Latest Updates
-
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ ತಡೆಯಲು ಈ ಆಹಾರಗಳೇ ನಿಮ್ಮ ಬೆಸ್ಟ್ ಫ್ರೆಂಡ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರವಿರಲಿ! -
ಬಿಸಿಲ ಬೇಗೆಯಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಸಣ್ಣ ಬದಲಾವಣೆಗಳನ್ನು ಮಿಸ್ ಮಾಡ್ಬೇಡಿ! -
ಬಾಡಿಗೆ ಮನೆಯಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗುವುದು ಹೇಗೆ? ಕರೆಂಟ್ ಬಿಲ್ ಉಳಿಸುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಲ್ಲಿ ಮಧುಮೇಹಿಗಳ ಪರದಾಟ: ಸಕ್ಕರೆ ಮಟ್ಟ ಏರಿಕೆಯಾಗದಂತೆ ತಂಪಾಗಿರಲು ಈ ಪಾನೀಯಗಳೇ ಮದ್ದು! -
ಇಂದೇ ಮ್ಯೂಸಿಯಂಗೆ ಹೋಗಿ: ಉಚಿತ ಪ್ರವೇಶದ ಜೊತೆಗೆ ಫೋಟೋಶೂಟ್ಗೆ ಸಿಗಲಿದೆ ಸುವರ್ಣಾವಕಾಶ, ಮಿಸ್ ಮಾಡ್ಬೇಡಿ! -
ಶಾಖದ ಅಲೆ ಎಚ್ಚರಿಕೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲಿದೆ ಸುರಕ್ಷಿತ ಮಾರ್ಗ! -
ಬಿಸಿಲಿನ ಬೇಗೆಯಲ್ಲೂ ಮದುವೆ ಸಂಭ್ರಮ ಮರೆಯಾಗದಿರಲಿ: ಅತಿಥಿಗಳಿಗಾಗಿ ಈ ಸಣ್ಣ ಬದಲಾವಣೆಗಳನ್ನು ಮಾಡಿ ನೋಡಿ! -
ಉರಿಬಿಸಿಲಿಗೆ ಮನೆ ಕುದಿಯುತ್ತಿದೆಯೇ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಸುವ ಸರಳ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
44°C ಬಿಸಿಲಿನಲ್ಲಿ ಸುಸ್ತಾಗುತ್ತಿದ್ದೀರಾ? ದೇಹವನ್ನು ತಂಪಾಗಿಡಲು ಈ 3 ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲೇ ಇವೆ!
ಜೇಷ್ಠ ಅಮಾವಾಸ್ಯೆ 2021: ಮಹತ್ವ, ಪೂಜಾ ವಿಧಾನ ಮತ್ತು ಈ ದಿನ ಮಾಡಬಾರದ ಕೆಲಸಗಳು
ಹಿಂದೂ ಪಂಚಾಂಗದ ಪ್ರಕಾರ ಜೇಷ್ಠ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಜೇಷ್ಠ ಅಮಾವಾಸ್ಯೆ ಎನ್ನುತ್ತಾರೆ. ಜೇಷ್ಠ ಅಮಾವಾಸ್ಯೆಯಂದು ಸೂರ್ಯ ಪುತ್ರ ಶನಿ ಜನಿಸಿದ ದಿನ ಆದ್ದರಿಂದ ಇಂದು ಶನಿಜಯಂತಿಯನ್ನು ಆಚರಿಸುತ್ತೇವೆ.
ಆದರೆ ಇತರೆ ಅಮಾವಾಸ್ಯೆಗಳಿಗಿಂತ ಇದು ವಿಶೇಷ ಕಾರಣ, ಈ ಮಾಸದಲ್ಲಿ ಬರುವ ಅಮಾವಾಸ್ಯೆಯು ನಕಾರಾತ್ಮಕ ಶಕ್ತಿಗಳು ಹಾಗೂ ಅಗೋಚರ ಚೇತನಗಳ ಶಕ್ತಿ ಪ್ರಬಲವಾಗಿರುತ್ತದೆ ಎನ್ನಲಾಗುತ್ತದೆ. ಆದ್ದರಿಂದ ಇಂದು ಹಿಂದೂಗಳು ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ.

