Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ನವೆಂಬರ್ 2020: ಈ ತಿಂಗಳ ಪ್ರಮುಖ ಹಬ್ಬಗಳು ಹಾಗೂ ವ್ರತಗಳು
ಅಕ್ಟೋಬರ್ ಮುಗೀತಾ ಬಂದಿದೆ, ಇನ್ನೇನು ನವೆಂಬರ್ ಶುರುವಾಗಲಿದೆ. ನವೆಂಬರ್ನಲ್ಲಿ ಬರುವ ವಿಶೇಷ ದಿನಗಳು ಹಾಗೂ ಪಂಚಾಂಗದ ಪ್ರಕಾರ ನವೆಂಬರ್ ತಿಂಗಳಿನಲ್ಲಿ ಬರುವ ಹಬ್ಬ-ಹರಿದಿನಗಳು, ವ್ರತ, ಏಕಾದಶಿ ಇವುಗಳ ಕುರಿತು ಹೆಚ್ಚಿನ ಮಾಹಿತಿ ಲೇಖನದಲ್ಲಿದೆ ನೋಡಿ.

ನವೆಂಬರ್ 1
ನವೆಂಬರ್ 1 ಎಂದ ಮೇಲೆ ಹೇಳಬೇಕೇ, ಆ ದಿನ ನಮ್ಮ ಕನ್ನಡದ ಹಬ್ಬವಲ್ಲವೇ? ಕನ್ನಡಿಗರು ನಾವೆಂದು ಹೆಮ್ಮೆಯಿಂದ ಹೇಳುತ್ತಾ ಹಬ್ಬವನ್ನು ಆಚರಿಸುವ ಸಡಗರ. ಐಶ್ವರ್ಯ, ಸಂಸ್ಕೃತಿ, ಕಲೆಯ ಬೀಡಾಗಿರುವ ಕರ್ನಾಟಕದಲ್ಲಿ ಆಡುವ ಭಾಷೆ ಕನ್ನಡ. ನಾವು ಕನ್ನಡಿಗರು ಎಂದು ಹೆಮ್ಮೆ ಪಡೋಣ,
ಕನ್ನಡದ ಕಂಪು ಸೂಸಲು ಅಲ್ಲಲ್ಲಿ... ... ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೊರೇವು... ಎಂಬ ಕವಿವಾಣಿಯಂತೆ ಬಾಳೋಣ.

ಪಂಚಾಂಗದ ಪ್ರಕಾರ ಬರುವ ಹಬ್ಬ ವ್ರತಗಳು
ನವೆಂಬರ್ 4, ಬುಧವಾರ: ಸಂಕಷ್ಟಿ
ನವೆಂಬರ್ 11, ಬುಧವಾರ: ರಾಮ ಏಕಾದಶಿ
ನವೆಂಬರ್ 13, ಶುಕ್ರವಾರ: ಮಾಸಿಕ್ ಶಿವರಾತ್ರಿ, ಧಾಂತೆರಸ್, ಪ್ರದೋಷ್ ವ್ರತ
ನವೆಂಬರ್ 14, ಶನಿವಾರ: ದೀಪಾವಳಿ, ನರಕ ಚತುರ್ದಶಿ
ನವೆಂಬರ್ 15, ಭಾನುವಾರ: ಗೋವರ್ಧನ್ ಪೂಜೆ
ನವೆಂಬರ್ 16, ಸೋಮವಾರ: ವೃಶ್ಚಿಕ ಸಂಕ್ರಾಂತಿ
ನವೆಂಬರ್ 20, ಶುಕ್ರವಾರ: ಚ್ಚಾತ್ ಪೂಜೆ
ನವೆಂಬರ್ 25, ಶುಕ್ರವಾರ: ಪ್ರದೋಷ ವ್ರತ
ನವೆಂಬರ್ 26, ಶನಿವಾರ: ತುಳಸಿ ವಿವಾಹ
ನವೆಂಬರ್ 30, ಸೋಮವಾರ: ಕಾರ್ತಿಕ ಪೂರ್ಣಿಮಾ ವ್ರತ, ಗುರು ನಾಯಕ್ ಜಯಂತಿ

