Latest Updates
-
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ!
ವಿಘ್ನ ನಿವಾರಕನ ಪೂಜೆಯಲ್ಲಿ ಪವಿತ್ರ ತುಳಸಿಗೆ ಜಾಗವಿಲ್ಲ ಯಾಕೆ?
ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೆ ಮೊದಲಿಗೆ ವಿಘನಿವಾರಕನಾದ ಗಣೇಶನನ್ನು ನೆನೆಯಲೇಬೇಕು. ಹಾಗೂ ಆತನಿಗೆ ಮೊದಲ ಪೂಜೆ ಸಲ್ಲಿಸಲೇಬೇಕು. ಯಾವುದೇ ಕೆಲಸ ಮಾಡಬೇಕಾದರೂ ಮೊದಲಿಗೆ ಗಣಪತಿಯನ್ನು ಸ್ಮರಿಸಿ ಮುಂದಿನ ಕೆಲಸ ಮಾಡಲಾಗುತ್ತದೆ. ಕೇವಲ ಮನುಷ್ಯರಷ್ಟೇ ಅಲ್ಲ, ದೇವತೆಗಳು ಕೂಡ ವಿನಾಯಕನನ್ನು ಸ್ಮರಣೆ ಮಾಡುತ್ತಾರಂತೆ. ಶಿವ ಹಾಗೂ ವಿಷ್ಣುವು ಕೂಡ ತಮ್ಮ ಕೆಲಸ ಯಾವುದೇ ವಿಘ್ನಗಳಿಲ್ಲದೆ ನೆರವೇರಲು ಗಣಪತಿಯನ್ನು ಆರಾಧನೆ ಮಾಡುತ್ತಿದ್ದರಂತೆ.
ಗರಿಕೆ ಹುಲ್ಲನ್ನು ಗಣಪನಿಗೆ ತಪ್ಪದೇ ಅರ್ಪಣೆ ಮಾಡಲೇಬೇಕು. ಇದ್ರ ಜೊತೆಗೆ ದಾಸವಾಳ ಹೂವು ಕೂಡ ಇದ್ದರೆ ಗಣೇಶ ಸಂತೃಪ್ತನಾಗುತ್ತಾನಂತೆ. ಏಕೆಂದರೆ ಗಣೇಶನಿಗೆ ಗರಿಕೆ ಮತ್ತು ದಾಸವಾಳದ ಹೂವೆಂದರೆ ತುಂಬಾನೇ ಇಷ್ಟವಂತೆ. ಇನ್ನೂ ಸಾಮಾನ್ಯವಾಗಿ ತುಳಸಿಯನ್ನು ಪ್ರತಿ ಪೂಜೆಯಲ್ಲೂ ಬಳಸದೇ ಇರೋದಿಲ್ಲ. ಬೆಳಗ್ಗೆ ಎದ್ದ ತಕ್ಷಣ ತುಳಸಿಗೆ ನೀರು ಎರೆದು ಭಕ್ತಿಯಿಂದ ಬೇಡಿಕೊಂಡರೆ ಕಷ್ಟಗಳೆಲ್ಲಾ ಕಳೆಯುತ್ತೆ ಅನ್ನೋ ನಂಬಿಕೆ ಕೂಡ ಇದೆ. ಆದರೆ ವಿಘ್ನ ನಿವಾರಕನಿಗೆ ಯಾಕೆ ತುಳಸಿಯನ್ನು ಅರ್ಪಣೆ ಮಾಡೋದಿಲ್ಲ. ಇದರ ಹಿಂದಿನ ಕಾರಣವೇನು ಅನ್ನೋದನ್ನು ತಿಳಿದುಕೊಳ್ಳೋಣ.

ಗಣೇಶನಿಗೆ ತುಳಸಿಯನ್ನು ಅರ್ಪಿಸೋದಿಲ್ಲ ಯಾಕೆ?
