Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹರಕಲು ಗುಡಿಸಲಿನಿಂದ ಐಷಾರಾಮಿ ಬಂಗಲೆ, ಕಾರು: ಈ ವ್ಯಕ್ತಿಯ ಸ್ಫೂರ್ತಿದಾಯಕ ಕಥೆ ಇದು..!!
ವ್ಯಕ್ತಿಗಳ ಜೀವನದಲ್ಲಿ ಯಾವಾಗ ಯಶಸ್ಸು ಅನ್ನೋದು ಬರುತ್ತೆ ಅನ್ನೋದನ್ನು ಊಹಿಸಲು ಕೂಡ ಸಾಧ್ಯವಿರೋದಿಲ್ಲ. ಕಷ್ಟ ಪಟ್ಟರೆ ಪ್ರತಿಫಲ ಸಿಗುತ್ತೆ ಅನ್ನೋ ಮಾತು ಹಲವರಿಗೆ ನಿಜವಾಗುತ್ತೆ. ಆದ್ರೆ ತಾಳ್ಮೆಯಿಂದ ಕಾಯಬೇಕು ಅನ್ನೋದು ಎಲ್ಲಾ ಸಮಯದಲ್ಲೂ ನಿಜವಾದ ವಿಚಾರವಾಗಿದೆ. ಹೀಗೆ ನಾವಿಂದು ಒಂದು ಕಾಲದಲ್ಲಿ ಗುಡಿಸಲಲ್ಲಿ ವಾಸವಿದ್ದಾತ ಈಗ ದೊಡ್ಡ ಶ್ರೀಮಂತನಾಗಿ ಬೆಳದ ಕಥೆ ನೋಡೋಣ.
ಗಣರಾಜ್ಯೋತ್ಸವದ ದಿನದಂದು ಈ ವ್ಯಕ್ತಿಯ ಸ್ಫೂರ್ತಿದಾಯಕ ಕಥೆಯ ಕುರಿತು ನಾವಿಂದು ತಿಳಿದುಕೊಳ್ಳೋಣ. ಆತ ಯಾರು ಗುಡಿಸಲಿನಿಂದ ದುಬೈನಲ್ಲಿ ಐಷಾರಾಮಿ ಮನೆ, ಕಾರು ಸಂಪಾದಿಸಿದ್ದು ಹೇಗೆ? ಒಡಿಶಾದ ಈ ಹಳ್ಳಿ ಹುಡುಗ ದೊಡ್ಡ ಶ್ರೀಮಂತ ಆಗಿದ್ದೇಕೆ ಎನ್ನುವ ಈ ಸ್ಪೂರ್ತಿದಾಯಕ ಕಥೆಯನ್ನು ನಾವಿಂದು ತಿಳಿದುಕೊಳ್ಳೋಣ.

ಒಡಿಶಾದ ರೂರ್ಕೆಲಾದ ಚಿಕ್ಕ ಗುಡಿಸಲಿನಲ್ಲಿ ವಾಸವಿದ್ದ ಸೌಮೇಂದ್ರ ಚೆನಾ ಎಂಬಾತ ಈಗ ದುಬೈನಲ್ಲಿ ಐಷಾರಾಮಿ ಬಂಗಲೆಯಲ್ಲಿ ನೆಲೆಸಿದ್ದಾರೆ. ಅವರೇ ಎಕ್ಸ್ ಖಾತೆಯಲ್ಲಿ ತಮ್ಮ 17 ವರ್ಷದ ಕಠಿಣ ಪರಿಶ್ರಮದ ಜೀವನದ ಕುರಿತು ಹೇಳಿಕೊಂಡಿದ್ದಾರೆ. ತಮ್ಮ ಹುಟ್ಟೂರಿಗೆ ಕುಟುಂಬದ ಜೊತೆಗೆ ಆಗಮಿಸಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಉದ್ಯಮಿ ಸೌಮೇಂದ್ರ ಜೆನಾ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಒಂದು ಕಡೆ ತಮ್ಮ ಹುಟ್ಟೂರಿನ ಗುಡಿಸಲಿನಂತಹ ಮನೆ ಇನ್ನೊಂದು ಕಡೆ ಐಷಾರಾಮಿ ಕಾರುಗಳ ಜೊತೆಗೆ ದುಬೈನ ಬಂಗಲೆಯನ್ನು ಅವರು ಹಂಚಿಕೊಂಡಿದ್ದಾರೆ. ರೂರ್ಕೆಲಾದಲ್ಲಿರುವ ಅವರ ಬಾಲ್ಯದ ಮನೆ, ಅವರು ತಮ್ಮ ಬಾಲ್ಯದ ವರ್ಷಗಳನ್ನು ಕಳೆದ ಸಣ್ಣ ಮತ್ತು ಶಿಥಿಲಗೊಂಡ ಮನೆಯಿದ್ದರೆ ಮತ್ತೊಂದು ಕಡೆ ಐಷಾರಾಮಿ ಮನೆ ಐಷಾರಾಮಿ ಕಾರುಗಳ ನೋಡಬಹುದು. ಅಲ್ಲಿ ಪೋರ್ಷೆ ಟೇಕನ್, ಜೀವ್ಯಾಗನ್ ಬ್ರಾಬಸ್ 800 ಕಾರುಗಳ ನಾವು ನೋಡಬಹುದು. ಇವುಗಳ ಬೆಲೆ ಕೋಟಿ ದಾಟಬಹುದು.
