Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
ಇಂದು ನಮ್ಮ ವಿಶ್ವದ ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರಿತ್ಯಗಳು ಸಹ ಒಂದಾಗಿವೆ. ವಿಶ್ವದ ಹಲವು ಭಾಗದಲ್ಲಿ ತಾಪಮಾನ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಇಲ್ಲವೆ ಅತಿವೃಷ್ಟಿ ಅನಾವೃಷ್ಟಿಗೆ ಒಳಗಾಗುವುದನ್ನು ನಾವು ನೋಡುತ್ತಿದ್ದೇವೆ. ನೈಸರ್ಗಿಕ ಸವಾಲುಗಳಿಂದು ಎಷ್ಟು ಪ್ರಮಾಣದಲ್ಲಿ ಪರಿಸರ ಸೇರಿದಂತೆ ಪ್ರಾಣಿ ಸಂಕುಲ ಹಾಗೂ ಮಾನವರಿಗೂ ಹಾನಿಯುಂಟು ಮಾಡುತ್ತಿದೆ.
ಮಳೆಯಾಗಬೇಕಿದ್ದ ಕಡೆ ಮಳೆಯಾಗುವುದಿಲ್ಲ, ಹಿಮಪಾತ ಸಂಭವಿಸುತ್ತಿದ್ದ ಕಡೆಗಳಲ್ಲಿ ಹಿಮವೇ ಮಾಯವಾಗಿದೆ, ಹಿಮಗಳಿಂದ ತುಂಬಿರುವ ಅಟ್ಲಾಂಟಿಕದಲ್ಲಿ ಹಿಮ ಕರಗಿ ನೀರಾಗಿ ಹರಿಯುತ್ತಿದೆ. ಇದು ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ಮಹಾ ನಗರಗಳು ಮುಳುಗುವ ಭೀತಿಯಲ್ಲಿವೆ. ಅಷ್ಟೇ ಅಲ್ಲ ಬಿಸಿಲಿನಿಂದ ಮರಳುಭೂಮಿಯಾಗಿದ್ದ ಜಾಗದಲ್ಲಿ ಮಳೆಯಾಗುತ್ತಿದೆ, ಪ್ರವಾಹ ಸಂಭವಿಸುತ್ತಿವೆ. ಹೀಗೆ ಹೇಳುತ್ತಾ ಹೋದರೆ ಪ್ರಕೃತಿಯ ವಿಚಿತ್ರಗಳು ಕಣ್ಣ ಮುಂದೆಯೇ ಬರುತ್ತವೆ.

ಕೆಲ ತಿಂಗಳ ಹಿಂದೆ ಸಾಮಾನ್ಯವಾಗಿ ಆರಂಭವಾಗಬೇಕಿದ್ದ ಮಂಜು ಜಮ್ಮು ಕಾಶ್ಮೀರದಿಂದ ಮಾಯವಾಗಿತ್ತು. ಹಿಮ ಬೀಳದೆ ಅಲ್ಲಿನ ಭೂಮಿ ಬರಡಂತೆ ಕಂಡುಬಂದಿತ್ತು. ಆದರೆ ಈಗ ಅಲ್ಲಿ ಮಂಜು ಬೀಳಲು ಆರಂಭವಾಗಿದೆ. ಆದರೆ ಮರುಭೂಮಿ ನಾಡು ಸೌದಿ ಅರೇಬಿಯಾದಲ್ಲಿ ಬಂಜರು ಭೂಮಿ ಈಗ ದಟ್ಟ ಹುಲ್ಲುಗಾವಲು ಆಗುತ್ತಿರುವುದನ್ನು ನಾವು ನೋಡಬಹುದು.
ಹಾಗಾದ್ರೆ ಈ ಮರುಭೂಮಿಯಲ್ಲಿ ಹಸಿರ ಸಿರಿ ಅರಳಿಸಲು ಸೌದಿ ಅರೇಬಿಯಾ ಮಾಡಿದ್ದೇನು?
ಸೌದಿ ಅರೇಬಿಯಾ ಕೇವಲ ಮರಳುಗಾಡು ಹೊಂದಿರುವ ಪ್ರದೇಶ. ಅಲ್ಲಿ ತೈಲ ಹೊರತುಪಡಿಸಿ ಬೇರೇನು ಸಿಗುವುದಿಲ್ಲ. ಬೆಳೆಗಳು, ಬೇಳೆ ಕಾಳು, ಮಸಾಲ ಸೇರಿ ಪ್ರತಿಯೊಂದು ವಸ್ತುವನ್ನೂ ಆಮದು ಮಾಡಿಕೊಳ್ಳುವ ದೇಶ. ಆದ್ರೆ ಅದೇ ದೇಶ ಇಡೀ ಮರಳುಗಾಡನ್ನು ದಟ್ಟ ಅರಣ್ಯವನ್ನಾಗಿ ಮಾಡಲು ಪಣತೊಟ್ಟಿದೆ.
