Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದು ಮೂರು ಸೊಂಡಿಲು 6 ಕೈಗಳ ಅಪರೂಪದ ಗಣಪ: ಈ ದೇವಾಲಯ ಎಲ್ಲಿದೆ ಗೊತ್ತಾ?
ಗಣೇಶೋತ್ಸವದ ಸಂದರ್ಭದಲ್ಲಿ ವಿಭಿನ್ನ ಹಾಗೂ ವಿಶೇಷ ರೀತಿಯ ಗಣೇಶನ ಮೂರ್ತಿಗಳ ಪ್ರತಿಷ್ಠಾಪಿಸುವುದು ನೋಡಿರಬಹುದು. ಈ ವಿಭಿನ್ನ ಮೂರ್ತಿನ್ನು ನೋಡಲೆಂದೇ ದೂರದೂರಿನಿಂದಲೂ ಜನರು ಆಗಮಿಸುವುದು ಸಾಮಾನ್ಯ. ಆದ್ರೆ ಗಣೇಶೋತ್ಸವ ಹೊರುಪಡಿಸಿ ಕೆಲವು ದೇವಾಲಯದಲ್ಲೂ ಕೂಡ ವಿಶೇಷ ಹಾಗೂ ವಿಭಿನ್ನ ರೀತಿಯ ಗಣೇಶನಿರುವುದು ನೋಡಬಹುದು.
ಕೆಲವೊಂದು ದೇವಾಲಯದಲ್ಲಿನ ಗಣೇಶನ ವಿಗ್ರಹವು ಬಹಳ ಅಪರೂಪ ಎನ್ನುವಂತಿರಲಿದೆ. ಹಾಗೆ ಇಲ್ಲೊಂದು ದೇವಾಲಯದಲ್ಲಿ 3 ಸೊಂಡಿಲು ಹೊಂದಿರುವ ಗಣೇಶನ ಮೂರ್ತಿ ಇದೆ. ಇದು ಭೂಮಿ ಮೇಲಿನ ಏಕೈಕ ಹಾಗೂ ವಿಶೇಷದಲ್ಲಿ ವಿಶೇಷ ಗಣೇಶ ಎಂಬ ಹೆಸರು ಪಡೆದಿದೆ. ಈ ಮೂರು ಸೊಂಡಿಲುಗಳಿಗೂ ಒಂದೊಂದು ರೀತಿಯ ಪ್ರಾಮುಖ್ಯತೆ ನೀಡಲಾಗಿದೆ.

ಪುಣೆಯ ಸೋಮವಾರ ಪೇಟೆಯ ಹೃದಯಭಾಗದಲ್ಲಿರುವ ತ್ರಿಶುಂಡ್ ಮಯೂರೇಶ್ವರ ಗಣಪತಿ ದೇವಾಲಯವು ಪುಣೆಯಲ್ಲಿರುವ ಒಂದು ವಿಶಿಷ್ಟ ದೇವಾಲಯವಾಗಿದೆ. ಈ ದೇವಾಲಯದಲ್ಲಿ ನೀವು ಬೇರೆಲ್ಲೂ ನೋಡಿರದಂತಹ ಮೂರು ಸೋಂಡಿಲು ಹೊಂದಿರುವ ಗಣೇಶನ ಮೂರ್ತಿ ಇದೆ. ಅದ್ರಲ್ಲೂ ಒಂದೊಂದು ಸೊಂಡಿಲು ಒಂದೊಂದು ಕಡೆ ತಿರುಗಿರುವ ರಚನೆಯನ್ನು ಹೊಂದಿದೆ. ಹಾಗೆ 6 ಕೈಗಳ ಹೊಂದಿರುವುದು ಈ ಮೂರ್ತಿಯ ವಿಶೇಷತೆ ಆಗಿದೆ.
ಈ ಮೂರು ಸೋಂಡಿಲುಗಳನ್ನು ಬ್ರಹ್ಮ ವಿಷ್ಣು ಮಹೇಶ್ವರನ ರೂಪಕ ಎಂದು ಹೇಳುತ್ತಾರೆ. ಆದರೆ ಈ ಗಣಪ ಇಲಿಯ ಮೇಲೆ ಆಸಿನರಾಗುವ ಬದಲು ನವಿಲಿನ ಮೇಲೆ ಕುಳಿತಿರುವುದು ಕೂಡ ವಿಶೇಷ ಎನಿಸಿದೆ. ಹಾಗೆ ಈ ಮೂರು ಸೊಂಡಿಲುಗಳು ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯ ಕಾಲದ ಪ್ರತೀಕ ಎಂದು ಪರಿಗಣಿಸಲಾಗಿದೆ.
