Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಯುಗಾದಿ ರಾಶಿ ಭವಿಷ್ಯ 2023 : ಮಿಥುನ ರಾಶಿಯವರಿಗೆ ಈ ವರ್ಷ ಶುಭವೋ? ಅಶುಭವೋ?
ಹಿಂದೂ ಪಂಚಾಗದ ಪ್ರಕಾರ ಯುಗಾದಿ ಭಾರತೀಯರಿಗೆ ಹೊಸ ವರ್ಷದ ಖುಷಿಯನ್ನು ಹಂಚುತ್ತದೆ. ಈ ಯುಗಾದಿಯನ್ನು ಬರ ಮಾಡಿಕೊಳ್ಳುವ ಸಂತಸದ ಸಮಯದಲ್ಲಿ ನಮ್ಮ ರಾಶಿ ಭವಿಷ್ಯ ಬಗ್ಗೆ ತಿಳಿದು ಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ.

ಈ ಯುಗಾದಿಯ ನಂತರ ಮಿಥುನ ರಾಶಿಯವರ ರಾಶಿ ಫಲ ಹೇಗಿದೆ? ಶುಭ ಕಾರ್ಯಗಳನ್ನು ಮಾಡಲು ಈ ವರ್ಷ ಪ್ರಾಶಸ್ತವಾಗಿದ್ಯಾ? ಯುಗಾದಿಯ ನಂತರದ ಒಂದು ವರ್ಷ ಮಿಥುನ ರಾಶಿಯವರಿಗೆ ಶುಭವೋ? ಅಶುಭವೋ ಅನ್ನೋದನ್ನ ತಿಳಿದುಕೊಳ್ಳೋಣ.

ಮಿಥುನ ರಾಶಿ ಫಲ
ಏಪ್ರಿಲ್ 22 ಕ್ಕೆ ಗುರು ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ವರ್ಷಪೂರ್ತಿ ಅಲ್ಲೇ ಇರುತ್ತಾನೆ. ರಾಹು ಅಕ್ಟೋಬರ್ 29 ಕ್ಕೆ ಮೀನಾ ರಾಶಿಗೆ ಪ್ರವೇಶ ಮಾಡುತ್ತಾನೆ. ಆದರೆ ಪರಿಪೂರ್ಣವಾಗಿ ಮೀನಾ ರಾಶಿಗೆ ರಾಹುವಿನ ಪ್ರವೇಶವಾಗುವುದು ನವೆಂಬರ್ 29 ರ ನಂತರ. ಕೇತು ನವೆಂಬರ್ 29 ರವರೆಗೆ ತುಲಾ ರಾಶಿಯಲ್ಲಿ ಸ್ಥಿತನಾದ ಫಲವನ್ನೇ ಕೊಡುತ್ತಾನೆ. ಶನಿ ಈಗಾಗಲೇ ಭಾಗ್ಯ ಸ್ಥಿತಿಗೆ ಬಂದಿದ್ದಾನೆ. ಇನ್ನೂ ಈ ನಾಲ್ಕು ಗ್ರಹಗಳ ಗೋಚರ ಫಲ ಮಿಥುನ ರಾಶಿಯ ಮೇಲೆ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳೋಣ.

ಆರ್ಥಿಕ ಅಭಿವೃದ್ಧಿಯಾಗುತ್ತದೆ
ಲಾಭದಲ್ಲಿ ಗುರು ಹಾಗೂ ರಾಹು ಇದ್ದಾರೆ. ಹೀಗಾಗಿ ಚಾಂಡಾಲ ಯೋಗ ಅಂತ ಹೇಳ್ತೀವಿ. ಗುರು ಮತ್ತು ರಾಹು ಇಬ್ಬರು ಲಾಭದಲ್ಲಿದ್ದಾರೆ. ಹೀಗಾಗಿ ಲಾಭದಲ್ಲಿ ಯಾವುದೇ ಗ್ರಹವಿದ್ದರೂ ಅದು ಶುಭ. ಹೀಗಾಗಿ ಈ ಯುಗಾದಿ ಕಳೆದ ಮೇಲೆ ಮಿಥುನ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿಯಾಗುತ್ತದೆ. ರಾಹು ಲಾಭದಲ್ಲಿ ಇರೋದ್ರಿಂದ ನಿಮಗೆ ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ.

ಸಾಲದ ಭಾದೆ ನಿವಾರಣೆ
ಮಿಥುನ ರಾಶಿಯವರಿಗೆ ಮುಖ್ಯವಾಗಿ ಯಾರಿಗೆ ಸಾಲದ ಹೊರೆ ಇದೆ. ಈ ಯುಗಾದಿ ಕಳೆದ ಮೇಲೆ ಖಂಡಿತ ನಿಮ್ಮ ಸಾಲಗಳಿಗೆ ಮುಕ್ತಿ ಸಿಗಲಿದೆ.
ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ
ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ಈ ವರ್ಷ ತುಂಬಾ ಚೆನ್ನಾಗಿದೆ. ಗುರು ದೃಷ್ಟಿ ಮಿಥುನ ರಾಶಿಯ ಮೇಲೆ ಬಿದ್ದಿರೋದ್ರಿಂದ ನಿಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಾ. ಶಿಕ್ಷಣದಲ್ಲಿ ನಿಮಗೆ ಉತ್ತಮ ಅವಕಾಶಗಳು ಈ ವರ್ಷ ಲಭ್ಯವಾಗಲಿದೆ.

