Just In
- 7 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 8 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 8 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 10 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- Sports RR vs MI IPL 2024: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ; ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಮುಖಭಂಗ
- News Bengaluru Real Estate: ಬೆಂಗಳೂರಿನಲ್ಲಿ ಸೈಟು ಖರೀದಿಸುವ ಮುನ್ನ ಎಚ್ಚರ! 279 ಅಕ್ರಮ ಲೇಔಟ್ ಗುರುತಿಸಿದ ಬಿಡಿಎ
- Movies ತಾವೇ ತೋಡಿದ ಖೆಡ್ಡಾಗೆ ಬಿದ್ದ ರಾಖಿ ಸಾವಂತ್ ? ಕಂಬಿ ಹಿಂದೆ ಡ್ರಾಮಾ ಕ್ವೀನ್..?
- Finance ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬುಧವಾರದ ದಿನ ಭವಿಷ್ಯ: ಕನ್ಯಾ ರಾಶಿಯವರಿಗೆ ಈ ದಿನ ಉತ್ತಮವಾಗಿದೆ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005
ಸಂವತ್ಸರ:
ಶಾರ್ವರಿ
ಆಯನ:
ದಕ್ಷಿಣಾಯನ
ಋತು:
ಶರದ್
ಮಾಸ:
ಆಶ್ವಿಜ
ನಕ್ಷತ್ರ:
ಬೆಳಗ್ಗೆ
09:11ರವರೆಗೆ
ಪೂರ್ವ
ಭಾದ್ರಪದ
ನಂತರ
ಅಕ್ಟೋಬರ್
29,
ಬೆಳಗ್ಗೆ
05:17ರವರೆಗೆ
ಉತ್ತರ
ಭಾದ್ರಪದ
ತಿಥಿ:
ಶುಕ್ಲ
ಪಕ್ಷ
ರಾಹುಕಾಲ:
ಮಧ್ಯಾಹ್ನ12:05ರಿಂದ
01:28ರವರೆಗೆ
ಗುಳಿಕಕಾಲ:
ಬೆಳಗ್ಗೆ
10:41ರಿಂದ
12:05ರವರೆಗೆ
ಯಮಗಂಡಕಾಲ:
ಬೆಳಗ್ಗೆ
07:54ರಿಂದ
09:17ರವರೆಗೆ
ದುರ್ಮುಹೂರ್ತ:
ಬೆಳಗ್ಗೆ
11:42ರಿಂದ
12:27
ಸೂರ್ಯೋದಯ:
ಬೆಳಗ್ಗೆ
06:30ಕ್ಕೆ
ಸೂರ್ಯಾಸ್ತ:
ಸಂಜೆ
05:39ಕ್ಕೆ
ಮೇಷ ರಾಶಿ:
ಇಂದು ಕುಟುಂಬವು ನಿಮ್ಮ ಮೊದಲ ಆದ್ಯತೆಯಾಗಿರಬೇಕು. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೀರಿ. ಕೆಲಸದ ಹೊರೆ ಮತ್ತು ಮನೆಯ ಕೆಲವು ಗಂಭೀರ ಸಮಸ್ಯೆಗಳು ನಿಮ್ಮ ಚಿಂತೆಗೆ ಕಾರಣವಾಗಿದ್ದರೆ ಇಂದು ಅವೆಲ್ಲವೂ ದೂರವಾಗಬಹುದು. ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ನೀವು ಸಂತೋಷ ಮತ್ತು ದುಃಖದಲ್ಲಿ ಪರಸ್ಪರ ಜೊತೆಗಿರುತ್ತೀರಿ. ನಿಮ್ಮ ಸಂಬಂಧವು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ ಎಂದು ನೀವು ಅರಿತುಕೊಳ್ಳಿ. ಕಾರ್ಯ ಕ್ಷೇತ್ರದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಇಂದು ನೀವು ನಿಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಇನ್ನು ವ್ಯಾಪಾರ ಮಾಡುವವರಿಗೆ ಇದ್ದಕ್ಕಿದ್ದಂತೆ ದೊಡ್ಡ ಸಮಸ್ಯೆಯು ಎದುರಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬಹುದು. ನಿಮ್ಮ ಬಾಕಿ ಇರುವ ಯಾವುದೇ ಬಿಲ್ಗಳನ್ನು ನೀವು ಪಾವತಿಸಬಹುದು. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿದೆ.
