Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮಗುವಿನ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ಯಾ? ಹಾಗಾದ್ರೆ ಈ ರೀತಿ ಮಾಡಿ!
ಎಲ್ಲವೂ ಚೆನ್ನಾಗಿದ್ದ ಮನೆಯಲ್ಲಿ ಇದ್ದಕಿದ್ದ ಹಾಗೆ ಸಮಸ್ಯೆಗಳು ಕಾಣಿಸಿಕೊಂಡರೆ ಅಥವಾ ಆ ಮನೆಯವರಿಗೆ ಕಷ್ಟದ ಮೇಲೆ ಕಷ್ಟ ಬಂದರೆ ಖಂಡಿತ ಆ ಮನೆಯ ಮೇಲೆ ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿದೆ ಎಂದರ್ಥ. ಅದ್ರಲ್ಲೂ ಮಕ್ಕಳ ಮೇಲೆ ಹೊರಗಿನವರ ಕೆಟ್ಟ ದೃಷ್ಟಿ ಬಿದ್ದಾಗ ಬಹು ಬೇಗನೇ ಗೊತ್ತಾಗುತ್ತದೆ.

ಮಕ್ಕಳನ್ನು ಎಲ್ಲಾದರೂ ಹೊರಗಡೆ ಕರೆದುಕೊಂಡು ಹೋದ್ರೆ ಮತ್ತೆ ಮನೆಗೆ ವಾಪಾಸ್ಸ್ ಬಂದಾಗ ಮಕ್ಕಳು ಒಂದೇ ಸಮನೇ ಅಳೋದಕ್ಕೆ ಶುರು ಮಾಡ್ತಾರೆ. ಯಾರು ಏನು ಹೇಳಿದ್ರೂ ಕೂಡ ಮಕ್ಕಳನ್ನು ನಿಯಂತ್ರಣಕ್ಕೆ ತರೋದು ಕಷ್ಟ. ಮಕ್ಕಳಿಗೆ ಏನಾಗುತ್ತಿದೆ ಎಂದು ಪೋಷಕರು ಗೊಂದಲಕ್ಕೆ ಒಳಗಾಗುತ್ತಾರೆ. ಅಷ್ಟಕ್ಕು ಮಕ್ಕಳ ಮೇಲೆ ಹೊರಗಿನವರ ಕೆಟ್ಟ ದೃಷ್ಟಿ ಬಿದ್ದರೆ ಇದಕ್ಕೆ ಪರಿಹಾರ ಏನು ಅನ್ನೋದನ್ನು ತಿಳಿಯೋಣ.
ಕೆಟ್ಟ ದೃಷ್ಟಿ ನಿವಾರಿಸಲು ಈ ರೀತಿ ಪರಿಹಾರ ಮಾಡಿ!
ಮಕ್ಕಳ ಮೇಲೆ ಹೊರಗಿನವರ ಕೆಟ್ಟ ದೃಷ್ಟಿ ಬಿದ್ದರೆ ಆ ಮಕ್ಕಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗೂ ಇದ್ದಕ್ಕಿದ್ದ ಹಾಗೆ ಜೋರಾಗಿ ಅಳುತ್ತಾರೆ.
ಎಳ್ಳೆಣ್ಣೆಯಿಂದ ದೃಷ್ಟಿ ಎತ್ತಿ!
ಮಗುವಿನ ಮೇಲಿರುವ ಕೆಟ್ಟ ದೃಷ್ಟಿಯನ್ನು ನಿವಾರಿಸಲು ಮೊದಲಿಗೆ ಹಿಟ್ಟಿನ ದೀಪವನ್ನು ತಯಾರಿಸಿ. ನಂತರ ಅದಕ್ಕೆ ಎಳ್ಖೆಣ್ಣೆಯನ್ನು ಹಾಕಿ ಅದರಿಂದ ನಾಲ್ಕು ದೀಪಗಳನ್ನು ಹಚ್ಚಿರಿ. ನಂತರ ಅದರಿಂದ ನಿಮ್ಮ ಮಗುವಿನ ದೃಷ್ಟಿ ತೆಗೆಯಿರಿ.
ನಂತರ ಈ ದೀಪವನ್ನು ಮೂರು ದಾರಿ ಸೇರುವ ಕಡೆ ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಮಗುವಿನ ಮೇಲಿರುವ ದೃಷ್ಟಿದೋಷ ನಿವಾರಣೆಯಾಗುತ್ತದೆ. ಹಾಗೂ ನಿಮ್ಮ ಮಗು ಮೊದಲಿನ ಹಾಗೆಯೇ ಆಗುತ್ತದೆ. ಆದಷ್ಟು ಮಕ್ಕಳನ್ನು ದುಷ್ಟ ದೃಷ್ಟಿಯಿಂದ ದೂರ ಇಡೋದಕ್ಕಾಗಿ ದೃಷ್ಟಿ ರಕ್ಷಾ ಕವಚವನ್ನು ಧರಿಸಿ. ಇದರಿಂದ ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಬೀಳುವುದನ್ನು ತಪ್ಪಿಸಬಹುದು.
