Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಇಂದು ಪಿತೋರಿ ಅಮವಾಸ್ಯೆ: ಮುಸ್ಸಂಜೆ ಈ ಸಮಯದಲ್ಲಿ ವಿಶೇಷ ಪೂಜೆ ಮಾಡಿ
ಇಂದು ಪಿತೋರಿ ಅಮವಾಸ್ಯೆ. ಭಾದ್ರಪದ ಕೃಷ್ಣ ಪಕ್ಷದ ಅಮವಾಸ್ಯೆಯನ್ನು ಪಿತೋರಿ ಅಮವಾಸ್ಯೆ ಅಥವಾ ಕುಶಗ್ರಹಣಿ ಅಮವಾಸ್ಯೆಯಂದು ಕರೆಯಲಾಗುವುದು. ಪೂರ್ವಜರ ಆತ್ಮಕ್ಕೆ ಮೋಕ್ಷ ಸಿಗಲೆಂದು ಈ ಅಮವಾಸ್ಯೆಯನ್ನು ಆಚರಿಸಲಾಗುವುದು. ಈ ದಿನ ಗೃಹಿಣಿಯರು ಪೂಜೆ ಮಾಡುವುದರಿಂದ ಪತಿ ಹಾಗೂ ಮಕ್ಕಳಿಗೆ ಶ್ರೇಯಸ್ಸು ಉಂಟಾಗುವುದು.

ದಕ್ಷಿಣ ಭಾರತದಲ್ಲಿ ಈ ಅಮವಾಸ್ಯೆಯನ್ನು ಪೋಲಾಲಾ ಅಮಾವಾಸ್ಯೆಯೆಂದೂ ಕರೆಯಲಾಗುವುದು. ತರ್ಪಣ ನೀಡುವುದು, ದಾನ ಮಾಡುವುದು ಈ ದಿನ ತುಂಬಾ ಮಹತ್ವದ್ದಾಗಿದೆ.
ಪಿತೋರಿ ಅಮವಾಸ್ಯೆಯ ಮಹತ್ವವೇನು, ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬೆಲ್ಲಾ ಮಾಹಿತಿ ಇಲ್ಲಿವೆ ನೋಡಿ:

ಪಿತೋರಿ ಅಮವಾಸ್ಯೆಯ ಮಹತ್ವ
ಪ್ರಾಚೀನ ಗ್ರಂಥಗಳಲ್ಲಿ ಈ ಅಮಾವಾಸ್ಯೆಯನ್ನು ಕುಶೋತ್ಪತಿನಿ ಅಮವಾಸ್ಯೆ ಎಂದು ಕರೆಯಲಾಗುವುದು. ಈ ದಿನ ಸಂಗ್ರಹಿಸಿದ ದರ್ಬೆಯನ್ನು ಒಂದು ವರ್ಷಗಳವರೆಗೆ ಧಾರ್ಮಿಕ ಚಟುವಟಿಕೆಗಳಿಗೆ ಬಳಸಬಹುದು ಎಂದು ಹೇಳಲಾಗುವುದು. ಉತ್ತರ ದಿಕ್ಕಿನಲ್ಲಿರುವ ದರ್ಬೆಯನ್ನು ಮುಂಜಾನೆ ಕೀಳಬೇಕು. ಕೀಳುವಾಗ ಕೈಯಿಂದ ಕೀಳಬೇಕು. ಕತ್ತರಿ, ಕತ್ತಿ ಬಳಸಬಾರದು.

ದಾನದ ಮಹತ್ವ
ಈ ದಿನ ಬ್ರಾಹ್ಮಣರಿಗೆ ನಿಮ್ಮ ಕೈಯಲ್ಲಾದ ದಾನ ಮಾಡಿ. ಅಲ್ಲದೆ ಅಗ್ಯತವಿರುವವರಿಗೆ ದಾನ ಮಾಡಿ. ಹೀಗೆ ದಾನ ಮಾಡುವುದರಿಂದ ಅದರ ಪುಣ್ಯದ ಫಲದಿಂದ ಮನೋಕಾಮನೆಗಳು ಈಡೇರುವುದು.

ಮುಸ್ಸಂಜೆ ಹೀಗೆ ಮಾಡಿ
ಮುಸ್ಸಂಜೆ ಹೊತ್ತಿಗೆ ಅರಳಿ ಮರದ ಕೆಳಗೆ ಪೂರ್ವಜರನ್ನು ನೆನಪಿಸಿಕೊಂಡು ಸಾಸಿವೆ ಎಣ್ಣೆಯ ದೀಪ ಹಚ್ಚಿ, 7 ಬಾರಿ ಪ್ರದಕ್ಷಿಣೆ ಬನ್ನಿ.
ಪೂರ್ವಜರ ಹೆಸರಿನಲ್ಲಿ ಈ ದಿನ ಹಸುಗಳಿಗೆ ಮೇವು ದಾನ ಮಾಡುವುದರಿಂದ ಕೂಡ ಶುಭ ಉಂಟಾಗುವುದು. ಪೂರ್ವಜರಿಗೆ ಈ ದಿನ ತರ್ಪಣ ನೀಡಿದರೆ ಜಾತಕದಲ್ಲಿರುವ ಶನಿ, ರಾಹು ದೋಷ ದೂರವಾಗುವುದು. ಕುಂಡಲಿಯಲ್ಲಿ ಸರ್ಪ ದೋಷ ಇರುವವರು ಈ ದಿನ ವಿಶೇಷ ಪೂಜೆ ಮಾಡಿಸಿದರೆ ಅದು ನೀಗುವುದು ಎಂದು ಹೇಳಲಾಗುವುದು.

ತಿಥಿ ಸಮಯ ಹಾಗೂ ಪ್ರದೋಷ ಮುಹೂರ್ತ
ಪಿತೋರಿ ಅಮವಾಸ್ಯೆ ತಿಥಿ ಸಮಯ ಪ್ರಾರಂಭ: ಸೆ. 6 ಬೆಳಗ್ಗೆ 7:38ಕ್ಕೆ
ಪಿತೋರಿ ಅಮವಾಸ್ಯೆ ತಿಥಿ ಸಮಯ ಮುಕ್ತಾಯ: ಸೆ. 7 ಬೆಳಗ್ಗೆ 06:21ಕ್ಕೆ
ಪಿತೋರಿ ವ್ರತ ಪ್ರದೋಷ ಮುಹೂರ್ತ
ಪ್ರದೋಷ ಮುಹೂರ್ತ ಸೆ. 6 ಸಂಜೆ 06:37ರಿಂದ 8:54
ಈ ಸಮಯಲ್ಲಿ ವಿಶೇಷ ಪೂಜೆ ಮಾಡಿಸಿ.



Click it and Unblock the Notifications
