Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಇಂದು ಪಿತೋರಿ ಅಮವಾಸ್ಯೆ: ಮುಸ್ಸಂಜೆ ಈ ಸಮಯದಲ್ಲಿ ವಿಶೇಷ ಪೂಜೆ ಮಾಡಿ
ಇಂದು ಪಿತೋರಿ ಅಮವಾಸ್ಯೆ. ಭಾದ್ರಪದ ಕೃಷ್ಣ ಪಕ್ಷದ ಅಮವಾಸ್ಯೆಯನ್ನು ಪಿತೋರಿ ಅಮವಾಸ್ಯೆ ಅಥವಾ ಕುಶಗ್ರಹಣಿ ಅಮವಾಸ್ಯೆಯಂದು ಕರೆಯಲಾಗುವುದು. ಪೂರ್ವಜರ ಆತ್ಮಕ್ಕೆ ಮೋಕ್ಷ ಸಿಗಲೆಂದು ಈ ಅಮವಾಸ್ಯೆಯನ್ನು ಆಚರಿಸಲಾಗುವುದು. ಈ ದಿನ ಗೃಹಿಣಿಯರು ಪೂಜೆ ಮಾಡುವುದರಿಂದ ಪತಿ ಹಾಗೂ ಮಕ್ಕಳಿಗೆ ಶ್ರೇಯಸ್ಸು ಉಂಟಾಗುವುದು.

ದಕ್ಷಿಣ ಭಾರತದಲ್ಲಿ ಈ ಅಮವಾಸ್ಯೆಯನ್ನು ಪೋಲಾಲಾ ಅಮಾವಾಸ್ಯೆಯೆಂದೂ ಕರೆಯಲಾಗುವುದು. ತರ್ಪಣ ನೀಡುವುದು, ದಾನ ಮಾಡುವುದು ಈ ದಿನ ತುಂಬಾ ಮಹತ್ವದ್ದಾಗಿದೆ.
ಪಿತೋರಿ ಅಮವಾಸ್ಯೆಯ ಮಹತ್ವವೇನು, ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬೆಲ್ಲಾ ಮಾಹಿತಿ ಇಲ್ಲಿವೆ ನೋಡಿ:

ಪಿತೋರಿ ಅಮವಾಸ್ಯೆಯ ಮಹತ್ವ
ಪ್ರಾಚೀನ ಗ್ರಂಥಗಳಲ್ಲಿ ಈ ಅಮಾವಾಸ್ಯೆಯನ್ನು ಕುಶೋತ್ಪತಿನಿ ಅಮವಾಸ್ಯೆ ಎಂದು ಕರೆಯಲಾಗುವುದು. ಈ ದಿನ ಸಂಗ್ರಹಿಸಿದ ದರ್ಬೆಯನ್ನು ಒಂದು ವರ್ಷಗಳವರೆಗೆ ಧಾರ್ಮಿಕ ಚಟುವಟಿಕೆಗಳಿಗೆ ಬಳಸಬಹುದು ಎಂದು ಹೇಳಲಾಗುವುದು. ಉತ್ತರ ದಿಕ್ಕಿನಲ್ಲಿರುವ ದರ್ಬೆಯನ್ನು ಮುಂಜಾನೆ ಕೀಳಬೇಕು. ಕೀಳುವಾಗ ಕೈಯಿಂದ ಕೀಳಬೇಕು. ಕತ್ತರಿ, ಕತ್ತಿ ಬಳಸಬಾರದು.

ದಾನದ ಮಹತ್ವ
ಈ ದಿನ ಬ್ರಾಹ್ಮಣರಿಗೆ ನಿಮ್ಮ ಕೈಯಲ್ಲಾದ ದಾನ ಮಾಡಿ. ಅಲ್ಲದೆ ಅಗ್ಯತವಿರುವವರಿಗೆ ದಾನ ಮಾಡಿ. ಹೀಗೆ ದಾನ ಮಾಡುವುದರಿಂದ ಅದರ ಪುಣ್ಯದ ಫಲದಿಂದ ಮನೋಕಾಮನೆಗಳು ಈಡೇರುವುದು.

ಮುಸ್ಸಂಜೆ ಹೀಗೆ ಮಾಡಿ
ಮುಸ್ಸಂಜೆ ಹೊತ್ತಿಗೆ ಅರಳಿ ಮರದ ಕೆಳಗೆ ಪೂರ್ವಜರನ್ನು ನೆನಪಿಸಿಕೊಂಡು ಸಾಸಿವೆ ಎಣ್ಣೆಯ ದೀಪ ಹಚ್ಚಿ, 7 ಬಾರಿ ಪ್ರದಕ್ಷಿಣೆ ಬನ್ನಿ.
ಪೂರ್ವಜರ ಹೆಸರಿನಲ್ಲಿ ಈ ದಿನ ಹಸುಗಳಿಗೆ ಮೇವು ದಾನ ಮಾಡುವುದರಿಂದ ಕೂಡ ಶುಭ ಉಂಟಾಗುವುದು. ಪೂರ್ವಜರಿಗೆ ಈ ದಿನ ತರ್ಪಣ ನೀಡಿದರೆ ಜಾತಕದಲ್ಲಿರುವ ಶನಿ, ರಾಹು ದೋಷ ದೂರವಾಗುವುದು. ಕುಂಡಲಿಯಲ್ಲಿ ಸರ್ಪ ದೋಷ ಇರುವವರು ಈ ದಿನ ವಿಶೇಷ ಪೂಜೆ ಮಾಡಿಸಿದರೆ ಅದು ನೀಗುವುದು ಎಂದು ಹೇಳಲಾಗುವುದು.

ತಿಥಿ ಸಮಯ ಹಾಗೂ ಪ್ರದೋಷ ಮುಹೂರ್ತ
ಪಿತೋರಿ ಅಮವಾಸ್ಯೆ ತಿಥಿ ಸಮಯ ಪ್ರಾರಂಭ: ಸೆ. 6 ಬೆಳಗ್ಗೆ 7:38ಕ್ಕೆ
ಪಿತೋರಿ ಅಮವಾಸ್ಯೆ ತಿಥಿ ಸಮಯ ಮುಕ್ತಾಯ: ಸೆ. 7 ಬೆಳಗ್ಗೆ 06:21ಕ್ಕೆ
ಪಿತೋರಿ ವ್ರತ ಪ್ರದೋಷ ಮುಹೂರ್ತ
ಪ್ರದೋಷ ಮುಹೂರ್ತ ಸೆ. 6 ಸಂಜೆ 06:37ರಿಂದ 8:54
ಈ ಸಮಯಲ್ಲಿ ವಿಶೇಷ ಪೂಜೆ ಮಾಡಿಸಿ.



Click it and Unblock the Notifications