Just In
- 54 min ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 2 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 7 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News ಹನೂರು: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೆಂದು ಬೀದಿಗಿಳಿದ ವ್ಯಕ್ತಿ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
5-8-2019: ಸೋಮವಾರದ ದಿನ ಭವಿಷ್ಯ
ಸೋಮವಾರದ ದಿನ ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ.
ಸಂಹಾರಕ ಅಥವಾ ಲಯಕಾರಕ ದೇವತೆ : ಶಿವ ಅಥವಾ ರುದ್ರ.ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807
ಮೇಷ (5 july 2019)
ನಿಮ್ಮದೇ ಆದ ಪ್ರತ್ಯೇಕ ಪ್ರಯತ್ನಗಳ ಯಶಸ್ಸಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದ್ದು ಇವು ನಿಮ್ಮ ಮುಂದಿನ ಬಾಳಿನ ಮೈಲಿಗಲ್ಲು ಆಗುವವು. ಯಾವುದಕ್ಕೂ ಒಂದು ಬಾರಿ ಮನೆಯ ಹಿರಿಯರೊಡನೆ ಚರ್ಚಿಸಿ ಮುಂದುವರೆಯಿರಿ.ಅನಿರೀಕ್ಷಿತ ಟೀಕೆಗಳನ್ನು ಧೈರ್ಯದಿಂದ ಎದುರಿಸಿ. ನಿಮಗೆ ಇದು ಪರೀಕ್ಷೆಯ ಕಾಲ. ಕಪಟವರಿಯದ ನಿಮಗೆ ನೀವು ಆಡುವ ಸತ್ಯನುಡಿಗಳೇ ವಜ್ರಾಯುಧ. ಗುರು ಕೃಪೆ ನಿಮ್ಮ ಮೇಲಿರುವುದರಿಂದ ಅಂಜುವ ಅಗತ್ಯವಿಲ್ಲ.9845743807 ಅದೃಷ್ಟ ಸಂಖ್ಯೆ:2
ವೃಷಭ
ಹಳೆಯ ಕಡತಗಳನ್ನು ಹಿಂದೆ ಮುಂದೆ ನೋಡದೆ ಬಿಸಾಡದಿರಿ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬೇಡದ್ದನ್ನು ಬಿಸಾಡಿ. ಕೆಲವು ಕಡತಗಳಲ್ಲಿ ಬಹುಮುಖ್ಯವಾದ ಕೈಬರಹದ ಚೀಟಿಗಳು ಪತ್ತೆಯಾಗುವವು. ಅದರಿಂದ ನಿಮಗೆ ಅನುಕೂಲವಾಗುವುದು. ವಿನಾಕಾರಣ ಜಗಳವಾಡುವ, ಅಶಾಂತಿಗೆ ಕಾರಣವಾಗುವ ನಿಮ್ಮ ಕೋಪವನ್ನು ಕೈಬಿಡಿ. ಆ ಕೋಪ ನಿಮ್ಮ ಇಡೀ ದಿನದ ಸಂತೋಷವನ್ನು ಹಾಳು ಮಾಡುವುದಲ್ಲದೆ ಮನೆಯವರ ನೆಮ್ಮದಿ ಕೆಡಿಸುವುದು. ತಾಳ್ಮೆಯೇ ನಿಮ್ಮ ದೈನಂದಿನ ಮಂತ್ರವಾಗಿರಲಿ. 9845743807 ಅದೃಷ್ಟ ಸಂಖ್ಯೆ:1
ಮಿಥುನ
ಮನೋಜಯನಾದ, ಸ್ಥೈರ್ಯ, ಧೈರ್ಯಗಳ ನಿಧಿಯಾದ ಮಾರುತಿ ದೇವರನ್ನು ಆರಾಧಿಸಿ. ಕಾರ್ಯದಲ್ಲಿ ಯಶಸ್ಸು ಹೊಂದುವಿರಿ. 5 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಸಿಹಿ ಅಥವಾ ಪುಸ್ತಕ ಕೊಟ್ಟು ಪ್ರೋತ್ಸಾಹಿಸಿ.ನಿಮ್ಮ ಪಾಲಿಗೆ ಅದೃಷ್ಟದ ದಿನ. ಬಹುದಿನದ ನಿಮ್ಮ ಬಯಕೆ ಈಡೇರುವ ದಿನ. ಈ ದಿನಕ್ಕೆ ಕಾದು ಕುಳಿತಿರುವಂತೆ ನಿಮ್ಮ ಮನಸ್ಸು ನೂರುಬಾರಿ ಹೇಳಿಕೊಂಡಿತ್ತು. ಇದರಿಂದ ಒಂದು ಬಹುದೊಡ್ಡ ಸಮಸ್ಯೆ ನಿವಾರಣೆ ಆಗುವುದು.9845743807 ಅದೃಷ್ಟ ಸಂಖ್ಯೆ:6