ಉತ್ತಮ ಬಣ್ಣ: ನೀಲಿ
ಶುಭ ಸಂಖ್ಯೆ: 22
ಶುಭ ಸಮಯ: ಮಧ್ಯಾಹ್ನ 3 ರಿಂದ 10 ರವರೆಗೆ
ವೃಷಭ ರಾಶಿ:
ವೈವಾಹಿಕ ಜೀವನದಲ್ಲಿ ಇಂದು ಜಾಗರೂಕರಾಗಿರಿ. ಅನುಮಾನದ ಆಧಾರದ ಮೇಲೆ ಯಾವುದೇ ರೀತಿಯ ಕಾಮೆಂಟ್ಗಳನ್ನು ಮಾಡುವುದೂ ಒಳ್ಳೆಯದಲ್ಲ. ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಆಳವಾದ ಬಿರುಕು ಮೂಡಬಹುದು. ಅನಗತ್ಯ ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಏಕಾಗ್ರತೆಗೆ ಭಂಗ ತಂದುಕೊಳ್ಳಬೇಡಿ. ಕೆಲಸದ ಬಗ್ಗೆ ಗಮನವಿರಲಿ. ನಿಮ್ಮ ಸಣ್ಣ ತಪ್ಪು ಕೂಡ ನಿಮಗೆ ಸಮಸ್ಯೆ ತರಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ಇರುತ್ತದೆ. ಅಪೂರ್ಣವಾದ ಕೆಲಸ ಇಂದು ಪೂರ್ಣಗೊಳ್ಳುತ್ತದೆ. ಆರ್ಥಿಕವಾಗಿ ದಿನವು ಅಷ್ಟು ಒಳ್ಳೆಯದಲ್ಲ. ಶೀಘ್ರದಲ್ಲಿ ಹಣ ಸಂಪಾದಿಸುವ ಹಿನ್ನೆಲೆಯಲ್ಲಿ ಯಾವುದೇ ತಪ್ಪು ಹೆಜ್ಜೆ ಇಡಬೇಡಿ, ಇಲ್ಲದಿದ್ದರೆ ಇದ್ದುದನ್ನೂ ಕಳೆದುಕೊಳ್ಳಬೇಕಾಗಬಹುದು. ಈ ದಿನದ ಎರಡನೇ ಭಾಗ ಶುಭ. ಉತ್ತಮ ಸುದ್ದಿ ಕಿವಿಗೆ ಬೀಳಬಹುದು. ಇದರಿಂದ ನೀವು ಸಂತೋಷಗೊಳ್ಳುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಮುಖ ಚರ್ಚೆ ನಡೆಸಬಹುದು. ಆರೋಗ್ಯವು ಉತ್ತಮವಾಗಿರುತ್ತದೆ. ನೀವು ಇಂದು ಲವಲವಿಕೆಯಿಂದ ಇರುತ್ತೀರಿ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 20
ಶುಭ ಸಮಯ: ಬೆಳಗ್ಗೆ 7:30 ರಿಂದ ಸಂಜೆ 7 ರವರೆಗೆ
ಮಿಥುನ ರಾಶಿ:
ಇಂದು ತುಸು ಕಷ್ಟದ ದಿನ ಎಂದು ಹೇಳಬಹುದು. ನಿಮ್ಮ ಯೋಜನೆಯ ಪ್ರಕಾರ ನಿಮ್ಮ ಯಾವುದೇ ಕೆಲಸಗಳೂ ನಡೆಯುವಿದಿಲ್ಲ. ಇದರಿಂದ ಸಾಕಷ್ಟು ಕಿರಿಕಿರಿ ಉಂಟಾಗಬಹುದು. ಅತಿಯಾದ ಕೋಪವನ್ನೂ ಮಾಡಿಕೊಳ್ಳುತ್ತೀರಿ. ಅಲ್ಲದೇ ಇತರರ ಮೇಲೆ ಅನಗತ್ಯವಾಗಿ ಕೋಪಗೊಳ್ಳಬಹುದು. ನಿಮ್ಮನ್ನು ನೀವು ನಿಯಂತ್ರಿಸಿ. ಇಂದು ನಿಮ್ಮ ತಾಯಿಯ ಆರೋಗ್ಯ ಕ್ಷೀಣಿಸಬಹುದು. ನೀವು ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕೆಲಸದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ನೀವು ವ್ಯಾಪಾರ ಮಾಡುತ್ತಿದ್ದರೆ ಇಂದು ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಹಾಗೆ ಮಾಡಿದರೆ ನಷ್ಟವಾಗಬಹುದು ಜೋಪಾನ. ವೃತ್ತಿಯಲ್ಲಿ ತುಂಬಾ ಶ್ರಮಿಸಬೇಕಾಗುತ್ತದೆ. ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಸಣ್ಣ ವಿಷಯಕ್ಕೆ ಸಂಗಾತಿಯೊಂದಿಗೆ ನಿಮಗೆ ತೊಂದರೆ ಉಂಟಾಗಬಹುದು. ನಿಮ್ಮ ಪದಗಳನ್ನು ಯೋಚನೆ ಮಾಡಿ ಬಳಸಿ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ನೀವು ತುಂಬಾ ಬಲಹೀನತೆಯನ್ನು ಅನುಭವಿಸುತ್ತೀರಿ.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 10
ಶುಭ ಸಮಯ: ಬೆಳಗ್ಗೆ 9:20 ರಿಂದ ಮಧ್ಯಾಹ್ನ 2 ರವರೆಗೆ
ಕರ್ಕಾಟಕ ರಾಶಿ:
ನಿಮ್ಮ ವೈವಾಹಿಕ ಜೀವನವು ಉತ್ತಮವಾಘಿರುತ್ತದೆ. ಸಂಗಾತಿಯ ವರ್ತನೆಯಲ್ಲಿ ಬದಲಾವಣೆ ಇರುತ್ತದೆ. ಇಂದು ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನಿಮ್ಮ ಜೀವನದಲ್ಲಿದ್ದ ಏರಿಳಿತಗಳು ಇಂದು ಸ್ವಲ್ಪ ಮಟ್ಟಿಗೆ ಸುಸ್ಥಿತಿಗೆ ಬರುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಮರಳಿಬರುತ್ತದೆ. ಕುಟುಂಬದಲ್ಲಿ ಶಾಂತಿ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಐಕ್ಯತೆ ಇರುತ್ತದೆ. ನಿಮ್ಮ ಎಲ್ಲಾ ತೊಂದರೆಗಳನ್ನು ನೀವು ಮರೆತು ಕುಟುಂಬದೊಂದಿಗೆ ಸಂತೋಷದಿಂದ ನಗುತ್ತಾ ದಿನವನ್ನು ಕಳೆಯುತ್ತೀರಿ ಮತ್ತು ತುಂಬಾ ಉಲ್ಲಾಸವನ್ನು ಅನುಭವಿಸುವಿರಿ. ಇನ್ನು ಹಣದ ಬಗ್ಗೆ ಮಾತನಾಡುವುದಾದರೆ, ನೀವು ಇತ್ತೀಚೆಗೆ ತೆಗೆದುಕೊಂಡ ಯಾವುದೇ ಪ್ರಮುಖ ಆರ್ಥಿಕ ನಿರ್ಧಾರವು ಸರಿಯಾಗಿದೆ ಎಂದು ನಿಮಗಿಂದು ಮನವರಿಕೆಯಾಗುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 28
ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 12 ರವರೆಗೆ
ಸಿಂಹ ರಾಶಿ:
ಕೆಲಸದಲ್ಲಿ ಸವಾಲುಗಳು ಎದುರಾಗಲಿವೆ. ನೀವು ಕಚೇರಿಯಲ್ಲಿನ ರಾಜಕೀಯಕ್ಕೆ ರಾಜಕೀಯಕ್ಕೆ ಬಲಿಯಾಗಬಹುದು ಮತ್ತು ನೀವು ಮೇಲಧಿಕಾರಿಗಳ ಮುಂದೆ ಮುಜುಗರಕ್ಕೊಳಗಾಗಬೇಕಾಗಬಹುದು. ನೀವು ಬುದ್ಧಿವಂತಿಕೆಯಿಂದ ವರ್ತಿಸುವುದು ಮತ್ತು ನಿಮ್ಮ ಸುತ್ತ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಉತ್ತಮ. ನೀವು ವ್ಯಾಪಾರ ಮಾಡುವವರಾಗಿದ್ದರೆ ಒತ್ತಡ ಇಂದು ಜಾಸ್ತಿ. ಹೊಸ ಕಾರ್ಯಗಳನ್ನು ಪೂರೈಸಲು ನೀವು ಶ್ರಮಿಸಬೇಕಾಗಬಹುದು. ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ. ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಸಂಗಾತಿಯ ಸಹಕಾರ ನಿಮಗಿದೆ. ಸಕಾರಾತ್ಮಕತೆಯಿಂದ ಅವರು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರ್ಥಿಕವಾಗಿ ನೀವು ಸುರಕ್ಷಿತವಾಗಿರುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ನಿಮ್ಮಲ್ಲಿನ ಎನರ್ಜಿಯಿಂದ ನೀವು ಆರಾಮವಾಗಿರುತ್ತೀರಿ. ಮಾನಸಿಕವಾಗಿ ನೀವು ತುಂಬಾ ಸಂತೋಷವಾಗಿರುತ್ತೀರಿ.
ಉತ್ತಮ ಬಣ್ಣ: ಕಡುಗೆಂಪು
ಶುಭ ಸಂಖ್ಯೆ: 15
ಶುಭ ಸಮಯ: ಮಧ್ಯಾಹ್ನ 2 ರಿಂದ 7 ರವರೆಗೆ
ಕನ್ಯಾರಾಶಿ:
ಕನ್ಯಾರಾಶಿಯವರಿಗಿಂದು ಉತ್ತಮ ದಿನ. ಇಂದು ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ನಿಮ್ಮಲ್ಲಿ ನಿರಾಳತೆ ಇರುತ್ತದೆ. ಹಾಗೆಯೇ ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಇನ್ನು ಕೆಲಸದ ಬಗ್ಗೆ ಮಾತನಾಡುವುದಾದರೆ ದೊಡ್ಡ ಜವಾಬ್ದಾರಿಯನ್ನು ಮೇಲಾಧಿಕಾರಿಗಳು ಹೊರಿಸಬಹುದು. ನಿಮ್ಮ ಕಠಿಣ ಪರಿಶ್ರಮವು ನಿಮ್ಮ ಉನ್ನತ ಅಧಿಕಾರಿಗಳನ್ನು ಮಾತ್ರವಲ್ಲದೆ ನಿಮ್ಮ ಸಹೋದ್ಯೋಗಿಗಳನ್ನೂ ಮೆಚ್ಚಿಸುತ್ತದೆ. ವ್ಯಾಪಾರಸ್ಥರು ಹಣದ ಲಾಭ ಪಡೆಯಬಹುದು. ಇಂದು ನೀವು ಕೆಲವು ಉತ್ತಮ ವ್ಯಾಪಾರ ಕೊಡುಗೆಗಳನ್ನು ಸಹ ಪಡೆಯುವ ಸಾಧ್ಯತೆಯಿದೆ. ಇಂದು ನಿಮಗೆ ವಿಶೇಷವಾದ ದಿನ. ನಿಮ್ಮ ಸಕಾರಾತ್ಮಕ ಮನೋಭಾವಕ್ಕೆ ಸುತ್ತಲಿನವರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ಮಾತ್ರವಲ್ಲ, ಜನರಲ್ಲಿ ನಿಮ್ಮ ಉತ್ತಮ ನಡವಳಿಕೆ ಮತ್ತು ಸಮತೋಲಿತ ಮಾತುಗಳೂ ಕೂಡ ಮೆಚ್ಚುಗೆ ಪಡೆಯುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ದಿನ ಕಳೆಯುವಿರಿ. ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಇಂದು ನೀವು ಯಥೇಚ್ಛವಾಗಿ ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಆರೋಗ್ಯವು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 11
