Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಈ 5 ಸಂಗತಿ ತಿಳಿದರೆ ಯುಗಾದಿ ಮತ್ತಷ್ಟು ಸ್ಪೆಷಲ್ ಅನಿಸುವುದು
ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಎಂದರೆ ನವ ವರ್ಷ. ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಪ್ರಾರಂಭವಾಗುವುದೇ ಯುಗಾದಿಯಿಂದ. ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ..... ಈ ಸಾಲಿನಲ್ಲಿ ಮಾರ್ಚ್ 22ಕ್ಕೆ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ.

ಯುಗಾದಿ ಹಬ್ಬದ ಬಗ್ಗೆ ಈ 5 ವಿಷಯಗಳು ಗೊತ್ತಿದ್ದರೆ ಯುಗಾದಿ ಮತ್ತಷ್ಟು ಸ್ಪೆಷಲ್ ಆಗುವುದು ನೋಡಿ:

ಹೊಸ ವರ್ಷದ ಆರಂಭ
ಯುಗಾದಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ಮಾರ್ಚ್ನಲ್ಲಿ ಬಂದಿದೆ. ಕರ್ನಾಟಕ, ಆಂಧ್ರಪ್ರದೇಶದಲ್ಲಿಈ ಹಬ್ಬವನ್ನು ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಉತ್ತರ ಭಾರತದ ಕಡೆ ಗುಡಿ ಪರ್ವ ಎಂದು ಈ ದಿನ ಹಬ್ಬವನ್ನು ಆಚರಿಸಲಾಗುವುದು.
ಯುಗಾದಿಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಎಂದು ಪರಿಗಣಿಸಲಾಗುವುದು. ಹೊಸ ವರ್ಷದ ಸೂಚನೆಗಳು ಪ್ರಕೃತಿಯಲ್ಲೂ ಕಾಣಸಿಗುವುದು.
ವಸಂತ ಋತುವಿನ ಕಾಲದಲ್ಲಿ ಗಿಡಗಳ ಎಲೆಗಳು ಉದುರಿ ಹೊಸ ಚಿಗುರು ಮೂಡಿರುತ್ತದೆ, ಪ್ರಕೃತ್ತಿಯಲ್ಲಿಯೇ ಹೊಸತನ ಮೂಡಿರುತ್ತದೆ. ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುವುದು, ಮಾವುಗಳಲ್ಲಿ ಎಳೆ ತಳಿರು ಮೂಡುವುದು, ಪ್ರಕೃತ್ತಿಯಲ್ಲಿಯೇ ಹೊಸತನ ಕಾಣುತ್ತೇವೆ.

ಯುಗಾದಿಯಂದು ಬ್ರಹ್ಮ ವಿಶ್ವವನ್ನು ಸೃಷ್ಟಿಸಿದ
ಹಿಂದೂ ಧರ್ಮದಲ್ಲಿ ಬ್ರಹ್ಮನನ್ನು ಸೃಷ್ಟಿಕರ್ತವೆಂದು ಹೇಳಲಾಗುವುದು. ಇಡೀ ವಿಶ್ವವನ್ನು ಬ್ರಹ್ಮ ನಿರ್ಮಿಸಿದ್ದಾನೆ ಎಂದು ಹೇಳಲಾಗುವುದು. ಬ್ರಹ್ಮ ಯುಗಾದಿಯಲ್ಲಿ ವಿಶ್ವವನ್ನು ನಿರ್ಮಿಸಿದ ಎಂದು ನಂಬಲಾಗಿದೆ. ಈ ಯುಗಾದಿ ಹಬ್ಬ ನಮ್ಮೆಲ್ಲರ ಬದುಕಿನಲ್ಲಿ ಹೊಸತನ್ನು ಹೊತ್ತು ತರುತ್ತದೆ, ಆದ್ದರಿಂದಲೇ ಯುಗಾದಿ ತುಂಬಾನೇ ಸ್ಪೆಷಲ್ ಅನಿಸುವುದು.