ತುಳಸಿಯು ಧರ್ಮರಾಜನ ಮಗಳು. ತುಳಸಿ ಯುವತಿಯಾಗಿರುವಾಗ ಆಕೆ ನಾರಾಯಣನ (ಭಗವಾನ್ ವಿಷ್ಣುವಿನ) ಮಹಾನ್ ಭಕ್ತೆಯಾಗಿದ್ದಳು. ಒಮ್ಮೆ ಅವಳು ಗಂಗೆಯ ದಡದಲ್ಲಿ ನಡೆದುಕೊಂಡು ಹೊಗುತ್ತಿರಬೇಕಾದರೆ ಅವಳು ಗಣೇಶನನ್ನು ನೋಡುತ್ತಾಳೆ. ಗಣೇಶನು ಕೃಷ್ಣನ ಧ್ಯಾನದಲ್ಲಿ ತಲ್ಲೀನನಾಗಿದ್ದನು. ಗಣೇಶನ ಸೌಂದರ್ಯಕ್ಕೆ ತುಳಸಿ ಸಂಪೂರ್ಣವಾಗಿ ಮನಸೋಲುತ್ತಾಳೆ. ಅವರಿಬ್ಬರಲ್ಲೂ ಇದ್ದ ಸಾಮ್ಯಾತೆ ಎಂದರೆ ಇಬ್ಬರೂ ಮದುವೆಯ ವಯಸ್ಸಿಗೆ ಬಂದಿದ್ದರೂ ಹಾಗೂ ಇಬ್ಬರೂ ಭಗವಾನ್ ವಿಷ್ಣುವಿನ ಭಕ್ತರಾಗಿದ್ದರು.
ತುಳಸಿಯನ್ನು ಮದುವೆಯಾಗಲು ನಿರಾಕರಿಸಿದ ಗಣೇಶ!
ಗಣೇಶನನ್ನು ನೋಡಿದ ತಕ್ಷಣ ತುಳಸಿ ಪ್ರೀತಿಯಲ್ಲಿ ಬೀಳುತ್ತಾಳೆ. ಹಾಗೂ ತನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುತ್ತಾಳೆ. ಗಣೇಶ ಧ್ಯಾನದಲ್ಲಿದ್ದಿದ್ದರಿಂದ ಆ ಸಮಯದಲ್ಲಿ ಆತ ಬ್ರಹ್ಮಚಾರಿಯಾಗಿದ್ದನು. ತುಳಸಿಯನ್ನು ಮದುವೆಯಾಗೋದಕ್ಕೆ ಗಣೇಶನಿಗೆ ಇಷ್ಟ ಇರಲಿಲ್ಲ. ಒಂದು ವೇಳೆ ಮದುವೆಯಾಗುವುದಾದರೂ ತನ್ನ ತಾಯಿ ಪಾರ್ವತಿಯಂತೆಯೇ ಅದೇ ರೀತಿ ದೈವಿಕ ಗುಣಗಳನ್ನು ಹೊಂದಿರುವ ಹುಡುಗಿಯನ್ನು ಮದುವೆಯಾಗಲು ಬಯಸಿದ್ದನು. ಹೀಗಾಗಿ ತುಳಸಿಯ ಪ್ರೀತಿಯನ್ನು ಗಣೇಶ ತಿರಸ್ಕರಿಸುತ್ತಾನೆ.
ಗಣೇಶನಿಗೆ ಶಾಪ ಕೊಟ್ಟ ತುಳಸಿ!
ತುಳಸಿ ಪ್ರೀತಿಯನ್ನು ಗಣೇಶ ನಿರಾಕರಿಸಿದ್ದರಿಂದ ಅವಳ ಹೃದಯ ಒಡೆದು ಹೋಯಿತು. ಒಂದು ಕಡೆಯಿಂದ ತುಳಸಿಗೆ ಆದ ಅವಮಾನ ತಡೆದುಕೊಳ್ಳಲಾಗಲಿಲ್ಲ. ಮತ್ತೊಂದು ಕಡೆಯಿಂದ ಗಣೇಶನ ಮೇಲಿದ್ದ ಕೆಟ್ಟ ಕೋಪ. ಹೀಗಾಗಿ ಗಣೇಶನಿಗೆ ಆಕೆ ಶಾಪ ನೀಡುತ್ತಾಳೆ. ಅದೇನೆಂದರೆ ಒಂದಾ ನಿನಗೆ ಜೀವನ ಪರ್ಯಂತ ಮದುವೆಯಾಗೋದಿಲ್ಲ. ಇಲ್ಲವಾದರೆ ನೀನು ಬಯಸಿದ ಹುಡುಗಿ ನಿನಗೆ ಸಿಗದಿರಲಿ ಎಂದು ಹೇಳುತ್ತಾಳೆ.
