Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
Raksha Bandhan : ರಕ್ಷಾ ಬಂಧನ 2021: ದಿನಾಂಕ, ಪೂಜೆಗೆ ಮುಹೂರ್ತ, ರಾಖಿ ಮಂತ್ರ ಹಾಗೂ ಮಹತ್ವ
ಸಹೋದರ-ಸಹೋಧರಿಯ ಬಂಧವನ್ನು ಸಾರುವ ಆಚರಣೆಯೇ ರಕ್ಷಾ ಬಂಧನ. ನನ್ನನ್ನು ಎಲ್ಲಾ ಸಂದರ್ಭದಲ್ಲೂ ರಕ್ಷಿಸಲು ನನ್ನ ಸಹೋದರ ಇರುತ್ತಾನೆ ಎಂಬ ನಂಬಿಕೆಯಲ್ಲಿ ಸಹೋದರಿ ಅಣ್ಣನಿಗೆ ರಾಖಿ ಕಟ್ಟುತ್ತಾಳೆ. ನಾನು ಇರುವರೆಗೆ ನಿನ್ನ ರಕ್ಷಣೆ ಹೊಣೆ ಎಂಬ ಪ್ರತಿಜ್ಞೆ ತೆಗೆದು ಸಹೋದರ-ಸಹೋದರಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ. ಈ ರಾಖಿ ಹಬ್ಬ ಸಹೋದರ-ಸಹೋದರಿ ಸಂಬಂಧದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ ಹಾಗೂ ಸಹೋದರ-ಸಹೋದರಿಯರ ನಡುವಿನ ಪ್ರೀತಿಯನ್ನು ಬಲ ಪಡಿಸುತ್ತದೆ.
2021ರಲ್ಲಿ ರಕ್ಷಾ ಬಂಧನವನ್ನು ಆಗಸ್ಟ್ 22ರಂದು ಆಚರಿಸಲಾಗುವುದು. ಶ್ರಾವಣ ಮಾಸದ ಪೌರ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುವುದು. ರಕ್ಷಾ ಬಂಧನವನ್ನು ಆ ದಿನ ಪೂರ್ತಿ ಆಚರಿಸಲಾಗುವುದು. ರಕ್ಷಾ ಬಂಧನ ತಿಥಿ ಸಮಯ ಯಾವಾಗ, ಪೂಜೆಗೆ ಶುಭ ಮುಹೂರ್ತ ಎಷ್ಟೊತ್ತಿಗೆ, ಇದರ ಮಹತ್ವವೇನು ಎಂದು ನೋಡೋಣ ಬನ್ನಿ:

ರಕ್ಷಾ ಬಂಧನ ದಿನಾಂಕ ಮತ್ತು ತಿಥಿ
ದಿನಾಂಕ: 22 ಆಗಸ್ಟ್ 2021, ಭಾನುವಾರ
ಪೌರ್ಣಿಮೆ ತಿಥಿ ಪ್ರಾರಂಭ: 21 ಆಗಸ್ಟ್ 2021, ಸಂಜೆ 7 ಗಂಟೆಗೆ
ಪೌರ್ಣಿಮೆ ತಿಥಿ ಮುಕ್ತಾಯ:22 ಆಗಸ್ಟ್ 2021 ಸಂಜೆ 03:30ಕ್ಕೆ

ರಕ್ಷಾ ಬಂಧನದಂದು ಪೂಜೆ ಮಾಡಿ ರಾಖಿ ಕಟ್ಟಲು ಶುಭ ಮುಹೂರ್ತ
ರಕ್ಷಾ ಬಂಧನ ಸಮಯ ಆಗಸ್ಟ್ ಬೆಳಗ್ಗೆ 0:21ರಿಂದ ಪ್ರಾರಂಭವಾಗಿ 05:31ರವರೆಗೆ ಇರುತ್ತದೆ. ಈ ಸಮಯದಲ್ಲಿ ಕಟ್ಟಬಹುದು, ಆದರೆ ತುಂಬಾ
ಶುಭ ಮುಹೂರ್ತ: ಮಧ್ಯಾಹ್ನ 01:57ರಿಂದ 04:29ರವರೆಗೆ
ಒಟ್ಟು ಸಮಯ: 2 ಗಂಟೆ: 32 ನಿಮಿಷ

ರಾಖಿಯ ಮಹತ್ವ
ಉತ್ತರ ಭಾರತದಲ್ಲಿ ಶ್ರಾವಣ ಕೊನೆಯ ದಿನದಂದು ರಕ್ಷಾ ಬಂಧನ ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಶ್ರಾವಣ ಪೌರ್ಣಿಮೆಯಂದು ಆಚರಿಸಲಾಗುವುದು. ಈ ವರ್ಷ ಆಗಸ್ಟ್ 22ಕ್ಕೆ ಪೌರ್ಣಿಮೆ. ಅಣ್ಣ-ತಂಗಿಯ ಬಂಧವನ್ನು ಸಾರುವ ಈ ಹಬ್ಬವನ್ನು ದೇಶದೆಲ್ಲಡೆ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು.

ರಾಖಿ ಮಂತ್ರ
'ಯೇನ್ ಬದ್ದೋ ಬಲಿ ರಾಜ, ದಾನ್ವೇಂದ್ರೋ ಮಹಾಬಲ್: ತೇನ್ ತ್ವಾಂ ಪ್ರತಿ ಬಂಧನ್'
ಅರ್ಥ: ನಾನು ನಿನಗೆ ಕಟ್ಟಿರುವ ಈ ರಕ್ಷಾ ಬಲಿ ರಾಜನಿಗೆ ಕಟ್ಟಿದ ರಕ್ಷಾಗೆ ಸಮ, ಓ ರಕ್ಷಾವೇ ಬಲವಾಗಿರು, ಎಂದಿಗೂ ಅಲುಗಾಡಬೇಡ..



Click it and Unblock the Notifications
