4 ದಶಕದ ಬಳಿಕ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಬಾಗಿಲು ಓಪನ್..! ಅದ್ರಲ್ಲಿ ಏನಿದೆ?

ಹಿಂದೆ ದೇವಾಲಯಗಳು ಎಂದರೆ ಖಜಾನೆಗಳ ತುಂಬಿರುವ ಬಂಡಾರ ಎನ್ನಲಾಗುತ್ತಿತ್ತು. ಏಕೆಂದರೆ ದೇವಾಲಯಗಳಲ್ಲಿ ಸಂಪತ್ತು ತುಂಬಿರುತ್ತಿತ್ತು. ಆದ್ರೆ ಈಗಲೂ ಕೆಲವು ದೇವಾಲಯದಲ್ಲಿ ಖಜಾನೆ ತುಂಬಿದೆ. ಅದ್ರಲ್ಲೂ ನೀವು ಪುರಿ ಜಗನ್ನಾಥ ದೇವಾಲಯದ ಕುರಿತು ಕೇಳಿರಬಹುದು. ಈ ದೇವಾಲಯದ ಖಜಾನೆ ತೆರೆಯಲು ದಶಕಗಳಿಂದ ಕಸರತ್ತು ನಡೆಯುತ್ತಲೇ ಇದೆ.

ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯದ ರತ್ನ ಭಂಡಾರ್ (ನಿಧಿ) ನಾಲ್ಕು ದಶಕಗಳ ಅಂತರದ ನಂತರ ಜುಲೈ 14 ರಂದು ತೆರೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಸಮಿತಿಯು ಒಳಗೆ ಸಂಗ್ರಹವಾಗಿರುವ ಬೆಲೆಬಾಳುವ ವಸ್ತುಗಳ ದಾಸ್ತಾನು ಮಾಡಲು ಸಜ್ಜಾಗಿದೆ.

Puri Jagannath Temple Ratna Bhandara Door Opened After 4 Decades

ಜುಲೈ 14 ರಂದು ಒಳಗಿನ ರತ್ನ ಭಂಡಾರವನ್ನು ತೆರೆಯಲು ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಈ ಸಂಬಂಧದ ಪ್ರಸ್ತಾವನೆಯನ್ನು ಅದರ ಅನುಮೋದನೆಗಾಗಿ ಸರ್ಕಾರದ ಮುಂದೆ ಇಡಲಾಗುವುದು. ಸಂಪೂರ್ಣ ಕಾರ್ಯವಿಧಾನವನ್ನು ಕೈಗೊಳ್ಳಲು ನಾವು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಸಹ ರಚಿಸಿದ್ದೇವೆ, ಅದನ್ನು ನಾವು ಸರ್ಕಾರಕ್ಕೆ ಸಲ್ಲಿಸುತ್ತೇವೆ "ಎಂದು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಸ್ವನಾಥ್ ರಾತ್ ಅವರು ಮಂಗಳವಾರ ಸಮಿತಿಯ ಎರಡನೇ ಸಭೆಯ ನಂತರ ಮಾಹಿತಿ ಹಂಚಿಕೊಂಡಿದ್ದಾರೆ.

ಹಿಂದೂ ದೇವರುಗಳಾದ ಜಗನ್ನಾಥ, ಬಲಭದ್ರ ಮತ್ತು ಸುಭದ್ರ ದೇವತೆಗಳ ಅಮೂಲ್ಯ ಆಭರಣಗಳನ್ನು ಭಕ್ತರು ಮತ್ತು ಶತಮಾನಗಳಿಂದ ಹಿಂದಿನ ರಾಜರು ದಾನವಾಗಿ 12 ನೇ ಶತಮಾನದ ದೇಗುಲದ ರತ್ನ ಭಂಡಾರ್‌ನಲ್ಲಿ ಸಂಗ್ರಹಿಸಲಾಗಿದೆ. ಇದು ದೇವಾಲಯದ ಒಳಗೆ ಇದೆ ಮತ್ತು ಎರಡು ಕೋಣೆಗಳನ್ನು ಹೊಂದಿದೆ. ಆದರೆ ಈವರೆಗೆ ಇದನ್ನು ತೆರೆದಿಲ್ಲ.

1985ರಲ್ಲಿ ಕೊನೆಯಬಾರಿಗೆ ದೇವಾಲಯದ ಖಜಾನೆ ಬಾಗಿಲು ತೆರೆಯಲಾಗಿತ್ತು, ಇದಾದ ಬಳಿಕ ಈವರೆಗೆ ಈ ಬಾಗಿಲು ತೆರೆದಿಲ್ಲ. ನಿಯಮಗಳ ಪ್ರಕಾರ, 12 ನೇ ಶತಮಾನದ ದೇಗುಲದ ರತ್ನ ಭಂಡಾರವನ್ನು ತೆರೆಯಲು ರಾಜ್ಯ ಸರ್ಕಾರದ ಅನುಮೋದನೆ ಅಗತ್ಯವಿದೆ.

ಈ ಖಜಾನೆಯ ಕೊಠಡಿಯ ಬೀಗ ಕಳೆದು ಹೋಗಿತ್ತು, ಆದರೆ 2018ರಲ್ಲಿ ಅಂದಿನ ಡಿಸಿ ಅವರ ಕಚೇರಿಯಲ್ಲಿ ನಕಲಿ ಕೀ ಎಂಬ ಲಕೋಟೆಯೊಂದು ಪತ್ತೆಯಾಗಿ ಭಾರೀ ಗದ್ದಲ ಸೃಷ್ಟಿಯಾಗಿತ್ತು. ಈ ಕೀ ಹುಡುಕಾಟ ಸಂಬಂಧ ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿದೆ. ಸದ್ಯ ಈಗ ಇದೇ ಕೀ ಬಳಸಿ ಬಾಗಿಲು ತೆರೆಯಲಾಗುತ್ತದೆಯೇ ಎಂಬುದು ಕುತೂಹಲವಾಗಿ ಉಳಿದಿದೆ. ಅಲ್ಲದೆ ಕೊಠಡಿಯ ಒಳಗೆ ಎಷ್ಟು ಖಜಾನೆ ಇದೆ ಎಂಬುದು ಸಹ ಸದ್ಯದಲ್ಲೇ ಹೊರಬೀಳಲಿದೆ.

ಈ ಖಜಾನೆಯಲ್ಲಿ ಏನೆಲ್ಲಾ ಇದೆ?

ಈ ದೇವಾಲಯದ ಕೊಠಡಿಯಲ್ಲಿ ಭಾರೀ ಪ್ರಮಾಣದ ಆಭರಣಗಳಿವೆ ಎಂದು ನಂಬಲಾಗಿದೆ. ಚಿನ್ನದ ವಿಗ್ರಹಗಳು, ನಾಣ್ಯಗಳು ದೇವರ ಆಭರಣ, ಬೆಲೆ ಬಾಳುವ ವಸ್ತುಗಳು, ಭಗವಾನ್ ಜಗನ್ನಾಥ್, ಭಗವಾನ್ ಬಲಭದ್ರ ಹಾಗೂ ಸುಭದ್ರಾ ದೇವತೆಯ ಅಮೂಲ್ಯ ಆಭರಣಗಳು ಇವೆ ಎನ್ನಲಾಗಿದೆ. ಜೊತೆಗೆ ಹಿಂದಿನ ಕಾಲದ ವಜ್ರಾಭರಣಗಳು ಸಹ ಇವೆ.

ಇದಿಷ್ಟೆ ಅಲ್ಲ ಪುರಿ ಜಗನ್ನಾಥ ದೇವಾಲಯ ಹಲವು ಅಚ್ಚರಿಗಳ ತನ್ನಲ್ಲಿಟ್ಟುಕೊಂಡಿದೆ. ದೇವಾಲಯದ ರಚನೆ ಸಹ ಒಂದು ದೊಡ್ಡ ಅಚ್ಚರಿ. ಏಕೆಂದರೆ ಈ ದೇವಾಲಯದ ಮೇಲೆ ಯಾವುದೇ ನೆರಳು ಬೀಳುವುದಿಲ್ಲ. ಅಲ್ಲದೆ ದೇವಾಲಯದ ಮೇಲೆ ಗಾಳಿಗೆ ವಿರುದ್ಧವಾಗಿ ಬಾವುಟ ಹಾರುವುದು, ದೇವಾಲಯದ ಮೇಲಿರುವ ಸುದರ್ಶನ ಚಕ್ರ ಸಹ ಈಗಿನ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸವಾಲು ಒಡ್ಡುತ್ತದೆ. ಈಗ ಪುರಿ ಜಗನ್ನಾಥ ದೇವಾಲಯವು ಹೆಚ್ಚು ಭಕ್ತರು ಹಾಗೂ ದೇಶದ ಪ್ರಮುಖ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ.

English summary

Puri Jagannath Temple Ratna Bhandara Door Opened After 4 Decades..!

A consensus decision has been taken to open the inner gem depository on July 14 and a proposal in this regard will be placed before the government for its approval. We have also created a standard operating procedure to carry out the entire procedure.
Story first published: Saturday, July 13, 2024, 9:18 [IST]
X
Desktop Bottom Promotion