ಮೆಣಸಿನ ಕಾಯಿ, ಉಪ್ಪು, ಅರಶಿನದಿಂದ ಪರಿಹಾರ!
ಈ ರೀತಿ ಮಾಡಿದ್ರೆ ಕೂಡ ಮಕ್ಕಳ ಮೇಲಿನ ದೃಷ್ಟಿಯನ್ನು ತೆಗೆದು ಹಾಕಬಹುದು. ಏಳು ಮೆಣಸಿನಕಾಯಿಗಳು, ಸ್ವಲ್ಪ ಉಪ್ಪು ಮತ್ತು ಅರಿಶಿನವನ್ನು ತೆಗೆದುಕೊಂಡು ಮಗುವಿನ ತಲೆಯ ಸುತ್ತ ಏಳು ಬಾರಿ ತಿರುಗಿಸಬೇಕು. ಆ ನಂತರ ಅದನ್ನು ಬೆಂಕಿಗೆ ಅರ್ಪಿಸಬೇಕು. ಇದರಿಂದ ನಿಮ್ಮ ಮಗುವಿನ ಮೇಲಿದ್ದ ಕೆಟ್ಟ ದೃಷ್ಟಿಯೆಲ್ಲಾ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
ಹನುಮಾನ್ ಚಾಲೀಸಾ ಪಠಿಸಿರಿ!
ಆಂಜನೇಯನನ್ನು ತೊಂದರೆಗಳನ್ನು ವಿಮೋಚನೆ ಮಾಡುವವನು ಅಂತ ಕರೆಯಲಾಗುತ್ತದೆ. ಅವನು ಎಲ್ಲಾ ತೊಂದರೆಗಳನ್ನು ನಾಶಮಾಡುವವನು. ಅದರಿಂದ ನಿಮ್ಮ ಮಗು ನಿತ್ಯ ಹನುಮಾನ್ ಚಾಲೀಸ್ ಪಠಿಸುವಂತೆ ನೋಡಿಕೊಳ್ಳಿ. ನಿತ್ಯ ಈ ಮಂತ್ರಗಳನ್ನು ಪಠಿಸುತ್ತಿದ್ದರೆ ಕಷ್ಟಗಳೆಲ್ಲಾ ತನ್ನಿಂದ ತಾನೇ ದೂರವಾಗುತ್ತದೆ.
ಪಂಚಮುಖಿ ಆಂಜನೇಯನ ಲಾಕೆಟ್ ಧರಿಸಿ!
ಪಂಚಮುಖಿ ಆಂಜನೇಯ ತುಂಬಾನೇ ಪವರ್ ಫುಲ್. ಮನೆಯಲ್ಲಿ ಪಂಚಮುಖಿ ಆಂಜನೇಯನ ವಿಗ್ರಹವಿದ್ದರೆ ಯಾವುದೇ ರೀತಿ ತೊಂದರೆ ಎದುರಾಗೋದಿಲ್ವಂತೆ. ಅದೇ ರೀತಿ ನೀವು ಪಂಚಮುಖಿ ಆಂಜನೇಯನ ಲಾಕೆಟ್ ಅನ್ನು ಧರಿಸಿದ್ರೆ ನಿಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗೋದ್ರ ಜೊತೆಗೆ ಕೆಟ್ಟ ದೃಷ್ಟಿ ಬೀಳೋದ್ರಿಂದ ತಪ್ಪಿಸಿಕೊಳ್ಳಬಹುದು.
ಜೀವನದಲ್ಲಿ ತೊಂದರೆಗಳ ಮೇಲೆ ತೊಂದರೆಗಳು ಬರುತ್ತಿದ್ದಾಗ ಈ ರೀತಿ ಯಾವುದಾದರೂ ಕೆಟ್ಟ ದೃಷ್ಟಿ ಬಿದ್ದಿದೆ ಅಂತ ಹೇಳಬಹುದು. ಹೀಗಾಗಿ ನೀವು ತುಂಬಾನೇ ಹುಷಾರಾಗಿರಿ. ಹಾಗೂ ನಿಮ್ಮ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಿ. ಈ ರೀತಿ ಪರಿಹಾರಗಳನ್ನು ಮಾಡಿದ್ರೆ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ.



Click it and Unblock the Notifications
