Latest Updates
-
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ -
ಬಿಸಿಲಿನಲ್ಲಿ ವ್ಯಾಯಾಮ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಹೈರಾಕ್ಸ್ ಬೆಂಗಳೂರು: ಗೆಲುವಿಗಾಗಿ ಬೆಳಗಿನ ತಯಾರಿ ಹೀಗಿರಲಿ -
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ?
ನ.24ರಿಂದ ಮೀನದಲ್ಲಿ ಮಾರ್ಗಿಯಾದ ಗುರು: ಈ 5 ರಾಶಿಯವರಿಗೆ ಅದೃಷ್ಟದ ಸಮಯವಿದು
ವೈದಿಕ ಶಾಸ್ತ್ರದಲ್ಲಿಗುರುವಿಗೆ ದೇವ ಗುರುವಿನ ಸ್ಥಾನವಿದೆ. ಗುರು ದೆಸೆ ಚೆನ್ನಾಗಿದ್ದರೆ ಎಲ್ಲವೂ ಮಂಗಳಕರವಾಗಿರುತ್ತದೆ ಎಂಬುವುದು ನಂಬಿಕೆ. ಅದಕ್ಕೆ ಗುರು ಗ್ರಹದ ಅನುಗ್ರಹವಿರಬೇಕೆಂದು ಹೇಳಲಾಗುವುದು. ಗುರುವಿನ ಕೃಪೆಯಿದ್ದರೆ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ. ನೀವು ಬಹಳಷ್ಟು ಸಂಪತ್ತು ಮತ್ತು ವೈವಾಹಿಕ ಸಂತೋಷವನ್ನು ಪಡೆಯುತ್ತೀರಿ.

ಇದುವರೆಗೆ ವಕ್ರೀಯವಾಗಿ ಚಲಿಸುತ್ತಿದ್ದ ಗುರು ಇಂದು ಅಂದ್ರೆ ನವೆಂಬರ್ 24ರಿಂದ ನೇರವಾಗಿ ಚಲಿಸಲಾರಂಭಿಸಿದೆ. ಈ ಸಂಚಾರ ಕೆಲವು ರಾಶಿಗಳಿಗೆ ತುಂಬಾನೇ ಅದೃಷ್ಟಕರವಾಗಿದೆ. ಯಾವ ರಾಶಿಗಳ ಅದೃಷ್ಟ ಬದಲಾಗಲಿದೆ ಯಾವ ರಾಶಿಯವರು ಜಾಗ್ರತೆಯಿಂದಿರಬೇಕು ನೋಡೋಣ ಬನ್ನಿ:

ವೃಷಭ ರಾಶಿ:
ನಿಮ್ಮ ವೃತ್ತಿ ಸಂಬಂಧಿತ ಸಮಸ್ಯೆಗಳು ಕೊನೆಗೊಳ್ಳಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದಿಂದ ಸಂತೋಷವನ್ನು ಅನುಭವಿಸುವಿರಿ. ಆದಾಯ ಹೆಚ್ಚಲಿದೆ. ಹಠಾತ್ ವಿತ್ತೀಯ ಲಾಭದ ಸಾಧ್ಯತೆಗಳಿವೆ. ಹೊಸ ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ. ಮದುವೆಗೆ ಸಂಬಂಧದ ಹುಡುಕುತ್ತಿದ್ದರೆ ಗುರುಬಲ ಕೂಡಿ ಬರಲಿದೆ.

ಕರ್ಕ ರಾಶಿ :
ಗುರು ಮಾರ್ಗಿಯಾಗಿರುವ ಈ ಸಮಯದಲ್ಲಿ ಗುರು ನಿಮಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತಾನೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗದೆ ಕಂಗಾಲಾಗಿದ್ದವರು ಈ ಅವಧಿಯಲ್ಲಿ ನಿರಾಳರಾಗುತ್ತಾರೆ. ಸ್ಥಗಿತಗೊಂಡ ಹಣ ಕೈ ಸೇರಲಿದೆ. ಅದೃಷ್ಟ ಮತ್ತು ಆತ್ಮೀಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.

ಕನ್ಯಾ ರಾಶಿ:
ಗುರುವಿನ ನೇರ ಸಂಚಾರವು ಉದ್ಯೋಗಸ್ಥರಿಗೆ ಮತ್ತು ಉದ್ಯಮಿಗಳಿಗೆ ಭಾರಿ ಲಾಭವನ್ನು ನೀಡುತ್ತದೆ. ನಿಮ್ಮ ಕಾರ್ಯಗಳು ಶೀಘ್ರವಾಗಿ ನಡೆಯಲಿದೆ, ಇದರಿಂದ ಲಾಭವಾಗುತ್ತದೆ. ನೀವು ಸ್ಥಾನ, ಹಣ, ಪ್ರತಿಷ್ಠೆ ಪಡೆಯುತ್ತೀರಿ. ಹಳೆಯ ವಿವಾದಗಳು ಬಗೆಹರಿಯಲಿವೆ.

ವೃಶ್ಚಿಕ ರಾಶಿ:
ಗುರುವಿನ ಈ ಸಂಚಾರದಲ್ಲಿ ಬದಲಾವಣೆ ಶುಭ ಫಲ ಅನುಭವಿಸುವಿರಿ. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ವ್ಯಾಪಾರಕ್ಕೂ ಈ ಸಮಯ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯಲು ಸಂತೋಷವಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಕುಂಭ ರಾಶಿ:
ದೇವಗುರು ಬೃಹಸ್ಪತಿಯ ನೇರ ಸಂಚಾರವು ಆರ್ಥಿಕವಾಗಿ ನೋಡಿದರೆ ನಿಮಗೆ ಬಹಳಷ್ಟು ಹಣವನ್ನು ಗಳಿಸುವಂತೆ ಮಾಡುತ್ತದೆ. ಏಪ್ರಿಲ್ 2023 ರ ಸಮಯವು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮಿಗಳಿಗೆ ಸಾಕಷ್ಟು ಪ್ರಯೋಜನಗಳನ್ನು ತರುತ್ತದೆ. ದೊಡ್ಡ ಯಶಸ್ಸನ್ನು ಸಾಧಿಸಬಹುದು. ಬಯಸಿದ ವರ್ಗಾವಣೆ ಪಡೆಯುತ್ತೀರಿ.

ಗುರು ಮೀನ ರಾಶಿಯಲ್ಲಿರುವಾಗ ಈ ರಾಶಿಯವರು ಜಾಗರೂಕರಾಗಿರಬೇಕು
ದೇವಗುರು ಗುರುವಿನ ಈ ಸಂಚಾರವು ತುಲಾ, ಧನು ರಾಶಿ, ಮೀನ ಮತ್ತು ಮಿಥುನ ರಾಶಿಯ ಜನರ ಮೇಲೆ ಸಾಮಾನ್ಯ ಪರಿಣಾಮವನ್ನು ಬೀರುತ್ತದೆ. ಆದರೆ , ಮೇಷ, ಸಿಂಹ ಮತ್ತು ಮಕರ ರಾಶಿಯವರು ಈ ಅವಧಿಯಲ್ಲಿ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಹೂಡಿಕೆಯಲ್ಲಿ ನಷ್ಟವಾಗಬಹುದು. ಬೇರೆ ರೀತಿಯಲ್ಲಿಯೂ ಹಣ ನಷ್ಟವಾಗುವ ಸಾಧ್ಯತೆಗಳಿವೆ.



Click it and Unblock the Notifications










