Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ!
ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
ಇಂದು ನಮ್ಮ ವಿಶ್ವದ ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರಿತ್ಯಗಳು ಸಹ ಒಂದಾಗಿವೆ. ವಿಶ್ವದ ಹಲವು ಭಾಗದಲ್ಲಿ ತಾಪಮಾನ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಇಲ್ಲವೆ ಅತಿವೃಷ್ಟಿ ಅನಾವೃಷ್ಟಿಗೆ ಒಳಗಾಗುವುದನ್ನು ನಾವು ನೋಡುತ್ತಿದ್ದೇವೆ. ನೈಸರ್ಗಿಕ ಸವಾಲುಗಳಿಂದು ಎಷ್ಟು ಪ್ರಮಾಣದಲ್ಲಿ ಪರಿಸರ ಸೇರಿದಂತೆ ಪ್ರಾಣಿ ಸಂಕುಲ ಹಾಗೂ ಮಾನವರಿಗೂ ಹಾನಿಯುಂಟು ಮಾಡುತ್ತಿದೆ.
ಮಳೆಯಾಗಬೇಕಿದ್ದ ಕಡೆ ಮಳೆಯಾಗುವುದಿಲ್ಲ, ಹಿಮಪಾತ ಸಂಭವಿಸುತ್ತಿದ್ದ ಕಡೆಗಳಲ್ಲಿ ಹಿಮವೇ ಮಾಯವಾಗಿದೆ, ಹಿಮಗಳಿಂದ ತುಂಬಿರುವ ಅಟ್ಲಾಂಟಿಕದಲ್ಲಿ ಹಿಮ ಕರಗಿ ನೀರಾಗಿ ಹರಿಯುತ್ತಿದೆ. ಇದು ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ಮಹಾ ನಗರಗಳು ಮುಳುಗುವ ಭೀತಿಯಲ್ಲಿವೆ. ಅಷ್ಟೇ ಅಲ್ಲ ಬಿಸಿಲಿನಿಂದ ಮರಳುಭೂಮಿಯಾಗಿದ್ದ ಜಾಗದಲ್ಲಿ ಮಳೆಯಾಗುತ್ತಿದೆ, ಪ್ರವಾಹ ಸಂಭವಿಸುತ್ತಿವೆ. ಹೀಗೆ ಹೇಳುತ್ತಾ ಹೋದರೆ ಪ್ರಕೃತಿಯ ವಿಚಿತ್ರಗಳು ಕಣ್ಣ ಮುಂದೆಯೇ ಬರುತ್ತವೆ.

ಕೆಲ ತಿಂಗಳ ಹಿಂದೆ ಸಾಮಾನ್ಯವಾಗಿ ಆರಂಭವಾಗಬೇಕಿದ್ದ ಮಂಜು ಜಮ್ಮು ಕಾಶ್ಮೀರದಿಂದ ಮಾಯವಾಗಿತ್ತು. ಹಿಮ ಬೀಳದೆ ಅಲ್ಲಿನ ಭೂಮಿ ಬರಡಂತೆ ಕಂಡುಬಂದಿತ್ತು. ಆದರೆ ಈಗ ಅಲ್ಲಿ ಮಂಜು ಬೀಳಲು ಆರಂಭವಾಗಿದೆ. ಆದರೆ ಮರುಭೂಮಿ ನಾಡು ಸೌದಿ ಅರೇಬಿಯಾದಲ್ಲಿ ಬಂಜರು ಭೂಮಿ ಈಗ ದಟ್ಟ ಹುಲ್ಲುಗಾವಲು ಆಗುತ್ತಿರುವುದನ್ನು ನಾವು ನೋಡಬಹುದು.
ಹಾಗಾದ್ರೆ ಈ ಮರುಭೂಮಿಯಲ್ಲಿ ಹಸಿರ ಸಿರಿ ಅರಳಿಸಲು ಸೌದಿ ಅರೇಬಿಯಾ ಮಾಡಿದ್ದೇನು?
ಸೌದಿ ಅರೇಬಿಯಾ ಕೇವಲ ಮರಳುಗಾಡು ಹೊಂದಿರುವ ಪ್ರದೇಶ. ಅಲ್ಲಿ ತೈಲ ಹೊರತುಪಡಿಸಿ ಬೇರೇನು ಸಿಗುವುದಿಲ್ಲ. ಬೆಳೆಗಳು, ಬೇಳೆ ಕಾಳು, ಮಸಾಲ ಸೇರಿ ಪ್ರತಿಯೊಂದು ವಸ್ತುವನ್ನೂ ಆಮದು ಮಾಡಿಕೊಳ್ಳುವ ದೇಶ. ಆದ್ರೆ ಅದೇ ದೇಶ ಇಡೀ ಮರಳುಗಾಡನ್ನು ದಟ್ಟ ಅರಣ್ಯವನ್ನಾಗಿ ಮಾಡಲು ಪಣತೊಟ್ಟಿದೆ.
2030ರ ವೇಳೆಗೆ ಸೌದಿ ಸರ್ಕಾರವು ಬರೋಬ್ಬರಿ 450 ಮಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. 2021ರ ಅಂತ್ಯದ ವೇಳೆಗೆ, ಸುಮಾರು 10 ಮಿಲಿಯನ್ ಮರಗಳನ್ನು ಈಗಾಗಲೇ ನೆಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಇನ್ನು ಸ್ಯಾಟಲೈಟ್ ಮೂಲಕ ತೆಗೆದ ಚಿತ್ರಗಳು ಸಹ ಮೊದಲಿಗಿಂತ ಸೌದಿ ಅರೇಬಿಯಾ ಹಸಿರಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಅಚ್ಚರಿ ಎಂದರೆ ಸೌದಿ ಒಟ್ಟಾರೆ 2.7 ಮಿಲಿಯನ್ ಹೆಕ್ಟೇರ್ ಕಾಡು ಪ್ರದೇಶ ಹೊಂದಿದೆ.
ಇಷ್ಟೇ ಅಲ್ಲ ಸ್ವಯಂಸೇವಕರ ಸಹಾಯದಿಂದಾಗಿ ಒಟ್ಟು 1 ಲಕ್ಷಕ್ಕೂ ಅಧಿಕ ಹಣ್ಣಿನ ಬೀಜಗಳು ಹಾಗೂ ವಿವಿಧ ರೀತಿಯ ಬೀಜಗಳನ್ನು ಹಾಕಿ ಅವುಗಳ ಪಾಲನೆಗೆ ಮುಂದಾಗಿದೆ. ಹೀಗಾಗಿ ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಈ ಮಳೆ ಇತ್ತೀಚಿನ ದಿನಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಇದು ಮರಳುಗಾಡನ್ನು ಹುಲ್ಲುಗಾವಲಾಗಿ ಈಗಾಗಲೇ ಪರಿವರ್ತಿಸಿದೆ.
ಕಳೆದ ಏಪ್ರಿಲ್ 14ರಂದು ಸೌದಿಯಲ್ಲಿ ಭಾರೀ ಮಳೆ ಸುರಿದಿದೆ. ಆಲಿಕಲ್ಲು ಸಹಿತ ಭೀಕರ ಮಳೆಯಾಗಿದ್ದು, ರಸ್ತೆಗಳು, ಬೀದಿಗಳು ಮರಳು ಕಾಣದಿರುಷ್ಟು ಆಲಿಕಲ್ಲುಗಳಿಂದ ತುಂಬಿಹೋಗಿತ್ತು. ಭೀಕರ ಬೇಸಿಗೆಯಲ್ಲಿ ಅಲ್ಲಿ ಮಳೆಯಾಗುತ್ತಿರುವುದು ಅಲ್ಲಿನ ನಿವಾಸಿಗಳಲ್ಲಿ ಹೊಸ ಹುರುಪು ತಂದಿದೆ.
ಈಗ ಸೌದಿ ಅರೇಬಿಯಾದಲ್ಲಿ ಸುರಿದ ಭಾರೀ ಮಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಣ್ಣು ಹಾಯಿಸಿದ ದೂರವೂ ಆಲಿಕಲ್ಲು ಸಹಿತ ಮಳೆಯಾಗುತ್ತಿರುವುದು ನೋಡಬಹುದು. ರಸ್ತೆಯಲ್ಲಿ ನೀರಿನಂತೆ ಆಲಿಕಲ್ಲು ತೇಳಿ ಬರುತ್ತಿವೆ. ಎಲ್ಲಾ ಕಡೆಗಳಲ್ಲಿ ಮರಳು ಇರುವ ಕಾರಣ ನೀರು ಹೀರಿಕೊಳ್ಳಲು ಸಹಾಯಕವಾಗಿದೆ. ಹೀಗಾಗಿ ಅಲ್ಲಿನ ನೆಲದಲ್ಲಿ ಈಗ ಹಸಿರು ಚಿಗುರು ಒಡೆಯುತ್ತಿದೆ. ಮರುಳುಗಾಡು ಮರೆಯಾಗಿ ಹಸಿರು ಕಂಗೊಳಿಸುವ ಕಾಲ ಸನ್ನಿಹಿತವಾಗಿದೆ.



Click it and Unblock the Notifications