ಜೇಷ್ಠ ಅಮಾವಾಸ್ಯೆಯ ಸಮಯ
2021ನೇ ಸಾಲಿನಲ್ಲಿ ಜೂನ್ 10ರಂದು ಜೇಷ್ಠ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಈ ವರ್ಷದ ಮತ್ತೊಂದು ವಿಶೇಷ ಎಂದರೆ ಇದೇ ದಿನ, 148 ವರ್ಷಗಳ ಬಳಿಕ ಒಂದೇ ದಿನ ವರ್ಷದ ಮೊದಲ ಸೂರ್ಯಗ್ರಹಣ ಹಾಗೂ ಶನಿಜಯಂತಿ ಘಟಿಸುತ್ತಿದೆ. ಜತೆಗೆ ಅಂದು ವಟಸಾವಿತ್ರಿ ವ್ರತ ಮತ್ತು ರೋಹಿನಿ ವ್ರತವನ್ನು ಆಚರಿಸಲಾಗುತ್ತಿದೆ.
ಜೂನ್ 10ರಂದು ಜೇಷ್ಠ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆಯು ಜೂನ್ 09 ರಂದು ಮಧ್ಯಾಹ್ನ 01:57ಕ್ಕೆ ಪ್ರಾರಂಭವಾಗಲಿದ್ದು, ಜೂನ್ 10ರಂದು ಸಂಜೆ 04:22ಕ್ಕೆ ಕೊನೆಗೊಳ್ಳಲಿದೆ.

ಜೇಷ್ಠ ಅಮಾವಾಸ್ಯೆಯ ಶುಭವೋ-ಅಶುಭವೋ?
ಹಿಂದೂ ಸಂಪ್ರದಾಯದಲ್ಲಿ ಕೆಲವರ ಪ್ರಕಾರ ಜೇಷ್ಠ ಅಮಾವಾಸ್ಯೆಯನ್ನು ಶುಭವಲ್ಲದ ದಿನ ಎಂದೂ ಹೇಳಲಾಗುತ್ತದೆ. ಈ ದಿನ ದುಷ್ಟ, ಹಾನಿಕಾರಕ, ನಕಾರಾತ್ಮಕ ಶಕ್ತಿಗಳು, ದುಷ್ಟ ಕಣ್ಣುಗಳು ಮತ್ತು ಮಾಟಮಂತ್ರಗಳನ್ನು ಮುಕ್ತಗೊಳಿಸಲಾಗಿರುವುದರಿಂದ ಈ ಅಮಾವಾಸ್ಯೆಯ ದಿನವನ್ನು ದುರದೃಷ್ಟಕರ ದಿನವೆಂದು ಪರಿಗಣಿಸಲಾಗಿದೆ. ಜೇಷ್ಠ ಅಮಾವಾಸ್ಯೆಯ ದಿನದಂದು ಪ್ರಾರಂಭವಾದ ಯಾವುದೇ ಕಾರ್ಯ ಅಥವಾ ಹೊಸ ಕೆಲಸವು ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆಯೂ ಇದೆ. ಆದ್ದರಿಂದ ಹಿಂದೂಗಳು ಈ ದಿನ ಯಾವುದೇ ಶುಭ ಕಾರ್ಯವನ್ನು ಮಾಡುವುದನ್ನು ತಪ್ಪಿಸುತ್ತಾರೆ.
ಇನ್ನು ಕೆಲವರು ಈ ದಿನ ಶುಭವಾದ ದಿನ. ಇಂದು ಶನಿಜನಿಸಿದ ದಿನ ಎಂದು ಶನಿ ಆಮಾವಾಸ್ಯೆ ಎಂದು ಪೂಜಿಸುತ್ತಾರೆ. ಕಾಳ ಸರ್ಪ ದೋಷ ಪೂಜೆ ಮುಂತಾದ ಕಾರ್ಯಗಳಿಗೆ ಜೇಷ್ಠ ಅಮಾವಾಸ್ಯೆಯ ದಿನವು ಶುಭವಾಗಿದೆ. ಈ ದಿನದಂದು ಹಿರಿಯರಿಗೆ ಶ್ರಾದ್ಧಾ ಮಾಡಿದರೆ ಶ್ರೇಷ್ಠ ಎನ್ನಲಾಗುತ್ತದೆ.

