Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Raksha Bandhan : ರಕ್ಷಾ ಬಂಧನ 2021: ದಿನಾಂಕ, ಪೂಜೆಗೆ ಮುಹೂರ್ತ, ರಾಖಿ ಮಂತ್ರ ಹಾಗೂ ಮಹತ್ವ
ಸಹೋದರ-ಸಹೋಧರಿಯ ಬಂಧವನ್ನು ಸಾರುವ ಆಚರಣೆಯೇ ರಕ್ಷಾ ಬಂಧನ. ನನ್ನನ್ನು ಎಲ್ಲಾ ಸಂದರ್ಭದಲ್ಲೂ ರಕ್ಷಿಸಲು ನನ್ನ ಸಹೋದರ ಇರುತ್ತಾನೆ ಎಂಬ ನಂಬಿಕೆಯಲ್ಲಿ ಸಹೋದರಿ ಅಣ್ಣನಿಗೆ ರಾಖಿ ಕಟ್ಟುತ್ತಾಳೆ. ನಾನು ಇರುವರೆಗೆ ನಿನ್ನ ರಕ್ಷಣೆ ಹೊಣೆ ಎಂಬ ಪ್ರತಿಜ್ಞೆ ತೆಗೆದು ಸಹೋದರ-ಸಹೋದರಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ. ಈ ರಾಖಿ ಹಬ್ಬ ಸಹೋದರ-ಸಹೋದರಿ ಸಂಬಂಧದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ ಹಾಗೂ ಸಹೋದರ-ಸಹೋದರಿಯರ ನಡುವಿನ ಪ್ರೀತಿಯನ್ನು ಬಲ ಪಡಿಸುತ್ತದೆ.
2021ರಲ್ಲಿ ರಕ್ಷಾ ಬಂಧನವನ್ನು ಆಗಸ್ಟ್ 22ರಂದು ಆಚರಿಸಲಾಗುವುದು. ಶ್ರಾವಣ ಮಾಸದ ಪೌರ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುವುದು. ರಕ್ಷಾ ಬಂಧನವನ್ನು ಆ ದಿನ ಪೂರ್ತಿ ಆಚರಿಸಲಾಗುವುದು. ರಕ್ಷಾ ಬಂಧನ ತಿಥಿ ಸಮಯ ಯಾವಾಗ, ಪೂಜೆಗೆ ಶುಭ ಮುಹೂರ್ತ ಎಷ್ಟೊತ್ತಿಗೆ, ಇದರ ಮಹತ್ವವೇನು ಎಂದು ನೋಡೋಣ ಬನ್ನಿ:

ರಕ್ಷಾ ಬಂಧನ ದಿನಾಂಕ ಮತ್ತು ತಿಥಿ
ದಿನಾಂಕ: 22 ಆಗಸ್ಟ್ 2021, ಭಾನುವಾರ
ಪೌರ್ಣಿಮೆ ತಿಥಿ ಪ್ರಾರಂಭ: 21 ಆಗಸ್ಟ್ 2021, ಸಂಜೆ 7 ಗಂಟೆಗೆ
ಪೌರ್ಣಿಮೆ ತಿಥಿ ಮುಕ್ತಾಯ:22 ಆಗಸ್ಟ್ 2021 ಸಂಜೆ 03:30ಕ್ಕೆ

ರಕ್ಷಾ ಬಂಧನದಂದು ಪೂಜೆ ಮಾಡಿ ರಾಖಿ ಕಟ್ಟಲು ಶುಭ ಮುಹೂರ್ತ
ರಕ್ಷಾ ಬಂಧನ ಸಮಯ ಆಗಸ್ಟ್ ಬೆಳಗ್ಗೆ 0:21ರಿಂದ ಪ್ರಾರಂಭವಾಗಿ 05:31ರವರೆಗೆ ಇರುತ್ತದೆ. ಈ ಸಮಯದಲ್ಲಿ ಕಟ್ಟಬಹುದು, ಆದರೆ ತುಂಬಾ
ಶುಭ ಮುಹೂರ್ತ: ಮಧ್ಯಾಹ್ನ 01:57ರಿಂದ 04:29ರವರೆಗೆ
ಒಟ್ಟು ಸಮಯ: 2 ಗಂಟೆ: 32 ನಿಮಿಷ

ರಾಖಿಯ ಮಹತ್ವ
ಉತ್ತರ ಭಾರತದಲ್ಲಿ ಶ್ರಾವಣ ಕೊನೆಯ ದಿನದಂದು ರಕ್ಷಾ ಬಂಧನ ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಶ್ರಾವಣ ಪೌರ್ಣಿಮೆಯಂದು ಆಚರಿಸಲಾಗುವುದು. ಈ ವರ್ಷ ಆಗಸ್ಟ್ 22ಕ್ಕೆ ಪೌರ್ಣಿಮೆ. ಅಣ್ಣ-ತಂಗಿಯ ಬಂಧವನ್ನು ಸಾರುವ ಈ ಹಬ್ಬವನ್ನು ದೇಶದೆಲ್ಲಡೆ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು.

ರಾಖಿ ಮಂತ್ರ
'ಯೇನ್ ಬದ್ದೋ ಬಲಿ ರಾಜ, ದಾನ್ವೇಂದ್ರೋ ಮಹಾಬಲ್: ತೇನ್ ತ್ವಾಂ ಪ್ರತಿ ಬಂಧನ್'
ಅರ್ಥ: ನಾನು ನಿನಗೆ ಕಟ್ಟಿರುವ ಈ ರಕ್ಷಾ ಬಲಿ ರಾಜನಿಗೆ ಕಟ್ಟಿದ ರಕ್ಷಾಗೆ ಸಮ, ಓ ರಕ್ಷಾವೇ ಬಲವಾಗಿರು, ಎಂದಿಗೂ ಅಲುಗಾಡಬೇಡ..



Click it and Unblock the Notifications