ಕಟಕ
ಹಳೆಯ ಗೆಳೆಯರ ಇಲ್ಲವೆ ಬಂಧುಗಳ ಆಗಮನದಿಂದ ಹರ್ಷ ಉಂಟಾಗುವುದು. ಬಿಸಿನೆಸ್ನಲ್ಲಿ ಚೇತರಿಕೆ ಕಂಡು ಬರುವುದು. ಹಳೆ ಸಾಲದ ಬಾಕಿ ತೀರಿಸಲು ಮುಂದಾಗುವಿರಿ. ಹಣವನ್ನು ಇತಿಮಿತಿಯಾಗಿ ಬಳಸಿ.ಹಿರಿಯರೊಬ್ಬರು ನಿಮ್ಮ ವಿಚಾರದಲ್ಲಿ ಕರುಣಾಳುಗಳಾಗಿರುತ್ತಾರೆ. ಅವರ ಮಾರ್ಗದರ್ಶನ ಮತ್ತು ಹಿತನುಡಿಗಳು ನಿಮ್ಮ ಮೇಲೆ ಗಾಢ ಪರಿಣಾಮ ಬೀರಿರುವವು. ಅದನ್ನು ಮುಕ್ತಕಂಠದಿಂದ ಎಲ್ಲರಿಗೂ ತಿಳಿಯುವಂತೆ ತಿಳಿಸಿ. ಆ ಮೂಲಕ ಆ ಹಿರಿಯರಿಗೆ ಗೌರವ ಸೂಚಿಸಿ.9845743807 ಅದೃಷ್ಟ ಸಂಖ್ಯೆ:4
ಸಿಂಹ
ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಗಮನ ಇರಲಿ. ಸುಮ್ಮನೆ ಪೊಳ್ಳು ಮಾತುಗಳನ್ನು ನಂಬಿ ಇರುವ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಮುಂದಾಗದಿರಿ. ಇದರಿಂದ ತೊಂದರೆ ಅನುಭವಿಸಬೇಕಾಗುವುದು. ಮಾರುತಿ ಮಂತ್ರ ಪಠಿಸಿ. ಬಾಳಸಂಗಾತಿಯ ಬಯಕೆಗಳನ್ನು ನಯವಾಗಿ ತಿರಸ್ಕರಿಸಿ. ಅವರು ಬಹು ಮೊತ್ತದ ಖರ್ಚಿನ ದಾರಿಗೆ ನಿಮ್ಮನ್ನು ಎಳೆಯಲು ಬಯಸುತ್ತಿರುವರು. ಆದರೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವರಿಗೆ ಸಹಾಯ ಮಾಡಿ.9845743807 ಅದೃಷ್ಟ ಸಂಖ್ಯೆ:9
ಕನ್ಯಾ
ಯಶಸ್ಸಿನ ದಾರಿಗಳನ್ನು ತಿಳಿಸಿಕೊಡುವ ಅಥವಾ ನಿರ್ದೇಶಿಸುವ ಹಿರಿಯರನ್ನು ಭೇಟಿಯಾಗುವ ಅವಕಾಶ ಸ್ಪಷ್ಟವಾಗಿರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸುಸಂದರ್ಭವನ್ನು ನೀವು ಅನುಭವಿಸುವಿರಿ.ನವಮ ಭಾಗ್ಯದ ಗುರು ಅನೇಕ ಭಾಗ್ಯಗಳನ್ನು ತಂದುಕೊಡುವನು. ಅದನ್ನು ಕಂಡು ಕರುಬುವ ಮಂದಿಯೇ ಬಹಳ ಆಗಿರುವುದರಿಂದ ಹೆಚ್ಚಿನ ಸಂತೋಷವನ್ನು ಹೊಂದಲು ಆಗುವುದಿಲ್ಲ. ಪಾರ್ವತಿ ದೇವಿ ಇಲ್ಲವೆ ದುರ್ಗಾಮಾತೆಯನ್ನು ಅನನ್ಯ ಭಜಿಸಿ.9845743807 ಅದೃಷ್ಟ ಸಂಖ್ಯೆ:6
ತುಲಾ
ಸಂತೋಷಕ್ಕೆ ಅನೇಕ ದಾರಿಗಳಿವೆ. ಇದುವರೆಗೂ ಸವೆಸಿದ ದಾರಿಗಳಿಗಿಂತ ಬೇರೆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೇರಳವಾಗಿವೆ. ಆ ದಾರಿಯಲ್ಲಿ ಕೂಡಾ ನೀವು ನಿಮ್ಮದೇ ಆದ ಛಾಪು ಅಥವಾ ಹೆಜ್ಜೆ ಗುರುತುಗಳನ್ನು ಮೂಡಿಸುವಿರಿ. ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ ತಮಾಷೆಯನ್ನು ಮಾಡಲು ಹೋಗಿ ಕಚೇರಿಯಲ್ಲಿ ಬಾಸ್ನ ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರಿ. ಇದರಿಂದ ಒಳಿತಾಗುವುದು. 9845743807 ಅದೃಷ್ಟ ಸಂಖ್ಯೆ:4
ವೃಶ್ಚಿಕ