ಗಣೇಶನಿಂದ ಮರುಶಾಪ ಪಡೆದ ತುಳಸಿ!
ತುಳಸಿ ಮಾತು ಕೇಳಿ ಕೋಪಗೊಂಡ ಗಣೇಶನು ತುಳಸಿಗೆ ಮರು ಶಾಪ ನೀಡುತ್ತಾನೆ. ನೀನು ಅಸುರನನ್ನು ವಿವಾಹವಾಗು ಎಂದು ಹೇಳುತ್ತಾನೆ. ಆನಂತರ ತನ್ನ ತಪ್ಪಿನ ಅರಿವಾದ ತುಳಸಿಯು ಗಣೇಶನಲ್ಲಿ ಕ್ಷಮೆಯಾಚಿಸುತ್ತಾಳೆ. ದೈವಿಕ ಸ್ತೋತ್ರಗಳಿಂದ ಗಣೇಶನ್ನು ಪ್ರಾರ್ಥಿಸಿದಳು. ಆಕೆಯ ಪ್ರಾಮಾಣಿಕ ಪ್ರಾರ್ಥನೆಯನ್ನು ಕೇಳಿದ ಗಣೇಶನಿಗೆ ಸಂತಸವಾಯಿತು. ಮತ್ತು ನೀನು ಸಸ್ಯಗಳಲ್ಲೇ ಶ್ರೇಷ್ಠ ಸಸ್ಯವಾಗಿರು ಎಂದು ವರ ನೀಡುತ್ತಾನೆ.
ಅಷ್ಟೇ ಅಲ್ಲ, ನಿನ್ನ ಸುಗಂಧದಿಂದ ಎಲ್ಲಾ ದೇವತೆಗಳೂ ಸಂತೋಷ ಪಡುತ್ತಾರೆ. ನಿನ್ನ ಎಲೆಯನ್ನು ಬಳಸಿ ಪೂಜೆಯನ್ನು ಮಾಡಿದರೆ ವಿಷ್ಣುವು ಸಂತುಷ್ಟನಾಗುತ್ತಾನೆ. ಆದರೆ ನನ್ನ ಪೂಜೆಗೂ ನೀವು ಯಾವತ್ತಿದ್ದರೂ ಸ್ವೀಕಾರಾರ್ಹವಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ನಂತರ ಗಣೇಶನ ಶಾಪದಂತೆ ತುಳಸಿ 'ಶಂಖಚೂಡ' (ಜಲಂಧರ) ಎಂಬ ರಾಕ್ಷಸ ರಾಜನನ್ನು ಮದುವೆಯಾಗುತ್ತಾಳೆ. ಅವರು ಹಲವಾರು ವರ್ಷಗಳ ಕಾಲ ಸಂತೋಷದಿಂದ ಜೀವನವನ್ನೂ ನಡೆಸುತ್ತಾರೆ. ಆದರೆ ಒಂದು ದಿನ ಅವಳ ಪತಿ ದೇವತೆಗಳೊಂದಿಗೆ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ನಂತರ ದೇವರ ಆಶೀರ್ವಾದವನ್ನು ಪಡೆದ ನಂತರ ಅವಳು ತುಳಸಿಯು ಪವಿತ್ರ ತುಳಸಿಯಾಗಿ ಬದಲಾಗುತ್ತಾಳೆ. ಹೀಗಾಗಿ ಪ್ರತಿಯೊಬ್ಬರು ಪವಿತ್ರ ತುಳಸಿಯನ್ನು ಪೂಜೆ ಮಾಡುತ್ತಾರೆ.
ಅಂದಿನಿಂದ ಇಂದಿನವರೆಗೂ ವಿನಾಯಕನನ್ನು ಪೂಜಿಸುವಾಗ ತುಳಸಿ ಎಲೆಯನ್ನು ಬಳಕೆ ಮಾಡೋದಿಲ್ಲ. ಒಂದು ತುಳಸಿ ಬಳಸಿದರೆ ಅಶುಭ ಎಂಬ ನಂಬಿಕೆಯಿದೆ.



Click it and Unblock the Notifications
