Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮನಗರದಲ್ಲಿರುವ ಹಳ್ಳಿಯ ಒಂಟಿ ತೋಟದ ಮನೆಯಲ್ಲಿ 25 ತಲೆ ಬುರುಡೆ ಇಟ್ಟು ಪೂಜೆ ಮಾಡುತ್ತಿರುವ ಮಾಂತ್ರಿಕ!
ಚಂದ್ರಲೋಕ, ಮಂಗಳ ಗ್ರಹಕ್ಕೆ ಮನುಷ್ಯ ಹೋಗಲು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿಯೂ ಮಾಟ ಮಂತ್ರ ಅಂತ ಕೂರುವ ಎಷ್ಟೋ ಜನರಿದ್ದಾರೆ. ಅದರಲ್ಲೂ ರಾಮನಗರದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಾಟ -ಮಂತ್ರ ಕತೆ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ, ಏಕೆಂದರೆ ಆ ಒಂಟಿ ಮನೆಯಲ್ಲಿ ಪತ್ತೆಯಾಗಿರುವುದು 25 ಮನುಷ್ಯರ ತಲೆ ಬುರುಡೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜೋಗನಹಳ್ಳಿಯ ಗ್ರಾಮದಲ್ಲಿರುವ ಒಂಟಿ ಮನೆ, ಆ ಮನೆಯಲ್ಲಿ ವಾಸವಾಗಿರುವುದು ಬಲರಾಮ್ ಎಂಬ ವ್ಯಕ್ತಿ. ಆ ವ್ಯಕ್ತಿಯ ನಡೆತೆ, ವೇಷ ಭೂಷಣ ಎಲ್ಲವೂ ನೋಡುಗರಿಗೆ ನಿಗೂಢ ಎಂದು ಗ್ರಾಮಸ್ಥರಿಗೆ ಅನಿಸುತ್ತಿತ್ತು. ಆದರೆ ಆತನ ಮನೆಯಲ್ಲಿ ಏನು ನಡೆಯುತ್ತದೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ, ಆದರೆ ಈಗ ಅಲ್ಲಿ ಪತ್ತೆಯಾಗಿರುವ ತಲೆ ಬುರುಡೆಗಳು, ಮನುಷ್ಯನ ದೇಹದ ಮೂಳೆಗಳನ್ನು ನೋಡಿ ಪೊಲೀಸರು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ.
ಬಲರಾಮ್ನ ನಿಗೂಢ ವರ್ತನೆ
ಆ ಗ್ರಾಮಸ್ಥರಿಗೆ ಈ ವ್ಯಕ್ತಿಯನ್ನು ನೋಡುವಾಗ ಸ್ವಲ್ಪ ವಿಚಿತ್ರ ಅನಿಸುತ್ತಿತ್ತು, ಅವನು ಮಾಟ ಮಂತ್ರ ಮಾಡುತ್ತಾನೆ ಎಂದು ಕೆಲವರು ಮಾತನಾಡುತ್ತಿದ್ದರು. ಈ ವ್ಯಕ್ತಿ ಶಿವರಾತ್ರಿಯ ಮಾರನೇಯ ದಿನ ಸ್ಮಶಾನದಲ್ಲಿ ಪೂಜೆ ಮಾಡುತ್ತಿರುವುದನ್ನು ನೋಡಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಆತನನ್ನು ವಿಚಾರಿಸಿ, ಆತನ ಮನೆ ಬಗ್ಗೆ ವಿಚಾರಿಸಿ ಅವನ ಜೊತೆಗೆ ಮನೆಗೆ ಹೋದವರು ಶಾಕ್ ಆಗಿದ್ದಾರೆ.
ಆ ಮನೆಯಲ್ಲಿ ತುಂಬಾನೇ ತಲೆಬುರುಡೆಗಳು , ಆತ ಹೇಳುವ ಪ್ರಕಾರ ತಾತನ ಕಾಲದಿಂದಾಲೇ ಬುರುಡೆಗಳಿಗೆ ಪೂಜೆ ಮಾಡುತ್ತಿದ್ದರು ಎಂಬ ವಿಷಯ ಬಹಿರಂಗ ಪಡಿಸಿದ್ದಾನೆ. ಇನ್ನು ಆತ ಮಲಗುತ್ತಿದ್ದ ಮಂಚ ಕೂಡ ಮನುಷ್ಯನ ಮೂಳೆಗಳಿಂದ ಮಾಡಿದ್ದು, ಅಲ್ಲಿ ಮನುಷ್ಯನ ಕೈ ಕಾಲುಗಳ ಮೂಳೆಯೂ ಇದೆಯಂತೆ.

