Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಂಗಾ ನದಿ ತಳದಲ್ಲಿ ರೈಲು ಹಳಿ ಪತ್ತೆ..! ಅಚ್ಚರಿಗೊಂಡ ಅಧಿಕಾರಿಗಳು..!
ಭಾರತದ ಒಂದೊಂದು ಭಾಗದಲ್ಲಿರುವ ಒಂದೊಂದು ರಹಸ್ಯಗಳು ನಿಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ಭೂಮಿಯ ಒಳಗೆ ಎಷ್ಟೊಂದು ರಹಸ್ಯಗಳು ಅಡಗಿವೆ ಎಂಬುದನ್ನು ನಾವು ಊಹಿಸಲು ಸಹ ಸಾಧ್ಯವಿಲ್ಲ. ಅದರಲ್ಲೂ ಸಾಗರದ ಒಳಗೆ ಎಷ್ಟೊಂದು ಕುತೂಹಲವಿದೆ ಎಂಬುದನ್ನು ಇಂದಿಗೂ ಅಳೆಯಲು ಸಾಧ್ಯವಾಗಿಲ್ಲ. ಹಾಗೆ ಸಾಗರದಲ್ಲಿ ಮುಳುಗಿರುವ ದ್ವಾರಕ ನಗರಿ ಕೂಡ ಹಲವು ಕುತೂಹಲಗಳ ತನ್ನಲ್ಲಿಟ್ಟುಕೊಂಡಿದೆ.
ಆದ್ರೆ ನಾವೀಗ ಹೇಳುತ್ತಿರುವುದು ದ್ವಾರಕದ ಕುತೂಹಲದ ಬಗ್ಗೆ ಅಲ್ಲ. ಬದಲಿಗೆ ಗಂಗಾ ನದಿಯ ಅಚ್ಚರಿಯ ಕುರಿತು. ಹೌದು ಭಾರತದ ಪವಿತ್ರ ನದಿ ಎಂದು ಕರೆಯಲಾಗುವ ಗಂಗಾ ನದಿ ಉತ್ತರ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ದಕ್ಷಿಣದಲ್ಲಿ ಕಾವೇರಿಯಂತೆ ಉತ್ತರದಲ್ಲಿ ಗಂಗೆಯನ್ನು ಪವಿತ್ರ ನದಿ ಎಂದು ನಂಬಲಾಗಿದೆ.

ಗಂಗೆ ಹಲವು ಪ್ರಮುಖ ತಾಣಗಳ ಹಾದು ಹೋಗುತ್ತದೆ. ಗಂಗಾ ನದಿಯ ತೀರದಲ್ಲಿ ಪ್ರಮುಖ ಹಿಂದೂ ನಗರಗಳು, ಪುರಾತನ ನಗರಗಳು ಬರುತ್ತವೆ. ಇತ್ತೀಚಿಗೆ ಗಂಗಾ ನದಿಯನ್ನು ಸ್ವಚ್ಛ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೋಟಿ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಗಂಗಾ ಸ್ನಾನದ ಪಾವಿತ್ರತೆ ಕಾಪಾಡಲು ಒಣ ತೊಡಲಾಗಿದೆ.
ಇದೆಲ್ಲದರ ನಡುವೆ ಗಂಗಾ ನದಿಯಿಂದ ಮೇಲೆದ್ದಿರುವ ಅಚ್ಚರಿಯ ರೈಲ್ವೆ ಹಳಿಯೊಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹೌದು ನದಿಯ ಆಳದಿಂದ ರೈಲ್ವೆ ಹಳಿ ಗೋಚರವಾಗಿರುವುದು ಪುರಾತತ್ವ ಇಲಾಖೆ ಅಧಿಕಾರಿಗಳ ಕಣ್ಣರಳಿಸಿದೆ. ಹಾಗೆ ಈ ಕೌತುಕ ಕಣ್ತುಂಬಿಕೊಳ್ಳಲು ಜನರ ದಂಡೇ ಅಲ್ಲಿ ಸೇರುತ್ತಿದೆ. ಗಂಗಾ ನದಿಯ ನೀರು ಕಡಿಮೆಯಾಗಿರುವುದರಿಂದ ಈ ರೈಲ್ವೆ ಹಳಿ ಮೇಲೆ ಬಂದಿದೆ.
