Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಾ.13ಕ್ಕೆ ಶನಿ ಅಮವಾಸ್ಯೆ: ಶನಿ ದೋಷ ನಿವಾರಣೆಗೆ ಈ ದಿನ ಸೇವಿಸಬಾರದ ಆಹಾರಗಳು
ಶನಿಯ ಕೃಪೆಯಿದ್ದರೆ ಯಾವ ತೊಂದರೆ ಇರಲ್ಲ, ಆದರೆ ಶನಿಯ ವಕ್ರ ದೃಷ್ಟಿ ಬಿದ್ದರೆ ಆ ಮನುಷ್ಯನಿಗೆ ಕಷ್ಟಕಾಲ ತಪ್ಪಿದ್ದಲ್ಲ.
ಅದರಲ್ಲೂ ಸಾಡೇಸಾತಿ ಶನಿದೋಷ ಇದ್ದರಂತೂ ಅದು ಮುಗಿಯುವವರೆಗೂ ಕಷ್ಟಗಳು ಹಿಂಬಾಲಿಸುತ್ತಲೇ ಇರುತ್ತದೆ. ಶನಿದೋಷವಿದ್ದರೆ ಅಥವಾ ಜೀವನದಲ್ಲಿ ಅನೇಕ ಕಷ್ಟಗಳಿದ್ದರೆ ಶನಿವಾರ ಶನಿಯನ್ನು ಪೂಜಿಸುವುದರಿಂದ ಅವನ ಕೃಪೆಗೆ ಪಾತ್ರರಾಗಬಹುದು. ಇದರಿಂದ ಕಷ್ಟಗಳು ದೂರವಾಗುವುದು.

ಶನಿ ದೋಷವಿದ್ದರೆ ಅದರಿಂದ ಮುಕ್ತರಾಗಲು ಶನಿವಾರ ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸಿ ಪೂಜೆ ಸಲ್ಲಿಸಬೇಕು. ಅದರಲ್ಲೂ ಮಾರ್ಚ್ 13ಕ್ಕೆ ಶನಿ ಅಮವಾಸ್ಯೆ ಇದೆ. ಈ ದಿನ ಕೆಲವೊಂದು ಆಹಾರಗಳನ್ನು ಆ ದಿನ ಸೇವಿಸದಿರುವುದು ಒಳ್ಳೆಯದು, ಬನ್ನಿ ಆ ಆಹಾರಗಳಾವುವು ಎಂದು ನೋಡೋಣ:

ಹಾಲು ಅಥವಾ ಮೊಸರು
ಈ ದಿನ ಹಾಲು ಅಥವಾ ಮೊಸರು ಸೇವಿಸದಿರುವುದು ಒಳ್ಳೆಯದಿರುವುದು ಒಳ್ಳೆಯದು, ಆದರೆ ನಿಮಗೆ ಸೇವಿಸದೇ ಇರಲು ಸಾಧ್ಯವೇ ಇಲ್ಲ ಎಂದಾದರೆ ಹಾಲಿಗೆ ಹಳದಿ, ಮೊಸರಿಗೆ ಬೆಲ್ಲ ಹಾಕಿ ಸೇವಿಸಿ.

ಉಪ್ಪಿನಕಾಯಿ
ಶನಿವಾರ ಉಪ್ಪಿನಕಾಯಿ ಹಾಗೂ ಇತರ ಹುಳಿ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು.

ಕೆಂಪು ಮೆಣಸು
ಮತ್ತೊಂದು ನಂಬಿಕೆಯೆಂದರೆ ಶನಿ ಅಮವಾಸ್ಯೆ ದಿನ ಕೆಂಪು ಮೆಣಸು ಹಾಕಿ ಆಹಾರ ಪದಾರ್ಥಗಳನ್ನು ತಯಾರಿಸಬಾರದು. ಇದರಿಂದ ಬದುಕಿನಲ್ಲಿ ಒಳಿತಾಗುವುದು.

ಮಸೂರ್ ದಾಲ್
ಶನಿ ಅಮವಾಸ್ಯೆ ದಿನ ಮಸೂರ್ ದಾಲ್ ತಿನ್ನಬೇಡಿ. ಇದನ್ನು ತಿನ್ನುವುದರಿಂದ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಆದ್ದರಿಂದ ಈ ದಿನ ಮಸೂರ್ ದಾಲ್ ತಿನ್ನಬಾರದು.

ಮದ್ಯ ಹಾಗೂ ಮಾಂಸಾಹಾರ
ಶನಿದೋಷ ಇರುವವರು ಶನಿ ಅಮವಾಸ್ಯೆ ದಿನ ಯಾವುದೇ ಮದ್ಯ ಹಾಗೂ ಮಾಂಸಾಹಾರ ಸೇವನೆ ಮಾಡಬಾರದು. ಈ ಆಹಾರಗಳ ಸೇವನೆಯಿಂದ ಜೀವನದಲ್ಲಿ ಕಷ್ಟಗಳು ಅಧಿಕವಾಗುವುದು.
ಆದ್ದರಿಂದ ಯಾರಿಗೆಲ್ಲಾ ಶನಿ ದೋಷ ಇದೆಯೋ ಅವರು ಈ ಆಹಾರಗಳಿಂದ ದೂರವಿದ್ದರೆ ಕಷ್ಟಗಳು ಕಡಿಮೆಯಾಗುವುದು.



Click it and Unblock the Notifications











