Just In
- 4 hrs ago ವಾಸ್ತು ಪ್ರಕಾರ ಹೋಳಿಯ ಈ ದಿನ ಈ ರೀತಿ ಮಾಡಿದರೆ ಮನೆಯಲ್ಲಿನ ಸಮಸ್ಯೆ ದೂರಾಗುವುದು, ಸಮೃದ್ಧಿ ಹೆಚ್ಚುವುದು
- 5 hrs ago 'ಉಡುಗೊರೆ ಬೇಡ, ಮೋದಿಗೆ ಓಟು ಹಾಕಿ' ಎಂಬ ಮದುವೆ ಆಮಂತ್ರಣ ಪತ್ರಿಕೆ ವೈರಲ್
- 8 hrs ago ದಿನ ಭವಿಷ್ಯ ಮಾರ್ಚ್ 25: ಹೋಳಿ, ಚಂದ್ರಗ್ರಹಣದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 10 hrs ago ಹೋಳಿಯಾಟದ ಮುನ್ನ ಹಾಗೂ ನಂತರ ಈ ಟಿಪ್ಸ್ ಅನುಸರಿಸಿದರೆ ಬಣ್ಣದಿಂದ ತ್ವಚೆ, ಕೂದಲಿಗೆ ಹಾನಿಯಾಗಲ್ಲ
Don't Miss
- Movies ಕಂಚಿನ ಕಂಠದ ವಸಿಷ್ಠ ಸಿಂಹ ಈಗ 'ವಿಐಪಿ'; ಫಸ್ಟ್ ಲುಕ್ ಚಿಂದಿ
- News ಕಂಗನಾ ರಣಾವತ್ಗೆ ಲೋಕಸಭೆ ಚುನಾವಣೆ 2024ರ ಟಿಕೆಟ್ ಘೋಷಿಸಿದ ಬಿಜೆಪಿ!
- Sports IPL 2024: ಆರ್ಸಿಬಿ vs ಪಂಜಾಬ್ ಕಿಂಗ್ಸ್ ಪಂದ್ಯಕ್ಕಾಗಿ ನಮ್ಮ ಮೆಟ್ರೋ ಸಮಯದಲ್ಲಿ ಬದಲಾವಣೆ
- Automobiles ಟಾಟಾ ಪಂಚ್ ಇವಿ VS ಟಿಯಾಗೋ ಇವಿ: ಟಾಟಾದ ಬಜೆಟ್ ಫ್ರೆಂಡ್ಲಿ ಇವಿಯಲ್ಲಿ ಯಾವುದು ಬೆಸ್ಟ್?
- Finance ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟಕ್ಕೆ ಸಿದ್ಧವಾದ ಅಮುಲ್, ಯುಎಸ್ನಲ್ಲಿ ತಾಜಾ ಉತ್ಪನ್ನಗಳು ಲಭ್ಯ
- Technology Smartphones: 12GB RAM ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು, ಅದೂ ಸಹ 30 ಸಾವಿರದೊಳಗೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Mesha Rashi Ugadi Bhavishya 2022 : ಯುಗಾದಿ ಪಂಚಾಂಗ 2022-23: ಹೇಗಿದೆ ಮೇಷ ರಾಶಿಯ ಭವಿಷ್ಯ?
ಹಿಂದೂಗಳಿಗೆ ಹೊಸ ವರ್ಷವೆಂದರೆ ಅದು ಯುಗಾದಿ, ಈ ದಿನದಿಂದ ಹೊಸ ಸಂವತ್ಸರ ಪ್ರಾರಂಭವಾಗುವುದು, ಹೊಸ ಸಂವತ್ಸರವನ್ನು ಬೇವು-ಬೆಲ್ಲ ಸವಿಯುತ್ತಾ ಸಡಗರ-ಸಂಭ್ರಮದಿಂದ ಸ್ವಾಗತಿಸುವುದೇ ಯುಗಾದಿ. ಈ ವರ್ಷ ಶ್ರೀ ಶುಭಕೃತ ನಾಮ ಸಂವತ್ಸರ.
ಈ ಹೊಸ ವರ್ಷದಲ್ಲಿ ಯುಗಾದಿ ಪಂಚಾಂಗ ಪ್ರಕಾರ ನಿಮ್ಮ ರಾಶಿ ಭವಿಷ್ಯ ಹೇಳಲಾಗುವುದು. ನಾವಿಲ್ಲಿ ಈ ಶುಭಕೃತ ನಾಮ ಸಂವತ್ಸರದಲ್ಲಿ ಮೇಷ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ವಿವರವಾಗಿ ನೀಡಲಾಗಿದೆ ನೋಡಿ:
ಮೇಷ ರಾಶಿ
ಮೇಷ ರಾಶಿಯವರ ಅಧಿಪತಿ ಕುಜನಾಗಿದ್ದಾನೆ. ಈ ಸಂವತ್ಸರದಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿಯನ್ನು ನೋಡುವುದಾದರೆ ಆದಯ 14 ಹಾಗೂ ವ್ಯಯ 14 ಇದೆ. ಅಂದರೆ ಎಷ್ಟು ಗಳಿಸುತ್ತಾರೋ ಅಷ್ಟೇ ಖರ್ಚಾಗುವುದು.