ಒಗಟಾಗಿ ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ. ಆದರೆ ಅದನ್ನು ಗಹನವಾಗಿ ತೆಗೆದುಕೊಳ್ಳದೆ ತಿಳಿಹಾಸ್ಯದಿಂದ ಅವರೆಲ್ಲರನ್ನು ಸಂಭಾಳಿಸುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಗತಿ ಇಲ್ಲ. ಆರೋಗ್ಯವನ್ನು ಅಲಕ್ಷಿಸಬಾರದು ಎಂಬುದು ನೆನಪಿರಲಿ. ಕೆಲಸಕ್ಕೆ ರಜೆ ಹಾಕಿಯಾದರೂ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ. ಸಂಜೆಯ ವೇಳೆಗೆ ನಿಮಗೆ ಇಷ್ಟವಾದ ಪುಸ್ತಕ ಇಲ್ಲವೆ ಕಾದಂಬರಿಯನ್ನು ಓದಿ.9845743807 ಅದೃಷ್ಟ ಸಂಖ್ಯೆ:2
ಧನುಸ್ಸು
ನಿಮ್ಮ ಲೇವಾದೇವಿ ವ್ಯವಹಾರದ ಪತ್ರಗಳು ಮತ್ತು ಬ್ಯಾಂಕ್ ವ್ಯವಹಾರದ ಪತ್ರಗಳನ್ನು ಹೊರಗಡೆ ಕೊಂಡೊಯ್ಯುವಾಗ ಜಾಗ್ರತೆ ಇರಲಿ. ಕೆಲವು ಪತ್ರಗಳು ಕಣ್ಮರೆ ಆಗುವ ಸಾಧ್ಯತೆಗಳು ಇವೆ. ಅಪರಿಚಿತ ಜನರೊಡನೆ ಹೆಚ್ಚು ಸಲುಗೆ ಬೇಡ. ಬೇಡ ಬೇಡ ಎಂದರೂ ಒತ್ತಡ ತರುವ ಮಂದಿ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ. 9845743807 ಅದೃಷ್ಟ ಸಂಖ್ಯೆ:4
ಮಕರ
ನಿಮ್ಮ ವೈರಿಗಳ ಬಗ್ಗೆ ಎಚ್ಚರಿಕೆ ಇರಲಿ. ಈ ಬಗ್ಗೆ ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಿಂದಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷ ಕನಾದ ಶ್ರೀಲಕ್ಷ್ಮೀನಾರಸಿಂಹನನ್ನು ನೆನೆಯಿರಿ. ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ಕೆಲ ವಿಚಾರಗಳ ಬಗ್ಗೆ ಸಮ್ಮತಿ ಸೂಚಿಸಿ. ಆಗ ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೊಸತನ ಮೂಡಿಬರುವುದು. 9845743807 ಅದೃಷ್ಟ ಸಂಖ್ಯೆ:8
ಕುಂಭ
ಆರೋಗ್ಯಂ ಭಾಸ್ಕರಾಚೇತ್ ಎಂದರು ಹಿರಿಯರು. ನಿಮಗೆ ಕಾಡುತ್ತಿರುವ ಅನಾರೋಗ್ಯದಿಂದ ರಕ್ಷ ಣೆ ಪಡೆಯಲು ಸೂರ್ಯ ಮಂತ್ರ ಇಲ್ಲವೆ ಸೂರ್ಯ ಕವಚ ಪಠಿಸಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಬಿಗಿ ಧೋರಣೆ ತಳೆಯುವುದು ಒಳ್ಳೆಯದು. ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆಯು ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.9845743807 ಅದೃಷ್ಟ ಸಂಖ್ಯೆ:2
ಮೀನ
ನಿಮ್ಮ ಪಾಲಿಗೆ ಅದೃಷ್ಟ ಬರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ. ಮನೋ ಮಂಡಲದಲ್ಲಿ ಅನುಮಾನಗಳ ಹುತ್ತ ತಲೆ ಎತ್ತುತ್ತಿರುತ್ತದೆ. ಸದ್ಗುರು ದತ್ತಾಷ್ಟಕವನ್ನಾಗಲಿ ಇಲ್ಲವೆ ನೀವು ನಂಬಿದ ಗುರುವಿನ ಸ್ತೋತ್ರ ಪಠಿಸಿ. ಸಾಧ್ಯವಾದಲ್ಲಿ ಕಡಲೆಕಾಳನ್ನು ದಾನ ಮಾಡಿದರೆ ಉತ್ತಮ.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp