Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಮಕರದಲ್ಲಿ ಶನಿ ಮಾರ್ಗಿ: ಆರ್ಥಿಕ ಸಂಕಷ್ಟ, ಕಷ್ಟಗಳು ನೀಗಲು ಶನಿಗೆ ಈ ಪರಿಹಾರ ಮಾಡಿ
ಯಾರೇ ಆಗಲಿ ಶನಿದೇವನ ಭಯ ಪಡುತ್ತಾರೆ, ಏಕೆಂದರೆ ಶನಿಯ ಕೋಪಕ್ಕೆ ಗುರಿಯಾದರೆ ತುಂಬಾ ಕಷ್ಟಗಳನ್ನು ಸಹಿಸಬೇಕಾಗುತ್ತದೆ ಎಂದು ಹೇಳಲಾಗುವುದು. ಜ್ಯೋತಿಷ್ಯ ಪ್ರಕಾರ ಶನಿಯು ತುಂಬಾ ಶನಿಯು ರಾಶಿಯಿಂದ ರಾಶಿಗೆ ತುಂಬಾ ನಿಧಾನಗತಿಯಲ್ಲಿ ಸಾಗುವ ಗ್ರಹವಾಗಿದೆ. ಇದು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ.

ಈ ವರ್ಷದಲ್ಲಿ ಜೂನ್ 5ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸಿದ್ದ ಶನಿ ಜುಲೈ 12, 2022ರಲ್ಲಿ ಮಕರ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಾರಂಭಿಸಿತ್ತು. ಅಕ್ಟೋಬರ್ 23ರಿಂದ ಶನಿಯು ಮಕರ ರಾಶಿಯಲ್ಲಿ ನೇರವಾಗಿ ಚಲಿಸುತ್ತಿದೆ. ಮಕರ ರಾಶಿಯಿಂದ ಕುಂಭ ರಾಶಿಗೆ ಶನಿಯು ಜನವರಿ 17, 2023ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸಲಿದೆ.
ಶನಿಯು ಮಕರ ರಾಶಿಯಲ್ಲಿ ನೇರ ಸಂಚಾರದಲ್ಲಿ ಇರುವ ಈ ಸಮಯ ನಿಮ್ಮ ಕಾರ್ಯಗಳಿಗೆ ಯಾವುದೆ ವಿಘ್ನ ಉಂಟಾಗದಿರಲು, ಶನಿಯ ಕೃಪೆಗೆ ಪಾತ್ರರಾಗಿ ಕಷ್ಟವನ್ನು ನೀಗಿಸಲು ಈ ಪರಿಹಾರಗಳನ್ನು ಮಾಡಿ:

ಶನಿ ದೋಷ ನಿವಾರಣೆಗೆ ಪರಿಹಾರಗಳು-
* ಶನಿಯ ಅಶುಭ ಪರಿಣಾಮಗಳನ್ನು ತಪ್ಪಿಸಲು ಹನುಮಂತನನ್ನು ಪೂಜಿಸಬೇಕು. ಹನುಮಂತನನ್ನು ಪೂಜಿಸುವುದರಿಂದ ಶನಿ ದೋಷದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ಶನಿದೇವನೂ ಶಿವನ ಆರಾಧನೆಯಿಂದ ಸಂತುಷ್ಟನಾಗುತ್ತಾನೆ. ಇದು ಕಾರ್ತಿಕ ಮಾಸ, ಶಿವನಿಗೆ ಪೂಜೆ ಮಾಡಿ, ಶನಿ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿ. ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು ಪ್ರಯೋಜನಕಾರಿಯಾಗಿದೆ. ಎಳ್ಳೆಣ್ಣೆ, ಕಪ್ಪು ಕಂಬಳಿ, ಇಂಥ ವಸ್ತುಗಳನ್ನು ದಾನ ಮಾಡಿ.

ಆರ್ಥಿಕ ಸಂಕಷ್ಟ ನಿವಾರಣೆಗೆ
* ತುಂಬಾ ಆರ್ಥಿಕ ತೊಂದರೆ ಅನುಭವಿಸುತ್ತಿದ್ದರೆ ಅದನ್ನು ನೀಗಿಸಲು ಶಕರನಿಗೆ ಹಾಲು ಹಾಗೂ ಕಪ್ಪು ಎಳ್ಳನ್ನು ಅರ್ಪಿಸಿ, ಇದರಿಂದ ಆರ್ಥಿಕ ಸಂಕಟಗಳು ಕಡಿಮೆಯಾಗುವುದು.
* ಮಾತೆ ಕಾಳಿಯನ್ನು ಆರಾಧಿಸಿ.

ಶನಿವಾರ ಹೀಗೆ ಮಾಡಿ
* ಈ ದಿನ ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಿ.
* ಈ ದಿನ ಆಲದ ಮರಕ್ಕೆ ಸುತ್ತು ಬಂದು ದೀಪವನ್ನು ಹಚ್ಚಿ.
* ಶನಿವಾರ ಹನುಮಂತನಿಗೆ ಕುಂಕುಮ ಅರ್ಪಿಸಿ.

ಈ ಶನಿ ಮಂತ್ರ ಪ್ರತಿದಿನ ಪಠಿಸಿ
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್



Click it and Unblock the Notifications
