Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Maha Shivaratri 2022 Horoscope: ಶಿವರಾತ್ರಿ ಬಳಿಕ ಈ 5 ರಾಶಿಗಳಿಗೆ ಒಳ್ಳೆಯದು
ಹಿಂದೂಗಳಿಗೆ ಮಹಾ ಶಿವರಾತ್ರಿ ಎಂದರೆ ದೊಡ್ಡ ಸಂಭ್ರಮದ ಆಚರಣೆ. ಈ ವರ್ಷ ಮಾರ್ಚ್ 1ರಂದು ಮಹಾಶಿವರಾತ್ರಿ ಆಚರಿಸಲಾಗುವುದು. ಈ ದಿನ ಯಾರು ಭಕ್ತಿಯಿಂದ ಉಪವಾಸವಿದ್ದು ವ್ರತ ನಿಯಮಗಳನ್ನು ಪಾಲಿಸಿ ಜಾಗರಣೆ ಇದ್ದು ಶಿವನ ಆರಾಧನೆ ಮಾಡುತ್ತಾರೋ ಅವರ ಕಷ್ಟಗಳು ದೂರಾಗುವುದು ಎಂಬುವುದು ಭಕ್ತರ ಅಚಲ ನಂಬಿಕೆ.

ಪರಶಿವ ತನ್ನ ಭಕ್ತರನ್ನು ಎಂದಿಗೂ ನಿರಾಸೆ ಮಾಡಲ್ಲ. ಯಾರು ಭಕ್ತಿಯಿಂದ ಶಿವನ ಧ್ಯಾನ ಮಾಡುತ್ತಾರೋ ಅವರ ಸಂಕಲ್ಪ ಖಂಡಿತ ನೆರವೇರುವುದು. ಜ್ಯೋತಿಷ್ಯವು ಈ ಶಿವರಾತ್ರಿ ಬಳಿಕ ಕೆಲವೊಂದು ರಾಶಿಯವರಿಗೆ ತುಂಬಾ ಒಳ್ಳೆಯದು ಎಂದು ಹೇಳಿದೆ. ಆ ರಾಶಿಗಳು ಯಾವುದೆಂದರೆ:

ಮೇಷ ರಾಶಿ
ಈ ಶಿವರಾತ್ರಿ ಹಬ್ಬ ಕಳೆದ ಬಳಿಕ ಮೇಷ ರಾಶಿಯವರ ಜೀವನದಲ್ಲಿ ತುಂಬಾ ದೊಡ್ಡ ಬದಲಾವಣೆಯಾಗಲಿದೆ. ಆಗಿದ್ದರ ಬಗ್ಗೆ ಚಿಂತಿಸಿ ಕೋಪಗೊಂಡು ಅಥವಾ ದುಃಖಗೊಂಡು ಕೂರುವ ಸಮಯವಲ್ಲ. ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಿ , ಒಳ್ಳೆಯದಾಗುತ್ತದೆ. ಶಿವನ ಪ್ರತಿದಿನ ಧ್ಯಾನಿಸಿ ನಿಮ್ಮ ಎಲ್ಲಾ ಕಷ್ಟಗಳು ದೂರಾಗುವುದು.

ಮಿಥುನ ರಾಶಿ
ನಿಮಗೆ ಖುಷಿ ತರುವ ಸುದ್ದಿಯೊಂದನ್ನು ಕೇಳುವಿರಿ. ಶಿವನ ವಿಶೇಷ ಅನುಗ್ರಹ ನಿಮ್ಮ ಮೇಲಿರುತ್ತೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚುವುದು. ನಿಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸಿ.

ವೃಶ್ಚಿಕ ರಾಶಿ
ಈ ರಾಶಿಯವರು ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಒಳ್ಳೆಯ ಫಲ ಸಿಗುವುದು. ನಿಮ್ಮ ಉದ್ಯೋಗ ಅಥವಾ ವ್ಯವಹಾರದಲ್ಲಿ ಬೆಳವಣಿಗೆಯನ್ನು ಕಾಣುವಿರಿ.

ಮಕರ ರಾಶಿ
ಈ ರಾಶಿಯವರ ಮೇಲೂ ಮಹಾದೇವನ ವಿಶೇಷ ಕೃಪೆ ಇರುತ್ತದೆ. ಶಿವನಿಗೆ ಬಿಲ್ವೆಪತ್ರೆ ಅರ್ಪಿಸಿ ಪೂಜಿಸಿ. ಇದರಿಂದ ಒಳ್ಳೆಯದಾಗುವುದು.

ಕುಂಭ ರಾಶಿ
ಕುಂಭ ರಾಶಿಯವರಿಗೆ ಮಹಾದೇವ ಹಾಗೂ ಶನಿದೇವನಕೃಪೆ ಇರುತ್ತದೆ. ನಿಮ್ಮ ವೃತ್ತಿ ಬದುಕಿನಲ್ಲಿ ಬೆಳವಣಿಗೆಯನ್ನು ಕಾಣುವಿರಿ. ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಲಿದೆ. ಮಹಾಶಿವರಾತ್ರಿ ಹಾಗೂ ಪ್ರತಿ ತಿಂಗಳು ಶಿವರಾತ್ರಿಯಂದು ಉಪವಾಸವಿದ್ದು ಪೂಜೆ ಮಾಡಿ.



Click it and Unblock the Notifications