Just In
- 2 hrs ago ಈ ಲಕ್ಷಣಗಳು ನಿರ್ಲಕ್ಷ್ಯ ಮಾಡಲೇಬೇಡಿ, ಪಾರ್ಶ್ವವಾಯು ಆಗಲಿದೆ ಎಂಬುವುದರ ಲಕ್ಷಣಗಳಿವು
- 3 hrs ago ಥಟ್ ಅಂತ ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ ಮಾಡಿ..! ತುಂಬಾ ಸುಲಭದ ರಸಿಪಿ
- 4 hrs ago ಆರೋಗ್ಯ ವಿಮೆಯಲ್ಲಿ ಮಹತ್ವದ ಬದಲಾವಣೆ..! 65 ವರ್ಷ ಮೇಲ್ಪಟ್ಟವರು ವಿಮೆ ಮಾಡಿಸಬಹುದು..!
- 6 hrs ago ಇಹಲೋಕ ತ್ಯಜಿಸಿದ ಸೂಪರ್ ಕಳ್ಳ: ಕಳ್ಳನಾಗಿದ್ದಾಗಲೇ ಜಡ್ಜ್ ಆದ, 2000 ಖೈದಿಗಳನ್ನು ಬಿಡುಗಡೆ ಮಾಡಿದ!
Don't Miss
- News ಭಾರತದ ಮಸಾಲೆಗಳಿಗೆ ಹಾಂಗ್ಕಾಂಗ್, ಸಿಂಗಾಪುರ ನಿಷೇಧ: ದೇಶದ ಎಲ್ಲಾ ಮಸಾಲೆ ಬ್ರಾಂಡ್ ಪರೀಕ್ಷೆಗೆ ಕೇಂದ್ರ ನಿರ್ಧಾರ
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Sports IPL-2024: ರಾಜಸ್ಥಾನ ರಾಯಲ್ಸ್ ಗೆ ಮುಂಬೈ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Movies Amruthadhaare ; ಕೊನೆಗೂ ಭೂಮಿಕಾಗೆ ಪ್ರಪೋಸ್ ಮಾಡಿದ ಗೌತಮ್ ..!
- Finance ಆ್ಯಪಲ್ ಸಂಸ್ಥೆಯಿಂದ ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿಗೆ ಉದ್ಯೋಗ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಯುಧ ಪೂಜೆ: ಎಷ್ಟು ಹೊತ್ತಿಗೆ ಪೂಜೆ ಮಾಡಬೇಕು? ಆಯುಧ ಪೂಜೆಯ ಮಹತ್ವವೇನು?
ನವರಾತ್ರಿಯ 9ನೇ ದಿನ ಮಾಡುವ ಆಯುಧ ಪೂಜೆಯನ್ನು ಆಚರಿಸಲಾಗುವುದು.ಈ ದಿನ ನಾವು ದಿನನಿತ್ಯ ಜೀವನದಲ್ಲಿ ಬಳಸುವ ಕೃಷಿ ಉಪಕರಣಗಳು, ಗಾಡಿಗಳು, ಯಂತ್ರಗಳನ್ನು ಪೂಜಿಸಲಾಗುವುದು.
ಆಯುಧ ಪೂಜೆಯಂದು ನಾವು ಮಾಡುವ ವೃತ್ತಿಗೆ ಅನುಗುಣವಾಗಿ ಆಯುಧಗಳನ್ನು ಪೂಜಿಸುತ್ತೇವೆ. ಕೃಷಿಕನಿಗೆ ಕತ್ತಿ, ಗುದ್ದಲಿ, ಪಿಕಾಸು ಇವುಗಳು ಪೂಜಿಸಿದರೆ ಐಟಿ ಕ್ಷೇತ್ರದಲ್ಲಿ ದುಡಿಯುವವನಿಗೆ ಲ್ಯಾಪ್ಟಾಪ್ ಅವಶ್ಯಕ ಅದನ್ನು ಪೂಜಿಸುತ್ತಾರೆ, ಇನ್ನು ಡ್ರೈವರ್ಗಳು ಗಾಡಿಯನ್ನು, ಟೈಲರಿಂಗ್ ಮಾಡುವವರು ಹೊಲಿಗೆ ಯಂತ್ರಗಳನ್ನು ಹೀಗೆ ತಮ್ಮ ವೃತ್ತಗೆ ಸಹಾಯವಾಗುವ ಉಪಕರಣಗಳನ್ನು ಪೂಜಿಸಲಾಗುವುದು.
