Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
Mithuna Rashi Ugadi Bhavishya 2022 :ಯುಗಾದಿ ಪಂಚಾಂಗ 2022-23: ಹೇಗಿದೆ ಮಿಥುನ ರಾಶಿಯ ಭವಿಷ್ಯ?
ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಮಿಥುನ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
ಮಿಥುನ ರಾಶಿಯವರ ಅಧಿಪತಿ ಬುಧ. ಮೃಗಶಿರಾ ನಕ್ಷತ್ರ 3 ಮತ್ತು 4ನೇ ಪಾದ, ಆರಿದ್ರಾ ಹಾಗೂ ಪುನರ್ವಸು ನಕ್ಷತ್ರ1 ಮತ್ತು 2ನೇ ಪಾದ ಹೊಂದಿರುವವರು, ಇವರಿಗೆ ಆದಾಯ 11 ವ್ಯಯ 5 ಇದೆ. ಆದ್ದರಿಂದ ಆದಾಯ ನಿಮಗೆ ಈ ವರ್ಷ ತುಂಬಾ ಒಳ್ಳೆಯದಿದೆ. ಯೋಗ 2 ಹಾಗೂ ಅವಮಾನ 2 ಇದೆ.

ಯುಗಾದಿ ಪಂಚಾಂಗ ಪ್ರಕಾರ ಈ ವರ್ಷ ಮಿಶ್ರಫಲ. ಈ ವರ್ಷ ಸ್ಪರ್ಧಿಗಳಿಂದ ಪ್ರಬಲ ಸ್ಪರ್ಧೆ ಎದುರಿಸುವಿರಿ.ಆದರೆ ಕಠಿಣ ಪರಿಶ್ರಮಕ್ಕೆ ಫಲ ಸಿಗುವುದು. ವ್ಯಾಪಾರ, ವಾಣಿಜ್ಯ, ಸಮುದ್ರಕ್ಕೆ ಸಂಬಂಧಿಸಿದ ವ್ಯಾಪಾರ ಹೊಂದಿರುವವರೆಗೆ ಒಳ್ಳೆಯದಾಗಲಿದೆ. ಚಿನ್ನ, ಬೆಳ್ಳಿ, ಕಬ್ಬಿಣ ವ್ಯಾಪಾರಿಗಳಿಗೆ ಒಳ್ಳೆಯದಾಗಲಿದೆ. ದ್ವಿತೀಯಾರ್ಧದಲ್ಲಿ ಒಳ್ಳೆಯದಾಗಲಿದೆ. ಆಸ್ತಿತಕರಾರು ಅನುಭವಿಸಬಹುದು. ವ್ಯವಸಾಯಿಗಳಿಗೆ ಲಾಭವಾಗಲಿದೆ.
ಈ ವರ್ಷ ವಿದ್ಯಾರ್ಥಿಗಳಿಗೆ ಶುಭವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಏಪ್ರಿಲ್ 2ನೇ ವಾರದಿಂದ ಫಲ ಸಿಗುವುದು.
ಕೌಟಂಬಿಕ ಜೀವನ ಚೆನ್ನಾಗಿರುತ್ತದೆ. ಮನೆಗೆ ಹೊಸ ವಸ್ತುಗಳನ್ನು ಖರೀದಿಸುವಿರಿ, ಮನೆಯಲ್ಲಿ ಶುಭ ಕಾರ್ಯ ನಡೆಯುವುದು.
ಇನ್ನು ವ್ಯಾಪಾರ ಜೀವನದ ಬಗ್ಗೆ ನೋಡುವುದಾದರೆ ವ್ಯಾಪಾರಿಗಳಿಗೆ ಒಳ್ಳೆಯದಿದೆ. ಹೊಸ ವ್ಯಾಪಾರ ಪ್ರಾರಂಭಿಸಬಹುದು. ಯಾವುಾದರೂ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಅದರ ಬಗ್ಗೆ ಸಂಪೂರ್ಣ ತಿಳಿದುಕೊಂಡು ಹಾಕಿ. ವ್ಯಾಪಾರಿಗಳು ನಿರೀಕ್ಷಿತಗಿಂತ ಅಧಿಕ ಲಾಭ ಪಡೆಯಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷ ಗುರು ಬೆಂಬಲ ಚೆನ್ನಾಗಿದೆ.
ಉದ್ಯೋಗಿಗಳೂ ಪ್ರಗತಿಯನ್ನು ಕಾಣುತ್ತಾರೆ. ಈ ವರ್ಷ ಆಸ್ತಿ ಖರೀದಿಸುವ ಸಾಧ್ಯತೆ ಇದೆ.
ನವವಿವಾಹಿತರಿಗೆ ಸಂತಾನ ಭಾಗ್ಯವಿದೆ, ಮದುವೆ ವಯಸ್ಸಿನವರಿಗೆ ಕಂಕಣ ಬಲವಿದೆ.
ಈ ವರ್ಷ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು, ಒಳ್ಳೆಯ ಆಹಾರ ಸೇವಿಸಿ.
ಅದೃಷ್ಟದ ಬಣ್ಣ
ಮಾಣಿಕ್ಯ, ಪಚ್ಚೆ ಶುಭ ಹರಳುಗಳು,
ತಿಳಿ ಪಚ್ಚೆ ಶುಭ ಬಣ್ಣ
ಪರಿಹಾರ
ಶನೇಶ್ವರನ ಪೂಜಿಸಿ. ರಾಹು ಮತ್ತು ಕೇತು ದೋಷವಿರುವುದರಿಂದ ಬುಧವಾರದಂದು ರಾಹುಕಾಲದಲ್ಲಿ ಶಾಂತಿಯನ್ನು ಮಾಡಿಸಿ. ಅನಂತ ಪದ್ಮನಾಭನನ್ನು ಪೂಜಿಸಿ.



Click it and Unblock the Notifications