Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಸ್ವಾತಿ ನಕ್ಷತ್ರ ಮಳೆ ನೀರಿನಲ್ಲಿದೆ ಔಷಧೀಯ ಗುಣಗಳು, ನಕ್ಷತ್ರ ಪ್ರಕಾರ ಮಳೆಯ ಲೆಕ್ಕಾಚಾರ
ನಮ್ಮ ಹಿರಿಯರು ನಕ್ಷತ್ರ ಹೇಳಿ ಮಳೆ ಬಗ್ಗೆ ಹೇಳುವುದನ್ನು ಕೇಳಿದ್ದೇವೆ. ಒಂದೊಂದು ಮಳೆಗೆ ಒಂದೊಂದು ವಿಶೇಷವಿದೆ ಎಂಬುವುದಾಗಿ ಹೇಳುತ್ತಾರೆ, ಯಾವ ನಕ್ಷತ್ರದಲ್ಲಿ ಮಳೆ ಬಂದರೆ ಈ ವರ್ಷ ಮಳೆ ಬರಲ್ಲ ಎಂದು ಗೊತ್ತಿರುತ್ತದೆ, ಯಾವ ಮಳೆಯಲ್ಲಿ ಎಂಥ ಶಕ್ತಿಯಿದೆ ಎಂಬುವುದು ಗೊತ್ತಿರುತ್ತದೆ.
ಆದರೆ ಅಂಥ ಅದ್ಭುತ ಜ್ಞಾನ ಈಗೀನ ಪೀಳಿಗೆಯಲ್ಲಿ ಕಡಿಮೆಯಾಗುತ್ತಿದೆ, ನಾವೆಲ್ಲಾ 100ಕ್ಕೆ 99, 100 ಅಂಕ ಗಳಿಸುವುದರಲ್ಲಿ ನಮ್ಮ ಗಮನಹರಿಸುತ್ತಿದ್ದೇವೆ, ದೊಡ್ಡ-ದೊಡ್ಡ ಕೆಲಸದ ಕಡೆಗೆ ಗಮನಹರಿಸುತ್ತಿದ್ದೇವೆ, ಆದರೆ ಈ ಮಳೆ, ಬೆಳೆ ಇವುಗಳ ಬಗ್ಗೆ ನಮಗೆ ಅಷ್ಟಾಗಿ ಗೊತ್ತಾಗುತ್ತಿಲ್ಲ, ಆದರೆ ಇಂಥ ಜ್ಞಾನ ಗಳಿಸುವುದು ಕೂಡ ಮುಖ್ಯ ನೋಡಿ.

ಈಗ ಮಳೆ ಸುರಿಯುವಾಗ ಅಯ್ಯೋ ಏಕೆ ಈ ಮಳೆ ಬರ್ತಾ ಇದೆ ಎಂದು ಹೇಳುವವರು ಇದ್ದಾರೆ, ಆದರೆ ಈಗ ಸುರಿದಿದ್ದು ಸ್ವಾತಿ ಮಳೆಯಂತೆ, ಈ ಸ್ವಾತಿ ಮಳೆಗೆ ಮೊದಲೆಲ್ಲಾ ಹಿರಿಯರು ಕಾಯುತ್ತಿದ್ದರು, ಏಕೆಂದರೆ ಈ ಸ್ವಾತಿ ಮಳೆಗೆ ಅಂಥ ಶಕ್ತಿ ಇದೆಯಂತೆ. ಈ ಮಳೆ ನೀರನ್ನು ಸಂಗ್ರಹಿಸಿ ಆ ನೀರು ಕುಡಿಯುವುದರಿಂದ ರೋಗ ರುಜಿನಗಳು ದೂರಾಗುವುದು ಎಂದು ಹೇಳಲಾಗುತ್ತದೆ. ಈ ಸ್ವಾತಿ ಮಳೆ ನೀರು ಸಮುದ್ರ ಚಿಪ್ಪುವಿನೊಳಗಡೆ ಬಿದ್ದರೆ ಅದು ಮುತ್ತಾಗುವುದು, ಗಿಡಗಳಿಗೆ ಬಿದ್ದರೆ ತುಂಬಾ ಒಳ್ಳೆಯದು ಹಾಗಾಗಿ ಈ ಸ್ವಾತಿ ಮಳೆಯನ್ನು ನಿರೀಕ್ಷೆ ಮಾಡುತ್ತಾರೆ.
ಸ್ವಾತಿ ಮಳೆ ಬಿದ್ದರೆ ಆ ವರ್ಷ ನೀರಿಗೆ ಅಭಾವವಿರಲ್ಲ ಎಂದು ಹೇಳಲಾಗುವುದು. ನೀರಿನ ಅಭಾವ ಉಂಟಾದರೆ ಬರಗಾಲ ಎಂಥ ದುಃಸ್ಥಿತಿ ಉಂಟು ಮಾಡುತ್ತದೆ ಎಂಬ ಅರಿವು ನಮಗೆಲ್ಲಾ ಇದೆ, ಆದರೆ ಈ ಸ್ವಾತಿ ಮಳೆ ಬಂದರೆ ನೀರಿನ ಅಭಾವ ಇರಲ್ಲ ಎಂದು ಹೇಳಲಾಗುವುದು.
ಈ ಸ್ವಾತಿ ಮಳೆ ಬಗ್ಗೆ ಅಜಯ್ ಕುಮಾರ್ ಶತ್ಮಾ ಎಂಬುವವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಮಳೆಯ ವಿಶೇಷತೆ ಬಗ್ಗೆ ಒಬ್ಬ ಮಹಿಳೆ ವಿವರಿಸುತ್ತಿರುವ ಅದ್ಭುತವಾದ ವೀಡಿಯೋ ಶೇರ್ ಮಾಡಿದ್ದಾರೆ.
