Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಂಪಿ ಕಲ್ಲಿನ ಸಂಗೀತ ಈಗ ಮೊಬೈಲ್ನಲ್ಲೇ ಕೇಳಬಹುದು..! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು!!
ವಿಜಯ ನಗರ ಅರಸರ ರಾಜಧಾನಿಯಾಗಿದ್ದ ಹಂಪಿ ಈಗ ವಿಶ್ವದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣದಲ್ಲಿ ಈ ಹಂಪಿ ಕೂಡ ಒಂದಾಗಿದೆ. ನಿತ್ಯ ಸಾವಿರಾರು ಮಂದಿ ಈ ಹಂಪಿಯನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಒಂದು ಕಾಲದಲ್ಲಿ ಭವ್ಯವಾದ ಭಾರತೀಯ ಮಹಾನಗರವಾಗಿದ್ದ ಹಂಪಿ ಈಗ ಪ್ರವಾಸಿಗೆ ನೆಚ್ಚಿನ ತಾಣವಾಗಿದೆ.
ವಿಜಯನಗರದ ಶ್ರೀಮಂತ ವಾಸ್ತುಶಿಲ್ಪಕ್ಕೆ ಕನ್ನಡಿ ಹಿಡಿದಂತಿರುವ ಹಂಪಿಯು ವಿಶ್ವ ಪಾರಂಪರಿಕ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಹಾಗೆ ಹಂಪಿಯ ಕಲ್ಲಿನ ರಥ ಇಂದಿಗೂ ಅಚ್ಚರಿಗಳನ್ನು ತನ್ನಲ್ಲಿಟ್ಟುಕೊಂಡಿದೆ. ಕರಕುಶಲತೆ, ಶಿಲ್ಪಿ ಕಲಾ ಸೌಂದರ್ಯಕ್ಕೆ ಹಂಪಿ ನಗರ ಬಹಳ ಹೆಸರುವಾಸಿಯಾಗಿದೆ. ಕಲ್ಲಿನಲ್ಲಿ ಅರಳಿ ನಿಂತ ದೇವಾಲಯಗಳು, ಕಲಾ ಕುಸುರಿಯಿಂದಲೇ ಕಣ್ಮನ ಸೆಳೆಯುವ ಗೋಪುರಗಳು, ವಿಶಾಲ ರಸ್ತೆಗಳು ಮತ್ತು ಪ್ರತಿಮೆಗಳು ಈಗಲೂ ಪ್ರವಾಸಿಗರನ್ನು ಸೆಳೆಯುತ್ತದೆ.

ಹಂಪಿಯ ಕಲ್ಲಿನ ರಥ ಹೇಗೆ ಆಕರ್ಷಣೆಯಾಗಿಯೋ ಅದೇ ರೀತಿ ವಿಜಯ ವಿಠ್ಠಲ ದೇವಾಲಯ ಕೂಡ ಅಷ್ಟೇ ಅಚ್ಚರಿಗೆ ಕಾರಣವಾಗುತ್ತದೆ. ಏಕೆಂದರೆ ಈ ದೇವಾಲಯ ಅಚ್ಚರಿಗಳ ತನ್ನಲ್ಲಿಟ್ಟುಕೊಂಡಿದೆ. ಹೌದು ಈ ದೇವಾಲಯದ ಪ್ರತಿಯೊಂದು ಕಲ್ಲುಗಳು ಕೂಡ ಸಂಗೀತ ಹೊರ ಹಾಕುತ್ತದೆ. ಒಂದೊಂದು ಕಂಬಗಳು ಕೂಡ ಒಂದು ರೀತಿ ನಾದ ಹೊರಹಾಕುತ್ತೆ.
ಸುಮಾರು 56 ಸಂಗೀತ ಕಂಬಗಳಿವೆ ಈ ಕಂಬಗಳ ಬಡಿದಾಗ ನಾದ ಹೊರಹೊಮ್ಮುತ್ತದೆ. ಹೀಗಾಗಿ ಈ ವಿಠ್ಠಲ ದೇವಾಲಯ ಬಹಳ ಅಚ್ಚರಿಗಳ ಕಾರಣಕ್ಕೆ ಹೆಸರಾಗುತ್ತದೆ. ಈ ಕಲ್ಲಿನ ಕಂಬಗಳಿಗೆ ಮತ್ತೊಂದು ಸಣ್ಣ ಕಲ್ಲಿನಿಂದ ಬಡಿದಾಗ ಮಧುರವಾದ ನಾದ ಬರುವುದು ಕೇಳಬಹುದು. ಆದ್ರೆ ಈಗ ನೀವು ಈ ಸಂಗೀತವನ್ನು ನೀವು ಮೊಬೈಲ್ನಲ್ಲೇ ಕೇಳಿಸಿಕೊಳ್ಳಬಹುದು.