ಇದೀಗ ಈ ವಿಷಯ ಕೇಳಿದವರು ಅಬ್ಬಾ! ಹೀಗೀ ಇದೆಯೇ ಎಂದು ಅಚ್ಚರಿ ಪಡೆಯುತ್ತಿದ್ದಾರೆ. ಈ ತಲೆಬುರುಡೆಗಳು ಎಷ್ಟು ವರ್ಷ ಹಳೆಯದ್ದು, ಈ ವ್ಯಕ್ತಿಯನ್ನು ಯಾರನ್ನಾದರೂ ಬಲಿ ಪಡೆದಿದ್ದೀರಾ ಎಂಬುವುದು ತನಿಖೆಯಿಂದ ತಿಳಿದು ಬರಬೇಕಷ್ಟೇ...
ಒಂದು ಹಳ್ಳಿಯಲ್ಲಿ ಈ ರೀತಿ ಮನೆಯ ಬಗ್ಗೆ ಇಷ್ಟು ತಡವಾಗಿ ತಿಳಿದು ಬಂದಿರುವುದು ಅಚ್ಚರಿಯೇ ಸರಿ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೂರ-ದೂರ ಮನೆಯಿದ್ದರೂ ಪ್ರತಿಯೊಂದು ಮನೆಯ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ, ಹಳ್ಳಿಯ ಜನರು ಸಿಟಿಯ ಜನರಿಗಿಂತ ಹೆಚ್ಚು ಸಂಪರ್ಕದಲ್ಲಿರುತ್ತಾರೆ, ಆದರೆ ಇದೊಂದು ಹಳ್ಳಿಯ ಮನೆಯಾಗಿದ್ದು ಈ ಮನೆಯ ಬಗ್ಗೆ ಆ ಹಳ್ಳಿಯವರಿಗೆ ಗೊತ್ತಿರಲಿಲ್ಲವೇ ಎಂಬುವುದೇ ದೊಡ್ಡ ಅಚ್ಚರಿ. ಈ ವ್ಯಕ್ತಿ ಕಾಳಿ ಮಠ ಎಂದು ಬೋರ್ಡ್ ಹಾಕಿ ಪೂಜೆ ಮಾಡುತ್ತಿದ್ದ.
ಈ ರೀತಿ ಮಾಟ ಮಂತ್ರ ಮಾಡುವವರು ಯಾರನ್ನು ಟಾರ್ಗೆಟ್ ಮಾಡುತ್ತಾರೆ?
ಈ ರೀತಿ ಮಾಟ ಮಂತ್ರ, ನಿಗೂಢ ಪೂಜೆ ಮಾಡುವವರನ್ನು ತುಂಬಾನೇ ದೂರವಿಡಬೇಕು. ಇವರ ಟಾರ್ಗೆಟ್ ದುರ್ಬಲ ಮನಸ್ಸಿನವರು, ಅವರು ಮೊದಲೇ ಹಲವು ಸಮಸ್ಯೆಗಳಿಂದ ಆತ್ಮವಿಶ್ವಾಸ ಕಡಿಮೆಯಾಗಿರುತ್ತದೆ, ಅಂಥವರಿಗೆ ನೀವು ಈ ಪೂಜೆ ಮಾಡಿ ಆ ಪೂಜೆ ಮಾಡಿ ಎಂದು ಅವರಿಂದ ಹಣ ಕಿತ್ತು ಮಾಟ-ಮಂತ್ರ ಮಾಡುತ್ತಾರೆ, ಜನರು ಇಂಥವರ ಬಳಿ ಹೋಗಲೇಬಾರದು.
ಏನೇ ಸಮಸ್ಯೆ ಇರಲಿ ನೀವು ಇಂಥ ವ್ಯಕ್ತಿ ಬಳಿ ಹೋಗಬಾರದು, ನಿಮ್ಮ ಇಷ್ಟ ದೇವರನ್ನು ಪೂಜಿಸಿ ಆರಾಧಿಸಿ, ಆದರೆ ಈ ರೀತಿ ತಲೆಬುರುಡೆ ಅಥವಾ ವಿಚಿತ್ರ ರೀತಿಯಲ್ಲಿ ಪೂಜೆ ಮಾಡುವವರಿಂದ ದೂರವಿರಬೇಕು. ಏಕೆಂದರೆ ಇವರ ತಲೆಯಲ್ಲೂ ಅಂಧತ್ವ ತುಂಬಿರುತ್ತದೆ, ಹೀಗಾಗಿಯೇ ಈ ಬಲಿ ಎಲ್ಲಾ ಈಗಲೂ ನಡೆಯುತ್ತಿದೆ.



Click it and Unblock the Notifications