Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಪಾಪ ವಿಮೋಚನೆ ಏಕಾದಶಿ 2023: ಈ ಏಕಾದಶಿ ಪಾಲಿಸಿದರೆ ಕಷ್ಟ-ಕಾರ್ಪಣ್ಯ ದೂರಾಗುವುದು
ಏಕಾದಶಿ ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾದ ದಿನ. ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ನಮ್ಮ ಬದುಕಿನಲ್ಲಿರುವ ಕಷ್ಟ-ಕಾರ್ಪಣ್ಯಗಳು ದೂರಾಗಿ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಈ ಮಾರ್ಚ್ 18ಕ್ಕೆ ಪಾಪ ವಿಮೋಚನೆ ಏಕಾದಶಿ ಆಚರಿಸಲಾಗುವುದು.
ಈ ಪಾಪವಿಮೋಚನೆ(ಪಾಪವಿಮೋಚನಿ) ಏಕಾದಶಿ ಆಚರಿಸುವುದರಿಂದ ಸಿಗುವ ಫಲವೇನು, ಈ ದಿನ ಪೂಜೆಗೆ ಶುಭ ಮುಹೂರ್ತ ಯಾವಾಗ, ಶ್ರೀ ವಿಷ್ಣುವನ್ನು ಹೇಗೆ ಆರಾಧಿಸಬೇಕು, ಇದರ ಕುರಿತ ಪೌರಾಣಿಕ ಕತೆಯೇನು ಎಂದು ನೋಡೋಣ ಬನ್ನಿ:

ಪಾಪವಿಮೋಚನೆ ಏಕಾದಶಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಹಾಗೂ ಪಾರಣ ಸಮಯ
ಮಾರ್ಚ್ 18ಕ್ಕೆ ಪಾಪವಿಮೋಚನೆ ಏಕಾದಶಿ ಆಚರಿಸಲಾಗುವುದು.
ಏಕಾದಶಿ ತಿಥಿ ಮುಹೂರ್ತ: ಮಾರ್ಚ್ 17, ಮಧ್ಯಾಹ್ನ 02:6ರಿಂದ ಪ್ರಾರಂಭ
ಮಾರ್ಚ್ 18 ಬೆಳಗ್ಗೆ 11:13ಕ್ಕೆ ಮುಕ್ತಾಯ
ಪಾರಣ ಸಮಯ: ಮಾರ್ಚ್ 19 ಮುಂಜಾನೆ 06:25ರಿಂದ 08:07ರವರೆಗೆ

ಪಾಪವಿಮೋಚನೆ ಏಕಾದಶಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಹಾಗೂ ಪಾರಣ ಸಮಯ
ಮಾರ್ಚ್ 18ಕ್ಕೆ ಪಾಪವಿಮೋಚನೆ ಏಕಾದಶಿ ಆಚರಿಸಲಾಗುವುದು.
ಏಕಾದಶಿ ತಿಥಿ ಮುಹೂರ್ತ: ಮಾರ್ಚ್ 17, ಮಧ್ಯಾಹ್ನ 02:6ರಿಂದ ಪ್ರಾರಂಭ
ಮಾರ್ಚ್ 18 ಬೆಳಗ್ಗೆ 11:13ಕ್ಕೆ ಮುಕ್ತಾಯ
ಪಾರಣ ಸಮಯ: ಮಾರ್ಚ್ 19 ಮುಂಜಾನೆ 06:25ರಿಂದ 08:07ರವರೆಗೆ

ಶ್ರೀವಿಷ್ಣುವಿನ ಪೂಜಾ ವಿಧಾನ
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ನಂತರ ಪೂಜಾ ಸ್ಥಳವನ್ನು ಸ್ವಚ್ಛ ಮಾಡಿ, ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ಸ್ವಚ್ಛ ಮಾಡಿ.
* ಶ್ರೀ ವಿಷ್ಣುವಿಗೆ ಹೂಗಳಿಂದ ಅಲಂಕರಿಸಿ ಪೂಜಿಸಿ. ಹೀಗೆ ವಿಷ್ಣುವನ್ನು ಪೂಜಿಸುವಾಗ ಹಳದಿ ವಸ್ತ್ರ, 11 ಹಳದಿ ಹೂಗಳು ಹಾಗೂ 11 ಹಳದಿ ಹೂಗಳು, 11 ಹಳದಿ ಹಣ್ಣುಗಳು ಹಾಗೂ 11 ಬಗೆಯ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಇಟ್ಟು ಪೂಜಿಸಿಬೇಕು. ಈ ದಿನ ಉಪವಾಸ ನಿಯಮಗಳನ್ನು ಪಾಲಿಸಿ ಈ ಏಕಾದಶಿ ಪಾಲಿಸಿದರೆ ತುಂಬಾ ಒಳ್ಳೆಯದು.

ಪಾಪವಿಮೋಚನೆ ಏಕಾದಶಿ ಪ್ರಯೋಜನಗಳು
ಪಾಪವಿಮೋಚನೆ ಏಕಾದಶಿ ಆಚರಿಸುವುದರಿಂದ ಪಾಪಗಳು ಕಳೆದು ಮೋಕ್ಷ ಸಿಗುವುದು. ಬದುಕಿನಲ್ಲಿ ಎದುರಾಗುತ್ತಿರುವ ಕಷ್ಟಗಳು, ಸವಾಲುಗಳು ದೂರಾಗುವುದು. ಈ ಏಕಾದಶಿಯನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ನಿಮ್ಮ ಆಸೆ ಈಡೇರಲಿದೆ, ಜೀವನದಲ್ಲಿ ನೆಮ್ಮದಿ, ಸಂಪತ್ತು, ಸಮೃದ್ಧಿ ಹೆಚ್ಚಲಿದೆ.
ಪೌರಾಣಿಕ ಹಿನ್ನೆಲೆ
ಧರ್ಮರಾಯ ಶ್ರೀ ಕೃಷ್ಣ ನ ಪಾಪ ಕಳೆದು ಮೋಕ್ಷ ಪಡೆಯುವುದು ಹೇಗೆ ಎಂದು ಕೇಳಿದಾಗ ಶ್ರೀ ಕೃಷ್ಣ ಪಾಪವಿಮೋಚನಿ ಏಕಾದಶಿ ಆಚರಿಸುವಂತೆ ಸೂಚಿಸುತ್ತಾನೆ. ಯಾರು ಈ ಏಕಾದಶಿ ಆಚಾರಿಸುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ ಎಂಬುವುದಾಗಿಯೂ ಹೇಳುತ್ತಾನೆ.
ಯಾರು ಈ ವ್ರತ ಆಚರಿಸುತ್ತಾರೋ ಅವರ ಎಲ್ಲಾ ಪಾಪಗಳಿಂದ ಮುಕ್ತಿ ಪಡೆದು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಕೂಡ ಹೇಳಲಾಗುವುದು



Click it and Unblock the Notifications