2030ರ ವೇಳೆಗೆ ಸೌದಿ ಸರ್ಕಾರವು ಬರೋಬ್ಬರಿ 450 ಮಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. 2021ರ ಅಂತ್ಯದ ವೇಳೆಗೆ, ಸುಮಾರು 10 ಮಿಲಿಯನ್ ಮರಗಳನ್ನು ಈಗಾಗಲೇ ನೆಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಇನ್ನು ಸ್ಯಾಟಲೈಟ್ ಮೂಲಕ ತೆಗೆದ ಚಿತ್ರಗಳು ಸಹ ಮೊದಲಿಗಿಂತ ಸೌದಿ ಅರೇಬಿಯಾ ಹಸಿರಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಅಚ್ಚರಿ ಎಂದರೆ ಸೌದಿ ಒಟ್ಟಾರೆ 2.7 ಮಿಲಿಯನ್ ಹೆಕ್ಟೇರ್ ಕಾಡು ಪ್ರದೇಶ ಹೊಂದಿದೆ.
ಇಷ್ಟೇ ಅಲ್ಲ ಸ್ವಯಂಸೇವಕರ ಸಹಾಯದಿಂದಾಗಿ ಒಟ್ಟು 1 ಲಕ್ಷಕ್ಕೂ ಅಧಿಕ ಹಣ್ಣಿನ ಬೀಜಗಳು ಹಾಗೂ ವಿವಿಧ ರೀತಿಯ ಬೀಜಗಳನ್ನು ಹಾಕಿ ಅವುಗಳ ಪಾಲನೆಗೆ ಮುಂದಾಗಿದೆ. ಹೀಗಾಗಿ ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಈ ಮಳೆ ಇತ್ತೀಚಿನ ದಿನಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಇದು ಮರಳುಗಾಡನ್ನು ಹುಲ್ಲುಗಾವಲಾಗಿ ಈಗಾಗಲೇ ಪರಿವರ್ತಿಸಿದೆ.
ಕಳೆದ ಏಪ್ರಿಲ್ 14ರಂದು ಸೌದಿಯಲ್ಲಿ ಭಾರೀ ಮಳೆ ಸುರಿದಿದೆ. ಆಲಿಕಲ್ಲು ಸಹಿತ ಭೀಕರ ಮಳೆಯಾಗಿದ್ದು, ರಸ್ತೆಗಳು, ಬೀದಿಗಳು ಮರಳು ಕಾಣದಿರುಷ್ಟು ಆಲಿಕಲ್ಲುಗಳಿಂದ ತುಂಬಿಹೋಗಿತ್ತು. ಭೀಕರ ಬೇಸಿಗೆಯಲ್ಲಿ ಅಲ್ಲಿ ಮಳೆಯಾಗುತ್ತಿರುವುದು ಅಲ್ಲಿನ ನಿವಾಸಿಗಳಲ್ಲಿ ಹೊಸ ಹುರುಪು ತಂದಿದೆ.
ಈಗ ಸೌದಿ ಅರೇಬಿಯಾದಲ್ಲಿ ಸುರಿದ ಭಾರೀ ಮಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಣ್ಣು ಹಾಯಿಸಿದ ದೂರವೂ ಆಲಿಕಲ್ಲು ಸಹಿತ ಮಳೆಯಾಗುತ್ತಿರುವುದು ನೋಡಬಹುದು. ರಸ್ತೆಯಲ್ಲಿ ನೀರಿನಂತೆ ಆಲಿಕಲ್ಲು ತೇಳಿ ಬರುತ್ತಿವೆ. ಎಲ್ಲಾ ಕಡೆಗಳಲ್ಲಿ ಮರಳು ಇರುವ ಕಾರಣ ನೀರು ಹೀರಿಕೊಳ್ಳಲು ಸಹಾಯಕವಾಗಿದೆ. ಹೀಗಾಗಿ ಅಲ್ಲಿನ ನೆಲದಲ್ಲಿ ಈಗ ಹಸಿರು ಚಿಗುರು ಒಡೆಯುತ್ತಿದೆ. ಮರುಳುಗಾಡು ಮರೆಯಾಗಿ ಹಸಿರು ಕಂಗೊಳಿಸುವ ಕಾಲ ಸನ್ನಿಹಿತವಾಗಿದೆ.



Click it and Unblock the Notifications