Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಪ್ರಾಣಿಗಳ ಆರೈಕೆಗಾಗಿ ಆಸ್ಪತ್ರೆ ಕಟ್ಟಿಸಿದ ರತನ್ ಟಾಟಾ..! ಇವರ ಪ್ರಾಣಿ ಪ್ರೇಮಕ್ಕೆ ಸಾಟಿ ಯಾರು?
ಟಾಟಾ ಗ್ರೂಪ್ ಮುಖ್ಯಸ್ಥ ಭಾರತದ ಆಗರ್ಭ ಶ್ರೀಮಂತ ರತನ್ ಟಾಟಾ ಕೇವಲ ಉದ್ಯಮದ ಕಾರಣಕ್ಕೆ ಹಾಗೂ ಆಸ್ತಿ ವಿಚಾರವಾಗಿ ಮಾತ್ರ ಸುದ್ದಿಯಾಗುವುದಿಲ್ಲ. ಬದಲಿಗೆ ಅವರ ಸಮಾಜಮುಖಿ ಕಾರ್ಯಗಳಿಂದಲೂ ಅವರು ಸುದ್ದಿಯಾಗುತ್ತಾರೆ. ಉದ್ಯಮ ಕಟ್ಟಿ ಬೆಳಸುವುದು ಮಾತ್ರವಲ್ಲ ಆರೋಗ್ಯಯುತ ಸಮಾಜ ಕಟ್ಟಲು ಅವರು ಇನ್ನಿಲ್ಲದ ಕೊಡುಗೆ ನೀಡುತ್ತಾ ಬಂದಿದ್ದಾರೆ. ತಮ್ಮ ಸಂಪತ್ತಿನಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಅವರು ದಾನ, ಧರ್ಮದಲ್ಲಿ ವಿನಿಯೋಗಿಸುತ್ತಿದ್ದಾರೆ.
ಹೀಗೆ ದೊಡ್ಡ ದೊಡ್ಡ ಉದ್ಯಮ ಕಟ್ಟಿ ಬೆಳೆಸಿರುವ ಅವರಿಗೆ ಪ್ರಾಣಿಗಳೆಂದರೆ ವಿಶೇಷ ಪ್ರೀತಿ. ಅದರಲ್ಲು ಬೀದಿ ನಾಯಿಗಳ ಪರವಾಗಿ ಅವರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ. ಇತ್ತೀಚಿಗಷ್ಟೆ ರತನ್ ಟಾಟಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಇದೇ ಮೊದಲ ಬಾರಿಗೆ ನಾಯಿಗಾಗಿ ಜನರ ಬಳಿ ನೆರವು ಕೇಳಿದ್ದರು. ನೀವು ಸಹಾಯ ನೀಡಿದ್ದರೆ ಒಳ್ಳೆಯದಿತ್ತು, 7 ತಿಂಗಳ ಈ ನಾಯಿಮರಿಗೆ ರಕ್ತದ ಅವಶ್ಯಕತೆ ಇದೆ, ರಕ್ತಹೀನತೆ ಹಾಗೂ ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಹಾಗಾಗಿ ಮುಂಬೈಯಲ್ಲಿರುವ ತಮ್ಮ ನಾಯಿಯ ರಕ್ತ ದಾನ ನೀಡಿ ಎಂದು ಮನವಿ ಮಾಡಿದ್ದರು.

ಆದರೆ ಈಗ ಪ್ರಾಣಿಗಳಿಗಾಗಿಯೇ ಅವರು ಆಸ್ಪತ್ರೆಯೊಂದನ್ನು ಆರಂಭಿಸಿದ್ದಾರೆ. 86 ವರ್ಷದ ಕೈಗಾರಿಕೋದ್ಯಮಿ ಮುಂಬೈನಲ್ಲಿ ಸಣ್ಣ ಪ್ರಾಣಿ ಆಸ್ಪತ್ರೆಯೊಂದನ್ನು ತೆರೆದಿದ್ದಾರೆ. ಇದು "ಭಾರತದ ಅತಿದೊಡ್ಡ 24 ಗಂಟೆ ತೆರೆದಿರುವ ಪ್ರಾಣಿಗಳ ಆಸ್ಪತ್ರೆ" ಎಂಬ ಕೀರ್ತಿ ಪಡೆದಿದೆ.
ಟಾಟಾ ಟ್ರಸ್ಟ್ ಸಣ್ಣ ಪ್ರಾಣಿ ಆಸ್ಪತ್ರೆ ಅಂತಿಮವಾಗಿ ಸಾರ್ವಜನಿಕರಿಗೆ ತೆರೆದಿರುತ್ತದೆ, ಪಶುವೈದ್ಯಕೀಯ ಆರೈಕೆಗಾಗಿ ಈ ಹೊಸ ದಿನವನ್ನು ತರಲು ನಾವು ಉತ್ಸುಕರಾಗಿದ್ದೇವೆ, ಇದು ಆರೈಕೆಯನ್ನು ಗುರುತಿಸುವ ದಿನವಾಗಿದೆ. ಇಲ್ಲಿಯವರೆಗೆ ಮತ್ತು ಮುಂಬರುವ ವರ್ಷಗಳಲ್ಲಿ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು, "ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ.
