Just In
Don't Miss
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ರಾಶಿಚಕ್ರದ ಜತೆ ಮೈಂಡ್ ಗೇಮ್ ಆಡಿದ್ದೀರಾ ಎಚ್ಚರ!
ಪ್ರೀತಿ ನಿಷ್ಕಲ್ಮಷ, ಪವಿತ್ರ ಎಂಬೆಲ್ಲಾ ಮಾತಿದೆ. ಆದರೂ ಪ್ರೀತಿ ಮಾಡುವಾಗ ಪ್ರೇಮಿಯ ಮನಗೆಲ್ಲಲು, ಅವರ ಮೇಲೆ ತಮಗೆ ಹೆಚ್ಚು ಪ್ರೀತಿ ಇದೆ ಎಂದು ತೋರ್ಪಡಿಸಲು ಕೆಲವು ಮೈಂಡ್ ಗೇಮ್ ಆಡುತ್ತಾರೆ. ಇದು ಕೆಲವರಿಗೆ ಕರಗತವಾಗಿದ್ದರೆ ಇನ್ನು ಕೆಲವರು ಇಂಥಾ ಯಾವುದೇ ಮೈಂಡ್ ಗೇಮ್ ಇಲ್ಲದೆ ಪ್ರಾಮಾಣಿಕವಾಗಿ ಪ್ರೀತಿ ಮಾಡುವವರೂ ಇದ್ದಾರೆ.
ಶ್ರೀ
ಸದ್ಗುರು
ಸಾಯಿ
ಜ್ಯೋತಿಷ್ಯ
ಪೀಠಂ
ಪ್ರಧಾನ
ಜ್ಯೋತಿಷ್ಯ
ರತ್ನ
ಶ್ರೀ
ಶ್ರೀನಿವಾಸ್
ಗುರೂಜಿ.
Om
Sai
ram
#:37
/17
27th
Cross,12th
main
syndicate
Bank
near
vasudevan
adigas
hotel
4th
block
East
jayangar
Bangalore
560011
phone
no
99866
23344
ಆದರೂ ಪ್ರೀತಿಯ ವಿಚಾರದಲ್ಲಿ ಮೈಂಡ್ ಗೇಮ್ ಅನ್ನು ಕೆಲವರು ಆಡುವುದು ಸಹಜ, ಆದರೆ ಇಂಥಾ ಮೈಂಡ್ ಗೇಮ್ಗಳನ್ನು ದ್ವೇಷಿಸುವ ಗಂಭೀರ ವ್ಯಕ್ತಿಗಳ ಕೆಲವು ಪ್ರಾಮಾಣಿಕ ಗುಂಪುಗಳೂ ಇವೆ. ಇದು ಕೆಲವು ಬಾರಿ ನಿಮಗೆ ತಪ್ಪು ಎನಿಸದೇ ಇದ್ದರೂ ಕೆಲವು ಬಾರಿಯಂತೂ ಇಂತಹ ವಿಚಾರಗಳಲ್ಲಿ ನಿಜಕ್ಕೂ ಮನಸ್ಸಿಗೆ ಘಾಸಿಯಾಗುತ್ತದೆ.
ಈ ಬಗ್ಗೆ ಜ್ಯೋತಿಶಾಸ್ತ್ರ ಸಹ ಕೆಲವು ರಹಸ್ಯಗಳನ್ನು ತಿಳಿಸುತ್ತದೆ. ಅದರಲ್ಲೂ ಪ್ರೀತಿಯಲ್ಲಿರುವಾಗ ಮನಸ್ಸಿನ ಆಟಗಳನ್ನು ಅಂದರೆ ಮೈಂಡ್ ಗೇಮ್ ಅನ್ನು ದ್ವೇಷಿಸುವ, ಅತ್ಯಂತ ಪ್ರಾಮಾಣಿಕವಾಗಿ ಪ್ರೇಮಿಸುವ ರಾಶಿಚಕ್ರ ಬಗ್ಗೆ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದ ಮುಂದೆ ನೋಡೋಣ.
ಸಿಂಹ ರಾಶಿ
ಈ ರಾಶಿಚಕ್ರದವರು ಹೆಚ್ಚಾಗಿ ಗಮನ ಸೆಳೆಯುವ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ, ಏಕೆಂದರೆ ಸಿಂಹ ರಾಶಿ ಹೆಚ್ಚು ಪ್ರಕಾಶಿಸಬೇಕು, ತಾವು ಮುಂಳಾತ್ವವಹಿಸಬೇಕು ಎಂದು ಬಯಸಯತ್ತಾರೆ. ಅವರು ಏನನ್ನಾದರೂ ಕುಶಲತೆಯಿಂದ ನಿರ್ವಹಿಸಲು ಬಯಸಿದರೆ, ಅವರು ತಮ್ಮ ಮೋಡಿ ಮತ್ತು ಬುದ್ಧಿವಂತಿಕೆಯಿಂದ ಸುಲಭವಾಗಿ ಮಾಡಬಹುದು.
ಕಾಡಿನ ರಾಜ ಸಿಂಹನ ಗುಣಲಕ್ಷಣಗಳನ್ನು ಅವರು ಹೊಂದಿದ್ದಾರೆ ಎಂಬುದನ್ನು ಸಹ ನಾವು ಮರೆಯಬಾರದು. ಆಂದರೆ ಇವರ ಮೇಲೆ ನಂಬಿಕೆ ಇಟ್ಟು ನಿರ್ಭೀತರಾಗಿರಬಹುದು ಮತ್ತು ಪ್ರಾಮಾಣಿಕರಾಗಿರುತ್ತಾರೆ. ಅಗತ್ಯವಿದ್ದಾಗ ನಾವು ಯಾವಾಗಲೂ ಅವಲಂಬಿಸಬಹುದು. ಇವರಿಗೆ ಸುಳ್ಳು ಹೇಳುವುದಕ್ಕೆ ಬರುವುದಿಲ್ಲ ಅಥವಾ ಹೇಳಿದ ಸುಳ್ಳನ್ನು ಮುಂದುವರೆಸಲು ಸಹ ಬರುವುದಿಲ್ಲ.
ಆದರೆ, ಪ್ರೀತಿಸುವ ವ್ಯಕ್ತಿಯಿಂದ ತಾವು ಮೋಸ ಹೋಗುತ್ತಿದ್ದೇನೆ ಎಂದು ಅವರು ಭಾವಿಸಿದರೆ ಆ ವ್ಯಕ್ತಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲು ಸಿಂಹ ರಾಶಿಯವರು ಹೆಚ್ಚೇನೂ ಸಮಯ ತೆಗೆದುಕೊಳ್ಳುವುದಿಲ್ಲ ನೆನಪಿಡಿ.
ತುಲಾ ರಾಶಿ
ತುಲಾ ಎಂದರೆ ಸಮತೋಲನ ಮತ್ತು ನ್ಯಾಯಸಮ್ಮತತೆ. ಎಲ್ಲಿ ಮಾತಿನಲ್ಲೇ ಕುಶಲತೆ ತೋರುವುದು ಮತ್ತು ವಂಚನೆ ಇರುತ್ತದೆಯೋ ಅಲ್ಲಿ ನ್ಯಾಯಸಮ್ಮತತೆ ಇರಲು ಸಾಧ್ಯವೇ?. ಮೈಂಡ್ ಗೇಮ್ ಆಟಗಳು ಈ ರಾಶಿಚಕ್ರವರಿಗೆ ಕಿಂಚಿತ್ತೂ ಇಷ್ಟವಾಗುವುದಿಲ್ಲ. ಏಕೆಂದರೆ ಅಂತಹ ಆಟಗಳು ತಮ್ಮನ್ನು ಸದಾ ಎಚ್ಚರಿಕೆಯಿಂದ ಇರಲು ಬಯಸುತ್ತದೆ ಅಲ್ಲದೇ, ಸಮತೋಲಿತ ಪ್ರೀತಿಯ ಜಗತ್ತನ್ನು ಅಡ್ಡಿಪಡಿಸುವ ಅಪಾಯವನ್ನುಂಟುಮಾಡುತ್ತವೆ. ಆದ್ದರಿಂದ, ಸಂಬಂಧದ ಬಗ್ಗೆ ಇರುವಾಗ ಅವರೆಲ್ಲರೂ ಪ್ರಾಮಾಣಿಕತೆ ಮತ್ತು ಸತ್ಯಕ್ಕಾಗಿರುತ್ತಾರೆ ಮತ್ತು ತನ್ನ ಪ್ರೇಮಿಯು ಅಪ್ರಾಮಾಣಿಕ ಎಂದು ಅವರಿಗೆ ಅನಿಸಿದರೆ ಅವರನ್ನು ಬಹಳ ದೂರವಿರಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಎಂದಿಗೂ ಭಾವನಾತ್ಮಕ ಮತ್ತು ಸೂಕ್ಷ್ಮ ಸ್ವಭಾವಕ್ಕೆ ಹೆಸರುವಾಸಿ. ಅವರು ಪ್ರೀತಿಯಲ್ಲಿರುವಾಗ, ಅವರ ಇಡೀ ಪ್ರಪಂಚವು ಆ ವಿಶೇಷ ವ್ಯಕ್ತಿಯ ಸುತ್ತ ಸುತ್ತುತ್ತದೆ. ಅವರು ಸಂಬಂಧದಲ್ಲಿದ್ದಾಗ ತಮ್ಮ ನೂರರಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಾರೆ ಮತ್ತು ಪ್ರತಿಯಾಗಿ, ಅವರು ತಮ್ಮ ಪಾಲುದಾರರಿಂದ ಅದೇ ನಿರೀಕ್ಷಿಸುತ್ತಾರೆ.