ಯುಗಾದಿಯಂದು ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕ
ರಾಮಾಯಣದಲ್ಲಿ ಯುಗಾದಿಯಂದು ಅಯೋಧ್ಯೆಯ ರಾಜನಾಗಿ ರಾಮನನ್ನು ಪಟ್ಟಾಭಿಷೇಕ ಮಾಡಲಾಯಿತು ಎಂದು ಹೇಳಲಾಗಿದೆ. ಶ್ರೀರಾಮ ದುಷ್ಟನಾದ ರಾವಣನ ಸಂಹರಿಸಿ ವಿಜಯದೊಂದಿಗೆ ಅಯೋಧ್ಯೆಗೆ ಹಿಂತಿರುಗಿದ, ಅಯೋಧ್ಯೆಯ ಜನರು ರಂಗೋಲಿ ಹಾಕಿ, ಹಣತೆಗಳನ್ನು ಹಚ್ಚಿ ಶ್ರೀರಾಮ, ಸೀತೆ, ಲಕ್ಷ್ಮಣರನ್ನು ಸ್ವಾಗತಿಸಿದರು ಎಂದು ರಾಮಾಯಣದಲ್ಲಿ ಹೇಳಲಾಗಿದೆ.

ಕಲಿಯುಗದ ಆರಂಭ
ಯುಗಾದಿಯಂದು ದ್ವಾಪರಯುಗ ಮುಗಿದು ಕಲಿಯುಗ ಪ್ರಾರಂಭವಾಯಿತು, ಶ್ರೀಕೃಷ್ಣ ದ್ವಾಪರಯುಗದ ನಂತರ ದೇವ ಲೋಕಕ್ಕೆ ಹಿಂತಿರುಗಿದ. ಕಲಿಯುಗದದಲ್ಲಿ ಹಿಂಸೆ, ಅನ್ಯಾಯಗಳು ಹೆಚ್ಚಾದಾಗ ಮತ್ತೆ ರೂಪವೆತ್ತಿ ಬರುತ್ತಾನೆ ಬಂದು ದುಷ್ಟರಿಗೆ ತಕ್ಕ ಪಾಠ ಕಲಿಸುತ್ತಾನೆ ಎಂದು ನಂಬಲಾಗಿದೆ.

ಯುಗಾದಿ ಆಚರಣೆ ಹೇಗೆ?
ಯುಗಾದಿಯನ್ನು ಬೇವು-ಬೆಲ್ಲದ ಜೊತೆಗೆ ಆಚರಿಸಲಾಗುವುದು. ಮಾನವ ಜೀವನವೆಂದರೆ ಅಲ್ಲಿ ಸಿಹಿಯೂ ಇರುತ್ತೆ, ಕಹಿಯೂ ಇರುತ್ತೆ ಅಂದರೆ ಸುಖ: ದುಃಖ ಎರಡೂ ಇರುತ್ತದೆ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು, ಸಮತೋಲನದ ಜೀವನ ನಡೆಸಬೇಕೆಂಬುವುದೇ ಯುಗಾದಿಯಲ್ಲಿ ಬೇವು-ಬೆಲ್ಲ ಸವಿಯುವುದರ ಹಿಂದಿನ ಅರ್ಥವಾಗಿದೆ.
ವೈಜ್ಞಾನಿಕವಾಗಿಯೂ ಬೇವು-ಬೆಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ದಿನ ರಂಗೋಲಿ ಹಾಕಿ, ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಯುಗಾದಿ ಪಚಡಿ ತಯಾರಿಸಿ, ಹಬ್ಬದ ಅಡುಗೆ ಮಾಡಿ ಸಂತೋಷ, ಸಡಗರದಿಂದ ಆಚರಿಸಲಾಗುವುದು.
ಈ ಯುಗಾದಿ ನಿಮ್ಮೆಲ್ಲರ ಬಾಳಲ್ಲಿ ಹೊಸತನ್ನು ತರಲಿ, ನಿಮ್ಮ ಆಸೆ ಈಡೇರಲಿ, ಕನಸು ನನಸಾಗಲಿ, ಬಾಳು ಬಂಗಾರವಾಗಲಿ.



Click it and Unblock the Notifications
