Latest Updates
-
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ!
ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
ಇಂದು ನಮ್ಮ ವಿಶ್ವದ ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರಿತ್ಯಗಳು ಸಹ ಒಂದಾಗಿವೆ. ವಿಶ್ವದ ಹಲವು ಭಾಗದಲ್ಲಿ ತಾಪಮಾನ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಇಲ್ಲವೆ ಅತಿವೃಷ್ಟಿ ಅನಾವೃಷ್ಟಿಗೆ ಒಳಗಾಗುವುದನ್ನು ನಾವು ನೋಡುತ್ತಿದ್ದೇವೆ. ನೈಸರ್ಗಿಕ ಸವಾಲುಗಳಿಂದು ಎಷ್ಟು ಪ್ರಮಾಣದಲ್ಲಿ ಪರಿಸರ ಸೇರಿದಂತೆ ಪ್ರಾಣಿ ಸಂಕುಲ ಹಾಗೂ ಮಾನವರಿಗೂ ಹಾನಿಯುಂಟು ಮಾಡುತ್ತಿದೆ.
ಮಳೆಯಾಗಬೇಕಿದ್ದ ಕಡೆ ಮಳೆಯಾಗುವುದಿಲ್ಲ, ಹಿಮಪಾತ ಸಂಭವಿಸುತ್ತಿದ್ದ ಕಡೆಗಳಲ್ಲಿ ಹಿಮವೇ ಮಾಯವಾಗಿದೆ, ಹಿಮಗಳಿಂದ ತುಂಬಿರುವ ಅಟ್ಲಾಂಟಿಕದಲ್ಲಿ ಹಿಮ ಕರಗಿ ನೀರಾಗಿ ಹರಿಯುತ್ತಿದೆ. ಇದು ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ಮಹಾ ನಗರಗಳು ಮುಳುಗುವ ಭೀತಿಯಲ್ಲಿವೆ. ಅಷ್ಟೇ ಅಲ್ಲ ಬಿಸಿಲಿನಿಂದ ಮರಳುಭೂಮಿಯಾಗಿದ್ದ ಜಾಗದಲ್ಲಿ ಮಳೆಯಾಗುತ್ತಿದೆ, ಪ್ರವಾಹ ಸಂಭವಿಸುತ್ತಿವೆ. ಹೀಗೆ ಹೇಳುತ್ತಾ ಹೋದರೆ ಪ್ರಕೃತಿಯ ವಿಚಿತ್ರಗಳು ಕಣ್ಣ ಮುಂದೆಯೇ ಬರುತ್ತವೆ.

ಕೆಲ ತಿಂಗಳ ಹಿಂದೆ ಸಾಮಾನ್ಯವಾಗಿ ಆರಂಭವಾಗಬೇಕಿದ್ದ ಮಂಜು ಜಮ್ಮು ಕಾಶ್ಮೀರದಿಂದ ಮಾಯವಾಗಿತ್ತು. ಹಿಮ ಬೀಳದೆ ಅಲ್ಲಿನ ಭೂಮಿ ಬರಡಂತೆ ಕಂಡುಬಂದಿತ್ತು. ಆದರೆ ಈಗ ಅಲ್ಲಿ ಮಂಜು ಬೀಳಲು ಆರಂಭವಾಗಿದೆ. ಆದರೆ ಮರುಭೂಮಿ ನಾಡು ಸೌದಿ ಅರೇಬಿಯಾದಲ್ಲಿ ಬಂಜರು ಭೂಮಿ ಈಗ ದಟ್ಟ ಹುಲ್ಲುಗಾವಲು ಆಗುತ್ತಿರುವುದನ್ನು ನಾವು ನೋಡಬಹುದು.
ಹಾಗಾದ್ರೆ ಈ ಮರುಭೂಮಿಯಲ್ಲಿ ಹಸಿರ ಸಿರಿ ಅರಳಿಸಲು ಸೌದಿ ಅರೇಬಿಯಾ ಮಾಡಿದ್ದೇನು?
ಸೌದಿ ಅರೇಬಿಯಾ ಕೇವಲ ಮರಳುಗಾಡು ಹೊಂದಿರುವ ಪ್ರದೇಶ. ಅಲ್ಲಿ ತೈಲ ಹೊರತುಪಡಿಸಿ ಬೇರೇನು ಸಿಗುವುದಿಲ್ಲ. ಬೆಳೆಗಳು, ಬೇಳೆ ಕಾಳು, ಮಸಾಲ ಸೇರಿ ಪ್ರತಿಯೊಂದು ವಸ್ತುವನ್ನೂ ಆಮದು ಮಾಡಿಕೊಳ್ಳುವ ದೇಶ. ಆದ್ರೆ ಅದೇ ದೇಶ ಇಡೀ ಮರಳುಗಾಡನ್ನು ದಟ್ಟ ಅರಣ್ಯವನ್ನಾಗಿ ಮಾಡಲು ಪಣತೊಟ್ಟಿದೆ.
