Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೃಷ್ಟಿದೋಷ: ಕಣ್ದೃಷ್ಟಿ ತೆಗೆಯುವುದು ಹೇಗೆ?
ದೃಷ್ಟಿದೋಷ ಅಥವಾ ಕಣ್ದೃಷ್ಟಿ ಇದೆಯಲ್ಲಾ ಅದು ತುಂಬಾನೇ ಅಪಾಯಕಾರಿ. ನಮ್ಮ ಬೆಳವಣಿಗೆಯನ್ನು ನೊಡಿ ಯಾರಾದರೂ ಹೊಟ್ಟೆಕಿಚ್ಚು ಪಟ್ಟರೆ ಅದರ ಪರಿಣಾಮ ನಮ್ಮ ಮೇಲೆ ಬೀರುವುದು.

ನಮ್ಮ ದೇಹವು 7 ಚಕ್ರವನ್ನು ಅವಲಂಬಿಸಿರುತ್ತದೆ, ಅದು ದೇಹದ ಮಧ್ಯಭಾಗದಲ್ಲಿ ಇರುವುದು. ಈ ಚಕ್ರ ನಮ್ಮ ದೈಹಿಕ, ಮಾನಸಿಕ, ಭಾವನಾತ್ಮ ಹಾಗೂ ದೈವಿಕ ಭಾವನೆಗಳ ಮೇಲೆ ಪರಿಣಾಮ ಬೀರುವುದು. ಯಾವಾಗ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದೋ ಆಗ ಈ ಚಕ್ರದ ಚಟುವಟಿಕೆ ನಿಧಾನವಾಗುವುದು, ಇದರಿಂದ ದೈಹಿಕ ಹಾಗೂ ಮಾನಸಿಕ ತೊಂದರೆ ಉಂಟಾಗುವುದು.
ಕಣ್ದೃಷ್ಟಿ ಬೀಳಬಾರದೆಂದು ಈ ರೀತಿಯೆಲ್ಲಾ ಮಾಡುವ ವಾಡಿಕೆ ಇದೆ:

ದೃಷ್ಟಿ ತೆಗೆಯುವ ಕಪ್ಪು ಬೊಟ್ಟು
ಮಕ್ಕಳ ಮೇಲೆ ಜನರ ಕೆಟ್ಟ ದೃಷ್ಟಿ ಬೀಳಬಾರದೆಂದು ಕಪ್ಪು ಬೊಟ್ಟು ಹಾಕಿ ಕೊಡುತ್ತಾರೆ. ಇನ್ನು ಕೆಲವರು ಚೆನ್ನಾಗಿ ಡ್ರೆಸ್ಸಿಂಗ್ ಮಾಡಿದಾಗ ದೃಷ್ಟಿ ಬೀಳಬಾರದೆಂದು ಗಲ್ಲಕ್ಕೆ ಕಪ್ಪು ಚುಕ್ಕಿ ಇಡಲಾಗುವುದು. ಮದು-ಮಗಳನ್ನು ಅಲಂಕಾರ ಮಾಡಿದ ಮೇಲೆ ದೃಷ್ಟಿ ಬೊಟ್ಟು ಇಡಲಾಗುವುದು.

ಗಾಡಿಯ ದೃಷ್ಟಿ ತೆಗೆಯುವುದು
ಇನ್ನು ಹೊಸ ಗಾಡಿ ಖರೀದಿಸಿದಾಗ ಅದಕ್ಕೆ ಯಾರ ಕೆಟ್ಟ ದೃಷ್ಟಿ ಬೀಳಬಾರದೆಂದು ಪೂಜೆ ಮಾಡಿಸಿ ನಿಂಬೆಹಣ್ಣು, ಹಸಿ ಮೆಣಸನ್ನು ದಾರದಲ್ಲಿ ಪೋಣಿಸಿ ಕಟ್ಟಲಾಗುವುದು. ಇನ್ನು ಕೆಲವರು ಕಪ್ಪು ದಾರ ಕಟ್ಟುತ್ತಾರೆ.

ಹೊಸ ಮನೆ ಕಟ್ಟುವಾಗ
ಹೊಸ ಮನೆ ಕಟ್ಟುತ್ತಿರುವಾಗ ಕೆಟ್ಟ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಬೆದರು ಗೊಂಬೆ ಅಥವಾ ಬಯ ಪಡಿಸುವ ಮುಖದ ಮುಖವಾಡವನ್ನು ಇಡಲಾಗುವುದು. ಗೃಹ ಪ್ರವೇಶ ಮಾಡುವಾಗ ಮನೆಗೆ ಯಾವ ಕೆಟ್ಟ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಕುಂಬಳಕಾಯಿ ನೇತುಹಾಕಲಾಗುವುದು. ಇನ್ನು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆ ಮುಂದೆ ನೇತು ಹಾಕಲಾಗುವುದು, ಇವೆಲ್ಲಾ ಮನೆಗೆ ಎಟ್ಟ ದೃಷ್ಟಿ ಬೀಳುವುದನ್ನು ತಡೆಗಟ್ಟುತ್ತದೆ.