ಹರಿದ್ವಾರ ರೈಲು ನಿಲ್ದಾಣದಿಂದ ಸುಮಾರು 3 ಕಿಮೀ ದೂರದಲ್ಲಿ ಗಂಗಾ ನೀರಿನ ಕೆಳಗೆ ಹಳೆಯ ರೈಲು ಹಳಿಗಳು ಗೋಚರವಾಗಿದೆ. ಈ ಹಳಿಗಳು ಸುಮಾರು 1850ರಲ್ಲಿ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಬ್ರಿಟಿಷರು ಗಂಗಾ ಕಾಲುವೆಯ ನಿರ್ಮಾಣಕ್ಕೆ ಕಚ್ಚಾ ವಸ್ತುಗಳ ಸಾಗಿಸಲೆಂದು ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ.
ಅಥವಾ ಈ ಹಿಂದೆ ಗಂಗಾ ನದಿಯ ನೀರಿನ ಮಟ್ಟ ಇರಲಿಲ್ಲವೇ? ಇಲ್ಲಿ ರೈಲುಗಳು ಓಡಾಡಿದ್ದವೇ ಎಂಬ ಕುತೂಹಲ ಕೂಡ ಮೂಡಿದೆ. ಪ್ರತಿ ವರ್ಷ ಉತ್ತರ ಪ್ರದೇಶದ ನೀರಾವರಿ ಇಲಾಖೆಯು ನಿರ್ವಹಣೆಗಾಗಿ ಗಂಗಾ ಕಾಲುವೆಯನ್ನು ಮುಚ್ಚುತ್ತದೆ. ಈ ವೇಳೆ ಕಾಲುವೆಯಲ್ಲಿ ನೀರು ಇಳಿಯುತ್ತದೆ, ಇದರಿಂದಾಗಿ ಹಳೆಯ ವಸ್ತುಗಳು ಮೇಲಕ್ಕೆ ಬರುತ್ತವೆ. ಆದ್ರೆ ಈ ಬಾರಿ ರೈಲು ಹಳಿ ಕಾಣಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಆದರೆ ಈ ಹಳಿಗಳು ರೈಲು ಓಡಿಸುವ ಬದಲಾಗಿ ಕೈಗಾಡಿಗಳನ್ನು ಇದರ ಮೇಲೆ ಬಳಸಿರಬಹುದು. ಕಚ್ಚಾ ವಸ್ತುಗಳನ್ನು ಸಾಗಿಸುವ ಉದ್ದೇಶದಿಂದ ಕೈ ಗಾಡಿಗಳ ಓಡಿಸುವ ಸಲುವಾಗಿಯೇ ಇದನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.
ಇದು ಬ್ರಿಟಿಷ್ ಅಧಿಕಾರಿ ಥಾಮಸ್ ಕೌಟ್ಲಿ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಿರಬಹುದು. ಹಾಗೆ ಅದೆಷ್ಟು ಗಟ್ಟಿತನದಿಂದ ಕೂಡಿದೆ ಅಂದರೆ ನೂರಾರು ವರ್ಷ ನೀರಿನಿಳಗೆ ಇದ್ದರೂ ಕೂಡ ಒಂಚೂರು ಹಾಳಾಗದೆ ಹಾಗೆ ಉಳಿದಿರುವುದನ್ನು ಕಂಡು ಜನರು ನಿಬ್ಬೆರಗಾಗಿದ್ದಾರೆ. ಹಾಗೆ ಅವರಿಗೆ ಹಿಂದೊಮ್ಮೆ ಇಲ್ಲಿ ರೈಲು ಚಲಿಸಿತ್ತೆ ಎಂಬ ಪ್ರಶ್ನೆ ಮೂಡಿರುವ ಜೊತೆಗೆ ಅನೇಕ ಪ್ರಶ್ನೆಗಳು ಕಾಡುತ್ತಿವೆ.



Click it and Unblock the Notifications