ಸಂಪತ್ತು ಹೆಚ್ಚಾಗಲು ರಕ್ಷಾ ಬಂಧನದ ದಿನ ಈ ಪರಿಹಾರ ಕೈಗೊಳ್ಳಿ!

ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾಬಂಧನವನ್ನು ಆಗಸ್ಟ್ 31 ರ ಗುರುವಾರದಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ಹಬ್ಬವನ್ನು ಶ್ರಾವನ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಆಗಸ್ಟ್ 30 ರಂದು ರಾತ್ರಿ 9 ಗಂಟೆಗೆ ಭದ್ರಾ ಕಾಲ ಕೊನೆಗೊಳ್ಳುತ್ತಿದೆ. ಆದ್ದರಿಂದ ಈ ಹಬ್ಬವನ್ನು ಆಗಸ್ಟ್ 31 ರಂದು ಮಂಗಳಕರ ಆಚರಣೆ ಮಾಡಲಾಗುತ್ತಿದೆ.

 Raksha Bandhan 2023 Astrological Remedies for Happiness, Prosperity and Money in Kannada.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಕ್ಷಾಬಂಧನದಂದು ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಅಂತ ಹೇಳಲಾಗುತ್ತದೆ. ಈ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ಐಶ್ವರ್ಯ ಮತ್ತು ಗೌರವವು ಹೆಚ್ಚಾಗುತ್ತದೆ. ಮತ್ತು ಸಹೋದರ ಮತ್ತು ಸಹೋದರಿಯರ ನಡುವಿನ ಸಂಬಂಧವೂ ಗಟ್ಟಿಯಾಗುತ್ತದೆ ಎಂದು ನಂಬಲಾಗಿದೆ. ಅಷ್ಟಕ್ಕೂ ರಕ್ಷಾ ಬಂಧನದ ದಿನದಂದು ಯಾವೆಲ್ಲಾ ವಿಶೇಷ ಕಾರ್ಯಗಳನ್ನು ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.

ಜೀವನದಲ್ಲಿ ಪ್ರಗತಿ ಸಾಧಿಸಬಹುದು!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಕ್ಷಾಬಂಧನ ಹಬ್ಬವನ್ನು ಹುಣ್ಣಿಮೆಯ ದಿನಾಂಕದಂದು ಆಚರಿಸಲಾಗುತ್ತದೆ. ಹುಣ್ಣಿಮೆಯು ಲಕ್ಷ್ಮಿ ಮತ್ತು ಚಂದ್ರದೇವರಿಗೆ ಸಂಬಂಧಿಸಿದೆ. ಈ ದಿನ ಸಹೋದರರು ಮತ್ತು ಸಹೋದರಿಯರು ಶಿವ ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಮತ್ತು ಸಂಜೆ ಚಂದ್ರನಿಗೆ ಹಾಲು ಮತ್ತು ಅಕ್ಷತೆಯನ್ನು ನೀರಿನಲ್ಲಿ ಬೆರೆಸಿ ಅರ್ಘ್ಯವನ್ನು ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಗ್ರಹಗಳ ಶುಭ ಫಲಗಳು ಪ್ರಾಪ್ತಿಯಾಗುತ್ತದೆ. ಮತ್ತು ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಂತೆ.

ಬಡತನವನ್ನು ತೊಡೆದುಹಾಕುತ್ತದೆ!

ಬಡತನವನ್ನು ತೊಲಗಿಸಲು ರಕ್ಷಾ ಬಂಧನದ ದಿನದಂದು ಸಹೋದರಿಯ ಕೈಯಿಂದ ಗುಲಾಬಿ ಬಟ್ಟೆಯಲ್ಲಿ ಅಕ್ಕಿ, ಒಂದು ರೂಪಾಯಿ ಮತ್ತು ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಇದಾದ ನಂತರ, ಸಹೋದರಿ ಸಹೋದರನಿಗೆ ರಾಖಿ ಕಟ್ಟುತ್ತಾಳೆ. ಮತ್ತು ಸಹೋದರನಿಗೆ ಸಿಹಿ ತಿಂಡಿ ತಿನ್ನಿಸಿ ಆತನ ಆಶೀರ್ವಾದ ಪಡೆಯಿರಿ. ನಂತರ ಗುಲಾಬಿ ಬಟ್ಟೆಯಲ್ಲಿ ಇಟ್ಟಿರುವ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಮತ್ತು ಧನ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ.

ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ!

ರಕ್ಷಾಬಂಧನದ ದಿನದಂದು ಕೆಂಪು ಬಣ್ಣದ ಮಣ್ಣಿನ ಮಡಕೆಯನ್ನು ಕೆಂಪು ಬಟ್ಟೆಯಿಂದ ಮುಚ್ಚಿ. ತೆಂಗಿನಕಾಯಿಯನ್ನು ಇಟ್ಟು ನಂತರ ರಾಖಿ ಕಟ್ಟಿ. ಇದಾದ ಬಳಿಕ ಈ ಮಡಕೆಯನ್ನು ಹರಿಯುವ ನೀರಿನಲ್ಲಿ ಹರಿಯಲು ಬಿಡಿ. ನಂತರ ಸಹೋದರ ಸಹೋದರಿಯರು ಒಟ್ಟಾಗಿ ಗಣೇಶನನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಮತ್ತು ಸಹೋದರ ಸಹೋದರಿಯರ ನಡುವೆ ಪ್ರೀತಿ ಉಳಿಯುತ್ತದೆ. ಇದರೊಂದಿಗೆ ಮನೆಯಲ್ಲಿ ಧನ-ಧಾನ್ಯಗಳ ಕೊರತೆ ಇರೋದಿಲ್ಲ. ಮತ್ತು ಗಣೇಶನ ಆಶೀರ್ವಾದದಿಂದ ಉದ್ಯೋಗ ಮತ್ತು ವ್ಯಾಪಾರ ಪ್ರಗತಿ.

ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ!

ರಕ್ಷಾ ಬಂಧನದ ದಿನದಂದು ಸಹೋದರರು ಮತ್ತು ಸಹೋದರಿಯರು ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಬೇಕು. ಮತ್ತು ಹಸುವಿಗೆ ಮೇವನ್ನು ನೀಡಬೇಕು. ನೀವು ಗೋಶಾಲೆಯಲ್ಲಿ ಹಸುಗಳ ಸೇವೆಗಾಗಿ ಹಣವನ್ನು ದಾನ ಮಾಡಬಹುದು. ಹೀಗೆ ಮಾಡುವುದರಿಂದ ಮುಕ್ಕೋಟಿ ದೇವತೆಗಳ ಆಶೀರ್ವಾದ ಸಿಗುತ್ತದೆ. ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ.

ತಾಯಿ ಲಕ್ಷ್ಮಿಯ ಆಶೀರ್ವಾದ ಇರುತ್ತದೆ!

ರಕ್ಷಾ ಬಂಧನದ ದಿನದಂದು ಸಹೋದರರು ಮತ್ತು ಸಹೋದರಿಯರು ಹುಣ್ಣಿಮೆಯ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಮತ್ತು ಲಕ್ಷ್ಮಿ ದೇವಿಯನ್ನು ಒಟ್ಟಿಗೆ ಪೂಜಿಸುತ್ತಾರೆ. ಇದರೊಂದಿಗೆ ಕೇಸರಿ ಮಿಶ್ರಿತ ಪಾಯಸವನ್ನು ಅರ್ಪಿಸಿ. ಇದಾದ ನಂತರ ಮಾತೆ ಲಕ್ಷ್ಮಿಯ ಮುಂದೆ ಸಹೋದರಿಯರು ಮತ್ತು ಸಹೋದರರಿಗೆ ರಾಖಿ ಕಟ್ಟಿಕೊಳ್ಳಿ. ಮತ್ತು ಕನಕಧಾರಾ ಸ್ತೋತ್ರವನ್ನು ಪಠಿಸಿ. ನಂತರ ಎಂಟು ಹುಡುಗಿಯರನ್ನು ಕರೆದು ಪಾಯಸ ಪ್ರಸಾದವನ್ನು ವಿತರಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿಯ ಆಶೀರ್ವಾದವು ಸದಾ ಇರುತ್ತದೆ. ಮತ್ತು ಜೀವನದಲ್ಲಿ ಪ್ರಗತಿಯ ಹಾದಿಯನ್ನು ಸಾಧಿಸಲಾಗುತ್ತದೆ.

English summary

Raksha Bandhan 2023 Astrological Remedies for Happiness, Prosperity and Money in Kannada.

Raksha Bandhan 2023 : Astrological Remedies for Happiness, Prosperity and Money. Read more.
Story first published: Monday, August 28, 2023, 19:45 [IST]
X
Desktop Bottom Promotion