Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ದೃಷ್ಟಿದೋಷ: ಕಣ್ದೃಷ್ಟಿ ತೆಗೆಯುವುದು ಹೇಗೆ?
ದೃಷ್ಟಿದೋಷ ಅಥವಾ ಕಣ್ದೃಷ್ಟಿ ಇದೆಯಲ್ಲಾ ಅದು ತುಂಬಾನೇ ಅಪಾಯಕಾರಿ. ನಮ್ಮ ಬೆಳವಣಿಗೆಯನ್ನು ನೊಡಿ ಯಾರಾದರೂ ಹೊಟ್ಟೆಕಿಚ್ಚು ಪಟ್ಟರೆ ಅದರ ಪರಿಣಾಮ ನಮ್ಮ ಮೇಲೆ ಬೀರುವುದು.

ನಮ್ಮ ದೇಹವು 7 ಚಕ್ರವನ್ನು ಅವಲಂಬಿಸಿರುತ್ತದೆ, ಅದು ದೇಹದ ಮಧ್ಯಭಾಗದಲ್ಲಿ ಇರುವುದು. ಈ ಚಕ್ರ ನಮ್ಮ ದೈಹಿಕ, ಮಾನಸಿಕ, ಭಾವನಾತ್ಮ ಹಾಗೂ ದೈವಿಕ ಭಾವನೆಗಳ ಮೇಲೆ ಪರಿಣಾಮ ಬೀರುವುದು. ಯಾವಾಗ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದೋ ಆಗ ಈ ಚಕ್ರದ ಚಟುವಟಿಕೆ ನಿಧಾನವಾಗುವುದು, ಇದರಿಂದ ದೈಹಿಕ ಹಾಗೂ ಮಾನಸಿಕ ತೊಂದರೆ ಉಂಟಾಗುವುದು.
ಕಣ್ದೃಷ್ಟಿ ಬೀಳಬಾರದೆಂದು ಈ ರೀತಿಯೆಲ್ಲಾ ಮಾಡುವ ವಾಡಿಕೆ ಇದೆ:

ದೃಷ್ಟಿ ತೆಗೆಯುವ ಕಪ್ಪು ಬೊಟ್ಟು
ಮಕ್ಕಳ ಮೇಲೆ ಜನರ ಕೆಟ್ಟ ದೃಷ್ಟಿ ಬೀಳಬಾರದೆಂದು ಕಪ್ಪು ಬೊಟ್ಟು ಹಾಕಿ ಕೊಡುತ್ತಾರೆ. ಇನ್ನು ಕೆಲವರು ಚೆನ್ನಾಗಿ ಡ್ರೆಸ್ಸಿಂಗ್ ಮಾಡಿದಾಗ ದೃಷ್ಟಿ ಬೀಳಬಾರದೆಂದು ಗಲ್ಲಕ್ಕೆ ಕಪ್ಪು ಚುಕ್ಕಿ ಇಡಲಾಗುವುದು. ಮದು-ಮಗಳನ್ನು ಅಲಂಕಾರ ಮಾಡಿದ ಮೇಲೆ ದೃಷ್ಟಿ ಬೊಟ್ಟು ಇಡಲಾಗುವುದು.

ಗಾಡಿಯ ದೃಷ್ಟಿ ತೆಗೆಯುವುದು
ಇನ್ನು ಹೊಸ ಗಾಡಿ ಖರೀದಿಸಿದಾಗ ಅದಕ್ಕೆ ಯಾರ ಕೆಟ್ಟ ದೃಷ್ಟಿ ಬೀಳಬಾರದೆಂದು ಪೂಜೆ ಮಾಡಿಸಿ ನಿಂಬೆಹಣ್ಣು, ಹಸಿ ಮೆಣಸನ್ನು ದಾರದಲ್ಲಿ ಪೋಣಿಸಿ ಕಟ್ಟಲಾಗುವುದು. ಇನ್ನು ಕೆಲವರು ಕಪ್ಪು ದಾರ ಕಟ್ಟುತ್ತಾರೆ.

ಹೊಸ ಮನೆ ಕಟ್ಟುವಾಗ
ಹೊಸ ಮನೆ ಕಟ್ಟುತ್ತಿರುವಾಗ ಕೆಟ್ಟ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಬೆದರು ಗೊಂಬೆ ಅಥವಾ ಬಯ ಪಡಿಸುವ ಮುಖದ ಮುಖವಾಡವನ್ನು ಇಡಲಾಗುವುದು. ಗೃಹ ಪ್ರವೇಶ ಮಾಡುವಾಗ ಮನೆಗೆ ಯಾವ ಕೆಟ್ಟ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಕುಂಬಳಕಾಯಿ ನೇತುಹಾಕಲಾಗುವುದು. ಇನ್ನು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆ ಮುಂದೆ ನೇತು ಹಾಕಲಾಗುವುದು, ಇವೆಲ್ಲಾ ಮನೆಗೆ ಎಟ್ಟ ದೃಷ್ಟಿ ಬೀಳುವುದನ್ನು ತಡೆಗಟ್ಟುತ್ತದೆ.

