Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ರಾಮನಗರದಲ್ಲಿರುವ ಹಳ್ಳಿಯ ಒಂಟಿ ತೋಟದ ಮನೆಯಲ್ಲಿ 25 ತಲೆ ಬುರುಡೆ ಇಟ್ಟು ಪೂಜೆ ಮಾಡುತ್ತಿರುವ ಮಾಂತ್ರಿಕ!
ಚಂದ್ರಲೋಕ, ಮಂಗಳ ಗ್ರಹಕ್ಕೆ ಮನುಷ್ಯ ಹೋಗಲು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿಯೂ ಮಾಟ ಮಂತ್ರ ಅಂತ ಕೂರುವ ಎಷ್ಟೋ ಜನರಿದ್ದಾರೆ. ಅದರಲ್ಲೂ ರಾಮನಗರದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಾಟ -ಮಂತ್ರ ಕತೆ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ, ಏಕೆಂದರೆ ಆ ಒಂಟಿ ಮನೆಯಲ್ಲಿ ಪತ್ತೆಯಾಗಿರುವುದು 25 ಮನುಷ್ಯರ ತಲೆ ಬುರುಡೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜೋಗನಹಳ್ಳಿಯ ಗ್ರಾಮದಲ್ಲಿರುವ ಒಂಟಿ ಮನೆ, ಆ ಮನೆಯಲ್ಲಿ ವಾಸವಾಗಿರುವುದು ಬಲರಾಮ್ ಎಂಬ ವ್ಯಕ್ತಿ. ಆ ವ್ಯಕ್ತಿಯ ನಡೆತೆ, ವೇಷ ಭೂಷಣ ಎಲ್ಲವೂ ನೋಡುಗರಿಗೆ ನಿಗೂಢ ಎಂದು ಗ್ರಾಮಸ್ಥರಿಗೆ ಅನಿಸುತ್ತಿತ್ತು. ಆದರೆ ಆತನ ಮನೆಯಲ್ಲಿ ಏನು ನಡೆಯುತ್ತದೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ, ಆದರೆ ಈಗ ಅಲ್ಲಿ ಪತ್ತೆಯಾಗಿರುವ ತಲೆ ಬುರುಡೆಗಳು, ಮನುಷ್ಯನ ದೇಹದ ಮೂಳೆಗಳನ್ನು ನೋಡಿ ಪೊಲೀಸರು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ.
ಬಲರಾಮ್ನ ನಿಗೂಢ ವರ್ತನೆ
ಆ ಗ್ರಾಮಸ್ಥರಿಗೆ ಈ ವ್ಯಕ್ತಿಯನ್ನು ನೋಡುವಾಗ ಸ್ವಲ್ಪ ವಿಚಿತ್ರ ಅನಿಸುತ್ತಿತ್ತು, ಅವನು ಮಾಟ ಮಂತ್ರ ಮಾಡುತ್ತಾನೆ ಎಂದು ಕೆಲವರು ಮಾತನಾಡುತ್ತಿದ್ದರು. ಈ ವ್ಯಕ್ತಿ ಶಿವರಾತ್ರಿಯ ಮಾರನೇಯ ದಿನ ಸ್ಮಶಾನದಲ್ಲಿ ಪೂಜೆ ಮಾಡುತ್ತಿರುವುದನ್ನು ನೋಡಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಆತನನ್ನು ವಿಚಾರಿಸಿ, ಆತನ ಮನೆ ಬಗ್ಗೆ ವಿಚಾರಿಸಿ ಅವನ ಜೊತೆಗೆ ಮನೆಗೆ ಹೋದವರು ಶಾಕ್ ಆಗಿದ್ದಾರೆ.
ಆ ಮನೆಯಲ್ಲಿ ತುಂಬಾನೇ ತಲೆಬುರುಡೆಗಳು , ಆತ ಹೇಳುವ ಪ್ರಕಾರ ತಾತನ ಕಾಲದಿಂದಾಲೇ ಬುರುಡೆಗಳಿಗೆ ಪೂಜೆ ಮಾಡುತ್ತಿದ್ದರು ಎಂಬ ವಿಷಯ ಬಹಿರಂಗ ಪಡಿಸಿದ್ದಾನೆ. ಇನ್ನು ಆತ ಮಲಗುತ್ತಿದ್ದ ಮಂಚ ಕೂಡ ಮನುಷ್ಯನ ಮೂಳೆಗಳಿಂದ ಮಾಡಿದ್ದು, ಅಲ್ಲಿ ಮನುಷ್ಯನ ಕೈ ಕಾಲುಗಳ ಮೂಳೆಯೂ ಇದೆಯಂತೆ.

