Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಮನಗರದಲ್ಲಿರುವ ಹಳ್ಳಿಯ ಒಂಟಿ ತೋಟದ ಮನೆಯಲ್ಲಿ 25 ತಲೆ ಬುರುಡೆ ಇಟ್ಟು ಪೂಜೆ ಮಾಡುತ್ತಿರುವ ಮಾಂತ್ರಿಕ!
ಚಂದ್ರಲೋಕ, ಮಂಗಳ ಗ್ರಹಕ್ಕೆ ಮನುಷ್ಯ ಹೋಗಲು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿಯೂ ಮಾಟ ಮಂತ್ರ ಅಂತ ಕೂರುವ ಎಷ್ಟೋ ಜನರಿದ್ದಾರೆ. ಅದರಲ್ಲೂ ರಾಮನಗರದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಾಟ -ಮಂತ್ರ ಕತೆ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ, ಏಕೆಂದರೆ ಆ ಒಂಟಿ ಮನೆಯಲ್ಲಿ ಪತ್ತೆಯಾಗಿರುವುದು 25 ಮನುಷ್ಯರ ತಲೆ ಬುರುಡೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜೋಗನಹಳ್ಳಿಯ ಗ್ರಾಮದಲ್ಲಿರುವ ಒಂಟಿ ಮನೆ, ಆ ಮನೆಯಲ್ಲಿ ವಾಸವಾಗಿರುವುದು ಬಲರಾಮ್ ಎಂಬ ವ್ಯಕ್ತಿ. ಆ ವ್ಯಕ್ತಿಯ ನಡೆತೆ, ವೇಷ ಭೂಷಣ ಎಲ್ಲವೂ ನೋಡುಗರಿಗೆ ನಿಗೂಢ ಎಂದು ಗ್ರಾಮಸ್ಥರಿಗೆ ಅನಿಸುತ್ತಿತ್ತು. ಆದರೆ ಆತನ ಮನೆಯಲ್ಲಿ ಏನು ನಡೆಯುತ್ತದೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ, ಆದರೆ ಈಗ ಅಲ್ಲಿ ಪತ್ತೆಯಾಗಿರುವ ತಲೆ ಬುರುಡೆಗಳು, ಮನುಷ್ಯನ ದೇಹದ ಮೂಳೆಗಳನ್ನು ನೋಡಿ ಪೊಲೀಸರು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ.
ಬಲರಾಮ್ನ ನಿಗೂಢ ವರ್ತನೆ
ಆ ಗ್ರಾಮಸ್ಥರಿಗೆ ಈ ವ್ಯಕ್ತಿಯನ್ನು ನೋಡುವಾಗ ಸ್ವಲ್ಪ ವಿಚಿತ್ರ ಅನಿಸುತ್ತಿತ್ತು, ಅವನು ಮಾಟ ಮಂತ್ರ ಮಾಡುತ್ತಾನೆ ಎಂದು ಕೆಲವರು ಮಾತನಾಡುತ್ತಿದ್ದರು. ಈ ವ್ಯಕ್ತಿ ಶಿವರಾತ್ರಿಯ ಮಾರನೇಯ ದಿನ ಸ್ಮಶಾನದಲ್ಲಿ ಪೂಜೆ ಮಾಡುತ್ತಿರುವುದನ್ನು ನೋಡಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಆತನನ್ನು ವಿಚಾರಿಸಿ, ಆತನ ಮನೆ ಬಗ್ಗೆ ವಿಚಾರಿಸಿ ಅವನ ಜೊತೆಗೆ ಮನೆಗೆ ಹೋದವರು ಶಾಕ್ ಆಗಿದ್ದಾರೆ.
ಆ ಮನೆಯಲ್ಲಿ ತುಂಬಾನೇ ತಲೆಬುರುಡೆಗಳು , ಆತ ಹೇಳುವ ಪ್ರಕಾರ ತಾತನ ಕಾಲದಿಂದಾಲೇ ಬುರುಡೆಗಳಿಗೆ ಪೂಜೆ ಮಾಡುತ್ತಿದ್ದರು ಎಂಬ ವಿಷಯ ಬಹಿರಂಗ ಪಡಿಸಿದ್ದಾನೆ. ಇನ್ನು ಆತ ಮಲಗುತ್ತಿದ್ದ ಮಂಚ ಕೂಡ ಮನುಷ್ಯನ ಮೂಳೆಗಳಿಂದ ಮಾಡಿದ್ದು, ಅಲ್ಲಿ ಮನುಷ್ಯನ ಕೈ ಕಾಲುಗಳ ಮೂಳೆಯೂ ಇದೆಯಂತೆ.