ಜೊತೆಗೆ ರತನ್ ಟಾಟಾ ಅವರು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಈ ಆಸ್ಪತ್ರೆಯನ್ನು ಉದ್ಘಾಟಿಸಿ ಅವರೊಂದಿಗೆ ಮಾತುಕತೆಯಲ್ಲಿರುವುದು ನೋಡಬಹುದು.
ಈ ಪೋಸ್ಟ್ ಹಂಚಿಕೊಂಡ ನಂತರ ಏಳು ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ದಾಟಿದೆ. ಅನೇಕರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪೋಸ್ಟ್ನ ಕಾಮೆಂಟ್ಗಳ ಮಾಡುತ್ತಿದ್ದಾರೆ. ಅಲ್ಲದೆ ರತನ್ ಟಾಟಾ ಅವರ ಪ್ರಾಣಿಗಳ ಕುರಿತ ಆಲೋಚನೆ ಹಾಗೂ ಪ್ರೀತಿಗೆ ಜನ ಫಿದಾ ಆಗಿದ್ದಾರೆ. ಜೊತೆಗೆ ಇವರೆ ನಿಜವಾದ ಹೀರೋ ಎಂದು ಹಾಡಿ ಹೊಗಳಿದ್ದಾರೆ.
"ರತನ್ ಟಾಟಾ ಚಿನ್ನದಂತಹ ಹೃದಯ ಹೊಂದಿದ್ದಾರೆ ಮಾನವೀಯತೆಯ ಅತ್ಯಂತ ಶುದ್ಧ ಮತ್ತು ದಯೆಯ ಆತ್ಮ. ಸರ್, ನೀವು ಸಂಪೂರ್ಣ ರತ್ನ ಮತ್ತು ಹೊಸ ಪೀಳಿಗೆಗೆ ನಮ್ಮ ಸುತ್ತಲಿನ ಪ್ರತಿಯೊಂದು ಜೀವಿಯಲ್ಲೂ ಸಹಾನುಭೂತಿ ಮತ್ತು ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯ ಉದಾಹರಣೆಯಾಗಿದೆ, "ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ. ನಮ್ಮ ಒಂದೇ ಹೃದಯವನ್ನು ನೀವು ಎಷ್ಟು ಬಾರಿ ಗೆಲ್ಲುತ್ತೀರಿ ಎಂದು ಮತ್ತೊಬ್ಬರು ಕಮೆಂಟ್ ವಿಭಾಗದಲ್ಲಿ ಸೇರಿಸಿದ್ದಾರೆ.
ಇನ್ನು ರತನ್ ಟಾಟಾ ತಮ್ಮ ಐಷಾರಾಮಿ ಹೋಟೆಲ್ನಲ್ಲೂ ನಾಯಿಗಳಿಗೆ ಮುಕ್ತ ಅವಕಾಶ ನೀಡುವಂತೆ ಸಿಬ್ಬಂದಿಗೆ ಸೂಚಿಸಿರುವುದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ತಾಜ್ ಹೋಟೆಲ್ಗೆ ನೀವು ಎಂಟ್ರಿ ಕೊಡಬೇಕಾದರೆ ನಿಮ್ಮನ್ನು ಗೇಟ್ನಲ್ಲಿ ಯಾರಾದರು ಪ್ರಶ್ನಿಸಬಹುದು. ಆದರೆ ಆ ಹೋಟೆಲ್ಗೆ ನಾಯಿಗಳು ಆರಾಮವಾಗಿ ಹೋಗುತ್ತವೆ. ಮತ್ತೊಂದೆಡೆ ಟಾಟಾ ಗ್ರೂಪ್ನ ಕೇಂದ್ರ ಕಚೇರಿಯಲ್ಲಿ ನಾಯಿಗಳೇ ತುಂಬಿರುತ್ತವೆಯಂತೆ. ಏಕೆಂದರೆ ಇಲ್ಲಿ ನಾಯಿಗಳಿಗಾಗಿಯೇ ಪ್ರತ್ಯೇಕ ಕೊಠಡಿಯೇ ಇದೆಯಂತೆ. ಹೀಗಾಗಿ ಟಾಟಾ ಪ್ರಧಾನ ಕಚೇರಿಯಲ್ಲಿ ಬೀದಿ ನಾಯಿಗಳಿಗೆ ಓಡಾಡಲು ಮುಕ್ತ ಅವಕಾಶ ನೀಡಲಾಗಿದೆಯಂತೆ.



Click it and Unblock the Notifications