ಹೌದು ಭಾರತೀಯ ಪುರಾತತ್ವ ಇಲಾಖೆ ಹಂಪಿಯ ವಿಜಯ ವಿಠ್ಠಲ ದೇವಾಲಯದ 10 ಕಂಬಗಳ ಮೇಲೆ ಕ್ಯೂ ಆರ್ ಕೋಡ್ ಅನ್ನು ಪರಿಚಯಿಸಿದೆ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ನೀವು 25 ಸೆಕೆಂಡ್ಗಳ ಕಾಲ ಸುಮಧುರ ಸಂಗೀತ ಕೇಳಬಹುದು. ಏಕೆಂದರೆ ಈ ಕಲ್ಲಿನಿಂದ ಹೊರಬರುವ ಸಂಗೀತ ಕೇಳಲು ಪ್ರವಾಸಿಗರು ಕಲ್ಲು, ಕಬ್ಬಿಣದ ರಾಡ್ಗಳ ಬಳಸಿ ಕಲ್ಲುಗಳಿಗೆ ಬಡಿಯುತ್ತಿದ್ದರು. ಇದರಿಂದ ಕಲ್ಲುಗಳು ಹಾನಿಯಾಗುವ ಸಂಭವವಿತ್ತು, ಹೀಗಾಗಿ ಡಿಜಿಟಲ್ ರೀತಿಯಲ್ಲಿ ಸಂಗೀತ ಕೇಳಿಸಲು ಈ ರೀತಿ ತಂತ್ರಜ್ಞಾನ ಹೊರತರಲಾಗಿದೆ.
ಹಾಗೆ 2008ರಿಂದಲೂ ಈ ಸಂಗೀತ ಮಂಟಪಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಈಗ ಮತ್ತೆ ಕ್ಯೂಆರ್ ಕೋಡ್ ಬಳಕೆಯಿಂದಾಗಿ ಪ್ರವಾಸಗರ ಸಂಖ್ಯೆ ಮತ್ತೆ ಹೆಚ್ಚಾಗುವ ನಿರೀಕ್ಷೆ ಇದೆ. ಒಟ್ಟು ಹಂಪಿಯಲ್ಲಿ 56 ಸಂಗೀತ ಕಂಬಗಳಿದ್ದವು 1565ರಲ್ಲಿ ತಾಳಿಕೋಟೆ ಕದನದ ಬಳಿಕ ಬಹುಮನಿ ಸುಲ್ತಾನದ ದಾಳಿಯಲ್ಲಿ ಸುಮಾರು 10 ಸಂಗೀತ ಕಂಬಗಳು ನಾಶವಾದವು.
ಹಾಗೆ ಈ ದೇವಾಲಯದ ಮುಂಭಾಗದಲ್ಲಿ ಇರುವ ದೊಡ್ಡ ಸ್ಥಳ ಅಲ್ಲಿ ಹಿಂದೆ ಚಿನ್ನ ಬಂಗಾರ ಮಾರಾಟ ಮಾಡುತ್ತಿದ್ದರು ಎಂಬುದನ್ನು ಸಾರುತ್ತದೆ. ಇದನ್ನು ಹಂಪಿ ಬಜಾರ್ ಎಂದು ಕೂಡ ಕರೆಯುತ್ತಾರೆ. ವರ್ತಕರು ಚಿನ್ನ- ವಜ್ರಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರಂತೆ ಇಂತಹ ಹಲವು ಇತಿಹಾಸ ಪ್ರಸಿದ್ದ ತಾಣಗಳು ಆ ಹಂಪಿಯಲ್ಲಿವೆ.
ಈ ಲಿಂಕ್ ಮೂಲಕ ನೀವು ಡೆಮೋ ಸಂಗೀತ ಕೇಳಬಹುದು: http://www.asihampicircle.in/saregamapa/



Click it and Unblock the Notifications











