Just In
- 1 hr ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 2 hrs ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 14 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 14 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Finance ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್ ಕಂಪೆನಿಯೊಂದಿಗೆ ಒಪ್ಪಂದ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶುಕ್ರ ಗೋಚಾರ ಫಲ: ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿಂದಾಗಿ ಅದೃಷ್ಟವೇ ಅದೃಷ್ಟ
ಮೇ 23 ರಂದು ಶುಕ್ರವು ಮೇಷ ರಾಶಿಗೆ ಪ್ರವೇಶಿಸಿದೆ. ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ. ಶುಕ್ರದೇವನು ಮಂಗಳಕರ ಸ್ಥಾನದಲ್ಲಿದ್ದಾಗ ಆ ರಾಶಿಯ ವ್ಯಕ್ತಿಗೆ ಶುಕ್ರದೆಸೆ ಪ್ರಾರಂಭವಾಗುವುದು.
ಈ ಸಮಯದಲ್ಲಿ ಲಕ್ಷ್ಮಿಯ ವಿಶೇಷವಾದ ಕೃಪೆ ಇರುತ್ತದೆ. ಈ ಸಮಯದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುವುದು. ಏನಾದರೂ ಖರೀದಿಗೆ, ಹೂಡಿಕೆಗೆ ಸೂಕ್ತವಾದ ಸಮಯವಾಗಿರುತ್ತದೆ.
ಇದೀಗ ಶುಕ್ರನು ಮೇಷ ರಾಶಿಯಲ್ಲಿ ಇದೆ. ಶುಕ್ರನು ಈ ರಾಶಿಯಲ್ಲಿ ಇರುವಾಗ ಕೆಲವು ರಾಶಿಗಳಿಗೆ ಒಳ್ಳೆಯ ದಿನಗಳಾಗಿರುತ್ತದೆ. ಈ ಸಮಯದಲ್ಲಿ ಆ ರಾಶಿಯವರ ಅದೃಷ್ಟವೇ ಬದಲಾಗುವುದು.
ಈ ಶುಕ್ರ ಸಂಚಾರದಲ್ಲಿ ಈ ರಾಶಿಯವರ ಮೇಲೆ ವಿಶೇಷವಾದ ಲಕ್ಷ್ಮಿ ಕೃಪೆ ಇರುತ್ತದೆ:
ಮೇಷ ರಾಶಿ
ಮೇಷ ರಾಶಿಯವರ ಆರ್ಥಿಕ ಭಾಗವು ಬಲವಾಗಿರುತ್ತದೆ. ನಿಮಗೆ ಈ ಅವಧಿಯಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
ಲಕ್ಷ್ಮಿಯ ಕೃಪೆಯಿಂದ ಜೀವನ ಸುಖಮಯವಾಗುತ್ತದೆ. ಈ ಸಮಯದಲ್ಲಿ ಖರ್ಚು ಕಡಿಮೆಯಾಗಲಿದೆ. ವಹಿವಾಟುಗಳಿಗೆ ಈ ತಿಂಗಳು ತುಂಬಾ ಅನುಕೂಲಕರವಾಗಿರುತ್ತದೆ.
ಮಿಥುನ ರಾಶಿ
ಈ ಸಮಯದಲ್ಲಿ ನೀವು ಹೊಸ ಮನೆ ಅಥವಾ ಆಸ್ತಿ ಖರೀದಿಸಲು ಬಯಸುವುದಾದರೆ ಅದು ಸಾಧ್ಯವಾಗುವುದು, ಏಕೆಂದರೆ ಲಕ್ಷ್ಮಿಯ ವಿಶೇಷ ಕೃಪೆ ನಿಮ್ಮ ಮೇಲಿರುತ್ತದೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.ಯಾವುದಾದರೂ ಹೊಸ ಕಾರ್ಯಕ್ಕೆ ಕೈ ಹಾಕುವುದಾದರೆ ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ.
ವ್ಯಾಪಾರ-ವಹಿವಾಟುಗಳಿಗೆ ಸಮಯವು ಮಂಗಳಕರವಾಗಿದೆ, ಆದರೆ ವ್ಯವಹಾರಗಳನ್ನು ಮಾಡುವ ಮೊದಲು, ಎಚ್ಚರಿಕೆಯಿಂದ ಮಾಡಿ. ಹಣಕಾಸಿನ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ.
ವೃಶ್ಚಿಕ ರಾಶಿ
ಲಕ್ಷ್ಮಿಯ ಕೃಪೆಯಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು. ವ್ಯಾಪಾರಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿದೆ. ವ್ಯವಹಾರದಲ್ಲಿ ಲಾಭ ಸಿಗುವುದು. ವ್ಯಾಪಾರಸ್ಥರಿಗೆ ಅನುಕೂಲಕರವಾದ ಸಮಯವಾಗಿದೆ.
ಧನು ರಾಶಿ
ಶುಕ್ರನ ಕೃಪೆಯಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆ ಮಾಡಲು ಈ ಸಮಯ ಉತ್ತಮವಾಗಿದೆ. ಹೊಸ ವಾಹನ ಖರೀದಿಸಬಹುದು.
ವ್ಯಾಪಾರ-ವಹಿವಾಟುಗಳಿಗೂ ಸಮಯ ಉತ್ತಮವಾಗಿದೆ. ಲಕ್ಷ್ಮಿಯ ಕೃಪೆಯಿಂದಾಗಿ ಆದಾಯದ ಮೂಲಗಳು ಹೆಚ್ಚಾಗುತ್ತವೆ.
ಕುಂಭ ರಾಶಿ
ಈ ಸಮಯದಲ್ಲಿ ಮಾಡುವ ಹೂಡಿಕೆಯಿಂದ ಆಭ ಗಳಿಸುವಿರಿ. ಈ ಸಮಯದಲ್ಲಿ ಖರ್ಚುಗಳು ಕಡಿಮೆಯಾಗಲಿದೆ. ವ್ಯಾಪಾರ ವರ್ಗದವರಿಗೆ ಈ ಸಮಯ ಒಳ್ಳೆಯದಿದೆ. ಲಕ್ಷ್ಮಿಯ ವಿಶೇಷ ಕೃಪೆ ಇರುವುದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ವಾಹನ ಅಥವಾ ಆಸ್ತಿ ಖರೀದಿಗೆ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ಸಾಧ್ಯವಾಗುವುದು.