Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶ್ರೀ ಕೃಷ್ಣನಿಗೆ ರಾಕಿ ಕಟ್ಟಿದ ದ್ರೌಪತಿ! ರಾಕಿ ಹಬ್ಬದ ಹಿಂದಿರೋ ಪೌರಾಣಿಕ ಕಥೆಗಳೇನು?
ರಕ್ಷಾ ಬಂಧನ ಅಣ್ಣಾ-ತಂಗಿಯ ಹಬ್ಬ. ಈ ದಿನ ಅಣ್ಣನಿಗೆ ತಂಗಿಯೂ ಪ್ರೀತಿಯಿಂದ ರಾಕಿಯನ್ನು ಕಟ್ಟುತ್ತಾಳೆ. ಹಾಗೂ ಅಣ್ಣನೂ ಸದಾ ತಂಗಿಯನ್ನು ರಕ್ಷಣೆ ಮಾಡೋದಾಗಿ ಮಾತು ನೀಡುತ್ತಾನೆ. ಅದ್ರಲ್ಲೂ ಭಾರತೀಯರಿಗಂತೂ ಈ ಹಬ್ಬ ತುಂಬಾನೇ ಸ್ಪೆಷಲ್.

ಪ್ರತಿಯೊಂದು ಹಬ್ಬದ ಹಿಂದೆ ಕೂಡ ಒಂದೊಂದು ಕಥೆ ಬೆಸೆದುಕೊಂಡಿದೆ. ಅದೇ ರೀತಿ ರಕ್ಷಾ ಬಂಧನ ಆಚರಣೆಯ ಹಿಂದೆಯೂ ಕೂಡ ಅಂತಹದ್ದೇ ಪೌರಾಣಿಕ ಕಥೆಗಳಿದೆ. ಅಷ್ಟಕ್ಕು ರಕ್ಷಾ ಬಂಧನ ಹಬ್ಬ ಶುರುವಾಗಿದ್ಹೇಗೆ? ಇದರ ಹಿಂದಿರುವ ಕಥೆಗಳ ಬಗ್ಗೆ ಒಂದೊಂದಾಗಿಯೇ ತಿಳಿಯೋಣ.
ದ್ರೌಪತಿಯನ್ನು ರಕ್ಷಣೆ ಮಾಡೋದಾಗಿ ಮಾತುಕೊಟ್ಟ ಶ್ರೀ ಕೃಷ್ಣ!
ಒಂದು ಸಾರಿ ಶ್ರೀ ಕೃಷ್ಣ ಗಾಳಿಪಟ ಹಾರಿಸುತ್ತಿದ್ದ ಸಮಯದಲ್ಲಿ ಆತನ ಬೆರಳಿಗೆ ಗಾಯವಾಗಿ ರಕ್ತ ಸುರಿಯ ತೊಡಗುತ್ತದೆ. ಈ ಸಮಯದಲ್ಲಿ ಅಲ್ಲಿಂದ ದ್ರೌಪತಿ ತನ್ನ ಬಟ್ಟೆಯ ಸೆರಗನ್ನು ಹರಿದು ಶ್ರೀ ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಸೋರುವುದನ್ನು ತಡೆಗಟ್ಟುತ್ತಾಳೆ. ಆಗ ಶ್ರೀ ಕೃಷ್ಣನು ದ್ರೌಪತಿಯ ಕಾಳಜಿಗೆ ಸೋತು ಹೋಗುತ್ತಾನೆ. ಮತ್ತು ಯಾವ ಸಂದರ್ಭದಲ್ಲಾದರೂ ನಿನ್ನ ರಕ್ಷಣೆಗೆ ಸಿದ್ಧನಾಗಿ ಇರುತ್ತಾನೆ ಎಂದು ಹೇಳುತ್ತಾನೆ.
ಅದರಂತೆ ಕೌರವರೊಂದಿಗೆ ಪಾಂಡವರು ಪಗಡೆ ಆಟದಲ್ಲಿ ಸೋತ ಸಂದರ್ಭದಲ್ಲಿ ದುಷ್ಯಾಸನ ದ್ರೌಪತಿಯ ಸೆರಗಿಗೆ ಕೈ ಹಾಕುತ್ತಾನೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣನು ಆಕೆಯನ್ನು ರಕ್ಷಣೆ ಮಾಡುತ್ತಾನೆ.
12 ವರ್ಷದ ನಂತರ ಯಮನಿಗೆ ರಾಕಿ ಕಟ್ಟಿದ ಯಮುನಾ!
ಯಮ ಮತ್ತು ಯಮುನಾ ಸಹೋದರ ಸಹೋದರಿಯರಾಗಿದ್ದು 12 ವರ್ಷಗಳಿಂದ ಅವರಿಬ್ಬರೂ ಪರಸ್ಪರ ಭೇಟಿಯಾಗಿರಲಿಲ್ಲ. ಇದು ಯಮುನಾ ದೇವಿಗೆ ಬಹಳಷ್ಟು ದುಃಖವನ್ನುಂಟು ಮಾಡಿತ್ತು. ಆದ್ದರಿಂದ ಗಂಗಾ ದೇವಿಯು ತನ್ನ ಸಹೋದರಿಯನ್ನು ಭೇಟಿ ಮಾಡಿ ಅವಳನ್ನು ಸಂತೋಷಪಡಿಸುವಂತೆ ಯಮನಿಗೆ ಸಲಹೆ ನೀಡುತ್ತಾಳೆ.
ಇತ್ತ ತನ್ನ ಸಹೋದರನ ಆಗಮನದ ವಿಷಯ ಕೇಳಿ ಸಂತೋಷಗೊಂಡ ಯಮುನಾ ಆಕರ್ಷಕ ಭಕ್ಷ್ಯಗಳನ್ನು ತಯಾರಿಸಿ ಆತನಿಗಾಗಿ ಕಾದು ಕುಳಿತಿರುತ್ತಾಳೆ. ನಂತರ ಸಹೋದರ ಮನೆಗೆ ಬಂದ ತಕ್ಷಣ ಆತನಿಗೆ ರಾಕಿ ಕಟ್ಟಿ ಖುಷಿ ಪಡುತ್ತಾಳೆ. ವೈದಿಕ ಗ್ರಂಥಗಳಲ್ಲಿ ಯಮ ಎಂದರೆ ಆತ್ಮವನ್ನು ಒಯ್ಯುವವನು ಎಂಬ ಉಲ್ಲೇಖವಿದೆ.
ಮಾತೆ ಲಕ್ಷ್ಮೀ ಹಾಗೂ ಬಲಿಯ ರಕ್ಷಾ ಬಂಧ!
ಬಲಿಯು ವಿಷ್ಣುವಿನ ಪರಮ ಭಕ್ತ. ತಪಸ್ಸು ಮಾಡಿ ವಿಷ್ಣುವನ್ನು ಒಲಿಸಿಕೊಂಡಿದ್ದ ಬಲಿ ಮಹಾರಾಜನು ವಿಷ್ಣುವಿನಲ್ಲಿ ನೀನು ನನ್ನ ರಾಜ್ಯವನ್ನು ರಕ್ಷಿಸಬೇಕು. ಹಾಗೂ ಅತ್ಯುತ್ತಮ ರೀತಿಯಲ್ಲಿ ಪ್ರಜಾಪಾಲನೆ ಮಾಡಬೇಕೆಂದು ಕೇಳಿಕೊಂಡಿದ್ದ. ಬಲಿಯ ನಿಸ್ವಾರ್ಥ ಗುಣಕ್ಕೆ ಮೆಚ್ಚಿದ್ದ ವಿಷ್ಣುವು ವೈಕುಂಠ ತೊರೆದು ಬಲಿ ಮಹಾರಾಜನ ರಾಜ್ಯ ಕಾಯಲು ನಿಲ್ಲುತ್ತಾನೆ.
ಇತ್ತ ಪತಿ ವೈಕುಂಠ ತೊರೆದು ಭೂಮಿಯಲ್ಲೇ ಉಳಿದುಬಿಟ್ಟಿದ್ದು ಲಕ್ಷ್ಮೀಯ ಚಿಂತೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಲಕ್ಷ್ಮೀಯು ವಿಷ್ಣುವನ್ನು ವಾಪಾಸ್ಸ್ ಬರುವಂತೆ ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. ಆದರೆ ವಿಷ್ಣುವು ಬಲಿಗೆ ಮಾತು ಕೊಟ್ಟಿರೋದ್ರಿಂದ ವಾಪಾಸ್ಸ್ ಬರೋದಿಲ್ಲ ಅಂತ ಹೇಳುತ್ತಾನೆ.
ಕೊನೆಗೆ ಲಕ್ಷ್ಮಿ ಒಂದು ಉಪಾಯ ಮಾಡುತ್ತಾಳೆ. ಲಕ್ಷ್ಮೀಯು ಸಾಮಾನ್ಯ ಸ್ತ್ರೀಯಂತೆ ವೇಷ ಮರೆಸಿಕೊಂಡು ಬಲಿಯ ಅಂತಃಪುರ ಸೇರಿಕೊಳ್ಳುತ್ತಾಳೆ. ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಾ ಬಲಿಯ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ. ಒಂದು ಶ್ರಾವಣದ ದಿನ ಲಕ್ಷ್ಮೀಯೂ ಬಲಿಗೆ ಮಂಗಳಕರ ರಾಕಿಯನ್ನು ಕಟ್ಟುತ್ತಾಳೆ. ಲಕ್ಷ್ಮೀಯನ್ನು ಸಹೋದರಿಯಾಗಿ ಸ್ವೀಕರಿಸಿದ ಬಲಿಯೂ ನಿನಗೇನು ಬೇಕು ಎಂದು ಕೇಳುತ್ತಾನೆ.
