Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವಾಸ್ತು ಸಲಹೆ: ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಬುಧವಾರ ಹೀಗೆ ಮಾಡಿ
ಬುಧವಾರ ಗಣೇಶನಿಗೆ ಸಮರ್ಪಿಸಲಾಗಿದೆ ಅಲ್ಲದೇ ಬುಧ ಗ್ರಹದ ಆಡಳಿತ ದಿನ. ಬುಧ ಗ್ರಹವು ಬುದ್ಧಿವಂತಿಕೆ ಮತ್ತು ವಿವೇಚನೆಯ ಅಧಿಪತಿ ಎಂದು ಹೇಳಲಾಗುತ್ತದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಗಣೇಶ ಎಲ್ಲಿ ನೆಲೆಸುತ್ತಾನೆಯೋ ಅಲ್ಲಿ ಎಲ್ಲವೂ ಶುಭ ಎಂದು ಹೇಳಲಾಗುತ್ತದೆ. ಇದಲ್ಲದೇ ಬುಧ ಗ್ರಹವನ್ನು ಶಾಂತಗೊಳಿಸಲು ಪೂಜೆಯನ್ನು ಮಾಡಲಾಗುತ್ತದೆ.
ಜಾತಕದಲ್ಲಿ ಬುಧ ಗ್ರಹವನ್ನು ಶಾಂತಗೊಳಿಸಲು ಅನೇಕ ಜನರು ವಿವಿಧ ರೀತಿಯ ಪೂಜಾ ಕ್ರಮಗಳನ್ನು ಮಾಡುತ್ತಾರೆ. ಇದೆಲ್ಲದರ ಹೊರತಾಗಿ ಬುಧವಾರ ಕೆಲವು ಕೆಲಸಗಳನ್ನು ಮಾಡಬಾರದು ಹಾಗೂ ಮಾಡಿದರೆ ಅಶುಭ ಎಂದು ನಂಬಲಾಗಿದೆ. ನೀವೂ ಸಹ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೆ, ಕೌಟುಂಬಿಕ ಸಮಸ್ಯೆ ಹೆಚ್ಚಾಗಿದ್ದರೆ, ಮಾನಸಿಕ ನೆಮ್ಮದಿ ಇಲ್ಲವಾಗಿದ್ದರೆ ಬುಧವಾರದಂದು ಇಂಥಾ ಕೆಲಸಗಳನ್ನು ಮಾಡಬೇಡಿ. ಅಲ್ಲದೆ ಇದನ್ನು ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.

ಹೂಡಿಕೆ ಮಾಡಬೇಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರ ಹಣಕಾಸು ಹೂಡಿಕೆಗೆ ಒಳ್ಳೆಯ ದಿನವಲ್ಲ. ಈ ದಿನ ಹೂಡಿಕೆ ಮಾಡಬಾರದು. ನೀವು ಬುಧವಾರದ ಬದಲು ಶುಕ್ರವಾರ ಹೂಡಿಕೆ ಮಾಡಿ, ಶುಕ್ರವಾರ ಲಕ್ಷ್ಮಿಯ ದಿನ, ಈ ದಿನ ಹೂಡಿಗೆಯು ಹಣವನ್ನು ದುಪ್ಪಟ್ಟು ಮಾಡುತ್ತದೆ.

ಸಾಲ ಮಾಡಬೇಡಿ
ಬುಧವಾರದಂದು ಸಾಲ ಮಾಡುವುದನ್ನು ತಪ್ಪಿಸಬೇಕು. ಆದರೆ ಈ ದಿನ ಹಣ ನಿಮ್ಮ ಕೈಗೆ ಬಂದರೆ ಅದು ಶುಭದ ಸಂಕೇತ. ಆದರೆ ನೀವು ಯಾರಿಗಾದರೂ ಹಣವನ್ನು ಕೊಡುವುದು, ಇತರ ಹಣದ ವಹಿವಾಟು ಹಾನಿಕಾರಕವಾಗಿದೆ. ಆದ್ದರಿಂದ ಬುಧವಾರ ಸಾಲವನ್ನು ತೆಗೆದುಕೊಳ್ಳಬೇಡಿ.

ಕಪ್ಪು ಬಟ್ಟೆಗಳನ್ನು ಧರಿಸಬೇಡಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದಂಪತಿಗಳ ನಡುವೆ ಸಮಸ್ಯೆ ಇದ್ದರೆ, ಆಗಾಗ್ಗೆ ಜಗಳ ಆಗುತ್ತಿದ್ದರೆ ಬುಧವಾರದಂದು ಮಹಿಳೆಯರು ಕಪ್ಪು ಬಟ್ಟೆಗಳನ್ನು ಧರಿಸಬಾರದು. ಇದು ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಪಶ್ಚಿಮಕ್ಕೆ ಪ್ರಯಾಣಿಸಬೇಡಿ
ಬುಧವಾರದಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣ ಮಾಡುವುದು ಅಶುಭವೆಂದು ಜ್ಯೋತಿಷಿಗಳು ನಂಬುತ್ತಾರೆ. ಈ ದಿನದ ಪ್ರಯಾಣವು ನಿಮ್ಮ ಕೆಲಸವನ್ನು ಹಾಳು ಮಾಡುತ್ತದೆ. ಮುಂದಿನ ಬಾರಿ ಬುಧವಾರದಂದು ಪ್ರಯಾಣ ಮಾಡುವ ಮುನ್ನ ಎಚ್ಚರವಹಿಸಿ.

ಕಠಿಣ ಪದಗಳನ್ನು ಆಡಬೇಡಿ
ಬುಧ ಗ್ರಹವನ್ನು ಮಾತು ಮತ್ತು ಸಂವಹನದ ಅಂಶವೆಂದು ಪರಿಗಣಿಸಲಾಗುತ್ತದೆ. ಈ ದಿನ ಕಹಿ ಮಾತುಗಳನ್ನಾಡಬಾರದು. ಈ ದಿನ ಕಹಿ ವಿಷಯಗಳನ್ನು ಮಾತನಾಡುವುದು ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೇ ಮನೆಯಲ್ಲಿ ಜಗಳವಾಗಬಹುದು.



Click it and Unblock the Notifications
