ರಾಮಮಂದಿರ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ.! ಯಾವ ಅನಾರೋಗ್ಯ ಕಾಡಿತ್ತು?

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಆಚಾರ್ಯ ಸತ್ಯೇಂದ್ರ ದಾಸ್ ಅವರು ನಿಧನರಾಗಿದ್ದಾರೆ. ಮೆದುಳಿನಲ್ಲಿ ರಕ್ತಸ್ರಾವ ಹಿನ್ನೆಲೆಯಲ್ಲಿ ಇದೆ ಫೆಬ್ರವರಿ 3 ರಂದು ಅವರನ್ನು ಉತ್ತರ ಪ್ರದೇಶದ ಲಕ್ನೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಸತ್ಯೇಂದ್ರ ದಾಸ್ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಂಬನಿ ಮಿಡಿದಿದ್ದಾರೆ. ಶ್ರೀ ರಾಮ ಜನ್ಮಭೂಮಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಅಯೋಧ್ಯಾ ಧಾಮ್‌ನ ಶ್ರೀ ರಾಮನ ಪರಮ ಭಕ್ತ ಆಚಾರ್ಯ ಶ್ರೀ ಸತ್ಯೇಂದ್ರ ಕುಮಾರ್ ದಾಸ್ ಜಿ ಮಹಾರಾಜ್ ನಿಧನ ಅತ್ಯಂತ ದುಃಖಕರ ಮತ್ತು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾಗದ ನಷ್ಟ. ಅವರಿಗೆ ವಿನಮ್ರ ಶ್ರದ್ಧಾಂಜಲಿ ಎಂದು ಅವರು ಬರೆದುಕೊಂಡಿದ್ದಾರೆ.

Ram Temple Chief Priest Acharya Satyendra Das Passes Away

ಆಚಾರ್ಯ ಸತ್ಯೇಂದ್ರ ದಾಸ್ ಬುಧವಾರ ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಈಗ 83 ವರ್ಷವಾಗಿತ್ತು. ಬರೋಬ್ಬರಿ 34 ವರ್ಷಗಳ ಕಾಲ ಅಯೋಧ್ಯೆ ರಾಮ ಮಂದಿರದಲ್ಲಿ ಅರ್ಚಕರಾಗಿದ್ರು, ಅದರಲ್ಲೂ ರಾಮ ಮಂದಿರ ನಿರ್ಮಾಣಗೊಂಡು ಪ್ರತಿಷ್ಠಾಪನೆಗೊಂಡಾಗಲು ಕೂಡ ಅವರು ರಾಮನ ಪೂಜೆ ನೆರವೇರಿಸಿದ್ದರು.

ಆದ್ರೆ ಕೆಲ ದಿನಗಳ ಹಿಂದೆ ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದರು ಎಂದು ಹೇಳಲಾಗಿದೆ. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಸಮಸ್ಯೆಗಳನ್ನು ಕೂಡ ಅವರು ಹೊಂದಿದ್ದರು, ಹಾಗೆ ಮೆದುಳಿನಲ್ಲಿನ ರಕ್ತಸ್ರಾವವು ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಮಾಡಿತ್ತು. 9 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಕಳೆದರು ಕೂಡ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಆಚಾರ್ಯ ಸತ್ಯೇಂದ್ರ ದಾಸ್ ಒಬ್ಬ ಪ್ರಮುಖ ಹಿಂದೂ ಮಹಾಂತರಾಗಿದ್ದು, ಅವರು ತಮ್ಮ 20 ನೇ ವಯಸ್ಸಿನಲ್ಲೇ ಆಧ್ಯಾತ್ಮಿಕತೆ ಕಡೆಗೆ ಒಲವು ಉಂಟಾಗಿ ಸೇವೆಗಾಗಿ ಮುಟ್ಟಿಪಿಟ್ಟಿದ್ದರು. ಬರೋಬ್ಬರು 3 ದಶಕಗಳ ಕಾಲ ಅವರು ರಾಮನ ಪೂಜೆ ಮಾಡಿಕೊಂಡು ಬಂದಿದ್ದರು. ರಾಮ ದೇವಾಲಯವಿಲ್ಲದೆ ತಾತ್ಕಾಲಿಕ ಶೆಡ್‌ನಲ್ಲಿ ಇದ್ದಾಗಲು ಕೂಡ ಅವರು ಪೂಜೆ ನೆರವೇರಿಸಿದ್ದರು.

1992ರ ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ದ್ವಂಸಕ್ಕೂ ಮುನ್ನವೇ ಅವರು ರಾಮನಿಗೆ ಪೂಜೆ ಸಲ್ಲಿಸುತ್ತಿದ್ದರು ಅವರು ನಿರ್ವಾಣಿ ಅಖಾಡದ ಸದಸ್ಯರು ಕೂಡ ಹೌದು.
ಅಯೋಧ್ಯೆಯಲ್ಲಿ ವಿನೂತನ, ಭವ್ಯ ರಾಮ ಮಂದಿರ ತಲೆ ಎತ್ತಿದ ಬಳಿಕ ಆಚಾರ್ಯ ಸತ್ಯೇಂದ್ರ ದಾಸ್ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದರು.

ಮೆದುಳಿನ ಪಾರ್ಶ್ವವಾಯುವಿನ ಲಕ್ಷಣಗಳೇನು?

ಮೆದುಳಿನ ಪಾರ್ಶ್ವವಾಯು ಸಮಸ್ಯೆ ವಯಸ್ಸಾದವಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂಬುದು ತಪ್ಪು. ಆದರೆ ಅದರ ಲಕ್ಷಣಗಳನ್ನು ನಾವು ಮೊದಲೇ ತಿಳಿದಿರುವುದು ಉತ್ತಮ. ಹಠಾತ್ ಆಗಿ ಇಡೀ ದೇಹ ಮರಗಟ್ಟಿದಂತಹ ಅನುಭವವಾಗುವುದು. ತೋಳು ಅಥವಾ ಕಾಲಿನಲ್ಲಿ ಬಿಗಿತ, ದೌರ್ಬಲ್ಯ, ಮಾತನಾಡಲು ಸಮಸ್ಯೆಯಾಗುವುದು, ದೃಷ್ಟಿ ಮಂದ ಆಗುವುದು, ವಿಪರೀತ ತಲೆ ನೋವು, ಇಂತಹ ಕೆಲವು ಸೂಚನೆಗಳು ಮೊದಲು ಗೋಚರವಾಗುತ್ತದೆ.

English summary

Ram Temple Chief Priest Acharya Satyendra Das Passes Away!

Acharya Satyendra Das passed away on Wednesday at the Sanjay Gandhi Postgraduate Institute of Medical Sciences Hospital in Lucknow. He was 83 years old. He was a priest at the Ayodhya Ram temple for exactly 34 years,
Story first published: Wednesday, February 12, 2025, 11:55 [IST]
X
Desktop Bottom Promotion