ಅವರ ಮೇಲಿನ ಪ್ರೀತಿ ಶುದ್ಧ ಮತ್ತು ಮುಗ್ಧವಾಗಿರುತ್ತದೆ ಮತ್ತು ಅದಕ್ಕಾಗಿಯೇ ಅವರು ಕುಶಲತೆ ಅಥವಾ ಮೋಸಕ್ಕೆ ಒಳಗಾಗುವುದನ್ನು ದ್ವೇಷಿಸುತ್ತಾರೆ. ಏಕೆಂದರೆ ಅವರಿಗೆ ಪ್ರೀತಿ ಅತೀಂದ್ರಿಯ ಮತ್ತು ಅಸ್ಪೃಶ್ಯವಾಗಿದದ್ದು ಎಂದು ನಂಬುತ್ತಾರೆ.
ಆಕಸ್ಮಾತ್ ಅವರೇನಾದರೂ ಮೋಸ ಹೋದರೆ, ಅವರು ತಮ್ಮ ಕನಸಿನ ಜಗತ್ತಿನ್ನು ಹಿಮ್ಮೆಟ್ಟುತ್ತಾರೆ ಮತ್ತು ಯಾವುದೇ ಮನವೊಲಿಸುವಿಕೆ ಅಥವಾ ಮೈಂಡ್ ಗೇಮ್ಗಳ ಮೂಲಕ ಇವರೊಂದಿಗೆ ರಾಜಿ ಅಸಾಧ್ಯದ ಮಾತು.
ಮೇಷ ರಾಶಿ
ಮೇಷ ರಾಶಿಯವರು ಪ್ರಬಲವಾದ ನಿರ್ಧಾರ ತೆಗೆದುಕೊಳ್ಳುವ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರಲ್ಲಿರುವ ಕ್ರೂರ ಪ್ರಾಮಾಣಿಕತೆಯು ಅವರು ಪ್ರೀತಿಸುವ ಜನರೊಂದಿಗಿನ ಸಂಬಂಧಗಳಲ್ಲಿಯೂ ಪ್ರತಿಫಲಿಸುತ್ತದೆ. ಅವರು ತಮ್ಮ ಮಾತುಗಳನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಆಡುತ್ತಾರೆ ಅಲ್ಲದೇ, ಇತರರಿಂದ ಸಹ ಕಹಿ ಮಾತುಗಳು ಬಂದರೆ ಸ್ವೀಕರಿಸುತ್ತಾರೆ.
ಆದರೆ ಅವರಿಗೆ ಇಷ್ಟವಾಗದೇ ಇರುವು ಸಂಗತಿ ಎಂದರೆ ತಮಗೆ ಮಾಡಲು ಇಷ್ಟವಿಲ್ಲದಿದ್ದರೂ, ಅದನ್ನು ಮಾಡಿಸುವಲ್ಲಿ ತಮ್ಮ ಕುಶಲತೆಯನ್ನು ತೋರಿ ಮಸಲತ್ತು ಮಾಡಿದರೆ ಅದನ್ನು ಎಂದಿಗೂ ಒಪ್ಪುವುದಿಲ್ಲ. ಜತೆಗೆ ಇಂಥಾ ಮಸಲತ್ತು ಮಾಡುವ ಸ್ವಭಾವ ಎಂದು ಒಮ್ಮೆ ಅವರು ಸತ್ಯವನ್ನು ಕಂಡುಕೊಂಡರೆ, ಸಂಬಂಧವನ್ನು ಕಡಿತಗೊಳಿಸುವುದನ್ನು ಯಾರಿದಂಲೂ ತಡೆಯಲು ಸಾಧ್ಯವಿಲ್ಲ.
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.
ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344