Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಫೆಬ್ರವರಿ 4ಕ್ಕೆ ರಥ ಸಪ್ತಮಿ: ಈ ದಿನ ಯಾವ ಮಂತ್ರಪಠಿಸಬೇಕು? ದಾನದ ಮಹತ್ವವೇನು?
ಧಾರ್ಮಿಕ ನಂಬಿಕೆಗಳಲ್ಲಿ ರಥ ಸಪ್ತಮಿ ದಿನಕ್ಕೆ ತುಂಬಾನೇ ಮಹತ್ವವಿದೆ. ಈ ವರ್ಷ ರಥ ಸಪ್ತಮಿಯನ್ನು ಫೆಬ್ರವರಿ 4ರಂದು ಆಚರಿಸಲಾಗುತ್ತಿದೆ. ಈ ದಿನವನ್ನು ಮಾಘ ಸಪ್ತಮಿ, ಮಾಘ ಜಯಂತಿ ಅಥವಾ ಸೂರ್ಯ ಜಯಂತಿಯೆಂದು ಆಚರಿಸಲಾಗುವುದು. ಮಾಘ ಮಾಸದಲ್ಲಿಬರುವ ಶುಕ್ಲಪಕ್ಷದ ಸಪ್ತಮಿಯಂದು ರಥ ಸಪ್ತಮಿ ಆಚರಿಸಲಾಗುವುದು.
ರಥ ಸಪ್ತಮಿಯಂದು ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ, ಈ ದಿನ ದಾನ ಮಾಡುವುದರಿಂದ ಸೂರ್ಯನ ಕೃಪೆಗೆ ಪಾತ್ರರಾಗುತ್ತೇವೆ, ಇದರಿಂದ ಒಳಿತಾಗಲಿದೆ ಎಂಬುವುದು ನಂಬಿಕೆ.

ರಥ ಸಪ್ತಮಿ ತಿಥಿ
ರಥ ಸಪ್ತಮಿ ತಿಥಿ ಪ್ರಾರಂಭ: ಫೆಬ್ರವರಿ 4 ಬೆಳಗ್ಗೆ 07:56ಕ್ಕೆ
ರಥ ಸಪ್ತಮಿ ತಿಥಿ ಮುಕ್ತಾಯ: ಪೆಬ್ರವರಿ5 ಬೆಳಗ್ಗೆ 05:29ರವರೆಗೆ ಇರಲಿದೆ. ಉದಯ ತಿಥಿ ಪ್ರಕಾರ ರಥ ಸಪ್ತಮಿಯನ್ನು ಫೆಬ್ರವರಿ 4ರಂದು ಆಚರಿಸಲಾಗುವುದು.
ಈ ದಿನದ ಮಹತ್ವವೇನು?
ಪೌರಾಣಿಕ ನಂಬಿಕೆಯ ಪ್ರಕಾರ ಸೂರ್ಯನು ಸಪ್ತ ಕುದುರೆಗ ರಥವನ್ನು ಏರಿ ಉತ್ತಾರಾಯಣದ ಕಡೆಗೆ ಕಡೆಗೆ ಪ್ರಯಾಣಿಸುತ್ತಾನೆ. ಈ ಸಮಯವನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯಲಾಗುವುದು. ಧಾರ್ಮಿಕ ಕಾರ್ಯಗಳನ್ನು ಮಾಡಲು ಈ ಸಮಯ ತುಂಬಾನೇ ಉತ್ತಮವಾಗಿದೆ. ಈ ದಿನದಂದು ಸೂರ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ಸೂರ್ಯನನ್ನು ಆರಾಧನೆ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಇರಲಿದೆ, ಈ ದಿನ ಮಾಡುವ ದಾನದಿಂದ ನಿಮ್ಮ ಸಮೃದ್ಧಿ ಹೆಚ್ಚಾಗಲಿದೆ ಎಂದು ಹೇಳಲಾಗುವುದು.
ರಥ ಸಪ್ತಮಿಯಂದು ಪುಣ್ಯ ಸ್ನಾನದ ಮಹತ್ವ
ಈ ದಿನ ಸೂರ್ಯೋದಯಕ್ಕೆ ಮುನ್ನ ಎದ್ದು ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು. ಈ ದಿನ ಸೂರ್ಯ ದೇವನನ್ನು ಪೂಜಿಸುವುದರಿಂದ ಕಾಯಿಲೆಗಳಿಂದ ಗುಣ ಮುಖರಾಗುತ್ತಾರೆ ಎಂಬ ನಂಬಿಕೆಯಿದೆ. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡಲಾಗುವುದು. ಇದೀಗ ಮಹಾಕುಂಭಮೇಳ ನಡೆಯುತ್ತಿರುವುದರಿಂದ ತ್ರಿವೇಣಿಯಲ್ಲಿ ಸ್ನಾನ ಮಾಡಲು ಕೋಟ್ಯಾಂತರ ಹಿಂದಗಳು ಪ್ರಯಾಗ್ರಾಜ್ಗೆ ಪ್ರಯಾಣಿಸಿದ್ದಾರೆ.
ಈ ದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸುವಾಗ ಕಲಶದ ನೀರಿಗೆ ಸ್ವಲ್ಪ ಕುಂಕುಮ ಹಾಕಿ ಆರ್ಘ್ಯ ಅರ್ಪಿಸಲಾಗುವುದು. ಈ ದಿನ ತುಪ್ಪ ಹಾಕಿದ ಮಣ್ಣಿನ ಹಣತೆ ಹಚ್ಚಿಟ್ಟು ಸೂರ್ಯನಿಗೆ ಪೂಜೆ ಸಲ್ಲಿಸುತ್ತಾರೆ.
ರಥ ಸಪ್ತಮಿಯಂದು ಈ ಮಂತ್ರಗಳನ್ನು ಪಠಿಸಿ
ಸೂರ್ಯ ನಮಸ್ಕಾರ ಮಂತ್ರ : ಓಂ ಮಿತ್ರಾಯ ನಮಃ
ಓಂ ರವಾಯ್ರೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪುಷ್ನೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಸೂರ್ಯ ಬೀಜ ಮಂತ್ರ :
ಓಂ ಹರಂ ಹ್ರೀ ಹ್ರೌಂ ಸಃ ಸೂರ್ಯಾಯ ನಮಃ
ಸೂರ್ಯ ಗಾಯತ್ರಿ ಮಂತ್ರ :
ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾತಿಕರಾಯ ಧೀಮಹಿ ತಾನಃ ಸೂರ್ಯ ಪ್ರಚೋದಯಾತ್ ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡೇ ಧೀಮಹಿ ತನಃ ಸೂರ್ಯ ಪ್ರಚೋದಯಾತ್ ಓಂ ಸಪ್ತ ತುರಂಗಾಯ ವಿದ್ಮಹೇ ಸಹಸ್ರ ಕೀರ್ಣಯ ಧೀಮಹಿ ತನ್ನೋ ರವಿ ಪ್ರಚೋದಯಾತ್
ಆದಿತ್ಯ ಹೃದಯಂ ಮಂತ್ರ :
ಆದಿತ್ಯನ ಹೃದಯದ ಪುಣ್ಯವೇ ಶತ್ರುನಾಶ ಜಯವಹಂ ಜಪೇನ್ನಿತ್ಯಂ ಅಕ್ಷಯ ಪರಂ ಶಿವಮ್



Click it and Unblock the Notifications