ವಿವಾಹ ಭಾಗ್ಯ
ಮಿಥುನ ರಾಶಿಯವರು ಯಾರೆಲ್ಲಾ ಮದುವೆಯಾಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದೀರೋ ಅವರಿಗೆಲ್ಲಾ ವಿವಾಹ ಯೋಗವಿದೆ. ಗುರು ಬಲವಿರೋದ್ರಿಂದ ಈ ವರ್ಷ ಕಂಕಣ ಭಾಗ್ಯವಿದೆ. ಇನ್ನೂ ಸಂತಾನವಿಲ್ಲದವರಿಗೆ ಸಂತಾನ ಪ್ರಾಪ್ತಿ ಕೂಡ ಆಗಲಿದೆ. ನಿಮ್ಮಲ್ಲಿ ದೈವ ಭಕ್ತಿ ಜಾಸ್ತಿಯಾಗಲಿದೆ. ಪುಣ್ಯ ಸ್ಥಳಗಳಿಗೆ ಹೋಗುವ ಅವಕಾಶ ಸಿಗಲಿದೆ.

ಉದ್ಯೋಗಿಗಳಿಗೆ ಒಳ್ಳೆಯ ಕಾಲ
ಮಿಥುನ ರಾಶಿಯ ಉದ್ಯೋಗಿಗಳು ನಿರೀಕ್ಷಿಸಿದಕ್ಕಿಂತ ಹೆಚ್ಚಿನದ್ದು ಈ ವರ್ಷ ನಿಮಗೆ ಸಿಗಲಿದೆ. ಉದ್ಯೋಗದಲ್ಲಿ ಪ್ರಮೋಚನ್ ಸಿಗುವ ಸಾಧ್ಯತೆ ಹೆಚ್ಚಿದೆ. ಬೇರೆಕಡೆಗೆ ವರ್ಗಾವಣೆಗೆ ಪ್ರಯತ್ನಿಸುತ್ತಿರುವವರಿಗೂ ಕೂಡ ಶುಭ ಸುದ್ದಿ ಕಾದಿದೆ. ಸಂಭಳ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಭಾಗ್ಯದಲ್ಲಿ ಭಾಗ್ಯಾಧಿಪತಿ ಇರೋದ್ರಿಂದ ಅದೃಷ್ಟ ಒಲಿದು ಬರಲಿದೆ.

ಮನಃಶಾಂತಿ ಕದಡಲಿದೆ
ತೃತಿಯ ಭಾವಕ್ಕೆ ಶನಿ ದೃಷ್ಟಿ ಇರೋದ್ರಿಂದ ಮಿಥುನ ರಾಶಿಯವರಿಗೆ ಈ ವರ್ಷ ನಿಮ್ಮ ಬಂಧು-ಮಿತ್ರರು, ಸ್ನೇಹಿತರ ಜೊತೆಗೆ ಮನಸ್ಥಾಪಗಳಾಗುವ ಸಾಧ್ಯತೆಗಳಿದೆ. ಈ ಕಾರಣಕ್ಕಾಗಿ ಕೊಂಚಮಟ್ಟಿಗೆ ನಿಮ್ಮ ಮನಃಶಾಂತಿ ಕದಡುವ ಸಾಧ್ಯತೆ ಹೆಚ್ಚಾಗಿದೆ. ಹನುಮಾನ್ಚಾಲಿಸ್ ಮಂತ್ರ ಪಠಿಸುವುದರಿಂದ ಕೊಂಚ ಮಟ್ಟಿಗೆ ಸದೃಢರಾಗಿರ್ತಿರಾ.
ಪರಿಹಾರ
ಮಿಥುನ ರಾಶಿಯವರು ಸಂಕಷ್ಟ ಪರಿಹಾರಕ್ಕಾಗಿ ಕಪ್ಪು ಎಳ್ಳನ್ನು ಪ್ರತಿ ಶನಿವಾರ ದೇವಾಸ್ಥಾನಕ್ಕೆ ಅರ್ಪಿಸಿ. ಹೀಗೆ ನಿರಂತರವಾಗಿ ಹದಿನಾರು ಶನಿವಾರಗಳ ಕಾಲ ಇದನ್ನು ಮುಂದುವರಿಸಿ.
ಒಟ್ಟಿನಲ್ಲಿ ಈ ಬಾರಿ ಮಿಥುನ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗಲಿದೆ. ಅಂದುಕೊಂಡ ಕೆಲಸಗಳೆಲ್ಲಾ ಸುಗಮವಾಗಿ ನೆರವೇರಲಿದೆ.



Click it and Unblock the Notifications