ಮಲೆನಾಡಿನಲ್ಲಿ ಸ್ವಾತಿ ಮಳೆ ನೀರು ಸಂಗ್ರಹಿಸಿ ಹಾಲಿಗೆ ಹೆಪ್ಪು ಹಾಕಲಾಗುವುದು
ಮಲೆನಾಡಿನಲ್ಲಿ ಇದನ್ನು ಒಂದು ಸಂಪ್ರದಾಯದ ರೀತಿ ಮಾಡುತ್ತಾರೆ. ಇದರಿಂದ ಹಾಲು ಹಾಲು ಮೊಸರಾಗುವ ಜೈವಿಕ ಕ್ರಿಯೆಯನ್ನು ಹೊಸದಾಗಿ ಪ್ರಾರಂಭಿಸಿ ಗುಣಮಟ್ಟದ ಮೊಸರನ್ನು ತಯಾರಿಸಲಾಗುವುದು. ಇಲ್ಲದಿದ್ದರೆ ಹಾಲಿಗೆ ಸ್ವಲ್ಪ ಮೊಸರು ಅಥವಾ ಮಜ್ಜಿಗೆ ಹಾಕಿ ಹೆಪ್ಪು ಮಾಡುತ್ತಾರೆ. ಆದರೆ ಸ್ವಾತಿ ನಕ್ಷತ್ರ ಮಳೆ ಬಿದ್ದಾಗ ಹಾಲಿಗೆ ಈ ಸ್ವಾತಿ ಮಳೆ ನೀರು ಹಾಕಿ ಹೆಪ್ಪು ಹಾಕಲಾಗುವುದು.
ಇದೇ ಸಮಯದಲ್ಲಿ ಬೀರುವಿನಲ್ಲಿ ಮಡಚಿಟ್ಟ ದುಬಾರಿ ಬಟ್ಟೆ ಬಿಸಿಲಿಗೆ ಹಾಕುತ್ತಾರೆ
ಸ್ವಾತ ನಕ್ಷತ್ರ ಬಿಸಿಲಿಗೂ ಅಷ್ಟು ಶಕ್ತಿಯಿದೆ ಎಂದು ಹೇಳಲಾಗುವುದು. ಈ ಸಮಯದಲ್ಲಿ ರೇಷ್ಮೆ ಸೀರೆಗಳನ್ನು ಬಿಸಿಲಿಗೆ ಒಣ ಹಾಕಿ ತೆಗೆದು ಇಡುವುದರಿಂದ ಆ ಸೀರೆಗಳು ನೂಲು ಬಿಡುವುದು, ಹುಳಗಳು ತಿಂದು ಹಾಳಾಗುವುದು ಆಗಲ್ಲ ಅಂತಾರೆ.
ನಕ್ಷತ್ರ ಹೇಳಿ ಮಳೆಗಾಲ ಹೇಳಲಾಗುವುದು
ಅಶ್ವನಿ ನಕ್ಷತ್ರದಿಂದ ವಿಶಾಖ ನಕ್ಷತ್ರದವರೆಗೆ ಮಳೆಗಾಲ ಎಂದು ಹೇಳಲಾಗುವುದು, ಏಪ್ರಿಲ್ 13ಕ್ಕೆ ಅಶ್ವಿನಿ ನಕ್ಷತ್ರಕ್ಕೆ ಮಳೆ ಬರುತ್ತದೆ, ಈ ಸಮಯದಲ್ಲಿ ಸಾಮಾನ್ಯವಾಗಿ ಮಳೆ ಬರುತ್ತದೆ, ಕೃಷಿ ಚಟುವಟಿಕೆಗಳಿಗೆ ಈ ಸಮಯದಿಂದ ಶುರು ಮಾಡುತ್ತಾರೆ. ಭರಣಿ ನಕ್ಷತ್ರ ಏಪ್ರಿಲ್ 27ಕ್ಕೆ, ಈ ಸಮಯದಿಂದ ಮಳೆ ಶುರುವಾಗುವುದು, ಕೃತಿಕಾ ನಕ್ಷತ್ರಮೇ 11ಕ್ಕೆ ಅದಾದ ಬಳಿಕ ರೋಹಿಣಿ ನಕ್ಷತ್ರ ಮೇ 24ಕ್ಕೆ ಶುರುವಾಗುವುದು. ಜೂನ್ 21ರಿಂದ ಆರ್ಧ್ರಾ ನಕ್ಷತ್ರ, ಜುಲೈ ಪುನರ್ವಸು ನಕ್ಷತ್ರ, ಜುಲೈ 19 ಪುಷ್ಯಾ ನಕ್ಷತ್ರ, ಆಗಸ್ಟ್ 2ಕ್ಕೆ ಅಶ್ಲೇಷಾ ನಕ್ಷತ್ರ ಶುರು, ಜುಲೈ 16ರಿಂದ ಮಘಾ ನಕ್ಷತ್ರ ಪ್ರಾರಂಭ, ಜುಲೈ 30 ಹಸ್ತಾ , ಅಕ್ಟೋಬರ್ 10ರಿಂದ ಚಿತ್ರಾ, ಅಕ್ಟೋಬರ್ 23ರಿಂದ ಸ್ವಾತಿ ನಕ್ಷತ್ರ ನವೆಂಬರ್ 1ರಿಂದ ವಿಶಾಖ ನಕ್ಷತ್ರ ಇಲ್ಲಿಗೆ ಮಳೆಗಾಲ ಮುಗಿದು ಚಳಿಗಾಲ ಶುರು ಎಂಬ ಲೆಕ್ಕಾಚಾರ.



Click it and Unblock the Notifications