ಶುಭ ಸಮಯ: ಬೆಳಗ್ಗೆ 8:00 ರಿಂದ 2ರವರೆಗೆ
ತುಲಾ ರಾಶಿ:
ಇಂದು ನಿಮಗೆ ಮಿಶ್ರ ಫಲಿತಾಂಶ. ಹೆಚ್ಚಿನ ಉದ್ಯೋಗ ಅಥವಾ ವ್ಯವಹಾರದ ಹೊರೆ ನಿಮಗೆ ಒತ್ತಡವನ್ನು ಹೆಚ್ಚಿಸುತ್ತದೆ. ಇಂದು, ವ್ಯವಹಾರಸ್ಥರು ಹಣದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ನಿಮ್ಮ ಹಣಕಾಸು ಯೋಜನೆಗಳನ್ನು ಪುನರ್ರಪರಿಶೀಲಿಸಿ. ದಿನದ ದ್ವಿತಿಯಾರ್ಧದಲ್ಲಿ ಪ್ರಯಾಣ ಮಾಡುವ ಸಾಧ್ಯತೆ. ಆರ್ಥಿಕವಾಗಿ ದಿನವು ಅಷ್ಟು ಉತ್ತಮವಾಗಿಲ್ಲ. ನಿಮ್ಮ ಹವ್ಯಾಸ ವಿರಾಮಕ್ಕಾಗಿ ಹಣ ಖರ್ಚಿಮಾಡಲು ಬಯಸಿದ್ದರೆ ಅದನ್ನು ರದ್ದುಗೊಳಿಸಿ. ಜೀವನದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತದೆ. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ನಿಮಗೆ ಹೃದ್ರೋಗ ಇದ್ದರೆ, ನಿರ್ಲಕ್ಷ್ಯ ಮಾಡಬೇಡಿ.
ಉತ್ತಮ ಬಣ್ಣ: ಮರೂನ್
ಶುಭ ಸಂಖ್ಯೆ: 9
ಶುಭ ಸಮಯ: ಸಂಜೆ 7 ರಿಂದ 10 ರವರೆಗೆ
ವೃಶ್ಚಿಕ ರಾಶಿ:
ಈ ದಿನವು ನಿಮಗೆ ಅಷ್ಟು ಉತ್ತಮವಾಗಿಲ್ಲ. ನೀವು ವ್ಯಾಪಾರ ಮಾಡುವವರಾಗಿದ್ದರೆ, ವ್ಯವಹಾರದಲ್ಲಿ ನಿಧಾನಗತಿಯು ನಿಮ್ಮ ಆತಂಕವನ್ನು ಹೆಚ್ಚಿಸುತ್ತದೆ. ನೀವು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದರೆ ನಿಮ್ಮ ನಿರಾಶೆಗಳೆಲ್ಲವು ದೂರವಾಗಿ ಶೀರ್ಘದಲ್ಲಿ ಸಮಸ್ಯೆ ಪರಿಹಾರವಾಗಲಿದೆ. ನೌಕರಿ ಮಾಡುವವರು ಕಚೇರಿಯಲ್ಲಿನ ಎಲ್ಲಾ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಭಾವನೆಯನ್ನು ಹೊಂದಿರುತ್ತೀರಿ. ಮನೆಯ ಸದಸ್ಯರು ನಿಮ್ಮ ಕೋಪಗೊಳ್ಳುವ ಸ್ವಭಾವವನ್ನು ಟೀಕಿಸಬಹುದು. ನಿಮ್ಮ ಪ್ರೀತಿಪಾತ್ರರ ಮೇಲೆ ಅನಗತ್ಯ ಕೋಪವನ್ನು ತಂದುಕೊಳ್ಳುವುದು ಒಳ್ಳೆಯದಲ್ಲ. ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ, ಇದನ್ನು ಬಿಟ್ಟರೆ ನಿಮಗೆ ಒಳ್ಳೆಯದೇ ಆಗುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಸಂಜೆ ನೀವು ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯುವ ಅವಕಾಶವನ್ನು ಪಡೆಯಬಹುದು.
