Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ವೀಲ್ ಚೇರ್ನಲ್ಲಿ ಬಂದ ಅಭಿಮಾನಿ ಭೇಟಿಯಾದ ರೋಹಿತ್- ಸೂರ್ಯಕುಮಾರ್..!
ಭಾರತದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆ, ಕ್ರೀಡಾಪಟುಗಳು ದೇವರ ಸಮಾನರು. ಅದಕ್ಕೆ ಸಚಿನ್ ತೆಂಡುಲ್ಕರ್ ಅವರನ್ನ ಕ್ರಿಕೆಟ್ ದೇವರು ಎನ್ನಲಾಗುತ್ತದೆ. ಕ್ರಿಕೆಟ್ ಆಟಗಾರರಿಗೆ ಇರುವಷ್ಟು ಅಭಿಮಾನಿಗಳು ಮತ್ತಾರಿಗೂ ಇಲ್ಲ. ಭಾರತದಲ್ಲಿ ನಿಸಿಮಾ ಬಿಟ್ಟರೆ ಕ್ರಿಕೆಟ್ಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ.
ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮವಾಗಿಬಿಟ್ಟಿದೆ. ಚಿಕ್ಕಮಕ್ಕಳಿಂದ ಹಿಡಿದು ಇಳಿ ಯವಸ್ಸಿನವರಿಗೂ ಕ್ರಿಕೆಟ್ ಅಂದರೆ ಪಂಚಪ್ರಾಣ. ಇನ್ನು ಅದರಲ್ಲೂ ಐಪಿಎಲ್ ಬಂತೆಂದರೆ ಮಹಾಯುದ್ಧವೇ ಆರಂಭಗೊಂಡಂತೆ ಒಂದೇ ಮನೆಯಲ್ಲಿ ಬೇರೆ ಬೇರೆ ಟೀಂ ಬೆಂಬಲಿಸುವ ಅಭಿಮಾನಿಗಳು ಕಾಣಸಿಗುತ್ತಾರೆ. ಅವರೆಲ್ಲ ಒಬ್ಬೊಬ್ಬರ ಅಭಿಮಾನಿಗಳು.

ಹಾಗೆ ಇಲ್ಲೊಬ್ಬ ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ ಅಭಿಮಾನಿಯಾಗಿದ್ದು, ಆತನನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಭೇಟಿಯಾಗಿದ್ದಾರೆ. ವಿಶೇಷ ಚೇತನ ಅಭಿಮಾನಿಯಾಗಿರುವ ಆತ ಮುಂಬೈ ಆಟಗಾರರ ಬೇಟಿಯಾಗುವ ಮಹಾದಾಸೆಯೊಂದಿಗೆ ಸ್ಟೇಡಿಯಂ ಬಳಿ ಬಂದಿದ್ದ.
ಈ ವೇಳೆ ಆತನನ್ನು ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಭೇಟಿಯಾಗಿದ್ದಾರೆ. ಸೂರ್ಯ ಕುಮಾರ್ ಯಾದವ್ ಆತನ ಜೊತೆ ಸೆಲ್ಫಿಗೆ ಪೋಸ್ ಕೊಟ್ಟರು, ಇತ್ತ ರೋಹಿತ್ ಶರ್ಮಾ ಆತನ ಬಳಿ ತೆರಳಿ ಟೀ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿದ್ದರಲ್ಲದೆ ಆತನ ಜೊತೆ ಫೋಟೋ ತೆಗೆಸಿಕೊಂಡರು.
ಆತ ಐಪಿಎಲ್ ಆರಂಭವಾದಾಗಿನಿಂದಲೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಯಂತೆ. ಆದರೆ ಹುಟ್ಟಿನಿಂದ ಆತ ವಿಶೇಷಚೇತನನಾಗಿದ್ದಾನೆ. ಹೀಗಿರುವಾಗಲು ವೀಲ್ಚೇರ್ ಮೇಲೆ ಕುಳಿತು ಆತ ಮುಂಬೈ ತಂಡದ ಪಂದ್ಯಗಳ ವೀಕ್ಷಿಸುತ್ತಾನೆ.
