Latest Updates
-
ಸೇವಾ ಪಖ್ವಾಡ: ರಕ್ತದಾನಕ್ಕೆ ಹೋಗುವ ಮುನ್ನ ಈ ಸಿಂಪಲ್ ಪ್ಲಾನ್ ಮಿಸ್ ಮಾಡ್ಬೇಡಿ! -
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ!
ಪಾಪ ವಿಮೋಚನೆ ಏಕಾದಶಿ 2023: ಈ ಏಕಾದಶಿ ಪಾಲಿಸಿದರೆ ಕಷ್ಟ-ಕಾರ್ಪಣ್ಯ ದೂರಾಗುವುದು
ಏಕಾದಶಿ ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾದ ದಿನ. ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ನಮ್ಮ ಬದುಕಿನಲ್ಲಿರುವ ಕಷ್ಟ-ಕಾರ್ಪಣ್ಯಗಳು ದೂರಾಗಿ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಈ ಮಾರ್ಚ್ 18ಕ್ಕೆ ಪಾಪ ವಿಮೋಚನೆ ಏಕಾದಶಿ ಆಚರಿಸಲಾಗುವುದು.
ಈ ಪಾಪವಿಮೋಚನೆ(ಪಾಪವಿಮೋಚನಿ) ಏಕಾದಶಿ ಆಚರಿಸುವುದರಿಂದ ಸಿಗುವ ಫಲವೇನು, ಈ ದಿನ ಪೂಜೆಗೆ ಶುಭ ಮುಹೂರ್ತ ಯಾವಾಗ, ಶ್ರೀ ವಿಷ್ಣುವನ್ನು ಹೇಗೆ ಆರಾಧಿಸಬೇಕು, ಇದರ ಕುರಿತ ಪೌರಾಣಿಕ ಕತೆಯೇನು ಎಂದು ನೋಡೋಣ ಬನ್ನಿ:

ಪಾಪವಿಮೋಚನೆ ಏಕಾದಶಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಹಾಗೂ ಪಾರಣ ಸಮಯ
ಮಾರ್ಚ್ 18ಕ್ಕೆ ಪಾಪವಿಮೋಚನೆ ಏಕಾದಶಿ ಆಚರಿಸಲಾಗುವುದು.
ಏಕಾದಶಿ ತಿಥಿ ಮುಹೂರ್ತ: ಮಾರ್ಚ್ 17, ಮಧ್ಯಾಹ್ನ 02:6ರಿಂದ ಪ್ರಾರಂಭ
ಮಾರ್ಚ್ 18 ಬೆಳಗ್ಗೆ 11:13ಕ್ಕೆ ಮುಕ್ತಾಯ
ಪಾರಣ ಸಮಯ: ಮಾರ್ಚ್ 19 ಮುಂಜಾನೆ 06:25ರಿಂದ 08:07ರವರೆಗೆ

ಪಾಪವಿಮೋಚನೆ ಏಕಾದಶಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಹಾಗೂ ಪಾರಣ ಸಮಯ
ಮಾರ್ಚ್ 18ಕ್ಕೆ ಪಾಪವಿಮೋಚನೆ ಏಕಾದಶಿ ಆಚರಿಸಲಾಗುವುದು.
ಏಕಾದಶಿ ತಿಥಿ ಮುಹೂರ್ತ: ಮಾರ್ಚ್ 17, ಮಧ್ಯಾಹ್ನ 02:6ರಿಂದ ಪ್ರಾರಂಭ
ಮಾರ್ಚ್ 18 ಬೆಳಗ್ಗೆ 11:13ಕ್ಕೆ ಮುಕ್ತಾಯ
ಪಾರಣ ಸಮಯ: ಮಾರ್ಚ್ 19 ಮುಂಜಾನೆ 06:25ರಿಂದ 08:07ರವರೆಗೆ

ಶ್ರೀವಿಷ್ಣುವಿನ ಪೂಜಾ ವಿಧಾನ
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ನಂತರ ಪೂಜಾ ಸ್ಥಳವನ್ನು ಸ್ವಚ್ಛ ಮಾಡಿ, ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ಸ್ವಚ್ಛ ಮಾಡಿ.
* ಶ್ರೀ ವಿಷ್ಣುವಿಗೆ ಹೂಗಳಿಂದ ಅಲಂಕರಿಸಿ ಪೂಜಿಸಿ. ಹೀಗೆ ವಿಷ್ಣುವನ್ನು ಪೂಜಿಸುವಾಗ ಹಳದಿ ವಸ್ತ್ರ, 11 ಹಳದಿ ಹೂಗಳು ಹಾಗೂ 11 ಹಳದಿ ಹೂಗಳು, 11 ಹಳದಿ ಹಣ್ಣುಗಳು ಹಾಗೂ 11 ಬಗೆಯ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಇಟ್ಟು ಪೂಜಿಸಿಬೇಕು. ಈ ದಿನ ಉಪವಾಸ ನಿಯಮಗಳನ್ನು ಪಾಲಿಸಿ ಈ ಏಕಾದಶಿ ಪಾಲಿಸಿದರೆ ತುಂಬಾ ಒಳ್ಳೆಯದು.

ಪಾಪವಿಮೋಚನೆ ಏಕಾದಶಿ ಪ್ರಯೋಜನಗಳು
ಪಾಪವಿಮೋಚನೆ ಏಕಾದಶಿ ಆಚರಿಸುವುದರಿಂದ ಪಾಪಗಳು ಕಳೆದು ಮೋಕ್ಷ ಸಿಗುವುದು. ಬದುಕಿನಲ್ಲಿ ಎದುರಾಗುತ್ತಿರುವ ಕಷ್ಟಗಳು, ಸವಾಲುಗಳು ದೂರಾಗುವುದು. ಈ ಏಕಾದಶಿಯನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ನಿಮ್ಮ ಆಸೆ ಈಡೇರಲಿದೆ, ಜೀವನದಲ್ಲಿ ನೆಮ್ಮದಿ, ಸಂಪತ್ತು, ಸಮೃದ್ಧಿ ಹೆಚ್ಚಲಿದೆ.
ಪೌರಾಣಿಕ ಹಿನ್ನೆಲೆ
ಧರ್ಮರಾಯ ಶ್ರೀ ಕೃಷ್ಣ ನ ಪಾಪ ಕಳೆದು ಮೋಕ್ಷ ಪಡೆಯುವುದು ಹೇಗೆ ಎಂದು ಕೇಳಿದಾಗ ಶ್ರೀ ಕೃಷ್ಣ ಪಾಪವಿಮೋಚನಿ ಏಕಾದಶಿ ಆಚರಿಸುವಂತೆ ಸೂಚಿಸುತ್ತಾನೆ. ಯಾರು ಈ ಏಕಾದಶಿ ಆಚಾರಿಸುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ ಎಂಬುವುದಾಗಿಯೂ ಹೇಳುತ್ತಾನೆ.
ಯಾರು ಈ ವ್ರತ ಆಚರಿಸುತ್ತಾರೋ ಅವರ ಎಲ್ಲಾ ಪಾಪಗಳಿಂದ ಮುಕ್ತಿ ಪಡೆದು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಕೂಡ ಹೇಳಲಾಗುವುದು



Click it and Unblock the Notifications