ಹೀಗಾಗಿ ನಮ್ಮ ಬದುಕು ನಡೆಸಲು ಅನಕೂಲಕರವಾಗಿರುವ ಉಪಕರಣಗಳನ್ನುಪೂಜಿಸಲಾಗುವುದು. ಈ ವರ್ಷ ಅಕ್ಟೋಬರ್ 4ರಂದು ಆಯುಧ ಪೂಜೆ ಮಾಡಲಾಗುವುದು, ಪೂಜೆಗೆ ಶುಭ ಮುಹೂರ್ತ ಯಾವಾಗ, ಪೂಜಾ ವಿಧಿ-ವಿಧಾನಗಳೇನು ಎಂದು ನೋಡೋಣ:
ಆಯುಧ ಪೂಜಾ ಮುಹೂರ್ತ
ನವಮಿ ತಿಥಿ ಪ್ರಾರಂಭ: ಅಕ್ಟೋಬರ್ 3 ಸಂಜೆ 4:35ರಿಂದ
ನವಮಿ ತಿಥಿ ಮುಕ್ತಾಯ: ಅಕ್ಟೋಬರ್ 4 ಮಧ್ಯಾಹ್ನ 2:20ರವರೆಗೆ
ಆಯುಧ ಪೂಜೆಯ ಪೌರಾಣಿಕ ಹಿನ್ನೆಲೆ
ದುರ್ಗೆಯು ಚಾಮುಂಡಿಯ ಅವತಾರ ತಾಳಿ ರಾಕ್ಷಸ ಮಹಿಷಾಸುರನನ್ನು ಸಂಹರಿಸುತ್ತಾಳೆ, ನಂತರ ತಾನು ರಾಕ್ಷಸನನ್ನು ಸಂಹರಿಸಲು ಬಳಸಿದ ಆಯುಧವನ್ನು ಭೂಮಿಯಲ್ಲೇ ಬಿಟ್ಟು ಹೋದಳು, ಆ ಆಯುಧವನ್ನು ತಂದು ಪೂಜಿಸಲಾಯಿತು, ಅಲ್ಲಿಂದ ಆಯುಧ ಪೂಜೆ ಆಚರಣೆಗೆ ಬಂತು ಎಂದು ಹೇಳಲಾಗುವುದು.
ಆಯುಧ ಪೂಜೆ ಬರೀ ಪೂಜೆಯಲ್ಲ, ನಮ್ಮ ಭಾವನೆಯೊಂದಿಗೂ ಸಂಬಂಧವಿದೆ
ಆಯುಧ ಪೂಜೆ ಯಾವುದೋ ಆಯುಧವಿಟ್ಟು ಪೂಜೆ ಮಾಡುವುದಲ್ಲ, ನಾವು ನಮ್ಮ ವೃತ್ತಿ ಬದುಕಿಗೆ ಬಳಸುವ ಆಯುಧ-ಉಪಕರಣಗಳನ್ನು ಪೂಜಿಸಲಾಗುವುದು, ಆದ್ದರಿಂದ ಈ ಪೂಜೆಗೂ ನಮ್ಮ ಭಾವನೆಗಳಿಗೂ ತುಂಬಾನೇ ಸಂಬಂಧವಿದೆ. ನಮಗೆ ಅನ್ನ ಹಾಕುತ್ತಿರುವ, ನಮ್ಮ ಬದುಕನ್ನು ಮತ್ತಷ್ಟು ಸರಳವಾಗಿಸಿರುವ ಉಪಕರಣಗಳನ್ನು ಪೂಜಿಸಲಾಗುವುದು.
ಆಯುಧ ಪೂಜೆಯನ್ನು ಹೇಗೆ ಆಚರಿಸಬೇಕು?
ಆಯುಧ ಪೂಜೆಯ ಹಿಂದಿನ ದಿನವೇ ಮನೆಯನ್ನು ಶುದ್ಧ ಮಾಡಬೇಕು. ಎಲ್ಲಾ ಉಪಕರಣಗಳನ್ನು ಶುದ್ಧ ಮಾಡಬೇಕು. ನಂತರ ಅವುಗಳಿಗೆ ಕುಂಕುಮ ಹಚ್ಚಿ, ಆರತಿ ಎತ್ತಬೇಕು. ಗಾಡಿಯ ಮುಂದೆ ಕುಂಬಳಕಾಯಿಗೆ ಕುಂಕುಮ, ನಾಣ್ಯ ಹಾಕಿ ಅದನ್ನು ಗಾಡಿ ಮುಂದೆ ಒಡೆಯಲಾಗುವುದು. ಈ ದಿನ ಕಬ್ಬು, ಬಾಳೆಹಣ್ಣು, ಅವಲಕ್ಕಿ, ಸಿಹಿ ತಿನಿಸುಗಳನ್ನು ಬಳಸಿ ಪ್ರಸಾದ ತಯಾರಿಸಲಾಗುವುದು.