ಇದೀಗ ಈ ವಿಷಯ ಕೇಳಿದವರು ಅಬ್ಬಾ! ಹೀಗೀ ಇದೆಯೇ ಎಂದು ಅಚ್ಚರಿ ಪಡೆಯುತ್ತಿದ್ದಾರೆ. ಈ ತಲೆಬುರುಡೆಗಳು ಎಷ್ಟು ವರ್ಷ ಹಳೆಯದ್ದು, ಈ ವ್ಯಕ್ತಿಯನ್ನು ಯಾರನ್ನಾದರೂ ಬಲಿ ಪಡೆದಿದ್ದೀರಾ ಎಂಬುವುದು ತನಿಖೆಯಿಂದ ತಿಳಿದು ಬರಬೇಕಷ್ಟೇ...
ಒಂದು ಹಳ್ಳಿಯಲ್ಲಿ ಈ ರೀತಿ ಮನೆಯ ಬಗ್ಗೆ ಇಷ್ಟು ತಡವಾಗಿ ತಿಳಿದು ಬಂದಿರುವುದು ಅಚ್ಚರಿಯೇ ಸರಿ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೂರ-ದೂರ ಮನೆಯಿದ್ದರೂ ಪ್ರತಿಯೊಂದು ಮನೆಯ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ, ಹಳ್ಳಿಯ ಜನರು ಸಿಟಿಯ ಜನರಿಗಿಂತ ಹೆಚ್ಚು ಸಂಪರ್ಕದಲ್ಲಿರುತ್ತಾರೆ, ಆದರೆ ಇದೊಂದು ಹಳ್ಳಿಯ ಮನೆಯಾಗಿದ್ದು ಈ ಮನೆಯ ಬಗ್ಗೆ ಆ ಹಳ್ಳಿಯವರಿಗೆ ಗೊತ್ತಿರಲಿಲ್ಲವೇ ಎಂಬುವುದೇ ದೊಡ್ಡ ಅಚ್ಚರಿ. ಈ ವ್ಯಕ್ತಿ ಕಾಳಿ ಮಠ ಎಂದು ಬೋರ್ಡ್ ಹಾಕಿ ಪೂಜೆ ಮಾಡುತ್ತಿದ್ದ.
ಈ ರೀತಿ ಮಾಟ ಮಂತ್ರ ಮಾಡುವವರು ಯಾರನ್ನು ಟಾರ್ಗೆಟ್ ಮಾಡುತ್ತಾರೆ?
ಈ ರೀತಿ ಮಾಟ ಮಂತ್ರ, ನಿಗೂಢ ಪೂಜೆ ಮಾಡುವವರನ್ನು ತುಂಬಾನೇ ದೂರವಿಡಬೇಕು. ಇವರ ಟಾರ್ಗೆಟ್ ದುರ್ಬಲ ಮನಸ್ಸಿನವರು, ಅವರು ಮೊದಲೇ ಹಲವು ಸಮಸ್ಯೆಗಳಿಂದ ಆತ್ಮವಿಶ್ವಾಸ ಕಡಿಮೆಯಾಗಿರುತ್ತದೆ, ಅಂಥವರಿಗೆ ನೀವು ಈ ಪೂಜೆ ಮಾಡಿ ಆ ಪೂಜೆ ಮಾಡಿ ಎಂದು ಅವರಿಂದ ಹಣ ಕಿತ್ತು ಮಾಟ-ಮಂತ್ರ ಮಾಡುತ್ತಾರೆ, ಜನರು ಇಂಥವರ ಬಳಿ ಹೋಗಲೇಬಾರದು.
ಏನೇ ಸಮಸ್ಯೆ ಇರಲಿ ನೀವು ಇಂಥ ವ್ಯಕ್ತಿ ಬಳಿ ಹೋಗಬಾರದು, ನಿಮ್ಮ ಇಷ್ಟ ದೇವರನ್ನು ಪೂಜಿಸಿ ಆರಾಧಿಸಿ, ಆದರೆ ಈ ರೀತಿ ತಲೆಬುರುಡೆ ಅಥವಾ ವಿಚಿತ್ರ ರೀತಿಯಲ್ಲಿ ಪೂಜೆ ಮಾಡುವವರಿಂದ ದೂರವಿರಬೇಕು. ಏಕೆಂದರೆ ಇವರ ತಲೆಯಲ್ಲೂ ಅಂಧತ್ವ ತುಂಬಿರುತ್ತದೆ, ಹೀಗಾಗಿಯೇ ಈ ಬಲಿ ಎಲ್ಲಾ ಈಗಲೂ ನಡೆಯುತ್ತಿದೆ.



Click it and Unblock the Notifications