Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ಮಕರದಲ್ಲಿ ಶನಿ ಮಾರ್ಗಿ: ಆರ್ಥಿಕ ಸಂಕಷ್ಟ, ಕಷ್ಟಗಳು ನೀಗಲು ಶನಿಗೆ ಈ ಪರಿಹಾರ ಮಾಡಿ
ಯಾರೇ ಆಗಲಿ ಶನಿದೇವನ ಭಯ ಪಡುತ್ತಾರೆ, ಏಕೆಂದರೆ ಶನಿಯ ಕೋಪಕ್ಕೆ ಗುರಿಯಾದರೆ ತುಂಬಾ ಕಷ್ಟಗಳನ್ನು ಸಹಿಸಬೇಕಾಗುತ್ತದೆ ಎಂದು ಹೇಳಲಾಗುವುದು. ಜ್ಯೋತಿಷ್ಯ ಪ್ರಕಾರ ಶನಿಯು ತುಂಬಾ ಶನಿಯು ರಾಶಿಯಿಂದ ರಾಶಿಗೆ ತುಂಬಾ ನಿಧಾನಗತಿಯಲ್ಲಿ ಸಾಗುವ ಗ್ರಹವಾಗಿದೆ. ಇದು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ.

ಈ ವರ್ಷದಲ್ಲಿ ಜೂನ್ 5ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸಿದ್ದ ಶನಿ ಜುಲೈ 12, 2022ರಲ್ಲಿ ಮಕರ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಾರಂಭಿಸಿತ್ತು. ಅಕ್ಟೋಬರ್ 23ರಿಂದ ಶನಿಯು ಮಕರ ರಾಶಿಯಲ್ಲಿ ನೇರವಾಗಿ ಚಲಿಸುತ್ತಿದೆ. ಮಕರ ರಾಶಿಯಿಂದ ಕುಂಭ ರಾಶಿಗೆ ಶನಿಯು ಜನವರಿ 17, 2023ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸಲಿದೆ.
ಶನಿಯು ಮಕರ ರಾಶಿಯಲ್ಲಿ ನೇರ ಸಂಚಾರದಲ್ಲಿ ಇರುವ ಈ ಸಮಯ ನಿಮ್ಮ ಕಾರ್ಯಗಳಿಗೆ ಯಾವುದೆ ವಿಘ್ನ ಉಂಟಾಗದಿರಲು, ಶನಿಯ ಕೃಪೆಗೆ ಪಾತ್ರರಾಗಿ ಕಷ್ಟವನ್ನು ನೀಗಿಸಲು ಈ ಪರಿಹಾರಗಳನ್ನು ಮಾಡಿ:

ಶನಿ ದೋಷ ನಿವಾರಣೆಗೆ ಪರಿಹಾರಗಳು-
* ಶನಿಯ ಅಶುಭ ಪರಿಣಾಮಗಳನ್ನು ತಪ್ಪಿಸಲು ಹನುಮಂತನನ್ನು ಪೂಜಿಸಬೇಕು. ಹನುಮಂತನನ್ನು ಪೂಜಿಸುವುದರಿಂದ ಶನಿ ದೋಷದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ಶನಿದೇವನೂ ಶಿವನ ಆರಾಧನೆಯಿಂದ ಸಂತುಷ್ಟನಾಗುತ್ತಾನೆ. ಇದು ಕಾರ್ತಿಕ ಮಾಸ, ಶಿವನಿಗೆ ಪೂಜೆ ಮಾಡಿ, ಶನಿ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿ. ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು ಪ್ರಯೋಜನಕಾರಿಯಾಗಿದೆ. ಎಳ್ಳೆಣ್ಣೆ, ಕಪ್ಪು ಕಂಬಳಿ, ಇಂಥ ವಸ್ತುಗಳನ್ನು ದಾನ ಮಾಡಿ.

ಆರ್ಥಿಕ ಸಂಕಷ್ಟ ನಿವಾರಣೆಗೆ
* ತುಂಬಾ ಆರ್ಥಿಕ ತೊಂದರೆ ಅನುಭವಿಸುತ್ತಿದ್ದರೆ ಅದನ್ನು ನೀಗಿಸಲು ಶಕರನಿಗೆ ಹಾಲು ಹಾಗೂ ಕಪ್ಪು ಎಳ್ಳನ್ನು ಅರ್ಪಿಸಿ, ಇದರಿಂದ ಆರ್ಥಿಕ ಸಂಕಟಗಳು ಕಡಿಮೆಯಾಗುವುದು.
* ಮಾತೆ ಕಾಳಿಯನ್ನು ಆರಾಧಿಸಿ.

ಶನಿವಾರ ಹೀಗೆ ಮಾಡಿ
* ಈ ದಿನ ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಿ.
* ಈ ದಿನ ಆಲದ ಮರಕ್ಕೆ ಸುತ್ತು ಬಂದು ದೀಪವನ್ನು ಹಚ್ಚಿ.
* ಶನಿವಾರ ಹನುಮಂತನಿಗೆ ಕುಂಕುಮ ಅರ್ಪಿಸಿ.

ಈ ಶನಿ ಮಂತ್ರ ಪ್ರತಿದಿನ ಪಠಿಸಿ
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್



Click it and Unblock the Notifications