ದೀಪಾವಳಿ
ನವೆಂಬರ್ನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಡಗರ.
ದೀಪಾವಳಿಯ ಹಬ್ಬದ ಸಂಭ್ರಮ ಶುರುವಾಗುವುದು ನೀರು ತುಂಬುವ ಹಬ್ಬದೊಂದಿಗೆ, ಬಚ್ಚಲು ಮನೆಯಲ್ಲಿ ನೀರು ಕಾಯಿಸುವ ಹಂಡೆಯನ್ನು ಶುಚಿಗೊಳಿಸಿ, ಹೂವಿನಿಂದ ಅಲಂಕಾರ ಮಾಡಿ ನೀರು ತುಂಬಿ ಬೆಂಕಿ ಹಚ್ಚಿ ನೀರು ಕುದಿಸುತ್ತಾರೆ. ಮರುದಿನ ಮನೆಯವರು ಮೈಗೆ ಎಣ್ಣೆ ಹಚ್ಚಿ ಅಭ್ಯಂಜನ ಸ್ನಾನ ಮಾಡುತ್ತರೆ. ಮರುದಿನ ಅಮಾವಾಸ್ಯೆ ಆ ದಿನ ಲಕ್ಷ್ಮೀಪೂಜೆ ಮಾಡಲಾಗುವುದು, ಅದಾದ ಬಳಿಕ ಬಲಿಪಾಡ್ಯಮಿ. ಈ ದಿನ ಬಲೀಂದ್ರನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಕೆಲವೆಡೆ ರಾತ್ರಿ ಬಲೀಂದ್ರನನ್ನು ದೀಪವಿಟ್ಟು ಕೂಗಿ ಕರೆಯುವ ಪದ್ಧತಿ ಕೂಡ ಇದೆ.

ಕಾರ್ತಿಕ ಪೂರ್ಣಿಮಾ ವ್ರತ, ಗುರು ನಾಯಕ್ ಜಯಂತಿ
ಕಾರ್ತಿಕ ಪೂರ್ಣಿಮಾ (ಕಾರ್ತಿಕ ಪೂರ್ಣಿಮೆ ) ಎನ್ನುವುದು ಹುಣ್ಣಿಮೆಯ ದಿನ ಅಥವಾ ಕಾರ್ತಿಕ ಮಾಸದ 15 ನೇ ದಿನದಂದು (ನವೆಂಬರ್14-ಡಿಸೆಂಬರ್14ರವರೆಗೆ ಕಾರ್ತಿಕ ಮಾಸ) ಆಚರಿಸುವ ಹಿಂದೂಗಳ ಪವಿತ್ರ ದಿನವಾಗಿದೆ. ಇದನ್ನು ತ್ರಿಪುರಿ ಹುಣ್ಣಿಮೆ ಮತ್ತು ತ್ರಿಪುರರಿ ಹುಣ್ಣಿಮೆ ಎಂದು ಕೂಡಾ ಕರೆಯಲಾಗುತ್ತದೆ ಇದನ್ನು ಕೆಲವೊಮ್ಮೆ ದೇವ-ದಿವಾಲಿ ಅಥವಾ ದೇವ-ದೀಪಾವಳಿ -ದೇವರ ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಕಾರ್ತಿಕ ಹುಣ್ಣಿಮೆ ಹಬ್ಬವು ಸಿಖ್ಖರ ಹಬ್ಬವಾದ ಗುರುನಾನಕ್ ಜಯಂತಿಯೊಂದಿಗೆ ಏಕಕಾಲಕ್ಕೆ ನಡೆಯುತ್ತದೆ.



Click it and Unblock the Notifications