಂದ ಕಷ್ಟಗಳು ದೂರಾಗುವುದು, ಆರ್ಥಿಕ ಸಮಸ್ಯೆಯಿದ್ದರೆ ಅದರಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದು. ಇನ್ನು ಆರೋಗ್ಯ ಸಮಸ್ಯೆಯಿದ್ದರೆ ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.

ಗ್ರಹ ದೋಷ ನಿವಾರಣೆಗೆ ಪರಿಹಾರ
ಗ್ರಹದೋಷವಿದ್ದರೆ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಗ್ರಹದೋಷ ನಿವಾರಣೆಗೆ 11 ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ ಪೂಜೆ ಸಲ್ಲಿಸಿದರೆ ಪಿತೃದೋಷ ನಿವಾರಣೆಯಾಗುವುದು. ಪೂಜೆಯ ವೇಳೆ ಓಂ ನಮಃ ಶಿವಾಯ ಮಂತ್ರವನ್ನು ನಿರಂತರವಾಗಿ ಪಠಿಸಿ.

ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ
ಈ ದಿನ ದಾನ ಮಾಡಿದರೆ ನಿಮ್ಮ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಅಲ್ಲದೆ ಈ ದಿನ ಅರಳಿ ಮರಕ್ಕೆ ಸುತ್ತು ಹಾಕಿ ಪೂಜೆ ಸಲ್ಲಿಸಲಾಗುವುದು.

English summary

September 2 Shravan Amavasya: What Is The Significance Of Somavati Amavasya

September 2 Shravaan Amavasya: Why this somavati Amavasya's so important, read on..
Story first published: Sunday, September 1, 2024, 8:10 [IST]
X
Desktop Bottom Promotion