ಯಾವ ರೀತಿಯೆಲ್ಲಾ ದೃಷ್ಟಿ ತೆಗೆಯಲಾಗುವುದು?
* ಮನೆಯಲ್ಲಿ ಅಜ್ಜಿಅಥವಾ ಅಮ್ಮ ಒಣ ಮೆಣಸು, ಸಾಸಿವೆ, ಸ್ವಲ್ಪ ಉಪ್ಪು, ಸ್ವಲ್ಪ ಪೊರಕೆ ತುಂಡು ತೆಗೆದು ಎಡಗೈಯಲ್ಲಿ ಹಿಡಿದು 3 ಅಥವಾ 7 ಬಾರಿ ಸುತ್ತಿಒಲೆಗೆ ಹಾಕಲಾಗುವುದು ಅಥವಾ ಮೂರು ದಾರಿ ಸೇರುವಲ್ಲಿ ತೆಗೆದುಕೊಂಡು ಹಾಕಲಾಗುವುದು.
* ನಿಂಬೆ ಹಣ್ಣು ಅಥವಾ ತೆಂಗಿನಕಾಯಿ ಅಥವಾ ಕುಂಬಳಕಾಯಿಗೆ ಕುಂಕುಮ ಹಾಕಿ ಸುತ್ತಿ ಒಡೆಯಲಾಗುವುದು.
* ಮದುವೆಯಾಗಿ ಮನೆಗೆ ಬರುವಾಗ ಅಥವಾ ಮಗುವನ್ನು ಮನೆ ತುಂಬಿ ಕೊಳ್ಳುವಾಗ ತಟ್ಟೆಯಲ್ಲಿ ಅರಿಶಿಣ ನೀರು ಮಾಡಿ, ದೀಪ ಹಚ್ಚಿ ಆರತಿ ಎತ್ತಿ ಕೆಟ್ಟ ದೃಷ್ಟಿ ತೆಗೆಯಲಾಗುವುದು.
* ವೀಳ್ಯೆದೆಲೆಯಲ್ಲಿ ಕರ್ಪೂರ ಹಚ್ಚಿ ಪ್ರದಕ್ಷಿಣೆ -ಅಪ್ರದಕ್ಷಿಣೆ ಸುತ್ತಿ ಕೆಟ್ಟ ದರಷ್ಟಿ ತೆಗೆಯಲಾಗುವುದು.
* ಕರ್ಪೂರವನ್ನು ವ್ಯಕ್ತಿಯ ತಲೆಗೆ ಮೂರು ಸುತ್ತ ಸುತ್ತಿ ನಂತರ ಅದನ್ನು ಹೊರಗಡೆ ತಂದು ಹಚ್ಚಲಾಗುವುದು.

ಮನೆಯಲ್ಲಿ ಕಣ್ದೃಷ್ಟಿ ಉಂಟಾಗುವುದನ್ನು ತಡೆಯುವುದು ಹೇಗೆ?
* ಕಣ್ದೃಷ್ಟಿ ಗಣಪತಿ ಅಥವಾ ನರಸಿಂಹ ಮೂರ್ತಿಯನ್ನು ಮನೆಯ ಮುಂದುಗಡೆ ನೇತು ಹಾಕಿ.
* ಮನೆಯ ಹಾಲ್ನಲ್ಲಿ ಒಂದು ಲೋಟ ತುಂಬಾ ನೀರು, ಒಂದು ಲೋಟ ತುಂಬಾ ಕಲ್ಲುಪ್ಪು ತುಂಬಿ ಇಡಿ, ಇದು ಕೂಡ ಕಣ್ದೃಷ್ಟಿ ಹೋಗಲಾಡಿಸುವುದು.

ಆಹಾರ ತಿನ್ನುವಾಗ ಕಣ್ದೃಷ್ಟಿ ತಡೆಗಟ್ಟಲು ಏನು ಮಾಡಬೇಕು?
* ಆಹಾರ ತಿನ್ನುವ ಮುನ್ನ ಸ್ವಲ್ಪ ಊಟ ತೆಗೆದು ತಲೆಗೆ ಮೂರು ಸುತ್ತು ಸುತ್ತಿ ಬಿಸಾಡಬೇಕು. ಅದನ್ನು ನಾಯಿ, ಬೆಕ್ಕು, ಕಾಗೆ ಇವುಗಳಿಗೆ ಹಾಕಿ.
* ಆಹಾರ ಬೇಯಿಸುವಾಗ ಕಬ್ಬಿಣವನ್ನು ಕಾಯಿಸಿ ಆಹಾರದಲ್ಲಿ ಒಮ್ಮೆ ಇಡಲಾಗುವುದು.



Click it and Unblock the Notifications