ಇವರ ರಾಜಭೋಗ 3 ಇದೆ, ಅವಮಾನ 6 ಇದೆ. ಹಾಗೆಯೇ ಅಶ್ವಿನಿ ನಾಲ್ಕು ಪಾದ, ಭರಣಿ ನಾಲ್ಕು ಪಾದ, ಕೃತಿಕಾ 1 ಪಾದ ಹೊಂದಿದೆ. ಇದರಿಂದಾಗಿ ಜೀವನ ಸಕಾರಾತ್ಮವಾಗಿರುತ್ತದೆ. ಅಲ್ಲದೆ ಏಪ್ರಿಲ್ 13ಕ್ಕೆ ಗುರು ಗ್ರಹದ ಸಂಚಾರವಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚುವುದು.
ಅಲ್ಲದೆ ಶನಿಯ ಕೃಪೆ ಇರುವುದರಿಂದ ಈ ರಾಶಿಯವರು ತಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯುತ್ತಾರೆ. ಅಲ್ಲದೆ ಹೊಸ ಅವಕಾಶಗಳು ಕೂಡ ಹೆಚ್ಚಾಗಿ ಬರುವುದು.. 2022ರ ಮಧ್ಯಭಾಗದಲ್ಲಿ ಕೆಲವೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರೂ ಪ್ರಗತಿಯನ್ನು ಕಾಣುತ್ತಾರೆ.
ಮೇ ಮಧ್ಯ ಭಾಗದಿಂದ ಅಕ್ಟೋಬರ್ವರೆಗಿನ ಕಾಲಾವಧಿ ತುಂಬಾನೇ ಚೆನ್ನಾಗಿರುತ್ತದೆ. ನವೆಂಬರ್-ಡಿಸೆಂಬರ್ ನಿಮ್ಮ ವೇಗ ಸ್ವಲ್ಪಕಡಿಮೆಯಾದರೂ ನಂತರ ಸರಿ ಹೋಗುವುದು. ಯಾವುದೇ ಸಾಲ ವ್ಯವಹಾರ ಮಾಡಬೇಡಿ.
ವಿದ್ಯಾರ್ಥಿಗಳ ಪ್ರಾರಂಭದಲ್ಲಿ ಸ್ವಲ್ಪ ಅಡೆತಡೆ ಉಂಟಾದರೂ ನಂತರ ಒಳ್ಳೆಯ ಫಲ ಸಿಗಲಿದೆ. ವ್ಯಯ ಹೆಚ್ಚಾಗಿದ್ದರೂ ಆರ್ಥಿಕತೆಯಲ್ಲಿ ಸ್ಥಿರತೆ ಇರುತ್ತದೆ. ಏಪ್ರಿಲ್ನಲ್ಲಿ ಅನಿರೀಕ್ಷಿತ ಲಾಭ ಪಡೆಯಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವಿರಿ.
ಕೌಟಂಬಿಕ ಜೀವನದಲ್ಲಿ ಖುಷಿ-ಸಂತೋಷ ಇರುತ್ತದೆ. ಸಂತಾನ ಅಪೇಕ್ಷಿತ ದಂಪತಿ ಶುಭ ಸುದ್ದಿ ಪಡೆಯುವಿರಿ. ಯುವಕ-ಯುವತಿಯರಿಗೆ ಕಂಕಣ ಬಲ ಕೂಡಿ ಬರುವುದು. ಸಾಮಾಜಿಕವಲಯದಲ್ಲೂ ಒಳ್ಳೆಯ ಸ್ಥಾನಮಾನ ಪಡೆಯುತ್ತೀರಿ.
ಆರೋಗ್ಯ 1 ಅನಾರೋಗ್ಯ 6 ತೋರಿಸುತ್ತಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಯೋಗ, ಪ್ರಾಣಯಾಮ ನಿಮ್ಮ ದಿನಚರಿಯಲ್ಲಿದ್ದರೆ ಒಳ್ಳೆಯದು.
ನಿಮ್ಮ
ಅದೃಷ್ಟದ
ಬಣ್ಣ:
ಕೆಂಪು
ಪರಿಹಾರ
ಶುಕ್ರ
ಮೀನದಲ್ಲಿರುವಾಗ
ಲಕ್ಷ್ಮಿ
ಪೂಜೆ
ಮಾಡಿದರೆ
ಒಳ್ಳೆಯು.
ಪ್ರತಿನಿತ್ಯ
ದಾಳಿಂಬೆ
ಸೇವಿಸಿ
ಶನೇಶ್ವರ
ಶಾಂತಿ,
ಗುರು
ಶಾಂತಿ
ಮಾಡಿಸಿದರೆ
ಒಳ್ಳೆಯದು.
ಈ ವರ್ಷ ವಾಹನ ಖರೀದಿಸುವ ಯೋಗವಿದೆ.