2030ರ ವೇಳೆಗೆ ಸೌದಿ ಸರ್ಕಾರವು ಬರೋಬ್ಬರಿ 450 ಮಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. 2021ರ ಅಂತ್ಯದ ವೇಳೆಗೆ, ಸುಮಾರು 10 ಮಿಲಿಯನ್ ಮರಗಳನ್ನು ಈಗಾಗಲೇ ನೆಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಇನ್ನು ಸ್ಯಾಟಲೈಟ್ ಮೂಲಕ ತೆಗೆದ ಚಿತ್ರಗಳು ಸಹ ಮೊದಲಿಗಿಂತ ಸೌದಿ ಅರೇಬಿಯಾ ಹಸಿರಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಅಚ್ಚರಿ ಎಂದರೆ ಸೌದಿ ಒಟ್ಟಾರೆ 2.7 ಮಿಲಿಯನ್ ಹೆಕ್ಟೇರ್ ಕಾಡು ಪ್ರದೇಶ ಹೊಂದಿದೆ.
ಇಷ್ಟೇ ಅಲ್ಲ ಸ್ವಯಂಸೇವಕರ ಸಹಾಯದಿಂದಾಗಿ ಒಟ್ಟು 1 ಲಕ್ಷಕ್ಕೂ ಅಧಿಕ ಹಣ್ಣಿನ ಬೀಜಗಳು ಹಾಗೂ ವಿವಿಧ ರೀತಿಯ ಬೀಜಗಳನ್ನು ಹಾಕಿ ಅವುಗಳ ಪಾಲನೆಗೆ ಮುಂದಾಗಿದೆ. ಹೀಗಾಗಿ ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಈ ಮಳೆ ಇತ್ತೀಚಿನ ದಿನಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಇದು ಮರಳುಗಾಡನ್ನು ಹುಲ್ಲುಗಾವಲಾಗಿ ಈಗಾಗಲೇ ಪರಿವರ್ತಿಸಿದೆ.
ಕಳೆದ ಏಪ್ರಿಲ್ 14ರಂದು ಸೌದಿಯಲ್ಲಿ ಭಾರೀ ಮಳೆ ಸುರಿದಿದೆ. ಆಲಿಕಲ್ಲು ಸಹಿತ ಭೀಕರ ಮಳೆಯಾಗಿದ್ದು, ರಸ್ತೆಗಳು, ಬೀದಿಗಳು ಮರಳು ಕಾಣದಿರುಷ್ಟು ಆಲಿಕಲ್ಲುಗಳಿಂದ ತುಂಬಿಹೋಗಿತ್ತು. ಭೀಕರ ಬೇಸಿಗೆಯಲ್ಲಿ ಅಲ್ಲಿ ಮಳೆಯಾಗುತ್ತಿರುವುದು ಅಲ್ಲಿನ ನಿವಾಸಿಗಳಲ್ಲಿ ಹೊಸ ಹುರುಪು ತಂದಿದೆ.
ಈಗ ಸೌದಿ ಅರೇಬಿಯಾದಲ್ಲಿ ಸುರಿದ ಭಾರೀ ಮಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಣ್ಣು ಹಾಯಿಸಿದ ದೂರವೂ ಆಲಿಕಲ್ಲು ಸಹಿತ ಮಳೆಯಾಗುತ್ತಿರುವುದು ನೋಡಬಹುದು. ರಸ್ತೆಯಲ್ಲಿ ನೀರಿನಂತೆ ಆಲಿಕಲ್ಲು ತೇಳಿ ಬರುತ್ತಿವೆ. ಎಲ್ಲಾ ಕಡೆಗಳಲ್ಲಿ ಮರಳು ಇರುವ ಕಾರಣ ನೀರು ಹೀರಿಕೊಳ್ಳಲು ಸಹಾಯಕವಾಗಿದೆ. ಹೀಗಾಗಿ ಅಲ್ಲಿನ ನೆಲದಲ್ಲಿ ಈಗ ಹಸಿರು ಚಿಗುರು ಒಡೆಯುತ್ತಿದೆ. ಮರುಳುಗಾಡು ಮರೆಯಾಗಿ ಹಸಿರು ಕಂಗೊಳಿಸುವ ಕಾಲ ಸನ್ನಿಹಿತವಾಗಿದೆ.



Click it and Unblock the Notifications