ಈ ದೇವಾಲಯವನ್ನು ಸುಮಾರು 1754 ಮತ್ತು 1770 ರ ನಡುವೆ ಧಂಪುರದಿಂದ ಬಂದ ಮೋರ್ಯ ಗೋಸಾವಿಯ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು. ಅವರು ಮಯೂರೇಶ್ವರ ಅಷ್ಟವಿನಾಯಕ ಎಂಬ ದೇವಾಲಯವನ್ನು ಸ್ಥಾಪಿಸಿದರು, ಇದು ಮಹಾನ್ ಪೇಶ್ವೆಗಳಿಂದ ಸಹಾಯವನ್ನು ಪಡೆಯಿತು. ಗಣೇಶನು ಪೇಶ್ವೆಗಳ ಕುಲದೈವವಾಗಿರುವುದರಿಂದ, ಮಯೂರೇಶ್ವರ ಸೇರಿದಂತೆ ಮಹಾರಾಷ್ಟ್ರದ ಎಲ್ಲಾ ಗಣೇಶ ದೇವಾಲಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಅಭಿವೃದ್ಧಿಗೊಳಿಸಲು ಅವರು ಶ್ರಮಿಸಿದರು ಎಂದು ತಿಳಿದುಬಂದಿದೆ.
ದೇವಾಲಯದ ಗೋಡೆಗಳ ಮೇಲೇ ದೇವನಗರಿ, ಪರ್ಷಿಯನ್ ಮತ್ತು ಸಂಸ್ಕೃತ ಭಾಷೆಗಳಲ್ಲಿಯೂ ಶಾಸನಗಳನ್ನು ಹೊಂದಿವೆ. ಗಣೇಶ ಚತುರ್ಥಿಯ ಸಮಯದಲ್ಲಂತು ಈ ದೇವಾಯದಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ವಿಶೇಷ ಅಲಂಕಾರದಿಂದ ಕೂಡಿರುವ ಗಣಪನ ದರ್ಶನ ಪಡೆಯುತ್ತಾರೆ. ಹಾಗೆ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪ್ರಸಾದ ತೆಗೆದುಕೊಂಡು ಹೋಗಿ ಸಾರ್ವಜನಿಕ ಗಣೇಶೋತ್ಸವ ಆರಂಭಿಸುವ ಸಂಪ್ರದಾಯ ಕೂಡ ನಡೆದುಬಂದಿದೆ.
ಈ ದೇವಾಲಯವು ವರ್ಷ ಎಲ್ಲಾ ದಿನವು ತೆರೆದಿರುತ್ತದೆ. ಗ್ರಹಣ ಸಮಯದಲ್ಲಿ ಮಾತ್ರ ಬಾಗಿಲು ಹಾಕಲಾಗುತ್ತದೆ. ಹಾಗೆ ಈ ಗಣಪನು ಕಪ್ಪು ಬಣ್ಣದಲ್ಲಿದ್ದು, ಬಹಳ ಶ್ರೇಷ್ಠ ಎಂದು ಕೂಡ ನಂಬಲಾಗಿದೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಜರು ಕೂಡ ಯುದ್ದಕ್ಕೆ ತೆರಳುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಹಾಗೆ ಇದು ಶಕ್ತಿಶಾಲಿ, ಬೇಡಿದನ್ನು ನೀಡುವ ಗಣಪ ಎಂಬ ನಂಬಿಕೆ ಇದೆ.
ಈ ದೇವಾಲಯವನ್ನು ಗಿರಿ ಗೋಸವಿ ಪಂಥದ ತಪಸ್ವಿಯಾಗಿದ್ದ ಭೀಮಗೀರ್ಜಿ ಗೋಸವಿ ಸ್ಥಾಪಿಸಿದರು ಎಂದು ಹೇಳಲಾಗಿದೆ. ಈ ದೇವಾಲಯವು ಶಿವ ದೇವಾಲಯವಾಗಿರಬೇಕಿತ್ತು ಆದರೆ ನಂತರ ಗಣಪತಿ ದೇವಾಲಯವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗಿದೆ. ಈ ದೇವಾಲಯವು ಧಾರ್ಮಿಕ ಸ್ಥಳ, ಸಮಾಧಿ ಮತ್ತು ಹತ್ಯೋಗಿಗಳಿಗೆ ಅಭ್ಯಾಸ ಶಾಲೆ ಮುಂತಾದ ಬಹು ಉದ್ದೇಶಿತವಾಗಿ ಬಳಕೆಯಾಗಿತ್ತು. ಭೀಮಗೀರ್ಜಿ ಗೋಸಾವಿಯ ಸಮಾಧಿ ಸಹ ಹೊಂದಿರುವುದು ನೋಡಬಹುದು. 1757 ರ ಪ್ಲಾಸಿ ಕದನದ ನಂತರದ ಪರಿಣಾಮಗಳನ್ನು ಬ್ರಿಟಿಷ್ ಸೈನಿಕ ಮತ್ತು ಸರಪಳಿಯಿಂದ ಬಂಧಿಸಲ್ಪಟ್ಟ ಖಡ್ಗಮೃಗದೊಂದಿಗೆ ಚಿತ್ರಿಸುವ ಐತಿಹಾಸಿಕ ಫಲಕವನ್ನು ಇಲ್ಲಿ ಕಾಣಬಹುದು.



Click it and Unblock the Notifications


