Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
Guru Asta 2022: ಗುರು ಅಸ್ತಮಿಸುವುದರಿಂದ ಈ 3 ರಾಶಿಯವರಿಗೆ ಬಾರಿ ಅದೃಷ್ಟ
ಜ್ಯೋತಿಷ್ಯ ಪ್ರಕಾರ ಗ್ರಹಗಳು ಅಸ್ತಮಿಸುವುದು ಕೂಡ ಒಂದು ಪ್ರಮುಖವಾದ ಘಟನೆಯಾಗಿದ್ದು, ಇದು ರಾಶಿಗಳ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಅದರಲ್ಲೂ ಗುರು ಗ್ರಹ ಅಸ್ತಮಿಸುವುದರಿಂದ ಯಾರ ರಾಶಿಯಲ್ಲಿ ಈ ಗ್ರಹ ಬಲವಾಗಿರುತ್ತದೋ ಅವರಿಗೆ ತುಂಬಾ ಒಳ್ಳೆಯದಾಗಲಿದೆ ಎಂದು ಹೇಳಲಾಗುವುದು.

ಸಂಪತ್ತಿನ ದೃಷ್ಟಿಯಿಂದಲೂ ಗುರು ಅಸ್ತ ಪ್ರಮುಖವಾಗಿದೆ. ಇದು ಧನು ಹಾಗೂ ಮೀನ ರಾಶಿಯ ಅಧಿಪತಿಯಾಗಿದೆ. ಗುರು ಗ್ರಹ ಫೆಬ್ರವರಿ 19ಕ್ಕೆ ಅಸ್ತಮಿಸುವುದು. ಯಾವ ಗ್ರಹ ಸೂರ್ಯನ ಸಮೀಪ ಬರುವುದೋ ಆಗ ಆ ಗ್ರಹ ಅಸ್ತಮಿಸುವುದು. ಗುರು ಗ್ರಹ ಮಾರ್ಚ್ 20ರವರೆಗೆ ಅಸ್ತಮಿಸಲಿದೆ, ಇದರಿಂದ ಈ 3 ರಾಶಿಗಳಿಗೆ ಆರ್ಥಿಕವಾಗಿ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ:

ತುಲಾ ರಾಶಿ:
ಫೆಬ್ರವರಿ 19ರಿಂದ-ಮಾರ್ಚ್ 20ರವರೆಗಿನ ಸಮಯ ತುಲಾ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ಯಾರು ಸ್ವಂತ ವ್ಯವಹಾರ ಮಾಡುತ್ತಿದ್ದಾರೋ ಅವರಿಗೆ ಒಳ್ಳೆಯ ಲಾಭ ಸಿಗುವುದು, ಆರ್ಥಿಕ ಸ್ಥಿತಿ ಉತ್ತಮವಾಗಿರುತತದೆ, ಆದರೆ ಹಣದ ಉಳಿತಾಯ ಸ್ವಲ್ಪ ಕಷ್ಟವಾಗುವುದು, ಈ ಸಮಯ ಇತರ ಉದ್ಯೋಗದಲ್ಲಿರುವವರಿಗೆ ಒಳ್ಳೆಯದಿದೆ, ಈ ಸಮಯದಲ್ಲಿ ಹಣದ ತೊಂದರೆ ಇರಲ್ಲ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಈ ಸಮಯದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಕೆಲಸಗಳನ್ನು ಪೂರ್ತಿ ಮಾಡಲು ಸಾಧ್ಯವಾಗುವುದು, ಪ್ರಯಾಣ ಖುಷಿಯನ್ನು ತರುತ್ತದೆ. ಯಾವುದೋ ಒಂದು ಮೂಲದಿಂದ ಹಣ ದೊರೆಯಲಿದೆ. ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ, ನಿಮ್ಮ ಪ್ರತಿಭೆ ಪ್ರದರ್ಶಿಸಲು ಅನೇಕ ಅವಕಾಶಗಳು ದೊರೆಯುವುದು.

ಮೀನ ರಾಶಿ
ಮೀನ ರಾಶಿಗೂ ಗುರು ಅಧಿಪತಿ. ಈ ಸಮಯದಲ್ಲಿ ತುಂಬಾ ಸಮಯದಿಂದ ಅಪೂರ್ಣವಾಗಿ ಉಳಿದುಕೊಂಡಿದ್ದ ಕೆಲಸ ಪೂರ್ಣಗೊಳ್ಳುವುದು. ಫ್ರೆಂಡ್ಸ್ ಜೊತೆ ಸೇರಿ ಹೊಸ ಕೆಲಸಕ್ಕೆ ಕೈ ಹಾಕಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ದೊರೆಯಲಿದೆ. ವೃತ್ತಿ ಜೀವನದಲ್ಲೂ ಒಳ್ಳೆಯ ಸಾಧನೆ ಮಾಡುವಿರಿ, ವ್ಯವಹಾರ ಮಾಡುವವರಿಗೆ ಒಳ್ಳೆಯ ಲಾಭ ದೊರೆಯಲಿದೆ.



Click it and Unblock the Notifications