ಇದೀಗ ಈ ವಿಷಯ ಕೇಳಿದವರು ಅಬ್ಬಾ! ಹೀಗೀ ಇದೆಯೇ ಎಂದು ಅಚ್ಚರಿ ಪಡೆಯುತ್ತಿದ್ದಾರೆ. ಈ ತಲೆಬುರುಡೆಗಳು ಎಷ್ಟು ವರ್ಷ ಹಳೆಯದ್ದು, ಈ ವ್ಯಕ್ತಿಯನ್ನು ಯಾರನ್ನಾದರೂ ಬಲಿ ಪಡೆದಿದ್ದೀರಾ ಎಂಬುವುದು ತನಿಖೆಯಿಂದ ತಿಳಿದು ಬರಬೇಕಷ್ಟೇ...
ಒಂದು ಹಳ್ಳಿಯಲ್ಲಿ ಈ ರೀತಿ ಮನೆಯ ಬಗ್ಗೆ ಇಷ್ಟು ತಡವಾಗಿ ತಿಳಿದು ಬಂದಿರುವುದು ಅಚ್ಚರಿಯೇ ಸರಿ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೂರ-ದೂರ ಮನೆಯಿದ್ದರೂ ಪ್ರತಿಯೊಂದು ಮನೆಯ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ, ಹಳ್ಳಿಯ ಜನರು ಸಿಟಿಯ ಜನರಿಗಿಂತ ಹೆಚ್ಚು ಸಂಪರ್ಕದಲ್ಲಿರುತ್ತಾರೆ, ಆದರೆ ಇದೊಂದು ಹಳ್ಳಿಯ ಮನೆಯಾಗಿದ್ದು ಈ ಮನೆಯ ಬಗ್ಗೆ ಆ ಹಳ್ಳಿಯವರಿಗೆ ಗೊತ್ತಿರಲಿಲ್ಲವೇ ಎಂಬುವುದೇ ದೊಡ್ಡ ಅಚ್ಚರಿ. ಈ ವ್ಯಕ್ತಿ ಕಾಳಿ ಮಠ ಎಂದು ಬೋರ್ಡ್ ಹಾಕಿ ಪೂಜೆ ಮಾಡುತ್ತಿದ್ದ.
ಈ ರೀತಿ ಮಾಟ ಮಂತ್ರ ಮಾಡುವವರು ಯಾರನ್ನು ಟಾರ್ಗೆಟ್ ಮಾಡುತ್ತಾರೆ?
ಈ ರೀತಿ ಮಾಟ ಮಂತ್ರ, ನಿಗೂಢ ಪೂಜೆ ಮಾಡುವವರನ್ನು ತುಂಬಾನೇ ದೂರವಿಡಬೇಕು. ಇವರ ಟಾರ್ಗೆಟ್ ದುರ್ಬಲ ಮನಸ್ಸಿನವರು, ಅವರು ಮೊದಲೇ ಹಲವು ಸಮಸ್ಯೆಗಳಿಂದ ಆತ್ಮವಿಶ್ವಾಸ ಕಡಿಮೆಯಾಗಿರುತ್ತದೆ, ಅಂಥವರಿಗೆ ನೀವು ಈ ಪೂಜೆ ಮಾಡಿ ಆ ಪೂಜೆ ಮಾಡಿ ಎಂದು ಅವರಿಂದ ಹಣ ಕಿತ್ತು ಮಾಟ-ಮಂತ್ರ ಮಾಡುತ್ತಾರೆ, ಜನರು ಇಂಥವರ ಬಳಿ ಹೋಗಲೇಬಾರದು.
ಏನೇ ಸಮಸ್ಯೆ ಇರಲಿ ನೀವು ಇಂಥ ವ್ಯಕ್ತಿ ಬಳಿ ಹೋಗಬಾರದು, ನಿಮ್ಮ ಇಷ್ಟ ದೇವರನ್ನು ಪೂಜಿಸಿ ಆರಾಧಿಸಿ, ಆದರೆ ಈ ರೀತಿ ತಲೆಬುರುಡೆ ಅಥವಾ ವಿಚಿತ್ರ ರೀತಿಯಲ್ಲಿ ಪೂಜೆ ಮಾಡುವವರಿಂದ ದೂರವಿರಬೇಕು. ಏಕೆಂದರೆ ಇವರ ತಲೆಯಲ್ಲೂ ಅಂಧತ್ವ ತುಂಬಿರುತ್ತದೆ, ಹೀಗಾಗಿಯೇ ಈ ಬಲಿ ಎಲ್ಲಾ ಈಗಲೂ ನಡೆಯುತ್ತಿದೆ.



Click it and Unblock the Notifications