ಅಭಿಮಾನಿಯನ್ನು ಕಂಡ ರೋಹಿತ್ ಶರ್ಮಾ ಆತನ ಬಳಿ ಬಂದು ಮಾತನಾಡಿಸಿದ್ದಾರೆ. ಜೊತೆಗೆ ಟೀ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿ ಆತನ ಹೆಸರು ಮತ್ತಿತ್ತರ ಕುರಿತು ವಿಚಾರಿಸಿದ್ದಾರೆ. ಇದಕ್ಕೂ ಮೊದಲು ಸೂರ್ಯ ಕುಮಾರ್ ಯಾವದ್ ಅವರನ್ನು ಆತ ಬೇಟಿಯಾಗಿದ್ದ, ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ್ತಿದ್ದ ಆತನಿಗೆ ಸೂರ್ಯ ಕುಮಾರ್ ಯಾದವ್ ಸೆಲ್ಫಿ ತೆಗೆದುಕೊಟ್ಟಿದ್ದರು.
ನೆಟ್ಟಿಗರ ಮನ ಗೆದ್ದ ಮುಂಬೈ ಪಡೆ
ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಕಾರ್ಯ ಮೆಚ್ಚಿದ ಜನತೆ ಇಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಒಬ್ಬ ವ್ಯಕ್ತಿ ಎಷ್ಟು ರೆಕಾರ್ಡ್ ಮಾಡಿದ್ದರು, ವಿಶ್ವದಲ್ಲೇ ಅಭಿಮಾನಿಗಳ ಸಂಪಾದಿಸಿದ್ದರೂ ಇಂತಹ ಅಭಿಮಾನಿಗಳ ಮುಂದೆ ಅವರೆಲ್ಲ ಏನು ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ಧಾರೆ.
ರೋಹಿತ್ ಶರ್ಮಾ ಆತನ ಮೇಲೆ ತೋರಿಸಿದ ವಿಶೇಷ ಕಾಳಜಿಗೆ ನೆಟ್ಟಗರು ಸಹ ಸಂತಸ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರ ಇಂತಹ ಕಾರ್ಯಗಳೇ ಅವರ ಯಶಸ್ಸಿನ ಗುಟ್ಟಾಗಿದೆ, ಅವರನ್ನು ಹುಡುಕಿಕೊಂಡು ಬರುವ ಅಭಿಮಾನಿಗಳಿಗೆ ಅವರು ಎಂದಿಗೂ ನಿರಾಸೆ ಮಾಡುವುದಿಲ್ಲ ಇದು ಅವರ ನಿಜವಾದ ವ್ಯಕ್ತಿತ್ವ ಎಂದು ಗುಣಗಾನ ಮಾಡಿದ್ದಾರೆ.
ಇದರ ಜೊತೆ ನಿನ್ನೆ ರೋಹಿತ್ ಶರ್ಮಾ ಹುಟ್ಟುಹಬ್ಬವಾಗಿದೆ. ಹೀಗಾಹಿ ಈ ಹುಟ್ಟು ಹಬ್ಬವನ್ನು ಅವರು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಈ ಕುರಿತಂತೆ ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ಖಾತೆಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.
ಮನೆ ಗೆದ್ದಿದ್ದ ಧೋನಿ
ಈ ಜೊದಲು ಮಹೇಂದ್ರ ಸಿಂಗ್ ಧೋನಿ ಸಹ ವಿಶೇಷ ಚೇತನ ಅಭಿಮಾನಿಯ ಭೇಟಿಯಾಗಿ ಮನಗೆದ್ದಿದ್ದರು. ಧೋನಿ ಈಗ ಕಿವಿ ಕೇಳದ, ಮಾತು ಬಾರದ ವಿಶೇಷ ಅಭಿಮಾನಿಯನ್ನು ಭೇಟಿಯಾಗಿದ್ದರು. ಆತ ಚೆನ್ನೈನಲ್ಲಿ ನಡೆಯುತ್ತಿದ್ದ ಪಂದ್ಯ ವೀಕ್ಷಿಸಲು ಬಂದ್ದಿದ್ದ. ಪಂದ್ಯಾಟ ಮುಗಿದ ಬಳಿಕ ಧೋನಿ ಆತನ ಭೇಟಿಯಾಗಿ ಫೋಟೋಗೆ ಫೋಸ್ ನೀಡಿದ್ದರು. ಧೋನಿ ಸಹ ಅತ್ಯಧಿಕ ಅಭಿಮಾನಿಗಳ ಹೊಂದಿರುವ ಕ್ರೀಡಾಪಟು ಆಗಿದ್ದಾರೆ.



Click it and Unblock the Notifications