ಉತ್ತಮ ಬಣ್ಣ: ಆಕಾಶ ನೀಲಿ
ಶುಭ ಸಂಖ್ಯೆ: 16
ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 3 ರವರೆಗೆ
ಧನು ರಾಶಿ:
ದಾಂಪತ್ಯ ಜೀವನದಲ್ಲಿ ಸಂತೋಷ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಮನೆಯಲ್ಲಿ ವಯಸ್ಸಾದ ಸದಸ್ಯರಿದ್ದರೆ ಈ ಸಮಯದಲ್ಲಿ ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಂದು ವ್ಯಾಪಾರಿಗಳಿಗೆ ಲಾಭದಾಯಕ ದಿನ. ಇದ್ದಕ್ಕಿದ್ದಂತೆ ಒಂದು ಕ್ಲಿಷ್ಟಕರ ವಿಷಯವನ್ನು ಪರಿಹರಿಸಿಕೊಳ್ಳಬಹುದು. ಇದರಿಂದ ನಿಮಗೆ ಉತ್ತಮ ಪ್ರಯೋಜನವಾಗುತ್ತದೆ. ಕಚೇರಿ ವಾತಾವರಣ ಇಂದು ಅಷ್ಟು ಉತ್ತಮವಾಗಿರುವುದಿಲ್ಲ. ನಿಮ್ಮ ಬಾಸ್ನ ಮನಸ್ಥಿತಿ ಇಂದು ಸರಿಯಾಗಿರುವುದಿಲ್ಲ. ನಿಮ್ಮ ಕೆಲಸದ ಮೇಲೆ ನೀವು ಹೆಚ್ಚು ಗಮನ ಹರಿಸುತ್ತೀರಿ. ಹಣದ ಬಗ್ಗೆ ಮಾತನಾಡುವುದಾದರೆ, ಆದಾಯವು ಉತ್ತಮವಾಗಿರುತ್ತದೆ ಮತ್ತು ನೀವು ಉಳಿತಾಯದಲ್ಲಿಯೂ ಯಶಸ್ವಿಯಾಗುತ್ತೀರಿ. ಆರ್ಥಿಕ ವಹಿವಾಟು ನಡೆಸಲು ಈ ದಿನ ಉತ್ತಮವಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ನಿರ್ಲಕ್ಷ್ಯವು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 36
ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ
ಮಕರ ರಾಶಿ:
ಇಂದು ಒತ್ತಡವಿಲ್ಲದ ಉತ್ತಮ ಮನಸ್ಥಿತಿ. ಬಹಳ ಸಮಯದ ನಂತರ ಇಂದು ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ನಿಮಗಾಗಿ ನೀವು ಸಮಯ ಕಳೆಯುವಿರಿ. ಇಂದು ನೀವು ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಸರಿಯಾಗಿ ಕೆಲಸ ಮಾಡಿದರೆ, ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗಬಹುದು. ಉನ್ನತ ಸ್ಥಾನವನ್ನು ಪಡೆಯಬಹುದು. ಇದರೊಂದಿಗೆ ಹಿರಿಯರ ಸಂಪೂರ್ಣ ಬೆಂಬಲವೂ ಇರುತ್ತದೆ. ವ್ಯಾಪಾರಿಗಳಿಗೆ ದೊಡ್ಡ ಲಾಭ ಸಿಗಲಿದೆ. ನೀವು ಷೇರು ಮಾರುಕಟ್ಟೆಗೆ ಸೇರಿದವರಾಗಿದ್ದರೆ ಇಂದು ನೀವು ನಿರೀಕ್ಷಿಸಿದಂತೆ ಲಾಭ ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ತಿಳಿ ಹಸಿರು
ಶುಭ ಸಂಖ್ಯೆ: 36
ಶುಭ ಸಮಯ: ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ
ಕುಂಭ ರಾಶಿ:
ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವುದು ಅತ್ಯಂತ ಮುಖ್ಯ. ನಿಮ್ಮ ಕೋಪ ಮತ್ತು ಮಾತಿನ ಬಿರುಸನ್ನು ನೀವು ನಿಯಂತ್ರಿಸಬೇಕು, ಇಲ್ಲದಿದ್ದರೆ ನೀವು ಇಂದು ತೊಂದರೆಗೆ ಸಿಲುಕಬಹುದು. ಅದರಲ್ಲೂ ಕಚೇರಿಯಲ್ಲಿ ಈ ಬಗ್ಗೆ ಇನ್ನಷ್ಟು ಗಮನವಹಿಸಿ. ನಿಮ್ಮ ಮೇಲಧಿಕಾರಿಗಳ ಯಾವುದೇ ನಿರ್ಧಾರದಿಂದ ನಿಮಗೆ ತೃಪ್ತಿ ಇಲ್ಲದಿದ್ದರೆ, ನಂತರ ತಾಳ್ಮೆಯಿಂದ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿ. ಆರ್ಥಿಕವಾಗಿ ದಿನವು ಉತ್ತಮ. ಉಳಿತಾಯದತ್ತ ಗಮನ ಹರಿಸಬೇಕು, ಇದು ನಿಮ್ಮ ಠೇವಣಿಯನ್ನು ಹೆಚ್ಚಿಸುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಜೀವನ ಸಂಗಾತಿಯ ಮನಸ್ಥಿತಿ ಚೆನ್ನಾಗಿರುತ್ತದೆ. ದೈನಂದಿನ ಕಾರ್ಯಗಳಲ್ಲಿ ಅವರು ನಿಮಗೆ ಸಹಾಯ ಮಾಡಬಹುದು. ಮಕ್ಕಳಿಂದ ಸಂತೋಷ. ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ, ಕಣ್ಣುಗಳಿಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆ ಇರಬಹುದು. ಹಾಗಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 13
ಶುಭ ಸಮಯ: ಸಂಜೆ 5 ರಿಂದ 10 ರವರೆಗೆ
ಮೀನ ರಾಶಿ:
ಇಂದು ಕೆಲಸದ ವಿಷಯದಲ್ಲಿ ಬಹಳ ಒಳ್ಳೆಯ ದಿನ. ಇಂದು ನಿಮ್ಮ ಕೈಯಲ್ಲಿ ಅವಕಾಶಗಳಿವೆ. ಅದನ್ನು ಲಾಭಗಳಿಸಲು ಸರಿಯಾಗಿ ಬಳಸಿಕೊಳ್ಳಿ. ಇದು ನಿಮ್ಮ ವೃತ್ತಿಜೀವನಕ್ಕೆ ಹೊಸ ತಿರುವನ್ನು ನೀಡುವ ಸಾಧ್ಯತೆಯಿದೆ. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ. ಆದಾಯದಲ್ಲಿ ಹೆಚ್ಚಳ ಸಾಧ್ಯ, ಆದರೆ ಇಂದು ಇದ್ದಕ್ಕಿದ್ದಂತೆ ದೊಡ್ಡ ಖರ್ಚೂ ತಲೆದೂರಬಹುದು. ಕುಟುಂಬ ಜೀವನದಲ್ಲಿ ಅಪಶ್ರುತಿ ಮೂಡಬಹುದು. ಕುಟುಂಬಸ್ಥರು ಇಂದು ನಿಮ್ಮ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ನೀವು ಸ್ವಚ್ಛ ಹೃದಯ ಮತ್ತು ತಿಳುವಳಿಕೆಯೊಂದಿಗೆ ವರ್ತಿಸಿದರೆ ಶೀಘ್ರದಲ್ಲೇ ಎಲ್ಲವೂ ಸರಿಯಾಗುತ್ತದೆ. ನೀವು ವಿದ್ಯಾರ್ಥಿಯಾಗಿದ್ದರೆ, ನಿಮ್ಮ ಶಿಕ್ಷಣದಲ್ಲಿ ಅಡಚಣೆ ಉಂಟಾಗಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಆದಾಗ್ಯೂ, ನೀವು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳದಿರುವುದು ಉತ್ತಮ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 19
ಶುಭ ಸಮಯ: ರಾತ್ರಿ 9:20 ರಿಂದ 10 ರವರೆಗೆ
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005