ಯಾವ ರೀತಿಯೆಲ್ಲಾ ದೃಷ್ಟಿ ತೆಗೆಯಲಾಗುವುದು?
* ಮನೆಯಲ್ಲಿ ಅಜ್ಜಿಅಥವಾ ಅಮ್ಮ ಒಣ ಮೆಣಸು, ಸಾಸಿವೆ, ಸ್ವಲ್ಪ ಉಪ್ಪು, ಸ್ವಲ್ಪ ಪೊರಕೆ ತುಂಡು ತೆಗೆದು ಎಡಗೈಯಲ್ಲಿ ಹಿಡಿದು 3 ಅಥವಾ 7 ಬಾರಿ ಸುತ್ತಿಒಲೆಗೆ ಹಾಕಲಾಗುವುದು ಅಥವಾ ಮೂರು ದಾರಿ ಸೇರುವಲ್ಲಿ ತೆಗೆದುಕೊಂಡು ಹಾಕಲಾಗುವುದು.
* ನಿಂಬೆ ಹಣ್ಣು ಅಥವಾ ತೆಂಗಿನಕಾಯಿ ಅಥವಾ ಕುಂಬಳಕಾಯಿಗೆ ಕುಂಕುಮ ಹಾಕಿ ಸುತ್ತಿ ಒಡೆಯಲಾಗುವುದು.
* ಮದುವೆಯಾಗಿ ಮನೆಗೆ ಬರುವಾಗ ಅಥವಾ ಮಗುವನ್ನು ಮನೆ ತುಂಬಿ ಕೊಳ್ಳುವಾಗ ತಟ್ಟೆಯಲ್ಲಿ ಅರಿಶಿಣ ನೀರು ಮಾಡಿ, ದೀಪ ಹಚ್ಚಿ ಆರತಿ ಎತ್ತಿ ಕೆಟ್ಟ ದೃಷ್ಟಿ ತೆಗೆಯಲಾಗುವುದು.
* ವೀಳ್ಯೆದೆಲೆಯಲ್ಲಿ ಕರ್ಪೂರ ಹಚ್ಚಿ ಪ್ರದಕ್ಷಿಣೆ -ಅಪ್ರದಕ್ಷಿಣೆ ಸುತ್ತಿ ಕೆಟ್ಟ ದರಷ್ಟಿ ತೆಗೆಯಲಾಗುವುದು.
* ಕರ್ಪೂರವನ್ನು ವ್ಯಕ್ತಿಯ ತಲೆಗೆ ಮೂರು ಸುತ್ತ ಸುತ್ತಿ ನಂತರ ಅದನ್ನು ಹೊರಗಡೆ ತಂದು ಹಚ್ಚಲಾಗುವುದು.

ಮನೆಯಲ್ಲಿ ಕಣ್ದೃಷ್ಟಿ ಉಂಟಾಗುವುದನ್ನು ತಡೆಯುವುದು ಹೇಗೆ?
* ಕಣ್ದೃಷ್ಟಿ ಗಣಪತಿ ಅಥವಾ ನರಸಿಂಹ ಮೂರ್ತಿಯನ್ನು ಮನೆಯ ಮುಂದುಗಡೆ ನೇತು ಹಾಕಿ.
* ಮನೆಯ ಹಾಲ್ನಲ್ಲಿ ಒಂದು ಲೋಟ ತುಂಬಾ ನೀರು, ಒಂದು ಲೋಟ ತುಂಬಾ ಕಲ್ಲುಪ್ಪು ತುಂಬಿ ಇಡಿ, ಇದು ಕೂಡ ಕಣ್ದೃಷ್ಟಿ ಹೋಗಲಾಡಿಸುವುದು.

ಆಹಾರ ತಿನ್ನುವಾಗ ಕಣ್ದೃಷ್ಟಿ ತಡೆಗಟ್ಟಲು ಏನು ಮಾಡಬೇಕು?
* ಆಹಾರ ತಿನ್ನುವ ಮುನ್ನ ಸ್ವಲ್ಪ ಊಟ ತೆಗೆದು ತಲೆಗೆ ಮೂರು ಸುತ್ತು ಸುತ್ತಿ ಬಿಸಾಡಬೇಕು. ಅದನ್ನು ನಾಯಿ, ಬೆಕ್ಕು, ಕಾಗೆ ಇವುಗಳಿಗೆ ಹಾಕಿ.
* ಆಹಾರ ಬೇಯಿಸುವಾಗ ಕಬ್ಬಿಣವನ್ನು ಕಾಯಿಸಿ ಆಹಾರದಲ್ಲಿ ಒಮ್ಮೆ ಇಡಲಾಗುವುದು.



Click it and Unblock the Notifications