ಜೇಷ್ಠ ಅಮಾವಾಸ್ಯೆ ಪೂಜಾ ವಿಧಾನ
ಅಮಾವಾಸ್ಯೆಯ ದಿನ ಬೆಳಿಗ್ಗೆ ಸ್ನಾನ ಮಾಡಿ, ಮೊದಲು ಸೂರ್ಯ ದೇವರಿಗೆ ಪೂಜೆಯನ್ನು ಅರ್ಪಿಸಿದ ನಂತರ, ಪೂರ್ವಜರನ್ನು ಸ್ಮರಿಸಿ ಪೂಜಿಸಬೇಕು. ತಾಮ್ರದ ಪಾತ್ರೆಯಲ್ಲಿ ನೀರು, ಶ್ರೀಗಂಧ ಮತ್ತು ಕೆಂಪು ಬಣ್ಣದ ಹೂವುಗಳನ್ನು ಸುರಿಯುವುದರ ಮೂಲಕ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು. ಪೂರ್ವಜರ ಆತ್ಮಗಳ ಶಾಂತಿಗಾಗಿ, ಉಪವಾಸ ಮಾಡಬೇಕು ಮತ್ತು ಬಡವರಿಗೆ ದಾನ ಮಾಡುವ ವಾಡಿಕೆ ಇದೆ.

ಜೇಷ್ಠ ಅಮಾವಾಸ್ಯೆಯಂದು ಏನನ್ನು ಮಾಡಬೇಕು?
ಸೂರ್ಯೋದಯಕ್ಕೂ ಮುನ್ನ ಸ್ನಾನ ನೀರಿಗೆ ಕಪ್ಪು ಎಳ್ಳು ಹಾಕಿ ಶುದ್ಧ ಸ್ನಾನ ಮಾಡಿ.
ಸೂರ್ಯ ಮತ್ತು ಅರಳೀಮರಕ್ಕೆ ಮರಕ್ಕೆ ನೀರನ್ನು ಅರ್ಪಿಸಬೇಕು.
ಬ್ರಾಹ್ಮಣರು ಅಥವಾ ಬಡವರಿಗೆ ಆಹಾರವನ್ನು ನೀಡಿ.

ಜೇಷ್ಠ ಅಮಾವಾಸ್ಯೆಯಂದು ಏನನ್ನು ಮಾಡಬಾರದು?
ಜೇಷ್ಠ ಅಮಾವಾಸ್ಯೆಯಂದು ಸೂರ್ಯೋದಯದ ನಂತರ ಮಲಗಬಾರದು.
ಈ ದಿನ ಎಣ್ಣೆ ಮಸಾಜ್ ಮಾಡಬಾರದು.
ಗಡ್ಡ, ಉಗುರುಗಳು ಮತ್ತು ಕೂದಲನ್ನು ಸಹ ಕತ್ತರಿಸಬಾರದು.
ಯಾವುದೇ ರೀತಿಯ ಮಾದಕ ದ್ರವ್ಯವನ್ನು ತೆಗೆದುಕೊಳ್ಳಬಾರದು.
ಶಾಖಾಹಾರಿ ಆಹಾರಗಳನ್ನು ತಿನ್ನಬಾರದು.
ಸುಳ್ಳು ಹೇಳಬಾರದು.
ಗಂಡ ಹೆಂಡತಿ ಪರಸ್ಪರ ದೂರವಿರಬೇಕು.
ಮಧ್ಯಾಹ್ನ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು.



Click it and Unblock the Notifications