ಆಗ ಲಕ್ಷ್ಮೀ ತನ್ನ ನಿಜ ರೂಪದಲ್ಲಿ ಅವತರಿಸಿ ವಿಷ್ಣವನ್ನು ಮತ್ತೆ ವೈಕುಂಟಕ್ಕೆ ಕಳುಹಿಸಿ ಕೊಡುವಂತೆ ಬಲಿಯಲ್ಲಿ ಕೇಳಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ತ್ರಿಮೂರ್ತಿಗಳು ತಲಾ ನಾಲ್ಕು ತಿಂಗಳ ಕಾಲ ಬಲಿಯ ಸಾಮ್ರಾಜ್ಯ ಕಾಯುವುದು ಅನ್ನುವ ಕರಾರಿನ ಮೇಲೆ ವಿಷ್ಣುವನ್ನು ಲಕ್ಷ್ಮಿಯೊಡನೆ ವೈಕುಂಠಕ್ಕೆ ಮರಳಿ ಬರುತ್ತಾನೆ.
ಅಲ್ಲಿಂದ ಮುಂದೆ ಪ್ರತಿ ಶ್ರಾವಣ ಹುಣ್ಣಿಮೆಯಂದು ಅಣ್ಣ-ತಂಗಿಯ ಹಬ್ಬವಾದ ರಕ್ಷಾಬಂಧನವನ್ನು ಆಚರಿಸಿಕೊಂಡು ಬರಲಾಗ್ತಿದೆ.
ಇಂದ್ರನ ರಕ್ಷಣೆಗೆ ಇಂದ್ರಾಣಿ ಮಾಡಿದ್ದೇನು?
ಇಂದ್ರಾಣಿಯೂ ಕೂಡ ತನ್ನ ಪತಿಯ ರಕ್ಷಣೆಗೆ ಒಂದು ದಾರವನ್ನು ಕಟ್ಟಿದ್ದಳಂತೆ. ರಾಕ್ಷಸರು ಮತ್ತು ದೇವತೆಗಳ ನಡುವಿನ ಯುದ್ಧದ ಸಮಯದಲ್ಲಿ ಇಂದ್ರಾಣಿ ತನ್ನ ಪತಿಯ ರಕ್ಷಣೆ ಕೋರಿ ಶ್ರೀಕೃಷ್ಣನ ಬಳಿಗೆ ಹೋಗುತ್ತಾಳೆ.
ಮೊದಲ ರಾಖಿಯನ್ನು ಇಂದ್ರಾಣಿ ತನ್ನ ಪತಿ ಇಂದ್ರನಿಗೆ ಕಟ್ಟಿದ್ದು ಗೊತ್ತಾ? ರಾಕ್ಷಸರು ಮತ್ತು ದೇವತೆಗಳ ನಡುವಿನ ಯುದ್ಧದ ಸಮಯದಲ್ಲಿ, ಇಂದ್ರಾಣಿ (ಶಚಿ) ತನ್ನ ಪತಿಗೆ ರಕ್ಷಣೆ ಕೋರಿ ಶ್ರೀಕೃಷ್ಣನ ಬಳಿಗೆ ಹೋದಳು.
ಶ್ರೀಕೃಷ್ಣನು ಅವಳಿಗೆ ಇಂದ್ರನ ಮಣಿಕಟ್ಟಿಗೆ ಕಟ್ಟಲು ಪವಿತ್ರ ದಾರವನ್ನು ಕೊಟ್ಟನು. ಈ ಕಥೆಯು ಪವಿತ್ರ ದಾರದ ಮಹತ್ವ ಏನು ಅನ್ನೋದನ್ನು ತಿಳಿಸಿಕೊಡುತ್ತದೆ. ಈ ಕಥೆಯು ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯದ ಬಗ್ಗೆ ಹೇಳುವುದಿಲ್ಲ. ಆದರೆ ಪವಿತ್ರ ದಾರದ ಶಕ್ತಿ ಮತ್ತು ಮಹತ್ವದ ಬಗ್ಗೆ ತಿಳಿಸಿಕೊಡುತ್ತದೆ.



Click it and Unblock the Notifications