ಇದು ಆಗ ನನ್ನ ಮನೆಯಾಗಿತ್ತು - ಒಡಿಶಾದ ಸಣ್ಣ ಪಟ್ಟಣ, ರೂರ್ಕೆಲಾ ಅಲ್ಲಿ ನಾನು ಹುಟ್ಟಿ, ಬೆಳೆದು 12 ನೇ ತರಗತಿಯವರೆಗೆ (1988-2006) ಅಧ್ಯಯನ ಮಾಡಿದೆ. ನೆನಪುಗಳಿಗಾಗಿ 2021 ರಲ್ಲಿ ಮತ್ತೆ ಭೇಟಿ ನೀಡಿದ್ದೆ! ಇಂದು, ದುಬೈನಲ್ಲಿರುವ ನನ್ನ ಮನೆ 17 ವರ್ಷಗಳ ನಿರಂತರ ಕಠಿಣ ಪರಿಶ್ರಮ, ನಿದ್ದೆಯಿಲ್ಲದ ರಾತ್ರಿಗಳು ಮತ್ತು ಯಾವುದೇ ಶಾರ್ಟ್ಕಟ್ ಇಲ್ಲದ ಕಥೆಯನ್ನು ಹೇಳುತ್ತದೆ. ಯಶಸ್ಸಿಗೆ ಸಮಯ ಬೇಕಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಹಲವರ ಗಮನ ಸೆಳೆದಿದೆ. ಹಾಗಾದ್ರೆ ಅವರು ದುಬೈನಲ್ಲಿ ಯಾವ ಕೆಲಸ ಮಾಡುತ್ತಿರಬಹುದು ಎಂಬ ಕುತೂಹಲ ಎಲ್ಲರಿಗೂ ಮೂಡಿದೆ. ಹೀಗಾಗಿ ಅವರ ಕುರಿತು ಇನ್ನಷ್ಟು ಹುಡುಕಲು ಮುಂದಾಗಿದ್ದಾರೆ. ಸೌಮೇಂದ್ರ ಚೆನಾ ದುಬೈನಲ್ಲಿ ತಮ್ಮದೇ ಸ್ವಂತ ಉದ್ಯಮ ಸ್ಥಾಪಿಸಿದ್ದಾರೆ. ಜೆನಾ ದುಬೈನಲ್ಲಿ ವೆಬ್ ಮತ್ತು ಐಟಿ ಕಂಪನಿಯ ತೆರೆದಿದ್ದಾರೆ. ಪ್ರೀಮಿಯಂ ಐಟಿ ಸಲ್ಯೂಷನ್ಸ್ಗಳ ಸೇವೆ ನೀಡುವ ಕಂಪನಿ ಅವರದ್ದಾಗಿದೆ. ಹೀಗಾಗಿ ಇಷ್ಟೊಂದು ಪ್ರಮಾಣದ ಆಸ್ತಿ ಹೊಂದಿದ್ದಾರೆ.
ಈ ಹಂತ ತಲುಪಬೇಕಾದರೆ ಅವರು 17 ವರ್ಷಗಳ ನಿರಂತರ ಪರಿಶ್ರಮ ಹಾಕಿದ್ದಾರೆ. ಹೀಗಾಗಿ ದುಬೈನಲ್ಲಿಯೇ ಯಶಸ್ವಿ ಕಂಪನಿ ತೆರೆಯಲು ಸಾಧ್ಯವಾಗಿದೆ. ಇನ್ನು ಅವರ ಪೋಸ್ಟ್ಗೆ ಹಲವರು ಪ್ರತಿಕ್ರಿಯಿಸಿದ್ದು ಅಭಿನಂದನೆಯ ಜೊತೆಗೆ ಅವರ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. ಆದ್ರೆ ಕೆಲವರ ಪ್ರಕಾರ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಜೊತೆಗಿರಬೇಕು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.



Click it and Unblock the Notifications











