Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
Mesha Rashi Ugadi Bhavishya 2022 : ಯುಗಾದಿ ಪಂಚಾಂಗ 2022-23: ಹೇಗಿದೆ ಮೇಷ ರಾಶಿಯ ಭವಿಷ್ಯ?
ಹಿಂದೂಗಳಿಗೆ ಹೊಸ ವರ್ಷವೆಂದರೆ ಅದು ಯುಗಾದಿ, ಈ ದಿನದಿಂದ ಹೊಸ ಸಂವತ್ಸರ ಪ್ರಾರಂಭವಾಗುವುದು, ಹೊಸ ಸಂವತ್ಸರವನ್ನು ಬೇವು-ಬೆಲ್ಲ ಸವಿಯುತ್ತಾ ಸಡಗರ-ಸಂಭ್ರಮದಿಂದ ಸ್ವಾಗತಿಸುವುದೇ ಯುಗಾದಿ. ಈ ವರ್ಷ ಶ್ರೀ ಶುಭಕೃತ ನಾಮ ಸಂವತ್ಸರ.
ಈ ಹೊಸ ವರ್ಷದಲ್ಲಿ ಯುಗಾದಿ ಪಂಚಾಂಗ ಪ್ರಕಾರ ನಿಮ್ಮ ರಾಶಿ ಭವಿಷ್ಯ ಹೇಳಲಾಗುವುದು. ನಾವಿಲ್ಲಿ ಈ ಶುಭಕೃತ ನಾಮ ಸಂವತ್ಸರದಲ್ಲಿ ಮೇಷ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ವಿವರವಾಗಿ ನೀಡಲಾಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರ ಅಧಿಪತಿ ಕುಜನಾಗಿದ್ದಾನೆ. ಈ ಸಂವತ್ಸರದಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿಯನ್ನು ನೋಡುವುದಾದರೆ ಆದಯ 14 ಹಾಗೂ ವ್ಯಯ 14 ಇದೆ. ಅಂದರೆ ಎಷ್ಟು ಗಳಿಸುತ್ತಾರೋ ಅಷ್ಟೇ ಖರ್ಚಾಗುವುದು.
ಇವರ ರಾಜಭೋಗ 3 ಇದೆ, ಅವಮಾನ 6 ಇದೆ. ಹಾಗೆಯೇ ಅಶ್ವಿನಿ ನಾಲ್ಕು ಪಾದ, ಭರಣಿ ನಾಲ್ಕು ಪಾದ, ಕೃತಿಕಾ 1 ಪಾದ ಹೊಂದಿದೆ. ಇದರಿಂದಾಗಿ ಜೀವನ ಸಕಾರಾತ್ಮವಾಗಿರುತ್ತದೆ. ಅಲ್ಲದೆ ಏಪ್ರಿಲ್ 13ಕ್ಕೆ ಗುರು ಗ್ರಹದ ಸಂಚಾರವಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚುವುದು.
ಅಲ್ಲದೆ ಶನಿಯ ಕೃಪೆ ಇರುವುದರಿಂದ ಈ ರಾಶಿಯವರು ತಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯುತ್ತಾರೆ. ಅಲ್ಲದೆ ಹೊಸ ಅವಕಾಶಗಳು ಕೂಡ ಹೆಚ್ಚಾಗಿ ಬರುವುದು.. 2022ರ ಮಧ್ಯಭಾಗದಲ್ಲಿ ಕೆಲವೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರೂ ಪ್ರಗತಿಯನ್ನು ಕಾಣುತ್ತಾರೆ.
ಮೇ ಮಧ್ಯ ಭಾಗದಿಂದ ಅಕ್ಟೋಬರ್ವರೆಗಿನ ಕಾಲಾವಧಿ ತುಂಬಾನೇ ಚೆನ್ನಾಗಿರುತ್ತದೆ. ನವೆಂಬರ್-ಡಿಸೆಂಬರ್ ನಿಮ್ಮ ವೇಗ ಸ್ವಲ್ಪಕಡಿಮೆಯಾದರೂ ನಂತರ ಸರಿ ಹೋಗುವುದು. ಯಾವುದೇ ಸಾಲ ವ್ಯವಹಾರ ಮಾಡಬೇಡಿ.
ವಿದ್ಯಾರ್ಥಿಗಳ ಪ್ರಾರಂಭದಲ್ಲಿ ಸ್ವಲ್ಪ ಅಡೆತಡೆ ಉಂಟಾದರೂ ನಂತರ ಒಳ್ಳೆಯ ಫಲ ಸಿಗಲಿದೆ. ವ್ಯಯ ಹೆಚ್ಚಾಗಿದ್ದರೂ ಆರ್ಥಿಕತೆಯಲ್ಲಿ ಸ್ಥಿರತೆ ಇರುತ್ತದೆ. ಏಪ್ರಿಲ್ನಲ್ಲಿ ಅನಿರೀಕ್ಷಿತ ಲಾಭ ಪಡೆಯಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವಿರಿ.
ಕೌಟಂಬಿಕ ಜೀವನದಲ್ಲಿ ಖುಷಿ-ಸಂತೋಷ ಇರುತ್ತದೆ. ಸಂತಾನ ಅಪೇಕ್ಷಿತ ದಂಪತಿ ಶುಭ ಸುದ್ದಿ ಪಡೆಯುವಿರಿ. ಯುವಕ-ಯುವತಿಯರಿಗೆ ಕಂಕಣ ಬಲ ಕೂಡಿ ಬರುವುದು. ಸಾಮಾಜಿಕವಲಯದಲ್ಲೂ ಒಳ್ಳೆಯ ಸ್ಥಾನಮಾನ ಪಡೆಯುತ್ತೀರಿ.
ಆರೋಗ್ಯ 1 ಅನಾರೋಗ್ಯ 6 ತೋರಿಸುತ್ತಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಯೋಗ, ಪ್ರಾಣಯಾಮ ನಿಮ್ಮ ದಿನಚರಿಯಲ್ಲಿದ್ದರೆ ಒಳ್ಳೆಯದು.
ನಿಮ್ಮ ಅದೃಷ್ಟದ ಬಣ್ಣ: ಕೆಂಪು
ಪರಿಹಾರ
ಶುಕ್ರ ಮೀನದಲ್ಲಿರುವಾಗ ಲಕ್ಷ್ಮಿ ಪೂಜೆ ಮಾಡಿದರೆ ಒಳ್ಳೆಯು.
ಪ್ರತಿನಿತ್ಯ ದಾಳಿಂಬೆ ಸೇವಿಸಿ
ಶನೇಶ್ವರ ಶಾಂತಿ, ಗುರು ಶಾಂತಿ ಮಾಡಿಸಿದರೆ ಒಳ್ಳೆಯದು.
ಈ ವರ್ಷ ವಾಹನ ಖರೀದಿಸುವ ಯೋಗವಿದೆ.



Click it and Unblock the Notifications